<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:blogger='http://schemas.google.com/blogger/2008' xmlns:georss='http://www.georss.org/georss' xmlns:gd="http://schemas.google.com/g/2005" xmlns:thr='http://purl.org/syndication/thread/1.0'><id>tag:blogger.com,1999:blog-7270070547169320163</id><updated>2025-09-24T02:23:32.463-07:00</updated><category term="ನನ್ನ ಜಗತ್ತು"/><category term="ನನ್ನ ಜನ"/><category term="ನಮ್ಮೂರು"/><category term="ನನ್ನ ಬಾಲ್ಯ."/><category term="ಹರಟೆ"/><category term="ಕನಸು"/><category term="ಕವನ"/><category term="ಚರ್ಚೆ"/><category term="ತಲೆಹರಟೆ"/><category term="ದಿನಚರಿ"/><category term="ನನ್ನೂರು"/><category term="ನಮ್ಮ ಬವಣೆ"/><category term="ಪ್ರೀತಿ"/><category term="ಮನೋಜ್"/><category term="ಸವಿ ಸವಿ ನೆನಪು"/><category term="ಸವಿ ಸವಿ ನೆನಪು..."/><category term="ಸುಮ್ ಸುಮ್ನೆ"/><title type='text'>ಅಮೃತ ಸಿಂಚನ</title><subtitle type='html'>ನೆನಪಿನಂಗಳದ ತುಂಬೆಲ್ಲಾ!</subtitle><link rel='http://schemas.google.com/g/2005#feed' type='application/atom+xml' href='http://scpatil.blogspot.com/feeds/posts/default'/><link rel='self' type='application/atom+xml' href='http://www.blogger.com/feeds/7270070547169320163/posts/default?redirect=false'/><link rel='alternate' type='text/html' href='http://scpatil.blogspot.com/'/><link rel='hub' href='http://pubsubhubbub.appspot.com/'/><link rel='next' type='application/atom+xml' href='http://www.blogger.com/feeds/7270070547169320163/posts/default?start-index=26&amp;max-results=25&amp;redirect=false'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><generator version='7.00' uri='http://www.blogger.com'>Blogger</generator><openSearch:totalResults>28</openSearch:totalResults><openSearch:startIndex>1</openSearch:startIndex><openSearch:itemsPerPage>25</openSearch:itemsPerPage><entry><id>tag:blogger.com,1999:blog-7270070547169320163.post-16176083986587485</id><published>2008-08-26T06:04:00.001-07:00</published><updated>2008-08-27T23:11:21.536-07:00</updated><title type='text'>ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ !</title><content type='html'>ಪ್ರತಿವರ್ಷವೂ ಶಾಲೆಗೆ ಅಧಿಕೃತ ಚಕ್ಕರ್ ಹಾಕಿ ರೋಣಕ್ಕೆ ಹೋಗಿ &quot;ಅಬ್ಬಿಗೇರಿ To ನರೇಗಲ್&quot; ವಿದ್ಯಾರ್ಥಿ ಬಸ್ ಪಾಸ್ ಪಡೆಯುವದು ನಮ್ಮೂರ ವಿದ್ಯಾರ್ಥಿಗಳ ಸತ್ಸಂಪ್ರದಾಯ.ಪಾಸಿನ ನೆಪ ಹೇಳಿ ಶಾಲೆ ತಪ್ಪಿಸಿದರೆ ಯಾವ ಮಾಸ್ತರನೂ ಕೆಮ್ಮಂಗಿಲ್ಲಾ ಅನ್ನೊದು ಒಂದು ಕಾರಣವಾದರೆ, ಪಾಸಿನ ನೆಪದಲ್ಲಿ ಅಧಿಕೃತವಾಗಿಯೇ ರೋಣದ ಪ್ಯಾಟಿಯ ಚೈನಿ ಹೊಡೆಯುವದೂ ಇನ್ನೊಂದು ಕಾರಣವಾಗಿತ್ತು. ನಮ್ಮೂರ ಎಲ್ಲಾ ಸತ್ಸಂಪ್ರದಾಯಗಳನ್ನು ಬಲು ನಿಷ್ಠೆಯಿಂದ ಪಾಲಿಸುವ ನನಗೆ ಹಿಂತಹ ಅವಕಾಶವನ್ನು ತಪ್ಪಿಸಿಕೊಳ್ಳಲು ಬೇರೆ ಕಾರಣಗಳೇ ಇರುತ್ತಿರಲಿಲ್ಲ.ಹೀಗಾಗಿ ನಾನು, ಶೆಟ್ಟರ ಸಣ್ಯಾ,ಮೂಲಿಮನಿ ಚಂದ್ರ ಮತ್ತು ನಮ್ಮ ಕ್ಲಾಸಿನ ಹಿರಿ ವಿಧ್ಯಾರ್ಥಿಯಾದ ಮತ್ತು ನಮಗೆಲ್ಲಾ ಗುರು ಸಮಾನನಾದ ಜುಮ್ಮಿ ಎಲ್ಲರೂ ಸೇರಿ ನಮ್ಮ ಯೋಗ್ಯತಾನುಸಾರವಾಗಿ ಟಾಕು ಟೀಕಾಗಿ ರೋಣದ ಸವಾರಿಗೆ ಸಿದ್ದರಾಗಿ ಹೊರಡುತ್ತಿದ್ದೆವು.. ನನ್ನ ನೆನಪಿನಂತೆ ನಾವು ಆವಾಗ ಒಂಬತ್ತನೇ ಇಯತ್ತೆಯಲ್ಲಿ ಓದುತ್ತಿದ್ದೆವು(?) , ಆ ವರ್ಷವೂ  ನಮ್ಮ ಪಟಾಲಂ ಮಾಮೂಲಿನಂತೆ ಬಸ್ಸಿನ ಟಾಪನ್ನೇರಿ ರೋಣಕ್ಕೆ ಹೊರಟು ನಿಂತೆವು.. ರೋಣದ ಬಸ ಸ್ಟ್ಯಾಂಡಿನಲ್ಲಿ ಆಗಲೇ ಬೇರೆ ಊರುಗಳ ವಿಧ್ಯಾರ್ಥಿಗಳು ಬಂದು ಠಳಾಯಿಸಿದ್ದರು..&lt;br /&gt;&lt;br /&gt;ರೋಣದ ಬಸ ಸ್ಟ್ಯಾಂಡು ಅಂದರೆ ಬೆಂಗಳೂರಿನ ಕಲಾಸಿಪಾಳ್ಯಕ್ಕೆ ಕೊಳಕಿನಲ್ಲಿ ಯಾವುದಕ್ಕೂ ಕಮ್ಮಿಯಿಲ್ಲಾ. ಆದರೆ ರೋಣದ ಬಸ್ ಸ್ಟ್ಯಾಂಡಿನ ಹಿರಿಮೆಯಿರುವುದು ಅಲ್ಲಿನ ದೊಡ್ದ ಮೂತ್ರಾಲಯದಲ್ಲಿ. ಯಾಕೆಂದರೆ ಅದೊಂತರಾ ರೋಣ ತಾಲೂಕಿನ ಪ್ರೇಮಿಗಳ ನೋಂದಣಿ ಕಚೇರಿಯಿದ್ದಂತೆ. ಎಲ್ಲಾ ಮಜ್ನುಗಳು ತಮ್ಮ ಲೈಲಾಗಳ ಹೆಸರುಗಳನ್ನು ಆ ಪಾಯಖಾನೆಯ ಗೋಡೆಯ ಮೇಲೆ ಬರೆದು ’ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು’ ಅಂತಾ ಹಾಡುತ್ತಾ ತಮ್ಮ ಪ್ರೇಮ ಚರಿತ್ರೆಯನ್ನು ಇಡಿ ತಾಲೂಕಿಗೆ ಸಾರಿಬಿಡುತ್ತಿದ್ದರು. ಆದರೆ ಇವರ ’ಎದೆಗಾರಿಕೆ’ ಅವರ ಮಜ್ನುಗಳಿಗೆ ಭಲು ಮುಜುಗುರ ತಂದಿಕ್ಕುತ್ತಿತ್ತು.. ಹೀಗಾಗಿ ಹುಡುಗಿಯರೂ ಸಹ ತಮ್ಮ ಹೆಸರೂ ಸಹ ’ನೋಂದಣಿ’ ಯಾಗಿದೆಯಾ ಅಂತಾ ಕದ್ದು ಕದ್ದು ಗಂಡಸರ ಪಾಯಖಾನೆ ಕಡೆಗೆ ನೋಡುವುದು ಸಾಮಾನ್ಯವಾಗಿತ್ತು..ಇವರ ಈ ದೆಶೆಯಿಂದ ಇಡಿ ಪಾಯಖಾನೆಯ ಗೋಡೆ ಹಲವಾರು ಹೆಸರುಗಳು, ಬಾಣ ಚುಚ್ಚಿರುವ ಹೃದಯದ ಚಿತ್ರಗಳಿಂದ ತುಂಬಿ ಹೋಗಿತ್ತು, ಜೊತೆಗೆ ಮೂಲೆಯಲ್ಲಿ ಇದು ಗಂಡಸರ ಮಾತ್ತು ಹೆಂಗಸರ ಪಾಯಖಾನೆ ಎಂದು ಪ್ರತ್ಯೇಕಿಸಲು ಒಂದೊಂದು ಗಂಡು- ಹೆಣ್ಣಿನ ಚಿತ್ರಗಳು ಕಾಣಬಹುದಾಗಿತ್ತು.&lt;br /&gt;&lt;br /&gt;ಈ ಪಾಯಖಾನೆಗೆ ಅಭಿಮುಖವಾಗಿ ಇರುವ ಕಿಡಕಿ ಮೂಲಕವೇ ನಮಗೆಲ್ಲಾ ಪಾಸು ವಿತರಿಸುವ ಕಾರ್ಯಕ್ರಮ ಇರುತ್ತಿತ್ತು. ಯಥಾಪ್ರಕಾರ ಜುಮ್ಮಿ ಪಾಳಿಯಲ್ಲಿ ನಿಲ್ಲದೇ ಉಳಿದವರಿಗೆ ರೋಪ್ ಹಾಕಿ, ಕಾದಾಡಿ ಬಡಿದಾಡಿ ಬೇಗನೆ ನಮಗೆಲ್ಲರಿಗೂ ಬೇಗನೆ ಪಾಸು ತಂದು ಕೊಟ್ಟ. ನಮ್ಮ ಮುಂದಿನ ಕಾರ್ಯಕ್ರಮವನ್ನು ನಾನು ಜುಮ್ಮಿ ರಾತ್ರಿಯೇ ಫಿಕ್ಸ ಮಾಡಿ ಬಿಟ್ಟಿದ್ದೆವು.. ಪ್ಲಾನಿನಂತೆ ಜುಮ್ಮಿ &quot; ಸುಮ್ನೆ ಅಡ್ದಾಡುವುದಕ್ಕಿಂತ ನಾವು ಪಿಚ್ಚರಿಗೆ ಹೋಗೊಣ&quot; ಅಂತ ಅನೌನ್ಸ ಮಾಡಿದ.&lt;br /&gt;&lt;br /&gt;ನಾನು ಮಳ್ಳನಂತೆ &quot; ಯಾವ ಪಿಚ್ಚರೆಲೇ ಜುಮ್ಮಿ? ರಾಮಾಚಾರಿ ಪಿಚ್ಚರು ಮೊನ್ನೆ ಟಿವಿಲೇ ಬಂದಿತ್ತಲ್ಲಾ!&quot; ಎಂದು ಜುಮ್ಮಿ ಹೇಳುತ್ತಿರುವದು &quot;ಆ ತರದ&quot; ಚಿತ್ರದ ಬಗ್ಗೆ ಅಂತ ಗೊತ್ತಿದ್ದರೂ ಮುಗ್ದನಂತೆ ನಟಿಸಿದೆ..&lt;br /&gt;&lt;br /&gt;ಆಗ ಜುಮ್ಮಿ ಗತ್ತಿನಿಂದ&quot; ಲೇ ಪ್ಯಾಲಿ ಗೌಡ! ರಾಮಾಚಾರಿ ನೋಡಾಕ ನೀವೆಲ್ಲಾ ಇನ್ನೂ ಪ್ರೈಮರಿ ಸಾಲಿ ಹುಡುಗ್ರಾ?, ಮಕ್ಳಾ ಲಗ್ನಾ ಮಾಡಿದ್ರ ಮೂರು ಮೂರು ಮಕ್ಳ ಹಡೀತಿರಿ, ರಾಮಾಚಾರಿ ಅಂತೆ ರಾಮಾಚಾರಿ&quot; ಅಂತ ಹುಸಿಕೋಪದಿಂದ ನಾವೂ ನೋಡ ಹೊರಟಿರುವ ಚಿತ್ರದ ಬಗ್ಗೆ ಸುಳಿವು ಕೊಟ್ಟ. &lt;br /&gt;ಆದರೂ ಸಣ್ಯಾ, ಚಂದ್ರರಿಗೆ ಇನ್ನು ಅರ್ಥವಾಗದ್ದನ್ನು( ಅಥವಾ ಅರ್ಥವಾಗದವರಂತೆ ನಟಿಸುತ್ತಿದ್ದರೋ ಗೊತ್ತಿಲ್ಲಾ) ಕಂಡು ಜುಮ್ಮಿಗೆ ಅವರ ’ಜನರಲ್ ನಾಲೇಜ್’ ಬಗ್ಗೆ ಕನಿಕರವೆನಿಸಿ &quot; ಲೇ ಹುಚ್ಚಪ್ಯಾಲಿ ನನ್ ಮಕ್ಳ ನಾವೀಗ ಒಂದೂವರೆ ತಾಸಿನ ಪಿಚ್ಚರಿಗೆ ಹೋಗುಣು&quot; ಅಂತ ತಿಳಿ ಹೇಳಿ ಪಿಚ್ಚರಿನ ಹೆಸರು &quot; ಆಡಂ and ಈವ The first love story&quot; ಅಂತಲೂ ವಿವರಿಸಿದ.&lt;br /&gt;&lt;br /&gt;ನಾನು ಆಗಲೇ ತುಂಬಾ ದೊಡ್ದವನಾಗಿದ್ದೆ ಅಥವಾ ಹಾಗಂತ ಅಂದುಕೊಂಡಿದ್ದೆ, ಹೀಗಾಗಿ ಜುಮ್ಮಿಯ ಈ ಆಫರ್ರು ನಾನು ’ದೊಡ್ದವನು&quot; ಅಂತಾ ಅದಿಕೃತವಾಗಿ ಸಾರಲು ಸಿಕ್ಕ ವೇದಿಕೆಯೇ ಸರಿ ಅಂದುಕೊಂಡು &quot;ಒಂದೂವರೆ ತಾಸಿ&quot;ನ ಚಿತ್ರ ನೋಡಲು ರಾತ್ರಿಯೇ ಸಮ್ಮತಿಸಿದ್ದೆ. ಶೆಟ್ಟರ ಸಣ್ಯಾ ಮೊದಮೊದಲು ಅನುಮಾನಿಸಿದ, ನಂತರ ಜುಮ್ಮಿ ಅವನಿಗೆ ನಾವೂ ನೋಡ ಹೊರಟಿರುವುದು ವೈಜ್ಣಾನಿಕ ಕಮ್ ಸಾಮಾಜಿಕ ಚಿತ್ರವೆಂದೂ, ಅದರಲ್ಲಿ ಮಾನವನ ಜನಾಂಗ ಹೇಗೆ ಬೆಳೆದುಬಂತು, ನಮ್ಮ ಪೂರ್ವಜರು ಯಾರು ಇತ್ಯಾದಿ ಇತಿಹಾಸದ ಅಂಶಗಳನ್ನು ಹೇಳಿದ್ದಾರೆಂದೂ, ಜೊತೆಗೆ ಬಯೋಲಾಜಿಯ ಅನೇಕ ವಿಷಯಗಳನ್ನು ’ನೋಡಿ’ ತಿಳಿಯಬಹುದು ಅಂತಲೂ, ಸಮಾಜ ಮತ್ತು ವಿಜ್ಣಾನ ಓದದೇ ಪಾಸಾಗಬಹುದೆಂದು ಆಸೆ ಹುಟ್ಟಿಸಿದ. ಮೊದಲೇ ಹುಟ್ಟಾ ಬೃಹಸ್ಪತಿಯಾದ ಸಣ್ಯಾನಿಗೆ &quot;ಪಠ್ಯ ಮತ್ತು ಪಠ್ಯೇತರ&quot; ಸಂಗಮವಾದ ಈ ಚಿತ್ರವನ್ನು ನೋಡದಿರುವುದು ತನ್ನ ವಿಧ್ಯಾರ್ಥಿ ಜೀವನದಲ್ಲಿ ತುಂಬಲಾರದ ನಷ್ಟ ಅನಿಸಿ ಚಿತ್ರ ನೋಡಲೂ ಸಣ್ಯಾನೂ ಸಮ್ಮತಿಸಿದ.&lt;br /&gt;&lt;br /&gt;ಆದರೆ ಚಂದ್ರ ಮಾತ್ರ ತನ್ನ ಕ್ಯಾರೆಕ್ಟರ್ ಸರ್ಟಿಫೀಕೆಟ್ ತೆಗೆದು ತುಂಬಾ ಒಳ್ಳೆಯ ಹುಡುಗನಂತೆ ಆಡತೊಡಗಿದ. ಜುಮ್ಮಿ  ನಾನಾ ತರದಲ್ಲಿ ಚಿತ್ರದ ವರ್ಣನೆ ಮಾಡಿ ಚಿತ್ರ ನೋಡುವದರಿಂದ ನಿನ್ನ ಕ್ಯಾರೆಕ್ಟರ್ರು ಹಾಳಾಗುವದಿಲ್ಲಾ, ಚಿನ್ನ ಎಲ್ಲಿಟ್ಟರೂ ಚಿನ್ನವೇ ಅಂತೆಲ್ಲಾ ಪುಸಲಾಯಿಸಿದರೂ ಜಪ್ಪೆನ್ನಲಿಲ್ಲ. ಕೊನೆಗೆ ನಾನು ನಮ್ಮ ಹುಡುಗರ ಮರ್ಮಕ್ಕೆ ತಾಗುವ ಅಸ್ತ್ರ ತೆಗೆಯಲೇಬೇಕಾಯ್ತು. &quot; ಲೇ ಚಂದ್ರ್ಯಾ! ನೀ ನಿಜವಾಗ್ಲೂ ಗಂಡಸಾಗಿದ್ದರೆ ನಮ್ಮ ಜೊತೆ ಬಾ, ಇಲ್ಲಾಂದ್ರೆ ರೋಣದ ಸಂತ್ಯಾಗ ಬಳಿ ಇಟ್ಕೋಂಡು ಊರ ಕಡೆ ನಡಿ. ನೀ ಎಂಥ ಗಂಡಸಲೇ?&quot; ಅಂತ ಅಂದುಬಿಟ್ಟೆ. ಅದು ತಾಕಬೇಕಾದ ಜಾಗಕ್ಕೆ ತಾಕಿ ತಾನೂ ಗಂಡಸು ಅಂತ ನಿರೂಪಿಸಲಾದರೂ ನಮ್ಮ ಜೊತೆ ಬರಬೇಕಾಯ್ತು.. ಅಂತೂ ಇಂತೂ ನಮ್ಮ ನಾಲ್ವರ ಸವಾರಿ ವಿ.ಎಫ್ ಪಾಟೀಲ್ ಹೈಸ್ಕೂಲಿನ ಪಕ್ಕದ ಹಳೆ ಥೇಟರಿನತ್ತ ಸಾಗಿತು. ದಾರಿಯಲ್ಲಿ ಜುಮ್ಮಿ ಮೊದಲ ಬಾರಿಗೆ ಆ ತರದ ಚಿತ್ರ ನೋಡಲು ಹೋಗುತ್ತಿರುವವರಿಗೆ &quot;ಕೋಡ್ ಆಫ್ ಕಂಡಕ್ಟ್ಸ&quot; ಹೇಳಿಕೊಡತೊಡಗಿದ, ಥೇಟರಿನಲ್ಲಿ ಚಿಕ್ಕವರನ್ನೂ ಬಿಡುವುದಿಲ್ಲವೆಂದೂ, ಅದು ದೊಡ್ದವರ ಚಿತ್ರವಾಗಿದ್ದರಿಂದ ನಮ್ಮ ವಯಸ್ಸು ಕೇಳಿದರೆ ಹದಿನೆಂಟು ಅಂತ ಹೇಳಬೇಕೆಂದೂ ಮತ್ತು ಯಾರಾದ್ರೂ ಕೇಳಿದ್ರೆ ಸುಳ್ಳು ಹೆಸರು ಹೇಳಬೇಕೆಂದೂ ತಾಕೀತು ಮಾಡಿದ. ನಾವೆಲ್ಲಾ ಗುರು ಭಕ್ತಿಯಿಂದ ಹೂಂಗುಟ್ಟಿದೆವು. ಕೊನೆಗೂ ಥೇಟರ್ ಬಳಿ ಬಂದಾಗ ಥೇಟರ್ ಖಾಲಿ ಹೊಡೆಯುತ್ತಿತ್ತು. ಅಲ್ಲಲ್ಲಿ ಚಿತ್ರದ ಪೊಸ್ಟರುಗಳನ್ನು ಅಂಟಿಸಿದ್ದರು ಮತ್ತು ಪೊಸ್ಟರಿನ ಕೆಲಬಾಗಗಳನ್ನು ನೀಲಿ ಬಣ್ಣದಿಂದ ಅಳಿಸಿದ್ದರು, ಜೊತೆಗೆ ಅಲ್ಲಿ ಗೋಡೆಯ ಮೇಲೆ ದೊಡ್ದದಾಗಿ &quot;ವಯಸ್ಕರಿಗಾಗಿ ಮಾತ್ರ&quot; ಎಂದು ಬರೆದಿದ್ದು ನೋಡಿ ನಾವೆಲ್ಲಾ ಒಮ್ಮೆ ಇಡೀ ಅಬ್ಬಿಗೇರಿಗೆ ಹಿರಿಯರಾದಂತೆ ಭಾಸವಾಯಿತು. ಒಳ ಹೊಕ್ಕು ಕೂತರೇ ಆಗಲೇ ಚಿತ್ರ ಶುರುವಾಗಿತ್ತು.&lt;br /&gt;&lt;br /&gt;ಚಿತ್ರ ಇಂಗ್ಲೀಷನಲ್ಲಿದ್ದುದರಿಂದ ನಮಗಂತೂ ಅರ್ಥವಾಗುವ ಸಂಭವವೇ ಇರಲಿಲ್ಲಾ, ಆದರೂ ನಾನು ತಿಳಿದವನಂತೆ ಬಾಯಿಗೆ ಬಂದಂಗೆ ಅನುವಾದ ಮಾಡಿ ಉಳಿದವರ ಮುಂದೆ &quot;ಶಾಣ್ಯಾ&quot; ಅನ್ನಿಸಿಕೊಳ್ಲಲು ಯತ್ನಿಸಿದರೂ, ಆ ಮುಂಡೆವು ಕೇಳುವುದಕ್ಕಿಂತಲೂ &quot;ನೋಡಲು&quot; ತುಂಬಾ ಉತ್ಸುಕರಾದುದರಿಂದ ನನ್ನ ಪ್ರಯತ್ನಗಳು ಹುಸಿಯಾದವು. ಚಿತ್ರ ಸಾಗಿದಂತೆ ಆಡಂ ಆಪಲ್ ತಿನ್ನುವ ಅಮೋಘ ದೃಶ್ಯಕ್ಕಾಗಿ ಕಾಯತೊಡಗಿದೆ ( ಯಾಕೆಂದರೆ ಜುಮ್ಮಿ ಆಡಂ, ಆಪಲ್ ತಿಂದ ಕೂಡಲೇ ಅವನಿಗೆ ಎಮೋಶನ್ ಬಂದು ಒಂದು ಮಹತ್ವದ ಘಟನೆ ಸಂಭವಿಸುತ್ತದೆ ಎಂದು ಹೇಳಿದ್ದ) . ಆದರೆ ಜುಮ್ಮಿ ಹೇಳಿದಂತೆ ಯಾವ ರೋಚಕ ಸನ್ನಿವೇಶವೂ ಬರಲೇ ಇಲ್ಲ ಮತ್ತು ಮುಖ್ಯವಾಗಿ ಆಡಂ, ಈವ್ ಚಿತ್ರದುದ್ದಕ್ಕೂ ನಮಗೆ ಬೆನ್ನು ತೋರಿಸಿಯೇ ಇರುತ್ತಿದ್ದುರಿಂದ ನಮಗೆ ಯಾವ ಮಹಾನ ಸಾಧನೆಯೂ ಆಗಲಿಲ್ಲ. ಆದರೂ ಜುಮ್ಮಿ ನಮ್ಮನ್ನೂ ಸಮಾಧಾನಿಸಿ ಒಮ್ಮೇಲೇ ಚಿತ್ರದ ಮದ್ಯೆ ಬೇರೆ ಯಾವುದೋ ಮಲಯಾಳಿ ಚಿತ್ರದ ತುಣುಕು ತೋರಿಸಿಯೇ ತೊರಿಸುತ್ತಾರೆಂದು ಹೊಸ ಆಸೆ ಹುಟ್ಟಿಸಿ, ಪೂರ್ತಿ ಚಿತ್ರ ಕಣ್ನಲ್ಲಿ ಕಣ್ಣಿಟ್ಟು ನೋಡುವಂತೆ ಮಾಡಿದರೂ ಯಾವುದೋ ಅಂತಹ ಪವಾಡ ನಡೆಯಲೇ ಇಲ್ಲಾ ಮತ್ತು ಕೊನೆಗೂ ಆಡಂ ಆಪಲ್ ತಿನ್ನಲೇ ಇಲ್ಲಾ..&lt;br /&gt;&lt;br /&gt;ಚಿತ್ರ ಮುಗಿದ ಮೇಲೆ ನಂಗೆ ಜುಮ್ಮಿಯ ಮೇಲೆ ಅಸಾದ್ಯ ಕೋಪ ಬಂದಿತ್ತು. ಆದರೆ ಚಂದ್ರ, ತನ್ನ ಗಂಡಸ್ತನ ನಿರೂಪಿಸಿದ ಸಾರ್ಥಕತೆ ಅನುಭವಿಸುತ್ತಿದ್ದ. ಸಣ್ಯಾ ಮಾತ್ರ ಸಮಾಜ ಮತ್ತು ಬಯಾಲಾಜಿಯ ಯಾವ ಯಾವ ಪಾಠಗಳನ್ನು ಚಿತ್ರ ಕವರ್ ಮಾಡಿತ್ತು ಅಂತ ಲೆಕ್ಕ ಹಾಕುತ್ತಿದ್ದ. ಜುಮ್ಮಿ ಕೊನೆಗೂ ಬಾಯಿ ಬಿಟ್ಟು &quot; ಲೇ ಓರಿಜಿನಲ್ಲು ಫಿಲ್ಮಲ್ಲಿ ’ಎಲ್ಲಾ’ ಇರುತ್ತದೆ, ಈ ಥೇಟರು ಬೋ...ಮಕ್ಳು ಎಲ್ಲಾ ಕಟ್ ಮಾಡಿ ಬಿಸಾಕಿರುತ್ತಾರೆ&quot; ಅಂತ ಗೋಳಾಡಿ, ನಮ್ಮೆಲ್ಲಾ ನಿರಾಶೆಗಳಿಗೆ ಥೇಟರಿನವರನ್ನು ಹೋಣೆಯಾಗಿಸಿ ನಿರಮ್ಮಳವಾದ. ನಾನು ಜುಮ್ಮಿಯನ್ನು ನಂಬಿದ್ದೆ ತಪ್ಪಾಯ್ತು ಅಂದುಕೊಂಡು ಉಳಿದವರನೆಲ್ಲಾ ಕರೆದುಕೊಂಡು ರೋಣದ ಸಂತೆ ಅಲೆಯಲು ನಡೆದೆ.</content><link rel='replies' type='application/atom+xml' href='http://scpatil.blogspot.com/feeds/16176083986587485/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/16176083986587485' title='13 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/16176083986587485'/><link rel='self' type='application/atom+xml' href='http://www.blogger.com/feeds/7270070547169320163/posts/default/16176083986587485'/><link rel='alternate' type='text/html' href='http://scpatil.blogspot.com/2008/08/blog-post_26.html' title='ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ !'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><thr:total>13</thr:total></entry><entry><id>tag:blogger.com,1999:blog-7270070547169320163.post-8298318863328473590</id><published>2008-07-20T21:11:00.000-07:00</published><updated>2008-07-20T22:32:50.545-07:00</updated><title type='text'>ಸುಮ್ನೆ ದೇಶಾವರಿ ಮಾತುಕಥೆ..</title><content type='html'>ನಿನ್ನೆ ತಮ್ಮನಿಗೆ ಫೋನನಲ್ಲಿ ಹೇಳುತ್ತಿದ್ದೆ &quot; ಲೇ ಇಲ್ಲಿ ಭಾರೀ ಮಳಿ ಹತ್ತೈತಿ, ಊರ ಕಡೆ ಎನ್ ಸುದ್ದಿ?&quot; ಅಂತಾ.ಮಳೆ ಅಂದರೆ ಸಾಕು ಅವನ ಮೂಡೇ ಆಫ್ ಆಗಿ ಬಿಡುತ್ತೆ ಪಾಪ &quot; ಎಲಾ ಇವನ ಇಲ್ಲಿ ಮೋಡ ಬಿತ್ತಿದ್ರೆ ಅಲ್ಲಿ ಮಳೆ ಆಗೈತಿ ನೋಡು, ಈ ಎಚ್,ಕೆ ಕೈ ಹಾಕಿದಾಗಲೇ ಎನೋ ಕಿತಾಪತಿ  ಮಾಡ್ತಾನೆ ಅಂತ ಡೌಟಿತ್ತು &quot; ಅಂತಾ ಬೆಂಗಳೂರಿನ ಮಳೆಗೂ, ಎಚ್,ಕೆ ಪಾಟೀಲರಿಗೂ ಲಿಂಕು ಸೇರಿಸಿ ಮಳೆಯ ಹೊಸ ಫಾರ್ಮುಲಾ ಹುಟ್ಟಿಸಿದ. ಮುಂದುವರೆಸಿ &quot; ಯಣ್ಣಾ! ಹೆಸರು ಆಗ್ಲೇ ಹಳ್ಳ ಹಿಡಿದಾವು, ಜುಬ್ರ ಮಳಿನರ ಆದ್ರ ಶೇಂಗಾ ಜೀವಾ ಹಿಡಿತಾವ.ಒಂದು ದೊಡ್ದ ಮಳಿ ಅಗೋವರೆಗೂ ಉಳ್ಳಾಗಡ್ದಿ ಬಿತ್ತು ಮಾತ ಇಲ್ಲಾ! ಮಳಿ ಗೊತ್ತಿನದಲ್ಲಾ ಬ್ಯಾಡ ಅಂದ್ರೂ ನೇಗಿಲಾ ಹೊಡಿಸಿದಿ , ನೋಡೀಗ ಹೊಲದಾನ ಹೆಂಟಿ ಸಹ ಕರಗಿಲ್ಲಾ; ಅದರಾಗ ಹೆಂಗ ಬಿತ್ತಬೇಕು?. ತಿಳಿಲಿಲ್ಲಾ ಅಂದ್ರಾ ಮುಕಳಿ ಮುಚ್ಚಕೊಂಡು ಸುಮ್ನರಿಬೇಕು, ಈಗ ನೋಡು ಎಲ್ಲಾ ಅಡಿಪಾಲು ಬಾಳೆ ಆತು&quot; ಅಂತಾ ಶುದ್ಧ ಗಾವಟಿ ಭಾಷೆಯಲ್ಲಿ ಮಳೆಯನ್ನೂ, ನನ್ನನ್ನೂ ಚೆನ್ನಾಗಿ ಉಗಿದು ಫೋನಿಟ್ಟ.&lt;br /&gt;&lt;br /&gt;  ಫೋನಿಟ್ಟ ಕೂಡಲೆ ಕಳೆದ ಮೂರು ವರುಶಗಳಿಂದ ’ಒಂದಾದರೂ ಗಂಡು ರಾಶಿ’ ಮಾಡಲೇಬೇಕೆಂದು ಅವ ನಡೆಸಿದ ಹತಾಶ ಯತ್ನಗಳನ್ನೆಲ್ಲಾ ನೆನೆದು ಪಾಪ ಎನಿಸಿತು. ಇದು ಕೇವಲ ನನ್ನ ತಮ್ಮನೊಬ್ಬನ ಹತಾಶೆಯ ನುಡಿಗಳಲ್ಲಾ, ಉತ್ತರ ಕರ್ನಾಟಕದಲ್ಲಿ ಒಣ ಬೇಸಾಯ ನಂಬಿ ಜೀವ ತೇಯುತ್ತಿರುವ ಎಲ್ಲಾ ರೈತರ ದಿನನಿತ್ಯದ ಅಳಲು. ಅವರಿಗೆ ಬರೀ ಪ್ರಕೃತಿಯಲ್ಲಾ, ಈ ವ್ಯವಸ್ಥೆಯೂ ಮೋಸ ಮಾಡುತ್ತಿದೆ. ನಿಮಗೆ ಗೊತ್ತಿರಲಿಕ್ಕಿಲ್ಲ ಪ್ರತಿಯೊಂದು ರೈತ ಯೋಜನೆಗಳು ನೀರಾವರಿ ರೈತರನ್ನು ಗಮನದಲ್ಲಿಟ್ಟುಕೊಂಡೇ ಮಾಡಲಾಗುತ್ತೆ. ಉದಾಹರಣೆಗೆ ರೈತರ ಪಂಪುಗಳಿಗೆ ಉಚಿತ ವಿದ್ಯುತ ನೀಡುವ ಯೋಜನೆಯನ್ನೇ ತೆಗೆದುಕೊಳ್ಳಿ ನಮ್ಮ್ಲಲ್ಲಿ ಎಷ್ಟು ಜನರಿಗೆ ಪಂಪುಸೆಟ್ಟುಗಳಿವೆ? ನಮ್ಮುರ ಕಡೆಗಳಲ್ಲಿ ಸುಮಾರು ೪೦೦ ಅಡಿ ಕೊರೆಸಿದರೂ ನೀರು ಬರುವದಿಲ್ಲಾ, ಅಂತದ್ರಲ್ಲಿ ಎಲ್ಲಿಂದ ಪಂಪುಸೆಟ್ಟು ಬರಬೇಕು?. ನೀರಾವರಿಗೆ ಶೇ೧೧ ಬಜೆಟ್ಟಿನಲ್ಲಿ ಅನುದಾನ ನೀಡಲಾಗುತ್ತೆ. ನಮ್ಮಲ್ಲಿ ಎಲ್ಲಿಂದ ಬರಬೇಕು ನದಿ,ನೀರಾವರಿ? ಅದೇ ಖಾತರಿಯಿಲ್ಲದ ಮಳೆಯೊಂದಿಗೆ ವರ್ಶಪೂರ್ತಿ ಗುದ್ದಾಡಬೇಕು. ಒಮ್ಮೆ ಮಳೆ ಬಾರದೆ ಕಾಡಿದರೆ( ೨೦೦೬) ಮಗದೊಮ್ಮೆ ಅಡ್ಡ ಮಳೆ ಬಿದ್ದು (೨೦೦೭)ಬೆಳೆದ ಬೆಳೆಗಳನೆಲ್ಲಾ ಅಡಿಪಾಲು ಮಾಡಿಬಿಡ್ದುತ್ತವೆ. ಎಲ್ಲಾ ಮೀರಿಯೂ ಉತ್ತಮ ಬೆಳೆ ಬಂದರೆ ನಮ್ಮ ತಾಯಾಣೆಗೂ ಆ ವರ್ಷ ಸರಿಯಾದ ಬೆಲೆ ಇರುವದೇ ಇಲ್ಲಾ. ಯಾವ ಸೌಬಾಗ್ಯಕ್ಕೆ ನಮ್ಮ ರೈತರು ಇನ್ನೂ ಕೃಷಿಯನ್ನೇ ನೆಚ್ಚಬೇಕು?. ನಮಗಾದರೋ ಕೃಷಿ ಆದಾಯದ ಒಂದು ಮೂಲ, ಆದರೆ ಅದನ್ನೆ ನಂಬಿ ಬದುಕುತ್ತಿರುವವರ ಪಾಡೇನು? ಕಳೆದ ಮೂರ್ನಾಕು ವರ್ಷಗಳಿಂದ ನಮ್ಮ ಊರಿನಲ್ಲಿ ಸರಿಯಾದ ಫಸಲೇ ಇಲ್ಲಾ. ಹೀಗಾದರೆ ದುಬಾರಿಯ ದಿನಗಳಲ್ಲಿ ಅವರು ಬದುಕುವದಾದರೂ ಹೇಗೆ?. ಕೆಲ ವರ್ಷಗಳಿಂದ ’ಕೃಷಿ ವಿಮೆ’ ಅನ್ನುವ ಭಾರೀ ಪ್ರಚಾರದ ಯೋಜನೆಯೊಂದು ಜಾರಿಗೆ ಬಂತು.ನನ್ನ ತಮ್ಮನೂ ನಾಲ್ಕಾರು ಕಚೇರಿ ಓಡಾಡಿ, ಎಲ್ಲಾ ಉತಾರ,ದಾಖಲೆ ತಂದು  ವಿಮೆ ಮಾಡಿಸಿದ್ದ. ಯಥಾ ಪ್ರಕಾರ ಆ ವರ್ಷವೂ ಮಳೆ ಬಾರದೆ ಹೋಯ್ತು. ನಂತರ ಕೆಲ ವರ್ಷಗಳ ನಂತರ ವಿಮಾದಾರರ ಅರ್ಹ ಫಲಾನುಬವಿಗಳ ಪಟ್ಟಿ ನೋಡಿದರೆ, ನಮ್ಮ ಹೆಸರೇ ಇಲ್ಲಾ. ನಮ್ಮ ಪಕ್ಕದ ಜಮೀನುಗಳಿಗೆ ಹಣ ಬಂದಿದ್ದರೆ ನಮ್ಮ ಹೆಸರೇ ಇಲ್ಲಾ. ಇಡಿ ಊರಿನಲ್ಲಿ ಬರೀ ನಮ್ಮ ಹೊಲಕ್ಕಷ್ಟೆ ಮಳೆ ಬಂದು, ನಮ್ಮ ಹೊಲದಲ್ಲಷ್ಟೆ ಬೆಳೆ ಬೆಳೆಯಲು ಸಾದ್ಯವಾ?. ನನಗಂತೂ ಸಿಕ್ಕಾಪಟ್ತೆ ರೇಗಿ ಹೋಗಿತ್ತು. ತಮ್ಮನಂತೂ ಪಂಚಾಯಿತಿಗೆ ಹೋಗಿ &quot; ಯಾವಾ ಸೂ..ಮಗ ನಿಮಗ ಸಾಲಿ ಕಲಿಸಿದ್ದು? ಹೊಟ್ಟಿಗೆ ಅನ್ನ ತಿಂತಿರೋ ಬ್ಯಾರೆ ಎನರ ತೀಂತಿರೋ, ಬರ ಅಂತ ಬಂದ್ರ ಎಲ್ಲಾರ ಹೊಲಕ್ಕು ಬರುತ್ತೆ, ಒಬ್ಬರ ಹೊಲಕ್ಕೆ ಮಳಿ ಆಗಿ, ಇನ್ನೋಬ್ಬರ ಹೊಲಕ್ಕೆ ಆಗದೇ ಇರುತ್ತನ್ರಲೆ&quot; ಅಂತಾ ಒದರಾಡಿ ಅವರ ಎದುರಿಗೆ ತಹಶೀಲ್ದಾರರಿಗೆ ಮನವಿ ಕೊಟ್ಟು ಬಂದಿದ್ದ. ನಂತರ ಗ್ರಾಹಕ ನ್ಯಾಯಲಯಕ್ಕೆ ಕೇಸು ಹಾಕಿದೆವು. ಕೊನೆಗೂ ಕೇಸು ನಮ್ಮಂತೆ ಆಯಿತಾದರೂ ಲಾಯರಿಗೆ ಶೇ೩೫ ಫೀ ಕೊಟ್ಟು ಉಳಿದದ್ದನ್ನು ಪಾಲಿಗೆ ಬಂದದ್ದು ಪಂಚಾಮೃತ ಅಂತ ಸುಮ್ಮನಾದೆವು. ನಮ್ಮದಲ್ಲದ ತಪ್ಪಿಗೆ ನಾವೇಕೆ ಪರದಾಡಬೇಕೊ ನಾನರಿಯೆ. ನಮ್ಮಲ್ಲಿ ಅನೇಕ ರೈತರ ಜಮೀನುಗಳ ಅವರ ಹೆಸರನಲ್ಲಿ ಇಲ್ಲವೇ ಇಲ್ಲಾ! ಪರಾಂಪರಾಗತವಾಗಿ ಅವನ್ನೆ ಉತ್ತುತ್ತಾ ಬಂದಿದ್ದಾವೆ. ಹಿಂತವರಿಗೆ ಯಾವ ಸರಕಾರಿ ಯೋಜನೆಗಳೂ ತಲುಪುವುದೇ ಇಲ್ಲಾ. ಆದರೆ ಅವರಿಗೆ ಅವುಗಳ ಪರಿವೇಯೇ ಇಲ್ಲಾ.&lt;br /&gt;&lt;br /&gt;ಸುಮಾರು ದಿನಗಳ ಹಿಂದೆ ಬ್ಲಾಗೋಂದರಲ್ಲಿ(ಸುಶ್ರುತನ ಬ್ಲಾಗ್ ಅನಿಸುತ್ತೆ, ಸರಿಯಾಗಿ ನೆನಪಿಲ್ಲಾ)ಯಾವೂದೋ ಚರ್ಚೆಯೋಂದರಲ್ಲಿ , ಒಬ್ಬ ಮಹಾಶಯ ಪ್ರತಿಕ್ರಿಯಿಸುತ್ತಾ ನಮ್ಮ ರೈತರಲ್ಲಿ ಮಾರ್ಕೆಟಿಂಗ ತಂತ್ರಗಳೇ ಇಲ್ಲಾ.ಇಳುವರಿ,ಪೂರೈಕೆ,ಬೇಡಿಕೆ ಇತ್ಯಾದಿಗಳನ್ನು ಪ್ರಸ್ತಾಪಿಸಿ ನಮ್ಮ ರೈತರು ಪೆದ್ದರು ಅಂತಾ ಶರಾ ಬರೆದು ಬಿಟ್ಟಿದ್ದ. ನನ್ನ ಪ್ರಕಾರ ಯಾವೋಬ್ಬ ರೈತನೂ ಮಾರ್ಕೇಟಿಂಗನಲ್ಲಿ MBA ಮಾಡುವುದಿಲ್ಲಾ ಮತ್ತು ಯಾವುದೋ ವಿಶ್ವ ವಿದ್ಯಾಲಯದ ಪಧವೀದರರಂತೂ ಅಲ್ಲವೇ ಅಲ್ಲಾ. ಅಥವಾ ಕೃಷಿ ಪದವಿ ಮಾಡಿದವರು ಹೊಲಕ್ಕೆ ಬಂದು ಊಳುವುದೂ ಇಲ್ಲಾ. ಯಾವುದೇ ಅಡ್ದಕಸುಬಿ ಕಂಪನಿಗೆ ಮನೆಹಾಳು ತಳಿ ಕಂಡು ಹಿಡಿದು ಕೊಟ್ಟು ದುಡ್ದು ಮಾಡುವುದರಲ್ಲೆ ಅವರು ಬ್ಯುಸಿ. ಇನ್ನು ಕೆಲವರು ಕೃಷಿ ಇಲಾಖೆ ಸೇರಿ ದೊಡ್ದ ದೊಡ್ದ ಹೆಗ್ಗಣುಗಳಾಗಿಬಿಡುತ್ತಾರೆ. ಅಂತದುರಲ್ಲಿ ನಮ್ಮ ರೈತರಿಗೆ ಇಳುವರಿ,ಪೂರೈಕೆ,ಬೇಡಿಕೆ ಅಂದರೆ ಎಲ್ಲಿಂದಾ ತಿಳಿಯಬೇಕು?. ಬೇಕಾದರೇ ಕೇಳಿ ನೋಡಿ ಅವರು ಹೇಳುವುದೇ ಇಷ್ಟು &quot;ಯಪ್ಪಾ ಭೂಮಿ ತಾಯಿ ಕಣ್ಣ್ ತೆಗೆದ್ರ ಎನ್ ಕಡಿಮೆ ಮಾರಯಾ.ಆಕಿ ಮನಸ್ಸು ಮಾಡಬೇಕಷ್ಟ!&quot; ಅಂತಾ ನಿರಾತಂಕವಾಗಿ ತಮ್ಮೆಲ್ಲಾ ಕಷ್ಟಗಳನ್ನು ಭೂಮಿ ತಾಯಿ ಮೇಲೆ ಹಾಕಿ ನಿರಮ್ಮಳವಾಗಿರುತ್ತಾರೆ.&lt;br /&gt;&lt;br /&gt;ಒಂದೇ ಒಂದು ಹಂಗಾಮಿನ ಬೆಳೆ ಬಾರದೇ ಇದ್ದರೂ ಬಾಯಿ ಬಡಿದುಕೂಂಡು ರಾಜಕೀಯ ಮಾಡಿಬಿಡುವ ಹಳೇ ಮೈಸುರಿನ ಕಡೆಯ &quot; ಶ್ರೀಮಂತ&quot; ರೈತರೆಲ್ಲಿ? ಮತ್ತು ಮಳೆ ಆಗದೆ ಹೋದರೂ ಬದುಕು ಕಟ್ಟಿಕೊಳ್ಳಲು  ಹುಟ್ಟಿದ ಊರು,ಸಾಕಿದ ದನಗಳನ್ನು ಸ್ತಿತಿವಂತರ ಮನೆಗೆ ಹೊಡೆದು ಬೆಂಗಳುರು,ಗೋವಾಕ್ಕೆ ಗುಳೆ ಹೋಗುವ ಬಾಯಿ ಸತ್ತ ನನ್ನ ರೈತರೆಲ್ಲಿ?. ಆದರೂ ರೈತರು ಅಂದ ಕೂಡಲೇ ನಮ್ಮ ರಾಜಕಾರಣೆಗಳಿಗೆ ನೆನಪಾಗುವುದು ಕಾವೇರಿ,ಕಬ್ಬು,ನೀರಾವರಿ ಮತ್ತು ಅದರ ಸುತ್ತಲಿನ ರಾಜಕೀಯ. ನನ್ನ ಜನ ಸಾಯುತ್ತಲೇ ಇರುತ್ತಾರೆ, ಇವರು ಅವರ ಸಾವಿನ ಕಾರಣಗಳನ್ನು ಪಟ್ಟಿ ಮಾಡುತ್ತಲೇ ಇರುತ್ತಾರೆ. ಹಾಗೆ ನೋಡಿದ್ರೆ ಇಷ್ಟೆಲ್ಲಾ ಕಷ್ಟಗಳ ನಡುವೆ ಅವರಿಗೆ ಬದುಕಲು ಕಾರಣಗಳನ್ನು ಹುಡುಕಬೇಕು ಅಲ್ವಾ?</content><link rel='replies' type='application/atom+xml' href='http://scpatil.blogspot.com/feeds/8298318863328473590/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/8298318863328473590' title='10 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/8298318863328473590'/><link rel='self' type='application/atom+xml' href='http://www.blogger.com/feeds/7270070547169320163/posts/default/8298318863328473590'/><link rel='alternate' type='text/html' href='http://scpatil.blogspot.com/2008/07/blog-post.html' title='ಸುಮ್ನೆ ದೇಶಾವರಿ ಮಾತುಕಥೆ..'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><thr:total>10</thr:total></entry><entry><id>tag:blogger.com,1999:blog-7270070547169320163.post-6295660873986127445</id><published>2008-06-29T20:07:00.000-07:00</published><updated>2008-06-30T01:58:42.307-07:00</updated><title type='text'>ಇದು ಕಥೆಯಲ್ಲಾ !!!</title><content type='html'>&quot;ನಾನು ಸೈನ್ಸ ಮಾಡಿ, ಈ ಸಾಫ್ಟವೇರಿಗೆ ಬಂದಿದ್ದೇ ತಪ್ಪಾಯ್ತು&quot; ಹಾಗಂತ ನಂಗೆ ಅನಿಸಲು ಇದ್ದ ಕಾರಣಗಳು ತೀರಾ ಗಂಭೀರವಾದವುಗಳೇನಲ್ಲಾ;ಮೊದಲನೆಯದಾಗಿ ನಂಗೆ ಚನ್ನೈಯಲ್ಲಿ ಬೇರೆ ಯಾರು ಮಿತ್ರರೇ ಇರಲಿಲ್ಲ.ಎರಡನೆಯದಾಗಿ ಟಿ,ವಿಯಲ್ಲಿ ಯಾವುದೇ ಮಸಾಲಾ ಕಾರ್ಯಕ್ರಮಗಳಿರಲಿಲ್ಲಾ ಮತ್ತು ನಾನು ತಂದಿದ್ದ ಎಲ್ಲಾ ಪುಸ್ತಕಗಳನ್ನು ಓದಿ ಮುಗಿಸಿ ಆಗಿತ್ತು(ಇನ್ನುಳಿದ ಕಾರಣಗಳನ್ನು ಸೆನ್ಸಾರ್ ಮಾಡಲಾಗಿದೆ :)). ಜೊತೆಗೆ ಹಿಂದಿನ ದಿನ ನನ್ನ ಲೀಡ್ ಜೊತೆ ನಡೆದ ಜಗಳವೂ ನನ್ನ ಈ ಏಕಾಏಕಿ ನಿರ್ಧಾರದ ಹಿಂದಿನ ಪ್ರೇರಣೆಯೂ ಆಗಿರಬಹುದು.ದುತ್ತನೇ ಆ ಕ್ಷಣದಲ್ಲಿ ಹೇಳದೇ ಕೇಳದೇ (ಹೇಳಿದರೂ ಸಹ ನಂಗೆ ಆಗ ಏನು ಮಣ್ಣು ತಿಳಿಯುತ್ತಿರಲಿಲ್ಲ ಬಿಡಿ) ಅವರಿವರ ವಶೀಲಿ ಹಿಡಿದು ಧಾರವಾಡದ ಜೆ ಎಸ್ ಎಸ್ ಸೈನ್ಸ ಕಾಲೇಜಿಗೆ ನನ್ನನ್ನು ಎತ್ತಿ ಹಾಕಿ ಬಂದ ಅಪ್ಪನ ನೆನಪಾಯ್ತು, ನನ್ನ ಈಗಿನ ಎಲ್ಲಾ ಕಷ್ಟಗಳಿಗೂ ಅಪ್ಪನೇ ಕಾರಣ ಎಂದೇನಿಸಿ ಅಪ್ಪನ ಮೇಲೆ ಭಯಂಕರ ಕೋಪ ಉಕ್ಕಿ ಬಂತು, ಜೊತೆಗೆ ಚೆಂದಾಗಿ ಪದ ಹೇಳುತ್ತಾ ಕನ್ನಡ ಕಲಿಸುತ್ತಿದ್ದ ಮಮತಾ ಮೇಡಂರ ನೆನಪು ಸಹ ಸೇರಿ &quot; ಅಪ್ಪ ನನ್ನ ಜೀವನವನ್ನು ಹಾಳು ಮಾಡಿಬಿಟ್ಟ&quot; ಎಂದು ನಾನು ಹಾಳಾದ ಕಾರಣವನ್ನು ಅಪ್ಪನ ಮೇಲೆ ಸಲೀಸಾಗಿ ಎತ್ತಿ ಹಾಕಿದ ಮೇಲೆ ಮನಸ್ಸಿಗೆ ತುಸು ನಿರಾಳವಾದಂತಾಯ್ತು.&lt;br /&gt;&lt;br /&gt;       ಕೆಟಲಿನಲ್ಲಿ ಮಾಡಿದ ಚಹಾ ಚೆನ್ನಾಗಿರುವುದಿಲ್ಲಾ ಅಂತ ತಿಳಿದಿದ್ದರೂ ಕೆಳಗೆ ಹೋಗಿ ಚಹಾ ಕುಡಿಯಲಾರದ ನನ್ನ ದರಿದ್ರತನಕ್ಕೆ ಎರಡೆರಡು ಎಕ್ಸಟ್ರಾ ಟೀ ಬ್ಯಾಗ ಅದ್ದಿ ಅದೇ ’ಕಡಕ್ ಚಾ’ ಎಂದುಕೊಂಡು ಚಹ ಗುಟುಕರಿಸತೊಡಗಿದೆ, ಯಥಾಪ್ರಕಾರ ಚಹಾ ಒಗರು ಒಗರಾಗಿ ರುಚಿ ಎನಿಸಿತು, ಆ ಕ್ಷಣದಲ್ಲಿ &quot;ದೇವರು ಚಹಾದಲ್ಲೂ ಸಹ ಇಷ್ಟೊಂದು ಸುಖವಿಟ್ಟಿದ್ದಾನೆ&quot; ಎಂಬ ಹೊಸ ಸತ್ಯ ಹೊಳೆದಂಗಾಗಿ ಎನೋ ಹೊಸದನ್ನು ಕಂಡು ಹಿಡಿದ ಧನ್ಯತೆ ಮೂಡಿ ಬಂತು.ಟಿ.ವಿಯಲ್ಲಿ ತಮಿಳಿನ ಧನುಷ್ , ನಯನತಾರಾಳನ್ನು ನಾನಾ ನಮೂನೆಯಲ್ಲಿ ಅಪ್ಪಿ ಕೊಂಡು, ತಬ್ಬಿಕೊಂಡು ಡ್ಯುಯೇಟ್ ಹಾಡುತ್ತಿದ್ದ, ಆ ಘನಘೋರ ದೃಶ್ಯ ಕಂಡು ನನ್ನ ಎಳೆಮನಸ್ಸು ಘಾಸಿಗೊಂಡು &quot; ಎಂಥಾ ಸೂ... ಮಕ್ಳು ಎಂಥೆಂತಾ ಮಾಲ್ ಜೊತೆ ಡ್ಯಾನ್ಸ್ ಹೊಡಿತಾರಾ, ನಮ್ ಜೀವನ ಮಾತ್ರ ಬರೀ ನೋಡುದ ಆತು&quot; ಎಂದೆನಿಸಿ ಭಲೆ ಸಂಕಟವಾಯ್ತು. ಜೊತೆಗೆ ನನ್ನ ಹಾಳಾದ ನನ್ನ ಟೀಮಿನಲ್ಲೂ ಯಾವುದೇ ಸುಂದರ ಫಿಗರುಗಳಿಲ್ಲಾ ಮತ್ತು ಇದ್ದ ಎಕೈಕ ನಾರ್ಥಿ ಫಿಗರಿಗೆ ’ಬಾಯ್ ಫ್ರೆಂಡ’ ಇದ್ದಾನೆ ಎಂದು ನೆನಪಾಗಿ ಮನಸ್ಸು ಮಮ್ಮಲ ಮರುಗಿತು. ಬಾಯ್ ಫ್ರೆಂಡ್ ಇದ್ದರೂ ಅವಳು ಆ ಪಾಟಿ ಎಕ್ಸಪೋಸ್ ಮಾಡ್ತಾಳಲ್ಲಾ ಆ ನನ್ನ ಮಗನ ’ಅದು’ ಉರಿಯುವದಿಲ್ಲವಾ? ಎಂದೆನಿಸಿ ಈ ಬಾರಿ ನನ್ನ ಮಗ ಚೆನ್ನಾಗಿ ಕುಡಿದಾಗ ಅವನ ಬಾಯಿ ಬಿಡಿಸಬೇಕೆಂದು ಸ್ಕೆಚು ಹಾಕಿದೆ.ಕೈಲಿರುವ ಚಹಾ ಬರಿದಾಗತೊಡಗಿತ್ತು ಮತ್ತು &quot; ಚಹ ಜಾಸ್ತಿ ಕುಡಿದರೆ ಇನ್ನೂ ಕರ್ರಗಾಗುತ್ತಾರೆ&quot; ಎಂಬ ನಮ್ಮೂರ ಹುಡುಗರ &quot;ಬ್ಯೂಟಿ ಟಿಪ್&quot; ನೆನಪಾಗಿ, ನಾನೂ ಕರ್ರಗಾಗುತ್ತಿದ್ದಂತೇ ಅನಿಸಿ ಸಂಜೆಯೇ ಬೇರೆ ಯಾವುದೋ &quot; ಮೆನ್ಸ ಕ್ರೀಮು&quot; ಕೊಳ್ಳುವುದೆಂದು ನಿರ್ಧರಿಸಿದೆ.&lt;br /&gt;&lt;br /&gt;    ರೂಮಿನಲ್ಲಿ ಥಂಡಿ ಜಾಸ್ತಿ ಅನಿಸಿ ಎ.ಸಿ ಆಫ್  ಮಾಡಿದ ಸ್ವಲ್ಪ ಹೊತ್ತಿನಲ್ಲೆ ಮತ್ತೆ ಸೆಕೆ ಅನಿಸತೊಡಗಿ ಅಂಗಿ, ಬನಿಯನ್ನು ಕಳಚಬೇಕೆನಿಸಿದ ಕೂಡಲೇ ಕಳಚಿ ಅವೆರಡನ್ನೂ ದಿಕ್ಕಿಗೊಂದು ತೂರಾಡಿ ಸಿ.ಅಶ್ವತರ ದ್ವನಿ ಅನುಕರಿಸಿ &quot; ಮುಕ್ತ , ಮುಕ್ತ , ಮುಕ್ತ ಆಆಆಆಆಆಅ&quot; ಎಂದು ಅರಚಿ ಮುಕ್ತತೆ ಅನುಭವಿಸಿದೆ. ಇನ್ನೂ ಮಡಚದೇ ಇದ್ದ ಹಾಸಿಗೆ,ರಗ್ಗುಗಳು,ಖಾಲಿ ಬಿಸ್ಲೇರಿ ಬಾಟಲ್ಲುಗಳು, ನನ್ನ ಇತ್ತಿಚಿನ ಕಥೆ ಬರೆವ ಹುಚ್ಚಿನ ಫಲವಾಗಿ ಪೂರ್ಣವಾಗದೇ ಅರ್ಧಕ್ಕೆ ಗರ್ಭಪಾತವಾದ ಅರ್ಧರ್ದ ಕಥೆಗಳ ಹಾಳೆಗಳು ಇಡೀ ರೂಮ್ ತುಂಬಾ ಚೆಲ್ಲಾಪಿಲ್ಲಿಯಾಗಿರುವದನ್ನು ಕಂಡು ’ವಾಯಕ್’ ಎನಿಸಿ ರೂಮ ಬಾಯ್ ಕರೆಯಬೇಕೆನಿಸಿದರೂ &quot; ಬ್ಯಾಚುಲರ ರೂಂ ಹಿಂಗಿದ್ರೆ ಚಂದ&quot; ಅಂತಾ ನನ್ನ ಅಂತರಂಗಕ್ಕೆ ಹೊಳೆದಂಗಾಗಿ ಹಾಸಿಗೆಯ ಮೇಲೆ ಡೈವ್ ಹೊಡೆದು ರಗ್ಗು ಎಳೆದುಕೊಳ್ಳತೊಡಗಿದೆ &quot; ಲೋ! ಮಾರಿ ಮ್ಯಾಲ ಬಿಸಿಲ ಬಿದ್ರೂ, ಮುಕಳಿ ಮ್ಯಾಕ ಮಾಡಿ ಹೆಂಗ ಬಿದ್ದಾನ ನೋಡು ಸಂತ ಬಾಡ್ಯಾ&quot; ಅಂತ ನನ್ನ ಹುಬ್ಬಳ್ಳಿ ಅಮ್ಮ ಕ್ಯಾಕರಿಸಿ ಉಗಿದಂಗಾಗಿ ಗಪ್ಪನೇ ಎದ್ದು ಕೂತು ಮತ್ತೆ ಎಲ್ಲಾ ಚಾನೆಲ್ಲು ಸ್ಕ್ಯಾನು ಮಾಡಿ &quot; ಬಂಗಾರಿ ಬಾರೆ ನೀ ಬುಲ್ ಬುಲ್&quot; ಹಾಡು ಕಂಡ ಕೂಡಲೆ ನಿಲ್ಲಿಸಿ ನಾನೂ ಸಹ ಬುಲ್ ಬುಲ್ ಎಂದು ಹಾಡತೊಡಗಿದೆ. ಆ ಆಟವೂ ಸ್ವಲ್ಪ ಹೊತ್ತಿಗೆ ಬೇಜಾರಾಗಿ , ಮಾಡಲು ಬೇರೆ ಕೆಲ್ಸವಿಲ್ಲದ್ದಕ್ಕೆ ’ ಅದಾದರೂ’ ಮಾಡಿ ಬರೋಣ ಅಂತ &quot;ದಿ ಹಿಂದೂ&quot; ಪೇಪರ್ ಹಿಡಿದುಕೊಂಡು ಪಾಯಖಾನೆಗೆ ಹೋಗಿ ಕಮೋಡಿನ ಮೇಲೆ ಅಂಡು ಊರಿ ಕುಳಿತೆ. ಮೊಟ್ಟ ಮೊದಲ ಬಾರಿ ಕಮೋಡನ್ನು ಕಂಡು ಬೆಚ್ಚಿ ಬಿದ್ದು ಅದರ ಮೇಲೆ ಕೂಡ್ರುವ ಬಗೆ ತಿಳಿಯದೇ ಪೇಚಾಡಿದ್ದು ಕಂಡು ನಗು ಒತ್ತರಿಸಿಕೊಂಡು ಬಂತು. ಈಗ ನಾನೂ ಸಹ ಬಹಳ &quot;ಮುಂದುವರೆದವರ&quot; ಲಿಸ್ಟಿನಲ್ಲಿರುವದರಿಂದ ಈಗ ಕಮೋಡಿನಲ್ಲಿಯೇ ಎಲ್ಲಾ ಸುರಾಗ ,ಸುಲಲಿತ ಅನಿಸುತ್ತದೆ.&lt;br /&gt;&lt;br /&gt;       ಹೊತ್ತು ಕಳೆಯಲು ಏನಾದರೂ ಮಾಡಲೇಬೇಕು ಅನ್ನಿಸಿ ನನ್ನ ಮೊಬೈಲು ತೆಗೆದು ನನ್ನ ಕಾಲೇಜು ಮಿತ್ರರಿಗೆ ಫೋನಾಯಿಸತೊಡಗಿದೆ.ಒಂದರಡು ಮಾತು ಮುಗಿಯುವಷ್ಟರಲ್ಲಿ &quot; ಮತ್ತೆ ನಿನ್ನ ಕಡೆ ಏನು ಸಮಾಚಾರ?&quot;, &quot; ಮುಂದ&quot; ,&quot; ಮತ್ತೇ?&quot; ಇವೇ ಜಾಸ್ತಿಯಾಗಿ &quot;ಮತ್ತೆ ಬೆಂಗಳೂರಿಗೆ ಬಂದಾಗ ಈ ಬಾರಿ ಖಂಡಿತ ಭೇಟಿ ಆಗೊಣ! ಎಲ್ಲಾರೂ ಸೇರಿ ಭಾಳ ದಿನ ಆದ್ವು&quot; ಅಂತ ಅದೇ ಹಳೆ ಸವಕಲು ಡೈಲಾಗು ಬಿಟ್ಟು ’ಫೊನಾಯಣ’ ಮುಗಿಸಿದೆ. ಆದರೂ ಗಂಟೆ ಗಟ್ಟಲೇ ( ದಿನಗಟ್ಟಲೇ(?))ತಮ್ಮ ಗರ್ಲ್ ಫ್ರೇಂಡುಗಳ ಜೊತೆ ಹರಟುವ ನನ್ನ ಮಿತ್ರರ ನೆನಪು ಬಂದು &quot; ನನ್ ಮಕ್ಳು ಅಷ್ಟೋತ್ತು ಮಾತಾಡಲು ವಿಷಯಯವಾದ್ರು ಏನಿರುತ್ತೆ?&quot; ಅಂತಾ ಅನಿಸಿದರೂ, ಮೊಬೈಲು ಹೊಂದಿದ ಲಕ್ಷ ಲಕ್ಷ ಹುಡುಗಿಯರಲ್ಲಿ ನನ್ನೊಂದಿಗೆ ಹರಟಲು ಒಬ್ಬ ಹುಡಿಗಿಯನ್ನೂ ಅನುಗ್ರಹಿಸದ ಭಗವಂತನ ತಾರತಮ್ಯಕ್ಕೆ ತುಂಬಾ ಸಿಟ್ಟು ಬಂದರೂ ಏನೂ ಕಿಸಿಯಲಾಗದ ಕಾರಣ ಎಲ್ಲಾ &quot;ವಿಧಿ ವಿಪರ್ಯಾಸ&quot; ಎಂದುಕೊಂಡು ಸುಮ್ಮನಾಗಬೇಕಾಯಿತು.&lt;br /&gt;&lt;br /&gt;     ಮತ್ತೆ ಮನಸ್ಸು ಬಡ್ದಿಮಗಂದೂ ಮೂಲ ಪ್ರಶ್ನೆಯಡೆಗೆ ತಿರುಗಿ &quot;ನಾನು ಸೈನ್ಸ್ ಮಾಡಿರದೇ ಇದ್ದರೆ ಎನಾಗಿರುತ್ತಿತ್ತು?&quot; ಎಂದು ಊಹಿಸತೊಡಗಿತು. ವರ್ಷಕ್ಕೋಮ್ಮೆ ಸಿಗುವ ಹೈಕಿಗಾಕಿ ವರ್ಷಪೂರ್ತಿ ಹಲ್ಲು ಗಿಂಜಿ ಬಾಲ ಅಲ್ಲಾಡಿಸುವ ಈ ಹಾಳು ಸಾಫ್ಹ್ಟವೇರ್ ಬದುಕಿಗಿಂತ ಅಬ್ಬೀಗೇರಿಯಲ್ಲಿ ಹೊಲ ಮನಿ ನೋಡಿಕೊಳ್ಳುತ್ತ ’ಗೌಡಕಿ’ ಮಾಡುವುದೇ  better option ಅನಿಸಿತು ಮತ್ತು ನಾನು ಸೈನ್ಸನ ಹಿಂದೆ ಬಿದ್ದು ಧಾರವಾಡಕ್ಕೆ ಹೋಗದೇ ಇದ್ದರೇ ಹತ್ತನೇ ವರ್ಗದವರೆಗೂ ನನ್ನೋಂದಿಗೆ ಓದಿದ್ದ ನನ್ನ ಕನಸಿನ ಕನ್ಯೆ ಸುಮಾ( ಹಾಜರಾತಿ ಪ್ರಕಾರ) ಉರ್ಫ್ ಸುಮವ್ವ( ಅವರ ಮನೆಯವರ ಪ್ರಕಾರ) ಆಲಿಯಾಸ್ ಸುಮಿ( ಅವಳ ಗೆಳತಿಯರ ಪ್ರಕಾರ) ಕೊನೆಯದಾಗಿ ಸುಧಾರಾಣಿ ( ನಮ್ಮೂರ ಪಡ್ಡೆಗಳ ಪ್ರಕಾರ)ನನ್ನವಳಾಗಿರುತಿದ್ಲಾ? ಎಂಬ ಪ್ರಶ್ನೆಗೆ ಸಕಾರಾತ್ಮಕ ಉತ್ತರ ಊಹಿಸಿಕೊಂಡ ಮೇಲೆ ಮನಸ್ಸಿಗೆ &quot;ನಂದೂ ಅಂತ ಪ್ರೀತಿಸುವ ಜೀವ&quot; ಸಿಕ್ಕಂಗಾಗಿ ಮನಸ್ಸಿಗೆ ನಿರಾಳವೆನಿಸಿತು.ಬಡ್ಡಿಮಗ ಡಿಂಗ್ರಿಯ ಮಾತು ಕೇಳಿ ೯ ನೆಯ ವರ್ಗದಲ್ಲೇ &quot;ಕಣ್ಣು ಕಮಲ, ಸಂಪಿಗೆ ನಾಸಿಕ, ತೊಂಡೆ ತುಟಿ&quot; ಇತ್ಯಾದಿ ಇತ್ಯಾದಿ ಬಲ್ಲ ಉಪಮೇಯಗಳನ್ನು ಬಳಸಿ, ಕೊನೆಯಲ್ಲಿ ’ಚಂದ್ರ ಇರುವುದು ಬಾನಿನಲ್ಲಿ, ಕಮಲ ಇರುವುದು ಕೆಸರಿನಲ್ಲಿ, ನೀನು ಇರುವುದು ನನ್ನ ಹೃದಯದಲ್ಲಿ” ಅಂತೆಲ್ಲಾ ಕ್ರಿಯೇಟಿವಿಟಿಯಿಂದ  ಬರೆದಿದ್ದ ನನ್ನ ಜೀವನದ ಮೊದಲ ಪ್ರೇಮ ಪತ್ರ ಸುಮಾಳ ಕೈಗೆ ಸಿಗದೆ( ಇದೂ ಸಹ ಡಿಂಗ್ರಿಯ ಐಡಿರಿಯಾದ ಪುಣ್ಯ ಫಲ)ಅವರ ಮನೆಯ ಆಳು ಮುತ್ಯಾನ ಕೈಗೆ ಸಿಕ್ಕು, ನಂತರ ಅವರಪ್ಪನ Via ಸೈನ್ಸ ಮಾಸ್ತರ್ ಲೋಕಾಪೂರನ ಕೈಗೆ ಸಿಕ್ಕು ಭಲೇ ಧರ್ಮ ಸಂಕಟಕ್ಕೀಡಾಗಿಸಿತು. ಆ ಲೋಕಾಪುರ ನನ್ನ ಕರೆದು &quot; ಗೌಡ್ರು ಸಮುದ್ರದಂಗ ಅದಾರ, ಹೆಂಥಾವ್ರ ಹೊಟ್ಟ್ಯಾಗ ಎಂಥಾ ಮಗ ಹುಟ್ಟಿದೆ ಲೇ&quot; ಅಂಥ ನನ್ನ ಹುಟ್ಟನ್ನೆ ಅವಮಾನಿಸಿ ಅಪ್ಪನನ್ನು ಸಮುದ್ರಕ್ಕೆ ಹೋಲಿಸಿ, ನನ್ನನ್ನು ಊರ ಮೂಂದಿನ ಅಗಸರ ಕೆರೆಗಿಂತಲೂ ಕೀಳಾಗಿಸಿದ ಈ ಸೈನ್ಸ್ ಮಾಸ್ತರು ಸಹ ನಂಗೆ ಸೈನ್ಸ ಮೇಲೆ ಸಿಟ್ಟು ಬರಲು ಕಾರಣವಾ? ಎಂದು ಗುಮಾನಿ ಬರತೊಡಗಿತು. ನಮ್ಮ ಈ ಪ್ರೇಮ ಪತ್ರವೆಂಬ ಜೀವನದ ಶ್ರೇಷ್ಠ ಕೃತಿಯ ಫಲವಾಗಿ ಅಲ್ಲಿಯವರೆಗೂ &quot; ಗೌಡ್ರ ಮಗಾ ಭಾಳ ಶಾಣ್ಯಾ&quot; ಅಂತಾ ಮುಕುಟವಿಲ್ಲದ ರಾಜನಂತಿದ್ದ ನನಗೆ &quot; ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತಂತೆ&quot; ಅನ್ನುವ ಗಾದೆಗೆ ಉದಾಹರಣೆಯಾಗಿಸಿತು.ಇದರ ಜೊತೆಗೆ ಈ ಪ್ರಸಂಗದಿಂದ ಸುಮಾ ಸಹ &quot;ನಾನು ನಿನ್ನ ಆಂಥ ಹುಡುಗ ಅಂತಾ ಅನ್ಕೋಂಡಿದ್ದಿಲ್ಲಾ, ನಾವಿಬ್ಬರೂ ಒಳ್ಳೇಯ ಫ್ರೇಂಡ್ಸ್ ಅಷ್ಟೇ&quot; ಅಂತಾ ಬಾಂಬು ಹಾಕಿ ಎಂದಿಗೂ ಮಾತಲಾಡರದ ನಾವು ಯಾವಾಗಿನಿಂದ ಒಳ್ಳೆಯ ಫ್ರೆಂಡ್ಸ್ ಆದೆವು ಅನ್ನುವುದೇ ತಿಳಿಯದೇ ಗೋಜಲಾಗಿಬಿಟ್ಟಿತ್ತು. ಕೊನೆಗೆ ನಾನು ನನ್ನ ಸುಮಾಳ ಮೇಲಿನ ಲವ್ವನ್ನು ತ್ಯಾಗಮಾಡಬೇಕಾಗಿ ಬಂದ ನನ್ನ ಅಸಹಾಯಕತೆಯೂ ಆ ಹೊತ್ತಲ್ಲದ ಹೊತ್ತಲ್ಲಿ ನೆನಪಾಗಿ ನನ್ನ ಮತ್ತು ಸುಮಾಳ &quot;ವಿಫಲ ಪ್ರೇಮ&quot;ಕ್ಕೆ ಗೌರವ ತೋರಲು &quot; ನಲಿವ ಗುಲಾಬಿ ಹೂವೇ&quot;,&quot;ಪ್ರೇಮದ ಕಾದಂಬರಿ ಬರೆದೆನು ಕಣ್ಣಿರಲಿ&quot; ಅಂತಾ ಹಾಡೀ ’ ಉಹು ಉಹು ಉಹು’ ಅಂತ ಕೆಮ್ಮಿ  ಹಗುರವಾದೆ.ಮತ್ತೆ &quot;ಟ್ರೂ ಲವ್&quot; ಮೂಡ್ ಬಂದಂಗೆ ಆಗಿ ಕೈಗೆ ಸಿಕ್ಕ ಹಾಳೆಯ ಮೇಲೆ ’ಸುಮಾ’ ಅಂತಾ ಬರೆದೆ, ಖುಷಿಯಾಯ್ತು; ಮತ್ತೆ      ’ಸುಮಾ ಐ ಲವ್ ಯೂ’ ಅಂತಾ ಬರೆದೆ, ಇನ್ನೂ ಖುಶಿಯಾಯ್ತು; ಕೊನೆಗೆ ’ಸಂತೋಷ್ Weds ಸುಮಾ’ ಅಂತಾ ಬರೆದುಕೊಂಡ ಮೇಲಂತೂ ಖುಷಿ ಉಕ್ಕಿ ಉಕ್ಕಿ ಬಂತು, ಅದೇ ಖುಷಿಯಲ್ಲಿ ಸ್ನಾನಕ್ಕೆ ಹೋಗಿ &quot; ಹೂವು, ಮುಳ್ಳು, ಪ್ರೀತಿ, ಪ್ರೇಮ, ಟೊಂಗೆ, ತಪ್ಪಲು&quot; ಅಂತೆಲ್ಲಾ ಹಾಡು ಹಾಡುತ್ತಾ ಸ್ನಾನ ಮುಗಿಸಿ ’ಸಾವರಿಯಾ’ ಸ್ಟೈಲಲ್ಲಿ ಟಾವೆಲ್ಲು ಸುತ್ತಿಕೊಂಡು ಒಂದೆರಡು ಸ್ಟೆಪ್ಪು ಹಾಕಿದ ಮೇಲೆ, ಸ್ನಾನ ಮಾಡುವ ಮೊದಲೇ ಶೇವ್ ಮಾಡುವುದನ್ನು ಮರೆತಿದ್ದನ್ನು ಕಂಡು ಭಲೇ ಖೇದಯಾಯ್ತು. ನಂತರ ಹುಡುಗಿಯರಿಗೆ ದಾಡಿ ಬಿಟ್ಟ &quot;ಕರಡಿಮರಿ&quot;ಯಂತಹ ಹುಡುಗರೇ ಇಷ್ಟವಾಗುತ್ತಾರೆ ಎಂದು ಯಾವುದೋ ’ಲವ್ ಲವಿಕೆ’ಯಲ್ಲೋ ’ಈ ಗುಲಾಬಿ ನಿನಗಾಗಿ’ಯಲ್ಲೋ ಓದಿದ ನೆನಪಾಗಿ ನಾನು ಶೇವ್ ಮಾಡದೇ ಇರುವ ನಿರ್ಧಾರಕ್ಕೆ ನಾನೇ ಬೆನ್ನು ಚಪ್ಪರಿಸಿಕೊಂಡು ಇರುವ ದಾಡಿಯನ್ನೇ ಟ್ರಿಮ್ ಮಾಡಲು ಕತ್ತರಿ ಹುಡುಕತೊಡಗಿದೆ. ಕನ್ನಡಿ ಮುಂದೆ ನಿಂತು ಸಾದ್ಯಾನುಸಾರ ಸ್ಮಾರ್ಟ್ ಕಾಣಿಸಲು ಯತ್ನಿಸಿ ’ಪರ್ವಾಗಿಲ್ಲಾ ಓಕೆ’ ಅನ್ನಿಸಿದ ಮೇಲೆ ’ಸುಮಾ ಈಗ ಏನು ಮಾಡುತ್ತಿರಬಹುದು?’ಅಂದುಕೊಳ್ಳುತ್ತಿರುವಾಗ ಅವಳ ಮದುವೆಯಾಗಿ ಅವಳ ಗಂಡನೊಂದಿಗೆ, ಕೈಲಿ ಕೂಸು ಹಿಡಿದು ಕಂಠಿ ಬಸವಣ್ಣನ ಜಾತ್ರೆಯಲ್ಲಿ ಖಾರ ಚುರಮುರಿ ತಿನ್ನುತ್ತ್ಜ ನಿಂತಂತೇ ಅನಿಸಿ ಬೆಚ್ಚಿಬಿದ್ದು &quot; ಛೇ ಛೇ ನನ್ನ ಸುಮಾಳ ಮದುವೆ ಇನ್ನೂ ಆಗಿರಲಿಕ್ಕಿಲ್ಲ&quot; ಅಂತಾ ಅನ್ಕೊಂದು ನಿರಾಳವಾಗಿ ಈ ಬಾರಿ ಊರಿಗೆ ಹೋದಾಗ ಖಂಡಿತ ಅವಳನ್ನು ಹುಡುಕಿ ನೇರವಾಗಿ ಮಾತಾಡಿ ಪ್ರಪೋಸ್ ಮಾಡಿಬಿಡಬೇಕು ಅನ್ಕೋಂಡ ಮೇಲೆ ಎನೋ ಗೆದ್ದ ಭಾವ ಮೂಡಿತು..</content><link rel='replies' type='application/atom+xml' href='http://scpatil.blogspot.com/feeds/6295660873986127445/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/6295660873986127445' title='15 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/6295660873986127445'/><link rel='self' type='application/atom+xml' href='http://www.blogger.com/feeds/7270070547169320163/posts/default/6295660873986127445'/><link rel='alternate' type='text/html' href='http://scpatil.blogspot.com/2008/06/blog-post.html' title='ಇದು ಕಥೆಯಲ್ಲಾ !!!'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><thr:total>15</thr:total></entry><entry><id>tag:blogger.com,1999:blog-7270070547169320163.post-3112735855712382590</id><published>2008-05-27T20:40:00.000-07:00</published><updated>2008-05-27T21:32:15.010-07:00</updated><title type='text'>ಲಂಕೇಶ್, ಮೂರ್ತಿಗಳು ಮತ್ತು ನನ್ನ ಹೊಸ ತೆವಲುಗಳು.</title><content type='html'>ಲಂಕೇಶ್, ಅನಂತಮೂರ್ತಿಗಳನ್ನು ಓದಿ ನಾನು ತೀರಾ ಈ ಮಟ್ಟಿಗೆ ಹಡಬೆದ್ದು ಹೋಗುತ್ತೇನೆ ಅಂತಾ ಕನಸು ಮನಸಲ್ಲೂ ಅನ್ಕೊಂಡಿರಲಿಲ್ಲಾ.ಅವರ ಕಥೆಗಳಲ್ಲಿ, ಕಾದಂಬರಿಗಳಲ್ಲಿ ಬರುವ ಯಾವುದಾದರೂ ಸ್ತ್ರೀ, ಪುರುಷ ಪಾತ್ರಗಳು ಅತಿ ಉದಾತ್ತ ಅನಿಸತೊದಗಿದರೆ; ಮನಸ್ಸು ಆಗ್ಲೆ ಕಥೆಯ ಮುಂದಿನ ತಿರುವುಗಳನ್ನು ಊಹಿಸತೊಡಗಿ, ಆ ಪಾತ್ರಗಳು ಯಾರ ಜೊತೆಯಲ್ಲಿ,ಯಾವ ಹೊತ್ತಿನಲ್ಲಿ &quot;ಅದನ್ನು&quot; ಮಾಡುತ್ತವೋ ಅಂತಾ ಲೆಕ್ಕ ಹಾಕುತ್ತಲೇ ಪುಟ ತಿರುವುತ್ತೇನೆ. ಅಚಾನಕ್ ಆಗಿ ಹಾಗೆನಾದರೂ ನಡೆಯದಿದ್ದರೆ &quot; ಥೂ ಬೋ...ಮಕ್ಳು ಮೋಸ ಮಾಡಿದ್ರು&quot; ಅನ್ನೊ ನಿರಾಶಾ ಭಾವದಲ್ಲಿ ಕಥೆಗಾರನನ್ನು ಬೈಯುತ್ತ ಪುಟ ತಿರುವಿತ್ತೇನೆ. ನಮ್ಮ ನಸೀಬು ನೆಟ್ಟಗಿದ್ದು &quot;ಆ ಥರ&quot;ದ ಘಟನೆಗಳು ನಡೆದರೆ  ಆ ಭಾಗವನ್ನು ಇನ್ನೊಮ್ಮೆ ಎನಾದರೂ ಸಿಕ್ಕಿತು ಎಂಬಂತೆ ಓದಿ ಧನ್ಯನಾಗುತ್ತೇನೆ. ಅದ್ಯಾಕೋ ಗೊತ್ತಿಲ್ಲ್ಲ ಮೂರ್ತಿಗಳಿಗೆ ಉದಾತ್ತ ಪಾತ್ರಗಳಿಂದ &quot;ಅದನ್ನು&quot; ಮಾಡಿಸಿ ಆ ಉದಾತ್ತ ಪಾತ್ರಗಳ ವ್ಯಕ್ತಿತ್ವವನ್ನು ಭೂಮಿಗಿಳಿಸುವದರಲ್ಲಿ ಎನೋ ಖುಶಿ.&lt;br /&gt;&lt;br /&gt;ಇದು ಸಾಯ್ಲಿ, ಇನ್ನೂ ಹುಡುಗ, ವಯಸ್ಸು ಅಂತಾ ಎನೋನೋ ಸಮಾಧಾನ ಮಾಡ್ಕೊಬಹುದು. ಆದ್ರೆ ಮೂರ್ತಿಗಳ &quot;ಭಾರತೀಪುರ&quot; ಓದಿದ್ದೆ ಓದಿದ್ದು ಮನಸ್ಸು ’ದೇವರು’ ಎಂಬ ಅಮೂರ್ತ ನಂಬಿಕೆಯನ್ನೇ ಕಳೆದುಕೊಳ್ಳುತ್ತಿದೆ. ಅತ್ಲಾಗೆ ದೇವರನ್ನು ದಿಕ್ಕರಿಸುವ ಆತ್ಮ ಸ್ಥೈರ್ಯವೂ ಇಲ್ಲದೆ, ದೇವರಲ್ಲಿ ಪೂರ್ಣ ಶ್ರದ್ದೆಯಿಡಲೂ ಆಗದೇ ಎಡಬಿಡಂಗಿ ಆಗ್ತಾ ಇದ್ದೀನಿ ಅನ್ನೊ ಭಯ. ಸಂಕಷ್ಟಿಯ ದಿನ ಗೊತ್ತಗದೇ ಆಮ್ಲೇಟ್ ತಿಂದಿದ್ದಕ್ಕೆ ನನ್ನ ಲ್ಯಾಬ ಎಕ್ಸಾಮ್ ಫೇಲ್ ಆಯ್ತು ಅಂತ ನಂಬುವ ನಂಗೆ &quot;ದೇವರು&quot; ಅನ್ನುವ ಮ್ಯಾಜಿಕನ ಮೇಲಿನ ವಿಶ್ವಾಸವೇ ಹೊರಟು ಹೋಗಿದೆ. ಇವೆಲ್ಲದುರ ಮದ್ಯೆ  ಪೂಜೆಗೂ, ಸ್ನಾನಕ್ಕೂ ಹತ್ತಿರದ ಲಿಂಕಿರುವದರಿಂದ ಎರಡನ್ನೂ ತ್ಯಜಿಸಿ ನಾಸ್ತಿಕನಾದ ಫಿನಿಕ್ಸು ನಂದೆಲ್ಲಿಡಲಿ ಅನ್ನುವಂತೆ &quot; ನಿಂದು ಭಕ್ತಿ ಅಲ್ಲವೇ ಅಲ್ಲ. ನಿಂದು ಅಸ್ತಿತ್ವದ ಭಯ, ಭಯವೇ ಧರ್ಮದ ಮೂಲ&quot; ಅಂತೆಲ್ಲಾ ಕಂಡೋರ ಡೈಲಾಗು ಕದ್ದು ಹೇಳಿ ನನ್ನನ್ನು ಇನ್ನಷ್ಟು ಗೊಂದಲಕ್ಕೆ  ತಳ್ಳಿದ್ದಾನೆ.&lt;br /&gt;&lt;br /&gt;&quot;ರೂಡಿಯೇ ನಂಬಿಕೆಗೆ ಮೂಲ, ಆ ನಂಬಿಕೆಯ ಬೇರನ್ನು ಕತ್ತರಿಸಿದರೆ ದೇವರು ಇಲ್ಲಾ, ಧರ್ಮವೂ ಇಲ್ಲ್ಲ&quot; ಇತ್ಯಾದಿ ಇತ್ಯಾದಿ ಸಾಲುಗಳು ನನ್ನ ರೂಡಿಗಳನ್ನು, ನಂಬಿಕೆಗಳನ್ನು ಪ್ರಶ್ನಿಸಿಕೊಳ್ಲುವಂತೆ ಮಾಡಿ  &quot; ಅರೇ ಹೌದಲ್ಲವೇ!&quot; ಎಂಬ ಖುಶಿಯೋಂದಿಗೆ &quot; ಛೇ ಛೇ ದೇವರ ವಿಷ್ಯದಲ್ಲಿ ಹಾಗೆಲ್ಲಾ ಯೋಚಿಸಬಹುದಾ?&quot; ಎಂಬ ಪಾಪ ಪ್ರಜ್ಣೆಯ ಜೊತೆಗೆ, ಈ ರೀತಿ ಎಲ್ಲಾ ಯೋಚಿಸಿದ್ದಕ್ಕೆ ಮತ್ತೆ ದೇವರಿಗೆ ಸಿಟ್ಟು ಬಂದು ಅಪ್ರೈಸಲ್ ಟೈಮಲ್ಲಿ ಕಿರಿಕ್ಕು ಮಾಡಿದರೆ ಹೇಗೆ? ಅನ್ನುವ ಭಯವೂ ಸೇರಿ ನನ್ನ ಮಾನಸಿಕ ನೆಮ್ಮದಿಯನ್ನೆ ಕಳೆದುಕೊಂಡಿದ್ದೇನೆ.&lt;br /&gt;&lt;br /&gt;ಮೇಲಿನ ಎಲ್ಲಾ ಸಕಾರಣಗಳಿಗಾಗಿ ನಾನು ಸದ್ಯಕ್ಕೆ ಮೂರ್ತಿಗಳ ಮತ್ತು ಲಂಕೇಶರ ಸಹವಾಸವೇ ಸಾಕು ಎನ್ನಿಸಿ &quot;ಪ್ರಗತಿ ಪರ&quot; ಸಾಹಿತ್ಯ ಕೃಷಿಗೆ ತಾತ್ಕಾಲಿಕ ವಿರಾಮ ನೀಡಿದ್ದೇನೆ. ಮತ್ತೆ ನನ್ನ ಪಾರಂಪರಿಕ ಶ್ರದ್ದೆಯನ್ನು ಮರುಸ್ಥಾಪಿಸಲು ಮತ್ತೆ ಭೈರಪ್ಪನವರ ಮೊರೆ ಹೊಕ್ಕಿದ್ದೇವೆ ಎಂದು ಹೇಳಲು ಭಾರಿ ಖುಷಿ ಮತ್ತು ನನ್ನ ಈ ತಿಕ್ಕಲುತನಕ್ಕೆ ನಾಚಿಕೆಯೂ ಆಗುತ್ತಿದೆ..</content><link rel='replies' type='application/atom+xml' href='http://scpatil.blogspot.com/feeds/3112735855712382590/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/3112735855712382590' title='11 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/3112735855712382590'/><link rel='self' type='application/atom+xml' href='http://www.blogger.com/feeds/7270070547169320163/posts/default/3112735855712382590'/><link rel='alternate' type='text/html' href='http://scpatil.blogspot.com/2008/05/blog-post_27.html' title='ಲಂಕೇಶ್, ಮೂರ್ತಿಗಳು ಮತ್ತು ನನ್ನ ಹೊಸ ತೆವಲುಗಳು.'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><thr:total>11</thr:total></entry><entry><id>tag:blogger.com,1999:blog-7270070547169320163.post-5528643657570184096</id><published>2008-05-12T20:06:00.000-07:00</published><updated>2008-05-13T02:18:37.098-07:00</updated><title type='text'>ಚುನಾವಣೆ ಎಂಬ ಪರ್ವಕಾಲ</title><content type='html'>ಚುನಾವಣೆಗೂ ನಮ್ಮೂರಿಗೂ ಭಲೇ ಅವಿನಾಭಾವ ಸಂಬಂಧ, ಹುಟ್ಟಾ ಸೋಮಾರಿಗಳಾದ ನಮ್ಮೂರ ಪ್ರಜಾ ಪ್ರಭುಗಳಿಗೆ ಚುನಾವಣೆ ಸೀಜನ್ನು ಬಂತೆಂದರೆ ಭಲೇ ಖುಷಿ. ಅಬಾಲ ವೃದ್ದರಾಗಿ ಎಲ್ಲರೂ ತಮ್ಮದೇ ಆದ ಕಾರಣಗಳಿಗಾಗಿ ಈ ಖುಷಿಯಲ್ಲಿ ಪಾಲ್ಗೋಳ್ಳುತ್ತಾರೆ. ಊರ ಚಿಳ್ಳೆಗಳಿಗೆ ಓಡಾಡಿ ಎಲ್ಲಾ ಪಕ್ಷದವರ ಪಾಂಪ್ಲೆಟು ಮತ್ತು ಸ್ಟಿಕರು ಸಂಗ್ರಹಿಸುವ ಚಪಲ ಮತ್ತು ಹಿರಿಯರಿಗೆ ಕಟ್ಟೆಗೆ ಕೂತು ತಿಳಿದದ್ದು ತಿಳೆಗೆಟ್ಟದ್ದು ಎಲ್ಲವನ್ನೂ ಚರ್ಚಿಸುವ ವಿಕ್ಷಿಪ್ತ ಚಪಲ, ಇನ್ನೂ ಕಾರ್ಯಕರ್ತರೊಂಬ ಪರ್ಮನೆಂಟು ಪುಡಾರಿಗಳಿಗಂತೂ ಇದು ದುಡಿಮೆಯ ಕಾಲ,ನಮ್ಮೂರ ಪಡ್ಡೆಗಳಿಗೆ ಪ್ರಚಾರದ ನೆಪದಲ್ಲಿ ಯಾವಾಗ ಬೇಕಾದರೂ, ಬೇಕಾದವರ ಮನೆ ನುಗ್ಗಿ  ಅವರ ಡವ್ ಗಳ ದರ್ಶನ ಭಾಗ್ಯವನ್ನೂ ಸವಿಯುವ ಪುಣ್ಯಕಾಲ. ಹೀಗಾಗಿ ಚುನಾವಣೆ ಘೋಷಣೆಯಾದದ್ದೆ ನಮ್ಮೂರ ಸಕಲ ಜನಸ್ತೋಮವೂ ಒಂದಲ್ಲಾ ಒಂದು ಕಾರಣಗಳಿಗಾಗಿ ಬ್ಯುಸಿಯಾಗಿ ಬಿಡುತ್ತಾರೆ.&lt;br /&gt;&lt;br /&gt;ನನ್ನ ಮಟ್ಟಿಗೆ ಹೇಳುವುದಾರೆ, ಚಿಕ್ಕಂದಿನಲ್ಲಿ ಎಲ್ಲಾ ಪಕ್ಷಗಳಿಗೂ ಅವರು ಕೊಡುತ್ತಿದ್ದ ದ್ವಜ,ಟೋಪಿ,ಟೀ ಶರ್ಟುಗಳ ಕಾರಣ ಪಕ್ಷಾತೀತನಾಗಿ ನಾನು ದುಡಿದೆದ್ದೇನೆ; ಯಾವ ಪಕ್ಷದವರು ಪ್ರಚಾರಕ್ಕೆ ಸಿನಿಮಾ ನಟರನ್ನು ಕರೆ ತರುತ್ತಾರೋ ಆ ಸಭೆಗಳಿಗೆ ನಿಷ್ಠೆಯಿಂದ ಪಾಲ್ಗೋಂಡಿದ್ದೇನೆ. ಚಿತ್ರನಟರಾದ ಸುಧೀರ್,ಅನಂತ್ ನಾಗ, ಉಮಾಶ್ರೀಯವರ ಧರ್ಶನ ಭಾಗ್ಯ ನಮಗೆ ದೊರೆತದ್ದೆ ಚುನಾವಣೆ ದೆಶೆಯಿಂದ. ನನ್ನ ಪಕ್ಷಾತೀತ ಮನೋಭಾವನೆಯಿಂದ ಯಾವುದೋ ಒಂದು ಪಕ್ಷವನ್ನು ಬೆಂಬಲಿಸುತ್ತಿದ್ದ ನನ್ನ ಅಪ್ಪನಿಗೆ ಮುಜುಗುರ ತಂದಿಕ್ಕುತ್ತಿದ್ದೆ. ಆಗ ತೆರೆದ ಜೀಪುಗಳಲ್ಲಿ ಕರಪತ್ರ ಎಸೆಯುತ್ತಾ &quot; ಕಾಂಗ್ರೆಸ್ಸಿಗೆ ಮತ, ದೇಶಕ್ಕೆ ಹಿತ&quot; &quot;ಚಕ್ರ, ಚಕ್ರ, ಚಕ್ರ&quot; &quot; ಕಮಲಕ್ಕೆ ನಿಮ್ಮ ಓಟು&quot; ಇತ್ಯಾದಿಯಾಗಿ ಲೌಡ ಸ್ಪೀಕರುಗಳಲ್ಲಿ ಅರಚುತ್ತಾ ಬಂದರೆ ನಮಗೆ ದೇವಲೋಕದ ಪುಷ್ಪಕ ವಿಮಾನ ಕಂಡಷ್ಟು ಖುಷಿ.&lt;br /&gt;&lt;br /&gt;ಸ್ವಲ್ಪ ದೊಡ್ದವನಾದ ಮೇಲೆ, ಕಾಂಗ್ರೆಸ್ಸೆಂದರೆ, ನೆಹರೂ ಎಂದರೆ ಒಂತರಾ ತಿರಸ್ಕಾರ ಶುರುವಾಗಿತ್ತು ಮತ್ತು ಆಗಲೇ ಕೆಲ ಆರ್, ಎಸ್ ,ಎಸ್ ಕಾರ್ಯಕರ್ತರು ನಮ್ಮ ಮೆದುಳಿಗೆ ಕೈ ಹಾಕಿ ಬೇಕಾದುದನ್ನು ತುರುಕಿ, ಬ್ಯಾಡದುದುನ್ನು ಕಿತ್ತೆಸೆದು ನಮ್ಮನ್ನೂ ಸಹ ಬಿಜೆಪಿ ಬೆಂಬಲಿಗರನ್ನಾಗಿಸಿದ್ದರು. ಆಗಿನ್ನೂ ನಮಗೆ &quot;ಕೋಮುವಾದಿ, ಜಾತ್ಯಾತೀತ&quot; ಇತ್ಯಾದಿ ರಾಜಕಾರಣಿಗಳ ಪವಿತ್ರ ಪದಗಳ ಪರಿಚಯ ಇರಲಿಲ್ಲಾ ಅಥವಾ ಬುದ್ದಿಜೀವಿಗಳಾಗ ಬೇಕಾದರೆ ಬಿಜಿಪಿಯನ್ನು ವಿರೋಧಿಸಬೇಕು ಎಂಬ ಕಾಮನ್ ಸೆನ್ಸು ಇರದ ಕಾರಣ ಚಿಕ್ಕಂದಿನಿಂದಲೇ ಬುದ್ದಿಜೀವಿಯಾಗುವ ಚಾನ್ಸು ಮಿಸ್ಸಾಗಿ ಹೋಯಿತು. ಹೀಗಾಗಿ ಭಲೇ ಹುಮ್ಮಸ್ಸಿನಲ್ಲಿ , ಭಕ್ತಿಯಲ್ಲಿ ನಮ್ಮ ಪಕ್ಷದ ಪ್ರಚಾರ ಕಾರ್ಯ ನಡೆಯುತ್ತಿತ್ತು. ಆಗಲೇ ನಾವು ಒಂದೊದಾಗಿ ಚುನಾವಣಾ ತಂತ್ರಗಳನ್ನು ಕಲಿಯತೊಡಗಿದ್ದೆವು. ಕೆಲ ಏರಿಯಾಗಳಲ್ಲಿ ದುಡ್ಡು ಹಂಚುವದರಿಂದ ಹಿಡಿದು ಚುನಾವಣೆ ದಿನ ಇನ್ನೊಬ್ಬರ ಹೆಸರಿನಲ್ಲಿ ಓಟು ಗುದ್ದುವವರೆಗೂ ನಮ್ಮ ಕೌಶಲಗಳು ಬೆಳೆದಿದ್ದುವು, ಈ ಓಣಿಲಿ ಇಷ್ಟೆ ಹಸ್ತ, ಇಷ್ಟೆ ದಳ, ಇಷ್ಟೆ ಕಮಲ ಎಂದು ಹೇಳಬಲ್ಲವರಾಗಿದ್ದೆವು. ಆಸಾಮಿಯನ್ನು ನೋಡಿದ ಕೂಡ್ಲೆ ಆತನ ಓಟಿನ ರೇಟನ್ನು ಊಹಿಸಬಲ್ಲವರಾಗಿದ್ದೇವು. ಮತ್ತು ಕಮರೀಪೇಟೆಯಿಂದ ದೋ ನಂಬರಿನ ಲಿಕ್ಕರನ್ನು ಅಲ್ಲಲ್ಲಿ ಮಾಮೂಲಿ ಕೊಟ್ಟು ಸಾಗಿಸುವ ರೇಂಜು ನಮ್ಮದಾಯಿತು. ಪಾದಯಾತ್ರೆಯಲ್ಲಂತೂ ಹೆಗಲಿಗೆ ಕೇಸರಿ ಶಾಲು ಹೊದ್ದು ಅಬ್ಯರ್ಥಿಯ ಆಚೀಚೆ ಓಡಾಡಿ ಶೋ ಆಫ್ ನೀಡಿದ್ದೆ ನೀಡಿದ್ದು. ಇನ್ನು ಚುನಾವಣೆ ಇನ್ನೆರಡು ದಿನಗಳಿರುವಾಗಲೇ ಎದುರು ಪಾರ್ಟಿಯ ಮತಗಟ್ಟೆ ಏಜಂಟರನ್ನು ಹುಡುಕಿ ಅವರನ್ನೂ ಮತ್ತು ಚುನಾವಣೆ ಕೆಲಸಕ್ಕೆ ಬರುವ ಸರಕಾರಿ ನೌಕರರನ್ನು ಪತ್ತೆ ಹಚ್ಚಿ ಖರೀದಿಸುವ ಮಹತ್ಕಾರ್ಯ ನಡೆಯುತ್ತಿತ್ತು ಮತ್ತು ಚುನಾವಣೆ ಹಿಂದಿನ ದಿನ ರಾತ್ರಿಯೆಲ್ಲ ಗುಬ್ಬಿ ಪಾಕೀಟು ಹಂಚುವ ಮತ್ತು ಚುನಾವಣೆ ದಿನ ಉಪ್ಪಿಟ್ಟು ಚಹಾ ಮಾಡಿಸುವ ವ್ಯವಸ್ಥೆಯೂ ಇರುತ್ತಿತ್ತು. ಎಲ್ಲಾ ಓಣಿಯವರನ್ನೂ ಜೀಪಿನಲ್ಲಿ ತುಂಬಿಸಿ ಮತಗಟ್ಟೆ ಬರುವರೆಗೂ ಅವರಿಗೆ ನಮ್ಮ ಪಕ್ಷದ ಚಿಹ್ನೆಯನ್ನು ತೋರಿಸಿ, ಕೊನೆ ಕ್ಷಣದ ಪ್ರಚಾರವನ್ನು ಮಾಡಿ, ಅಂಗವಿಕಲರು, ವೃದ್ಧರಿಗೆ ಸಹಾಯ ಮಾಡುವ ನೆಪದಲ್ಲಿ ಅವರೊಂದಿಗೆ ಹೋಗಿ ಅವರ ಓಟನ್ನೂ ನಾವೇ ಗುದ್ದಿ ನಮ್ಮ  ಪಕ್ಷದ ಗೆಲುವನ್ನು ಖಾತ್ರಿ ಮಾಡುತ್ತೆದ್ದೆವು.ಈ ಮದ್ಯೆ ಕೆಲ ಅಕ್ಷರ ಗುರುತಿಸುವ ಸಾಕ್ಷರ ಕಾರ್ಯಕರ್ತರನ್ನು ಹಿಡಿದು ಎಲ್ಲರ ಹೆಸರು ಮತ್ತು ಮತಗಟ್ಟೆ ಸಂಖ್ಯೆಯನ್ನೂ ಬರೆಸುವ ಹೊಣೆಯೂ ಇರುತ್ತಿತ್ತು. ನಮಗೆ ಖಾತ್ರಿ ಇರದ ಜನರನ್ನು ಶತಾಯಗತಾಯ ಓಟು ಮಾಡದಂತೆ ತಡೆಯುತ್ತಿದ್ದೇವು. ಅವತ್ತು ಮುಗಿದರೆ, ಫಲಿತಾಂಶದ ದಿನದವರೆಗೂ ನಮಗೆ ವಿಶ್ರಾಂತಿ. ಫಲಿತಾಂಶದ ದಿನ ಮತ್ತೆ ಜನರನ್ನು ಕರೆದುಕೊಂಡು ಕೈಯಲ್ಲಿ ಯಾವುದಕ್ಕೂ ಇರಲಿ ಅಂತಾ ಒಂದು ಮಾಲೆ ತಗೊಂಡು ಹೋಗಿ , ನಮ್ಮ ಅಭ್ಯರ್ಥಿ ಗೆದ್ದರೆ ಸೈ ಡಂಕ ನಕ ಅಂತ ಕುಣಿದು, ಗುಲಾಲು ಅರಚಿ, ತೆರೆದ ಜೀಪಿನಲ್ಲಿ ಮತ್ತೆ ಮೆರವಣಿಗೆ ಮಾಡುವುದರೊಂದಿಗೆ ರಾತ್ರಿ ಸುರಾಪಾನದ ವ್ಯವಸ್ಥೆಯೂ ಮಾಡಬೇಕಾಗುತ್ತಿತ್ತು. ನಮ್ಮ ಅಭ್ಯರ್ಥಿ ಸೋತರಂತೂ ಯಾರಿಗೂ ತಿಳಿಯದಂತೆ ಊರ ದಾರಿ ಹಿಡುಯುವದಂತೂ ಇದ್ದೆ ಇತ್ತು.&lt;br /&gt;&lt;br /&gt;ಇನ್ನೂ ಚುನಾವಣೆ ಎಂದರೆ ಕೆಲ ಗಾಸಿಪ್ಪು ವೀರರಿಗೆ ಪರ್ವಕಾಲ. ವಿಜಯ ಮಲ್ಯ ನ ಬಗ್ಗೆಯಂತೂ ನಮ್ಮೂರಲ್ಲಿ ರಸವತ್ತಾದ ಕಥೆಗಳಿದ್ದವು. ನಮ್ಮೂರ ಯುವಕರಿಗೆ ಮಲ್ಯ ಆದರ್ಶವಾಗಿ ಬಿಟ್ಟಿದ್ದ. ಮಲ್ಯನ ಸ್ವಿಮ್ಮಿಂಗ್ ಪೂಲಿನಲ್ಲಿ ಶಿಲ್ಪಾ ಶೆಟ್ಟಿಯ ನಗ್ನ ಪ್ರತಿಮೆ ಇದೆ ಅನ್ನುವದರಿಂದ ಹಿಡಿದು ಮಲ್ಯನ ಪಾರ್ಟಿ ಸೇರಿದರೆ ಯಾವಗಲೂ ಉಚಿತವಾಗಿ ಕಿಂಗ್ ಫಿಶರ್ ಕುಡಿಯಲು ಕೂಪನ್ ಕೊಡ್ತಾರಂತೆ ಅನ್ನೊವರೆಗೂ ರಂಗು ರಂಗಿನ ಕಥೆಗಳಿದ್ದವು. ಪಟೇಲರ ರಸಿಕತನ ನಮ್ಮ್ಮೂರ ಗೌಡರಿಗೆ ಆದರ್ಶಪ್ರಾಯವಾಗಿತ್ತು. ಇನ್ನೂ ವಿಜಯ ಸಂಕೇಶ್ವರ ಕನ್ನಡನಾಡು ಪಾರ್ಟಿ ಮಾಡಿದಾಗ, ಸಂಕೇಶ್ವರರು ಆಗ ಕೇಂದ್ರ ಮಂತ್ರಿಯಾಗಿದ್ದ ಅನಂತಕುಮಾರರು ಕೊಟ್ಟಿದ್ದ ಮೂರು ನೂರು ಕೋಟಿ ತಿಂದಿದ್ದಕ್ಕೆ ಅವರಿಗೆ ಜಗಳ ಆಗಿ ಹೊಸ ಪಾರ್ಟಿ ಮಾಡಿದ್ರು ಅಂತ ನಮ್ಮ ಜನ ನಿಷ್ಟೆಯಿಂದ ನಂಬಿದ್ದರು.ಆದರೆ ಈ ಭಾರಿಯ ಐಕಾನುಗಳು  ಮಾತ್ರ ರಾಮುಲು ಮತ್ತು ಗಣಿ ಧಣಿಗಳಾದ ರೆಡ್ಡಿ ಬ್ರದರ್ಸ. ಈ ಭಾರಿ ಚುನಾವಣೆ ಘೋಷಣೆಯಾದ ಕೂಡಲೇ ರೆಡ್ಡಿಗಳು ಪ್ರಚಾರಕ್ಕಾಗಿ ಐನೂರು ಸ್ಕಾರ್ಪ್ಯಿಯೋ , ಸಾವಿರ ಪಲ್ಸರ್ರು ಆರ್ಡರು ಮಾಡಿದ್ರು ಮತ್ತು ಚುನಾವಣೆ ಆಯೋಗದ ದೆಶೆಯಿಂದ ಆರ್ಡರು ಕ್ಯಾನ್ಸಲ್ಲ ಮಾಡಬೇಕಾಯ್ತು, ಇಲ್ಲವಾದರೇ ನಮಗೂ ಪಲ್ಸರ್ ಸಿಗುತ್ತಿತ್ತು ಎಂಬ ನಂಬಿಕೆಯಲ್ಲಿಯೇ ನಮ್ಮೂರ ಬಿಜೆಪಿ ಕಾರ್ಯಕರ್ತರಿದ್ದಾರೆ.&lt;br /&gt;&lt;br /&gt; ಬೆಂಗಳೂರಿನಲ್ಲಿ ಚುನಾವಣೆ ಬಂತು ಹೋಯ್ತು, ನನಗಂತೂ ಆ ಚುನಾವಣೆಯ ಫೀಲ್ ಆಗಲೇ ಇಲ್ಲಾ. ಊರಲ್ಲಿಯೂ ಚುನಾವಣೆ ಹೀಗೆ ಇದೆಯಂತೆ ನನ್ನ ತಮ್ಮನೂ ಭಲೇ ಬೇಜಾರಾಗಿದ್ದ, ಅವನೂ ಸಹ ಪಲ್ಸರ್ ಗಿರಾಕಿಯೇ ಮತ್ತು ಅಬ್ಬೀಗೇರಿಗೆ ರಾಮುಲು ಬಂದು ಪ್ರಚಾರ ಮಾಡಿದ್ರೆ ನಮ್ಮೂರ ಓಟುಗಳೆಲ್ಲಾ ಬಿಜೆಪಿಗೆ ಅನ್ನೋದು ಅವನ ಅಭಿಮತ. &quot;ಬಿಜೆಪಿ ಡೌಟು ಬಿಡ್ಲೆ ಈ ಸರ್ತಿ&quot; ಅಂದ್ರೆ ಅವನು ನಿಮ್ಮನ್ನು ದೇಶದ್ರೋಹಿಯಂತೆ ಅಥವಾ ಸಿಮಿ ಸಂಘಟನೆಯ ಸದಸ್ಯನಂತೆ ನೋಡುತ್ತಾನೆ . ಒಟ್ಟಿನಲ್ಲಿ ನಮ್ಮೂರ ಜನತೆ ಮಾತ್ರ ತಮ್ಮದೇ ಆದ ಕಾರಣಗಳಿಗಾಗಿ ಆಯೋಗಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ದಿನಾ ಪೇಪರ್ ಓದುವ ನನಗೂ ಸಹಿತ ಅನೇಕ ಕ್ಷೇತ್ರಗಳ ಅಭ್ಯರ್ತಿಗಳೇ ಗೊತ್ತಿಲ್ಲ್ಲಾ, ಇನ್ನೂ ಓದೇ ಬಾರದಿವರ ಕಥೆ ಏನು?. ಕೆಲವರಿಗಂತೂ ಚುನಾವಣೆ ಬಂದಿರುವುದು ಗೊತ್ತಿಲ್ಲಾ. ಈಗಲೇ ಹೀಗಾದ್ರೆ ಮುಂದಿನ ಚುನಾವಣೆಗಳು ಹೇಗಿರುತ್ತವೋ ಗೊತ್ತಿಲ್ಲಾ. ನಾನಂತೂ &quot; ಆ ದಿನಗಳನ್ನು&quot; ಭಾಳ ಮಿಸ್ ಮಾಡ್ಕೋತೀದಿನಿ..</content><link rel='replies' type='application/atom+xml' href='http://scpatil.blogspot.com/feeds/5528643657570184096/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/5528643657570184096' title='9 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/5528643657570184096'/><link rel='self' type='application/atom+xml' href='http://www.blogger.com/feeds/7270070547169320163/posts/default/5528643657570184096'/><link rel='alternate' type='text/html' href='http://scpatil.blogspot.com/2008/05/blog-post.html' title='ಚುನಾವಣೆ ಎಂಬ ಪರ್ವಕಾಲ'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><thr:total>9</thr:total></entry><entry><id>tag:blogger.com,1999:blog-7270070547169320163.post-8227160497676266875</id><published>2008-04-29T22:34:00.000-07:00</published><updated>2008-04-29T23:12:08.276-07:00</updated><title type='text'>ವರ್ಷದ ಹೊಸ್ತಿಲಿನಲ್ಲಿ..</title><content type='html'>ಹೆಚ್ಚು ಕಮ್ಮಿ ಒಂದು ವರ್ಷ ಆಯ್ತು ಈ ಬ್ಲಾಗು ಶುರು ಮಾಡಿ, ತೀರಾ ಸರಿಯಾಗಿ ವಾರ, ತಿಥಿ, ನಕ್ಷತ್ರ ನೆನಪಿಲ್ಲಾ. ಇದೇನು ಘನ ಸಾಧನೆಯಲ್ಲ ಎಂಬ ಅರಿವಿದ್ದರೂ; ಎಲ್ಲಾ ಕುರಿಗಳಂತೆ ನಂಗೂ  ಬ್ಯಾ ಅನ್ನುವ ಚಪಲ. ಮೊದಮೊದಲು ನಾನೊಬ್ಬ ಬ್ಲಾಗಿಗ ಮತ್ತು ನನ್ನ ಬರಹಗಳಿಗೋಸ್ಕರ ಅನೇಕರು ಕಾದಿರುತ್ತಾರೆ, ನಾನೋಬ್ಬ ಅನಾಹುತ ಬರಹಗಾರ ಎಂಬ ಭ್ರಮೆಯಲ್ಲಿ ಹುಡುಕಾಡಿ, ಹುಡಿಕಾಡಿ ಹೊಸ ಬರಹ ಸೇರಿಸುತ್ತಿದ್ದೆ. ನನ್ನ ಈ ಪಡಿಪಾಟಲನ್ನು ನೋಡಿ ಮಿತ್ರ ಫಿನಿಕ್ಸು ’ನೀನೊಬ್ಬ ಟೈಟಲ್ ಬರಹಗಾರ, ಅಸಲಿಗೆ ನಿನ್ನಲ್ಲಿ ಸರಕೆ ಇಲ್ಲಾ,ಹೆಡ್ಡಿಂಗ್ ಹುಡುಕಿ ಎನನ್ನೋ ತುರುಕುವ ಸಾಹಸ ಬೇಡ’ ಎಂದೆಲ್ಲಾ ಬೈದಾಡಿದ್ದ.ಆದರೆ ತಾನು ಮಾತ್ರ ಒಂದೇ ಒಂದು ಪೋಸ್ಟ ಮಾಡಿ &quot; ಬರೀಲೇ ಸೂ... ಮಗನೇ&quot; ಅಂತಾ ಹೊಡಕೊಂಡ್ರು , ಮೊನ್ನೆ ಮೊನ್ನೆ ನಾನೋಬ್ಬ ಬರಹಗಾರನೇ ಅಲ್ಲ್ಲಾ, ಉತ್ತಮ ಓದುಗ ಮಾತ್ರ ತಡವಾಗಿ ಅರ್ಥ ಮಾಡಿಕೊಂಡು ನನ್ನೆಡೆಗೂ ಆಸೆಯಿಂದ ಯಾವಾಗ ನಾನು ಬರೆಯುವದು ನಿಲ್ಲಿಸಿ ಉಪಕಾರ ಮಾಡುತ್ತೇನೋ ಅಂತಾ ಕಾದು ಕುಳಿತಿದ್ದಾನೆ.&lt;br /&gt;&lt;br /&gt;ಇದೆಲ್ಲಾ ಬಿಟ್ಟು ಒಂದು ವರುಷದಲ್ಲಿ ಕಡಿದು ಕಟ್ಟೆ ಹಾಕಿದ್ದಾದರೂ ಏನು ಅಂತ ಕುಳಿತರೇ, ಯಥಾ ಪ್ರಕಾರ ನನ್ನ ಲಘು ದಾಟಿಯ ಬರಹಗಳು ಮತ್ತು ಯದ್ವ ತದ್ವಾ ಫೀಲಾಗಿ ಬರೆದ ಕೆಲ ಹುಚ್ಚಪ್ಯಾಲಿ ಬರಹಗಳು ಮತ್ತು ಕೊನೆಯಲ್ಲಿ ಸುಮ್ಮನಿರಲಾರದೇ ಇರುವೆ ಬಿಟ್ಟುಕೊಂಡ್ರು ಅಂತಾ ಬರೆದ ವರದಿ ಮಾದರಿಯ ಬರಹ.ಆಗ ಕೆಲವರಂತೂ ವಿಷ ಅಂದ್ರು, ಹಾಲಾಹಲ ಅಂದ್ರು. ಇನ್ನೂ ಕೆಲವರು ಶುರುವಿನಲ್ಲಿ ಇಂದ್ರ, ಚಂದ್ರ ಎಂದು ಹೊಗಳುತ್ತಿದ್ದವರು ಒಂದೇ ಒಂದು ಖಂಡನಾತ್ಮಕ ಬರಹಕ್ಕೆ ಪ್ರತಿಕ್ರಿಯೆಯಾಗಿ ದುಬು ದುಬು ತಮ್ಮ ಬ್ಲಾಗ್ ರೋಲಿನಿಂದ ನನ್ನ ಬ್ಲಾಗು ಕಿತ್ತು ಹಾಕಿ ದೊಡ್ಡ ನಿಟ್ಟಿಸುರು ಬಿಟ್ಟರು. ಹರಿಯೋ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೆ?. ನನ್ನ ಅಭಿಪ್ರಾಯ ಸರಿಯಲ್ಲ ಅಂದರೆ ನೇರವಾಗಿ ಚರ್ಚೆಗಿಳಿಯಿಬಹುದಿತ್ತು ಅಥವಾ ಅದನ್ನು ಖಂಡಿಸುವ ಹಕ್ಕು ಎಲ್ಲರಿಗೂ ಇತ್ತು, ಅದು ಬಿಟ್ಟು ಈ ತರದ ಸಣ್ಣತನ ತೋರಿಸಿ ಕಡೆದು ಕಟ್ಟೆ ಹಾಕಿದ ಸಾಧನೆಯಾದ್ರು ಏಂಥದು ಅಂತಾ ಇಲ್ಲಿವರೆಗೂ ತಿಳಿದಿಲ್ಲಾ..&lt;br /&gt;&lt;br /&gt;ಈ ಮದ್ಯೆ ಎಲ್ಲರ ಬ್ಲಾಗುಗಳಲ್ಲಿ ಗಂಭೀರವಾಗಿ ಬ್ಲಾಗಿಸುವ ಬಗ್ಗೆ ಚರ್ಚೆಗಳಾಗುತ್ತೀವೆ. ಮೊದಲೇ ಗಂಭೀರತೆಗೂ ನನಗೂ ಎಣ್ಣೆ ಸೀಗೆಕಾಯಿ ಸಂಬಂಧ, ಅಂತಹುದರಲ್ಲಿ ಈ ಬೆಳವಣೆಗೆಗಳು ನನ್ನ ಕೇಡುಗಾಲವನ್ನು ನೆನಪಿಸುತ್ತಿವೆ. ನನ್ನಲ್ಲಿ ಸರಕು ಇದ್ದಷ್ಟು ದಿನ ಬರೆಯುವದು ಅಮೇಲಂತೂ &quot; ಉತ್ತಮ ಓದುಗ&quot; ಎಂದು ಆರೋಪಿಸುಕೊಂಡು ಕಂಡೊರ ಬರಹಗಳನ್ನು ಹಿಗ್ಗಾ ಮುಗ್ಗಾ ವಿಮರ್ಶಿಸುವದಂತೂ ಇದ್ದೇ ಇದೆ. ಇಲ್ಲಿವರೆಗೂ ನನ್ನ ಬರಹಗಳನ್ನು, ತಲೆಹರಟೆಯನ್ನು ಸಹಿಸಿಕೊಂಡು ಬೆನ್ನು ತಟ್ಟಿದ ಮತ್ತು ಬೆನ್ನಿಗೆ ಗುದ್ದಿದ  ಎಲ್ಲರಿಗೂ ನನ್ನ ನಮನಗಳು, ಈ ಬಂಧ ನಿರಂತರವಾಗಿರಲಿ..</content><link rel='replies' type='application/atom+xml' href='http://scpatil.blogspot.com/feeds/8227160497676266875/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/8227160497676266875' title='11 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/8227160497676266875'/><link rel='self' type='application/atom+xml' href='http://www.blogger.com/feeds/7270070547169320163/posts/default/8227160497676266875'/><link rel='alternate' type='text/html' href='http://scpatil.blogspot.com/2008/04/blog-post_29.html' title='ವರ್ಷದ ಹೊಸ್ತಿಲಿನಲ್ಲಿ..'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><thr:total>11</thr:total></entry><entry><id>tag:blogger.com,1999:blog-7270070547169320163.post-2532826668291931889</id><published>2008-04-03T20:02:00.000-07:00</published><updated>2008-04-04T01:13:54.064-07:00</updated><title type='text'>ದೇವರಾಣೆಗೂ ಇದು ಸತ್ಯ!</title><content type='html'>ನಿಮಗೆಲ್ಲಾ ದೇವರ ಒಡವೆಗಳು ಕಳವಾಗುವ ಸುದ್ದಿ ಹೊಸದಾಗಿರಲಿಕ್ಕಿಲ್ಲ, ಆದ್ರೆ ಮೂಲ ವಿಗ್ರಹವನ್ನೇ ಕದ್ದುಕೊಂಡು ಹೋಗಿದ್ದನ್ನು ಕೇಳಿದ್ದೀರಾ? ಅದು ಯಾವುದೇ ಆಭರಣಗಳನ್ನು ಮುಟ್ಟದೇ!. ಹಿಂತಹ ಒಂದು ಕಳ್ಳತನ ನಮ್ಮೂರ ಪ್ರಸಿದ್ದ ಕಂಠಿ ಬಸವಣ್ಣನ ದೇವಸ್ಥಾನದಲ್ಲಿ ಸುಮಾರು ವರ್ಷಗಳ ಹಿಂದೆ ನಡಿದಿತ್ತು, ಆಗ ಪೂಜಾರಪ್ಪನನ್ನು ’ಎನೀದು ಹಕೀಕತ್ತು? ದೇವರನ್ನೇ ಊರು ಬಿಡಿಸಿಬಿಟ್ರಲ್ಲ್ಲಾ&quot; ಎಂದು ದೇಶಾವರಿಯಾಗಿ ಕೇಳಿದ್ರೆ ಆ ಯಪ್ಪಾ &quot; ಬಸವಣ್ಣನಿಗೆ ನಮ್ಮೂರು ಬೇಜಾರಾಗಿತ್ತಂತೂ, ಹೀಗಾಗಿ ಆ ಕಳ್ಳನ ಕನಸಿನಲ್ಲಿ ಹೋಗಿ ನನ್ನನ ಈ ಊರು ಬಿಟ್ಟು ಕರ್ಕೋಂಡು ಹೋಗು ಅಂತಾ ಬಸವಣ್ಣ ಕೇಳಿದ್ನಂತೆ;ದೇವರೆ ಬಂದು ಹೇಳೀದ ಮೇಲೆ ಆ ಕಳ್ಳ ನಮ್ಮ ಬಸವಣ್ಣನ ಎತ್ಕೊಂಡು ಹೋಗಿದ್ದಾನೆ&quot;ಅಂತಾ ಕಥೆ ಕಟ್ಟಿ ಎಲ್ಲಾ ಭಕ್ತಾದಿಗಳಿಗೂ ಹೇಳತೊಡಗಿದರು. ನಮ್ಮೂರ ಹಿರಿಯರು ದೇವರನ್ನು ಹುಡುಕಲು ಎಲ್ಲಾ ರೀತಿಯ ಪ್ರಯತ್ನ ಪಟ್ಟರು, ಪ್ರತಿಫಲ ಮಾತ್ರ ಶೂನ್ಯವಾಯಿತು..&lt;br /&gt;&lt;br /&gt;     ನಮ್ಮ ಮನೆತನದಲ್ಲಂತೂ ಒಂಥರಾ ದಿಗಿಲು;ಊರ ದೇವರೇ ಊರು ಬಿಟ್ರೆ ಹ್ಯಾಗೆ ಅನ್ನೊದರ ಜೊತೆಗೆ ಇನ್ನೊಂದು ಕಾರಣವೂ ಇದೆ. ಈ ಕಂಠಿ ಬಸವಣ್ಣ ಅಬ್ಬಿಗೇರಿಗೆ ಹೇಗೆ ಬಂದ ಅನ್ನೊದಕ್ಕೆ ನಮ್ಮ ಮನೆಯ ಹಳೆ ತಲೆಗಳು ಒಂದು ಕಥೆಯನ್ನೇ ಹೇಳುತ್ತವೆ. ಅದೆನಪ್ಪಾ ಅಂದ್ರೆ ನಮ್ಮ ಮನೆತನದ ಮೂಲಪುರುಷ ಹೊಲದಿಂದ ಮನೆಗೆ ಬರುವಾಗ ಒಂದು ಜಾಗದಲ್ಲಿ ಚಕ್ಕಡಿ ಮುಂದೆ ಹೋಗಲೇ ಇಲ್ಲವಂತ್, ಅಲ್ಲೇ ನಿಂತು ಬಿಟ್ಟಿತಂತೆ. ಏನಿದು ವಿಚಿತ್ರ ?ಎಂದು ಆ ಮಾರಾಯ ನೋಡಿದ್ರೆ ಚಕ್ಕಡಿಯಲ್ಲಿ ಬಸವಣ್ಣನನ್ನು ಹೋಲುವ ಕಲ್ಲಿತ್ತಂತೆ, ಯುರೇಕಾ ಅಂದುಕೊಂದು ಅಲ್ಲೆ ಪಕ್ಕದಲ್ಲಿಯ ಕಂಠಿಯಲ್ಲಿ ಅದನ್ನು ಎಸೆದು ಮನೆಗೆ ಬಂದು ಮಲಗಿದರೆ, ರಾತ್ರಿ ಕನಸಿನಲ್ಲಿ ದೇವರು ಬಂದು &quot; ನಾನು ನಿನ್ನ ಚಕ್ಕಡಿಯಲ್ಲಿ ಬಂದರೆ ನೀನು ನನ್ನ  ಕಂಠಿಯಲ್ಲಿ ಎಸೆಯುತ್ತೀಯಾ?&quot; ಎಂದು ಆವಾಜ್ ಹಾಕಿದ್ನಂತೆ. ಮರುದಿನ ಬಂದು ಆ ಕಂಠಿ ಹುಡುಕಿ ಅಲ್ಲಿಯೇ ಗುಡಿ ಕಟ್ಟಿಸಿದರಂತೆ. ಹೀಗಾಗಿ ಕಂಠಿ ಬಸವಣ್ಣ ನಮ್ಮವನೆಂದೂ ನಮ್ಮ ಮನೆಯಲ್ಲಿ ಹಕ್ಕು ಸಾಧಿಸುತ್ತಾರೆ.[ಕಾಕತಾಳಿಯವೆಂಬಂತೆ ಅದೇ ದಾರಿಯಲ್ಲಿ ನಮ್ಮ ಹೊಲವಿದೆ.ಅಲ್ಲದೇ ಶ್ರಾವಣದ ಮೊದಲ ಪೂಜೆ ಸಲ್ಲುವದೂ ಗೌಡರ ಮನೆಯಿಂದಲೇ,ತೇರಿನ ಕಳಸ, ಹಗ್ಗ ಬರುವುದು ಗೌಡರ ಮನೆಯಿಂದಲೇ ಮತ್ತು ನನ್ನ ತಾಯಿಯ ತವರುಮನೆಯ ಮನೆದೆವ್ರು ಸಹ ಈ ಕಂಠಿ ಬಸವಣ್ನನೇ ಮತ್ತು ಬಸವಣ್ಣನಿಗೆ ತೇರು ಮಾಡಿಸಿದ್ದು ಅವರೇ].ಇಷ್ಟೆಲ್ಲಾ ಇರಬೇಕಾದ್ರೆ ಚಿಂತೆ ಆಗದೇ ಇರುತ್ಯೆ?. ಕೊನೆಗೂ ಹಲವಾರು ದಿನ ಹುಡುಕಾಡಿ ಎಲ್ಲಿಂದಲೋ ಅದೇ ವಿಗ್ರಹವನ್ನು ಹೋಲುವ ವಿಗ್ರಹವನ್ನು ತಂದು ಗುಡಿಯಲ್ಲಿ &quot; ಇದೇ ನಮ್ಮ ಬಸವಣ್ಣ&quot; ಅಂತ ಸಮಾಧಾನ  ಮಾಡ್ಕೋಂಡ್ರು. ಅದ್ರೂ ಎಲ್ಲರ ಮನದಲ್ಲಿ ಇದು ನಿಜವಾದ ಬಸವಣ್ಣಾನಾ ಅಂಥಾ ಡೌಟ್ ಇವತ್ತೀಗೂ ಇದ್ದೇ ಇದೆ..&lt;br /&gt;&lt;br /&gt; ಅದ್ರೆ ಮೇನ್ ಪಾಯಿಂಟ ಇದಲ್ಲ್ಲಾ. ಪ್ರತಿ ಯುಗಾದಿಗೆ ನಮ್ಮ ಬಸವಣ್ಣನ ಗುಡಿಯಲ್ಲಿ  ಒಂದು ಪವಾಡ(?) ನಡೆಯುತ್ತೆ. ಯುಗಾದಿಯ ಬೆಳಗ್ಗೆ ಸೂರ್ಯ ಹುಟ್ಟುವ ಮೊದಲೆ ಗುಡಿಯ ಮುಂದಿನ ಬಯಲಿನಲ್ಲ, ಕಲ್ಲು ಸಂಧಿಗಳಲ್ಲಿ ವಿವಿಧ ಧಾನ್ಯಗಳ ಸಸಿಗಳು ಏಕಾ ಎಕಿ ಉದ್ಬವವಾಗಿಬಿಟ್ಟುರುತ್ತವೆ. ಯಾವ ಧಾನ್ಯದ ಸಸಿ ಯಥೇಚ್ಚವಾಗಿ ಬೆಳೆಯುತ್ತೋ ಮುಂದಿನ ವರ್ಷ ಆ ಬೆಳೆ ಚೆನ್ನಾಗಿ ಬರುತ್ತಂತೆ.ಆದರೆ ಸೂರ್ಯನ ಬಿಸಿಲು ಬಿದ್ದ ಕೂಡಲೇ ಅವೆಲ್ಲಾ ಕರಗಿ ಬಿಡುತ್ತವಂತೆ;ಹೀಗಾಗಿ ನಚ್ಚ ನಸುಕಿನಲ್ಲೇ ನಮ್ಮೂರ ಜನತೆ ಗುಡಿ ಬಯಲಿನಲ್ಲಿ ಬ್ಯಾಟರಿ ಹಿಡಿದು, ಲಾಟೀನು ಹಿಡಿದು ಸಂಧು ಗೊಂದುಗಳಲ್ಲಿ ಸಸಿಯನ್ನು ಹುಡುಕುತ್ತಿರುತ್ತಾರೆ ಮತ್ತು ಕಷ್ಟ ಪಟ್ಟು ಸಸಿಯನ್ನು ಗುರುತಿಸುವ ಕಾರ್ಯದಲ್ಲಿ ಮಗ್ನರಾಗಿರುತ್ತಾರೆ. ಚಿಕ್ಕವನಾಗಿದ್ದಾಗ ನಾನೂ ಈ ಹುಡುಕಾಟದ ಸಕ್ರಿಯ ಸದಸ್ಯನಾಗಿದ್ದೆ. ಮತ್ತು ಸಿಕ್ಕ ಸಸಿಯನ್ನು ಮನೆಗೆ ತಂದು ದೊಡ್ದ ಗಿಡ ಮಾಡುವ ಭರದಲ್ಲಿ ಹಿತ್ತಲಿನಲ್ಲಿ ನೆಟ್ಟರೆ ಬಿಸಿಲು ಬಿದ್ದ ಮೇಲೆ ಬಂದು ನೋಡಿದ್ರೆ ಸಸಿ ಮಂಗಮಾಯ. ವಿಚಿತ್ರ ಎಂದರೆ ಬಸವಣ್ಣನನ್ನು ಕದ್ದ ವರ್ಷವೂ , ಅಂದ್ರೆ ಗುಡಿಯಲ್ಲಿ ಬಸವಣ್ಣ ಇಲ್ಲದಾಗ್ಲೂ  ಸಸಿ ಹುಟ್ಟಿದ್ದುವು ಮತ್ತು ಒರಿಜನಲ್ ಬಸವಣ್ಣ ಇಲ್ಲದಿದ್ರೂ ಹುಟ್ಟುತ್ತಿವೆ. ಹೀಗಾಗಿ ಈ ಸಸಿಯ ಮರ್ಮ ನನಗೂ ತಿಳೀತಿಲ್ಲಾ. [ತಿಳಿದವರು ಹೇಳಿದರೆ ಮಹದುಪಕಾರವಾಗುತ್ತೇ]&lt;br /&gt;&lt;br /&gt;   ವೈಜ್ನಾನಿಕ ಕಾರಣಗಳೇನೆ ಇರಲಿ, ನಾನಂತೂ ಯುಗಾದಿಗೆ ಹೊರಟ್ಟಿದ್ದೇನೆ ಮತ್ತು ಅವತ್ತು ಸಸಿ ಹುಡುಕುವ ಕಾರ್ಯಕ್ರಮವೂ ಇದೆ. ಈ ತರದ ನಂಬಿಕೆಗಳಲ್ಲಿ, ಆಚರಣೆಗಳಲ್ಲಿ ಎನೋ ಒಂದು ಖುಷಿ.&lt;br /&gt;&lt;br /&gt;             &lt;strong&gt;&lt;/strong&gt;ಮುಂಚಿತವಾಗಿಯೇ ಸರ್ವರಿಗೂ ಯುಗಾದಿಯ ಶುಭಾಶಯಗಳು</content><link rel='replies' type='application/atom+xml' href='http://scpatil.blogspot.com/feeds/2532826668291931889/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/2532826668291931889' title='13 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/2532826668291931889'/><link rel='self' type='application/atom+xml' href='http://www.blogger.com/feeds/7270070547169320163/posts/default/2532826668291931889'/><link rel='alternate' type='text/html' href='http://scpatil.blogspot.com/2008/04/blog-post.html' title='ದೇವರಾಣೆಗೂ ಇದು ಸತ್ಯ!'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><thr:total>13</thr:total></entry><entry><id>tag:blogger.com,1999:blog-7270070547169320163.post-6355202530720583341</id><published>2008-03-26T22:19:00.000-07:00</published><updated>2008-03-27T22:20:59.367-07:00</updated><title type='text'>ಹೋಳಿಯ ಮೆಲುಕು...</title><content type='html'>ಶಿವರಾತ್ರಿ ಮುಗಿದ ಮರುದಿನದಿಂದಲೇ ನಮ್ಮೂರ ಹೈಕಳು ಮನೆಯ ಮಾಡು,ನ್ಯಾಗೊಂದಿ ಎಲ್ಲಾ ಕಡೆ ತಡಕಾಡಿ ಹಲಗೆಯನ್ನು ಬಡಿಯತೊಡಗಿದ ಕೂಡಲೇ ನಮಗೆ ಮೂಂದೊದಗಬಹುದಾದ ನಿದ್ರಾರಹಿತ ರಾತ್ರಿಗಳ ಸ್ಪಷ್ಟ ಸುಳಿವು ದೊರಕಿ ಬಿಡುತ್ತೆ ಮತ್ತು ಹೋಳಿ ಆಗಮನದ ಸ್ಪಷ್ಟ ಸೂಚನೆಯೂ ದೊರಕಿ ಬಿಡುತ್ತೆ.. ನಾಗರ ಪಂಚಮಿ ಹೆಂಗಸರಿಗಾದರೆ, ಹೋಳಿ ಗಂಡಸರಿಗೆ ಎಂದು ನಮ್ಮ ಹಿರಿಯರು   ಫಿಕ್ಸ್ ಮಾಡಿದ &quot;ಮೀಸಲಾತಿ&quot;ಯ ಸಂಪೂರ್ಣ ಲಾಭವನ್ನು ನಮ್ಮ ಊರ ಗಂಡಸರು ಪಡೆಯದೇ ಬಿಡುವದಿಲ್ಲಾ.&lt;br /&gt;&lt;br /&gt;    ನಮ್ಮ ಹೈಕಳಿಗೆ ಉಳಿದ ಓಣಿಯವರಿಗಿಂತ ಕಾಮನನ್ನು ಸುಡಲು ಜಾಸ್ತಿ ಕಟ್ಟಿಗೆ ಸಂಗ್ರಹಿಸುವ ಹ್ಯಾವ.ಹೀಗಾಗಿ ಹೋಳಿ ಸಮೀಪಿಸುತ್ತಿದ್ದಂತೆ ಹುಡುಗ್ರು ಕುಳ್ಳು, ಕಟ್ಟಿಗೆ ಕಂಡೋರ ಹಿತ್ತಲಿನಿಂದ ಎಗರಿಸತೊಡಗುತ್ತಾರೆ. ಅಲ್ಲದೇ ವರ್ಷಪೂರ್ತಿ ಕಿರಿಕ್ಕ್ ಮಾಡಿದವರಿಗೆ ಒಂದು ಗತಿ ಕಾಣಿಸಲು ಇದು ಸುವರ್ಣಾವಕಾಶ;ಯಾವಗಲೋ ಕ್ರಿಕೆಟ್ ಬಾಲು ಕಸಿದುಕೊಂಡು ಗಾಂಚಾಲಿ ಮಾಡಿದ್ದ ಗೌಡರ ಮನೆಯ ಮುಂದಿನ ಹತ್ತಿ ಕಟಗಿ ರಾಶಿಯನ್ನು,ಯಾವಾಗ್ಲೂ ಪ್ರಾಣ ಹಿಂಡುವ ಗಣಿತ ಮಾಸ್ತರೀನ ಕುಳ್ಳುಗಳ ರಾಶಿಯನ್ನೂ ಮತ್ತು ಯಾವಾಗ್ಲೂ ಫಸ್ಟ್ ಬಂದು ಹೊಟ್ಟೆ ಉರಿಸುವ ಗಂಗಿಯ ಮನೆಯ ಒಡ್ದಗಟಿಕೆಗಳನ್ನು ರಾತ್ರೋ ರಾತ್ರಿ ಕದ್ದು ಕಾಮನ ಕಟ್ಟಿಗೆಗೆ ತರ್ಪಣ ನೀಡಿ ತಮ್ಮ ಹೊಟ್ಟೆಯ ಸಂಕಟವನ್ನು ತಣಿಸಿಕೊಳ್ಳುತ್ತಾರೆ. ಇನ್ನೂ ಇದ್ದುದರಲ್ಲಿಯೇ ಕೆಲ ಧೈರ್ಯವಂತ ಮುಂಡೆವು ಸಂಜೆಯೇ ಗುಂಪುಗೂಡಿ ಹಲಗೆ ಬಡಿಯುತ್ತಾ, ಲಬೊ ಲಬೊ ಹೊಯ್ಕೊಳ್ಳುತ್ತಾ &quot; ಕಾಮಣ್ಣನ ಮಕ್ಕಳು ಕಳ್ಲ ಸೂ.. ಮಕ್ಕಳು &quot; ಅನ್ನುತ್ತಾ ಮನೆಯವರ ಎದುರೆ ಅವರ ಕಟ್ಟಿಗೆ, ಕುಳ್ಳು ಎಗರಿಸಿಬಿಡುತ್ತಾರೆ. ಇವರ ಹಿಂದೆಯೇ &quot; ರಾಡ್ಯಾ, ಜಿಟ್ಟ್ಯಾ, ಹಾಟ್ಯಾ,ಬಾಡಕೋ&quot; ಇತ್ಯಾದಿ ಉ.ಕರ್ನಾಟಕದ &quot;exclusive&quot; ಬೈಗುಳಗಳ ಸಹಸ್ರನಾಮಾವಳಿ ಶುರುವಾಗಿಬಿಡುತ್ತೆ.ಕೊನೆಕೊನೆಗಂತೂ ಹುಡುಗರು ಯಾರದೋ ಮನೆಯ ಚಪ್ಪರದ ತೆಂಗಿನ ಗರಿ, ಮುರುಕು ಚಕ್ಕಡಿಯ ನೊಗ, ಬಡಿಗ್ಯಾರ ಮನೆಯ ಮುಂದಿನ ಮರದ ಮರಡು ಎಲ್ಲವನ್ನೂ ಕಾಮನ ಕಟ್ಟಿಗೆಗೆ ಸಮರ್ಪಿಸಿಬಿಡುತ್ತಾರೆ. ಒಮ್ಮೆ ಕಾಮನ ಕಟ್ಟಿಗೆಯ ರಾಶಿಗೆ ಸಮರ್ಪಣೆಯಾದರೆ ಮರಳಿ ಕಟ್ಟಿಗೆ ಮನೆಗೆ ತರಬಾರದು ಅನ್ನುವ ಪ್ರತೀತಿ ಇರುವದರಿಂದ ಕಟ್ಟಿಗೆ ಮಾಲಕರು ಹೊಟ್ಟೆ ಉರಿದುಕೊಂಡು ಹುಡುಗರನ್ನು ಶಪಿಸುತ್ತಿರುತ್ತಾರೆ.&lt;br /&gt;&lt;br /&gt; ಇನ್ನೂ ಓಣಿಯ ಹಿರಿ ತಲೆಗಳು ಹಬ್ಬಕ್ಕಾಗಿ ಚಂದಾ ಸಂಗ್ರಹಿಸುವದರಲ್ಲಿ, ಮಜಲಿನ ಮೇಳದ  ತಯಾರಿಯಲ್ಲಿ ಬ್ಯುಸಿಯಾಗಿರುತ್ತಾರೆ.ನಮ್ಮ ಓಣೆಯಲ್ಲಂತೂ ಹಬ್ಬಕ್ಕೆ ಐದು ದಿನ ಮುಂಚೆ ಎಲ್ಲಾ ಹಲಗೆಗಳನ್ನು ಗರಡಿ ಮನೆಯಿಂದ ಹೊರ ತಂದು ಒಪ್ಪವಾಗಿ ಜೋಡಿಸಿದ ನಂತರ  ಓಣಿಯ ಹಿರಿಯರನ್ನು ಕರೆದು, ಗೌಡರಿಂದ ಎಲ್ಲಾ ಹಲಗೆ ಪೂಜೆ ಮಾಡಿಸಿ, ಖಾರ ಚುರುಮರಿ ಹಂಚಿ ಶಾಸ್ತ್ರೊಕ್ತವಾಗಿ ಮಜಲು ಹಚ್ಚಲು ಶುರು ಮಾಡುತ್ತಾರೆ. ಮಜಲು ಅಂದರೆ ಹುಡುಗರ ಹಾಗೆ ಕಂಡ ಕಂಡ ಹಾಗೆ ಹಲಗೆ ಬಡಿಯುವದಲ್ಲಾ,ಒಂದು ಲಯಬದ್ದವಾಗಿ, ರಾಗಬದ್ದವಾಗಿ ಹಲಗೆ ಬಾರಿಸುವದು. ಈ ಹಲಗೆಗಳಲ್ಲೂ ಕಣೀ, ದಿಮ್ಮಿ, ಜಗ್ಗಲಿಗೆ ಎಂಬ ಪ್ರಕಾರಗಳುಂಟು.ವೃತ್ತಾಕಾರವಾಗಿ ನಿಂತು ಮದ್ಯದದಲ್ಲಿ ಕಣಿ ಬಾರಿಸುವವನ ತಾಳಕ್ಕೆ ತಕ್ಕಂತೆ, ಸುತ್ತಲಿನ ಎಲ್ಲರೂ ದಿಮ್ಮಿ ಬಾರಿಸುತ್ತಾರೆ. ಕಣಿ ಬಾರಿಸುವದು ಒಂದು ಕಲೆ, ಮಣಿಕಟ್ಟನ್ನು ಲಯಬದ್ದವಾಗಿ ಆಡಿಸುತ್ತ, ಹಲಗೆಯ ನಿರ್ದಿಷ್ಟ ಮೂಲೆಗೆ ಬಡಿಯುವದು ಸುಲಭಸಾದ್ಯ ವಿದ್ಯೆಯಲ್ಲಾ.ಇನ್ನು ಜಗ್ಗಲಿಗೆ ಅಂದರೆ ಚಕ್ಕಡಿ ಗಾಲಿ ಗಾತ್ರದ ಹಲಗೆಗಳು.ಹಬ್ಬದ ದಿನ ಇವರ ಮಜಲಿನ ಜೊತೆಗೆ ಕೊರವರ ಶಹನಾಯ್ ಸಾಥಿಯೂ ಸೇರಿರುತ್ತದೆ.ಇವರ ಹಲಗೆ ಕಾಯಿಸಲು ಮಜಲಿನ ಪಕ್ಕದಲ್ಲಿ ಒಂದು ಕಡೆ ಬೆಂಕಿ ಹಾಕಿರುತ್ತಾರೆ. ಇವರ ವಾದ್ಯಗೋಷ್ಟಿ ಬೆಳತನಕ ಸಾಗುತ್ತದೆ.&lt;br /&gt;&lt;br /&gt;    ಇನ್ನು ಹಬ್ಬದ ಹಿಂದಿನ ದಿನ ದ್ಯಾಮವ್ವನ ಗುಡಿಯಲ್ಲಿನ ದೊಡ್ಡ ಮರದ ಕಪಾಟಿನಿಂದ ಭವ್ಯ ಕಾಮ,ರತಿಯರ ವಿಗ್ರಹಗಳನ್ನು ಹೊರತೆಗೆಯುತ್ತಾರೆ, ಓನಿಯ ಚಿಲ್ಟಾರಿಗಳು ಮೂರ್ತಿಗಳ ಸ್ಪರ್ಶಕ್ಕಾಗಿ ಕಿತ್ತಾಡುತ್ತಿರುತ್ತಾರೆ.ಅವತ್ತೀಡಿ ರಾತ್ರಿ ಕಾಮಣ್ಣನನ್ನು ಸಿಂಗರಿಸುವದರಲ್ಲೇ ಎಲ್ಲಾ ಹಿರಿತಲೆಗಳು ಮಗ್ನರಾಗುತ್ತಾರೆ.ಮೊದಲು ಗೌಡರ ಮನೆಯಿಂದ ಹಳೆಯ ಗಟ್ಟಿಮುಟ್ಟಾದ ಮಂಚ ತಂದು, ಅದನ್ನು ಚಕ್ಕಡಿಗೆ ಅಡ್ದಲಾಗಿ ಬಿಗಿದು, ಮೇಲೆ ಜಮಖಾನೆ ಹಾಸುತ್ತಾರೆ. ನಂತರ ಸೀರೆಗಳಿಂದ ಮಂಟಪ ಮಾಡಿ, ಮಂಟಪದ ಏರಡು ಬದಿಗೆ ಬಾಳೆ ಕಂಬ, ಕಬ್ಬು ಕಟ್ಟಿ, ಜಮಖಾನೆಯ ಮೇಲೆ ಅಕ್ಕಿ ಹಾಕಿ ಕಾಮನನ್ನೂ, ರತಿದೇವಿಯನ್ನು ಕೂರಿಸಲು ಅಣಿ ಮಾಡುತ್ತಾರೆ.ಇದರ ಮದ್ಯೆಯೇ ಕಾಮಣ್ಣನಿಗೆ ಸುಂದರವಾಗಿ ದೋತರ ಉಡಿಸಿ, ಶಲ್ಯ ಹೊದ್ದಿಸಿ,ಭರ್ಜರಿ ರೇಶಿಮೆ ಪಟಗಾ ಸುತ್ತಿ, ಕುರಿಯ ಉಣ್ಣೆಯ ಹುರಿ ಮೀಸೆ ಅಂಟಿಸಿದರೆ ಕಾಮಣ್ಣನ ಮೇಕಪ್ ಮುಗೀತು. ಇನ್ನು ರತಿದೇವಿಗೆ ಚೆಂದದ ಇಳಕಲ್ಲ್ ಸೀರೆ ಸುತ್ತೆ, ಮೂಗಿಗೆ ದೊಡ್ದ ಮೂಗುತಿ ಹಾಕಿ, ಬಳೆ ತೊಡಿಸಿ ದಂಡೆ ಹಾಕುತ್ತಾರೆ.ಇಬ್ಬರ ಕೈಯಲ್ಲೂ ಗುಲಾಬಿ ಕೊಟ್ಟರೆ ಅವರ ತಯಾರಿಯೆಲ್ಲಾ ಮುಗೀತು.ಅಮೇಲೆ ಇಡೀ ಚಕ್ಕಡಿಯನ್ನು ಹೂ ಗಳಿಂದ ಅಲಂಕರಿಸಿ, ಚಕ್ಕಡಿಯ ಒಂದು ಬದಿಗೆ ಹಾಳೆಯಲ್ಲಿ ಬರೆದ ಬಾಣ ಹೂಡಿದ ಕಾಮನ ಚಿತ್ರವನ್ನು ಸಾಂಕೇತಿಕ ’ಕಾಮದಹನ’ಕ್ಕಾಗೆ ಸಿಕ್ಕಿಸಿರುತ್ತಾರೆ.ನಂತರ ಮಜಲಿನ ಜೊತೆಗೆ ಮೆರವಣಿಗೆ ದ್ಯಾಮವ್ವನ ಗುಡಿಯಿಂದ ಶುರುವಾಗಿ ಮೊದಲು ಗೌಡರ ಮನೆಗೆ ಬಂದು, ಸಾಂಪ್ರಾದಾಯಿಕ ಪೂಜೆಯಿಂದ ಶುರುವಾಗುತ್ತದೆ. ಗೌಡರ ಮನೆಯಲ್ಲಿ ರತಿಗೆ ಉಡಿ ತುಂಬುತ್ತಾರೆ. ನಮ್ಮ ತಂದೆಯ ಕಾಲದಲ್ಲಿ ಹೆಣ್ಣಿನ ಕಡೆ, ಗಂಡಿನ ಕಡೆ ಇನ್ನೂ ಅನೇಕ ಆಚರಣೆಗಳಿದ್ದವಂತೆ, ನಾನಂತೂ ಅವನ್ನು ನೋಡಿಲ್ಲಾ. ಇದೆಲ್ಲಾ ಆದ ನಂತರ ಮೆರವಣೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಾಗುತ್ತದೆ..&lt;br /&gt;&lt;br /&gt;  ನಿಜವಾದ ಹೋಳಿಯ ಗಮ್ಮತ್ತು ಇದಲ್ಲಾ; ಅವತ್ತು ಜಿಲ್ಲಾಡಳಿತ ಮದ್ಯ ಮಾರಾಟ ನೀಷೆದಿಸಿದ್ದರೂ, ಮೊದಲೇ ಎಲ್ಲಾ ಸ್ಟಾಕ್ ಮಾಡಿಟ್ಟುಕೊಂಡ  ನಮ್ಮೂರ ಗಂಡಸರು ಆ ದಿನ ಬೆಳಬೆಳಗ್ಗೆಯೇ ಫುಲ್ ಟೈಟಾಗಿ ಬಿಡುತ್ತಾರೆ, ಹೋಳಿಯ ದಿನ ಒಂಥರಾ ಸ್ವೆಚ್ಚಾಚಾರಕ್ಕೆ ಊರು ಬಿದ್ದಿರುತ್ತದೆ, ಅವತ್ತೂ ಎನೂ ಮಾಡಿದರೂ ಯಾರೂ ಎನೂ ಕೇಳಕೂಡದು ಎಂಬ ಪ್ರತೀತಿ, ಹೀಗಾಗಿ ಎಂದು ಕುಡಿಯದವರೂ ಸಹ ಅವತ್ತು &quot; ಗುಬ್ಬಿ ಪಾಕೀಟು&quot; ಹರಿದು ಸಾರಾಯಿ ಗಂಟಲಿಗಿಳಿಸದೆ ಬಿಡುವದಿಲ್ಲಾ.ಊರಿನ ಬಹುತೇಕ ಗಂಡಸರು ಅವತ್ತು ನಶೆಯಲ್ಲಿರುತ್ತಾರೆ.ಹೀಗಾಗಿ ಕಂಡ ಕಂಡಲ್ಲಿ ಕುಡಿದು ಬಿದ್ದವರು ಒಂದು ಕಡೆ, ಕಿರುಕ್ಕು ಮಾಡುತ್ತಾ ಕೋಳಿ ಜಗಳ ಮಾಡುವ ತಾತ್ಕಾಲಿಕ ಕುಡುಕರು ಒಂದೆಡೆ, ಮಜಲಿನಲ್ಲಿ ದಿಮ್ಮಿ ಬಾರಿಸಲು ಪೈಪೋಟಿ ಮತ್ತೊಂದೆಡೆ. ಒಟ್ಟು ಇಡೀ ವಾತವರಣವೇ ಹುಳಿ ಹುಳಿ ವಾಸನೆಯಿಂದ ಗಬ್ಬೆದ್ದು ಹೋಗಿರುತ್ತದೆ.&lt;br /&gt;&lt;br /&gt;ಹೊತ್ತೇರಿದಂತೆ ಓಕುಳಿಯಾಟವೂ ಶುರುವಾಗುತ್ತೆ. ಪಿಚಕಾರಿಗಳಲ್ಲಿ, ಬಾಟಲ್ಲುಗಳಲ್ಲಿ ಬಣ್ಣ ತುಂಬಿಕೊಂಡು ಎಲ್ಲರ ಮೇಲೂ ಬಣ್ಣ ಅರಚಲು ಶುರುವಾಗುತ್ತಾರೆ. ಬಣ್ಣ ಖಾಲಿಯಾದಂತೆ ಚಕ್ಕಡಿಯ ಎರಿಬಂಡಿ, ಟ್ರ್ಯಾಕ್ಟರಿವ ಗ್ರೀಸು, ಕೊಚ್ಚೆಯ ಕರಿ ನೀರು ಎಲ್ಲವೂ ಸೈ, ಎನಾದರೂ ನಡೆದೀತು. ಲಬೋ ಲಬೋ ಎಂದು ಹೋಯ್ಕೋಳ್ಳುತ್ತಾ , ಕಂಡೊರಿಗೆ ಬಣ್ಣ ಎರಚುತ್ತಾ ಇಡೀ ಊರಿಗೆ ಊರೇ ಮೋಜಿನಲ್ಲಿ ಮುಳುಗಿರುತ್ತದೆ. ನಡು ನಡುವೆ ಅಶ್ಲೀಲ ಬೈಗುಳಗಳು, ಕಾಮಣ್ಣನ ಮಕ್ಕಳು ಕಳ್ಳ ಸೂ... ಮಕ್ಕಳೂ ಅನ್ನುವ ಕೇಕೆ ಹೊಳಿ ಹಬ್ಬಕ್ಕೆ ವಿಶೇಷ ಹಿನ್ನೆಲೆ ಆಗಿರುತ್ತದೆ.ರಸ್ತೆಯ ಎರಡೂ ಬದಿ ತಲೆ ತುಂಬ ಸೆರಗು ಹೊತ್ತು, ಬಾಯಿಗೆ ಸೆರಗು ಆಡ್ದ ಇಟ್ಟುಕೊಂಡು ನಗುತ್ತಿರುವ ನಾರಿ ಮಣಿಗಳು, ತಮ್ಮ ತಮ್ಮ ಮನೆಯ ಗಂಡಸರ ಮಂಗನಾಟಗಳನ್ನು ಮೂಕಪ್ರೇಕ್ಷಕರಂತೆ ಅಸಹಾಯಕರಾಗಿ ನಿಂತು ನೋಡುತ್ತಿರುತ್ತಾರೆ. &lt;br /&gt;&lt;br /&gt;           ಸರಿಯಾಗಿ ಪಂಚಾಯಿತಿ ದಾಟುವ ವೇಳೆಗೆ ಎಲ್ಲಾ ಓಣೆಯ ಕಾಮನ ಮೆರವಣೆಗೆಗಳೂ ಸೇರುತ್ತವೆ,ಇದರಲ್ಲಿ ಗೌಡರ ಕಾಮ ಕೊನೆಯವನು.ಸಾಲು ಸಾಲಾಗಿ ಮೆರೆವಣಿಗೆ ಸಾಗುತ್ತಿದ್ದಂತೆ ಬೇರೆ ಓಣಿಯವರೊಂದೆಗೆ ಪೈಪೋಟಿಗೆ ಬಿದ್ದ ಮಜಲಿನ ಮೇಳಗಳು ಇನ್ನೂ ಜೋರಾಗಿ ಹಲಗೆ ಬಡಿಯತೊಡಗುತ್ತಾರೆ, ಇವರನ್ನು ಶಿಳ್ಳೇ ಹಾಕಿ, ಕೊರಳಲ್ಲಿ ಮಾಲೆ ಹಾಕಿ, ಅವರ ಅಂಗಿಗೆ ನೋಟು ಸಿಕ್ಕಿಸಿ ಪ್ರೊತ್ಸಾಹಿಸುತ್ತಾರೆ. ಮದ್ಯೆ ಮದ್ಯೆ ಚುರುಮರಿ, ಕುಸುಬಿ ಇವರ ಮೇಲೆ ಹಾಕುತ್ತಾರೆ.ಮೊದಲೇ ಕುಡಿದ ಅಮಲೀನಲ್ಲಿರುವರು,ವಿಚಿತ್ರವಾಗಿ ಅಂಗಚೇಷ್ಟೆ ಮಾಡುತ್ತಾ, ಕುಣಿಯುತ್ತಾ ಹಲಗೆ ಬಡಿಯತೊಡಗುತ್ತಾರೆ. ಈ ಮದ್ಯೆ ಕಣಿ ಬಾರಿಸುವವರು ಹಲಗೆ ಬಾರಿಸುತ್ತ, ತಾಳ ತಪ್ಪದೆ ನೆಲದಲ್ಲಿ ಇಟ್ಟಿರುವ ನಾಣ್ಯವನ್ನು ಹಣೆಯಿಂದ ತೆಗೆಯುವದು,ನಾಲಿಗೆಯಿಂದ ನೋಟನ್ನು ತೆಗೆಯುವದು ಇತ್ಯಾದಿ ಸರ್ಕಸ್ಸುಗಳು ಅಮಲೇರಿದಂತೆ ಜೋರಾಗುತ್ತವೆ.ಹುಡುಗರಂತೂ ತಮ್ಮ ತಮ್ಮ ಡವ್ ಗಳ ಮನೆಮುಂದೆ ಇನ್ನೂ ಒವರ್ ಆಕ್ಟಿಂಗ್ ಮಾಡಿ Show off ನೀಡತೊಡಗುತ್ತಾರೆ.ಶಿಳ್ಳೇ, ಕೇಕೆ,ಕುಡುಕರ ಹಾರಾಟ, ಲಬೋ ಲಬೋ ಅಂತ ಹೊಯ್ಕೊಳ್ಳುವದು,ಮಜಲಿನ ನಾದ, ಓಕುಳಿಯಾಟ, ಅಶ್ಲೀಲ ಬೈಗುಳಗಳು ಎಲ್ಲಾ ಸೇರಿ ಒಂದು ವಿಕ್ಷಿಪ್ತ ಲೋಕವೇ ನಿರ್ಮಾಣವಾಗಿಬಿಟ್ಟುರುತ್ತದೆ.&lt;br /&gt;&lt;br /&gt;     ಊರ ಅಗಸೆಯಲ್ಲಿ ಒಟ್ಟು ಎರಡು ಕಟ್ಟಿಗೆಯ ರಾಶಿಯಿರುತ್ತವೆ, ಒಂದು ಗೌಡರ ಕಾಮನನ್ನು ಸುಡಲು, ಇನ್ನೊಂದು ಉಳಿದ ಓಣಿಯ ಕಾಮಣ್ಣಗಳ ಸಾಮೂಹಿಕ ದಹನಕ್ಕೆ.ಮೆರವಣಿಗೆ ಅಗಸೆ ಮುಟ್ಟಿದ ಕೂಡಲೇ ಕಾಮಣ್ಣನ ಮೂರ್ತಿಗಳನ್ನು ಮರೆ ಮಾಚುತ್ತಾರೆ. ಹಾಳೆಯ ಕಾಮನ ಚಿತ್ರವನ್ನು ಪೂಜಿಸಿ ಮೊದಲು ಗೌಡರ ಓಣಿಯ ಕಾಮನನ್ನುಸುಡುತ್ತಾರೆ. ನಂತರ ಗೌಡರ ಕಾಮನ ಬೆಂಕಿಯಿಂದ ಉಳಿದ ಓಣಿಯ ಕಾಮಣ್ಣರನ್ನು ಸುಡುತ್ತಾರೆ.ಆಗ ಎಲ್ಲಾ ಮಜಲು ಮೇಳಗಳು ಕಾಮನ ಬೆಂಕಿಯ ಸುತ್ತಲೂ ಹಲಗೆ ಬರಿಸುತ್ತಾ ಕುಣಿಯುತ್ತಾರೆ. ಎಲ್ಲರೂ ಲಬೋ ಲಬೋ ಎಂದು ಹೊಯ್ಕೋಳ್ಳುತ್ತಾ &quot; ಉಂಡಿ ತಿನ್ನು ಅಂದ್ರ ... ತಿಂದು ಸತ್ತ್ಯಲ್ಲೋ&quot; &quot; ಚಾ ಕುಡಿ ಅಂದ್ರ ... ಕುಡಿದು ಸತ್ತ್ಯಲ್ಲೋ&quot; ಅಂದು ನಾಟಕೀಯವಾಗಿ ಅಳುತ್ತ್ತಾ, ತಮ್ಮ ಅಂಗಿ ಕಳೆದು ಬೆಂಕಿಗೆ ಆಹುತಿ ನೀಡುತ್ತಾರೆ.ನಂತರ ಮೋದಲೆ ಮನೆಯಿಂದ ತಂದ ಕುಳ್ಳೀನಲ್ಲೋ, ಚಿಪ್ಪಿನಲ್ಲೋ ಕಾಮನನ್ನು ಸುಟ್ಟ ಬೆಂಕಿಯನ್ನು ಮನೆಗೆ ಒಯ್ದು,ಸ್ವಲ್ಪ ಬೆಂಕಿಯನ್ನು ಒಲೆಗೆ ಹಾಕುತ್ತಾರೆ ಮತ್ತು ಉಳಿದುದರಿಂದ ಆ ಹಿಂಗಾರಿನ ಹೊಸ ಕಡಲೆಕಾಯಿ ಗಿಡಗಳನ್ನು ಮನೆ ಮುಂದೆ ಸುಟ್ಟು ಕಡಲೆ ಕಾಯಿ ತಿನ್ನುತ್ತಾರೆ.&lt;br /&gt;&lt;br /&gt;    ಕಾಮನನ್ನು ಸುಟ್ಟ ಮೇಲೆ ಓಕುಳಿ ಆಡುವುದು ಬಂದ್.ಮುಂದೆ ಶುರುವಾಗುವದೇ ಹೋಳಿ ಹಬ್ಬದ ವಿಶಿಷ್ಟ ಆಚರಣೆಯಾದ ’ಸೋಗ’.. ಸೋಗು ಅಂದ್ರೆ ಪೂರ್ತಿ ಟೈಟಾದವನೊಭ್ಬನನ್ನು ನಿಜವಾದ ಹೆಣದಂತೆ ಶೃಂಗರಿಸಿ, ಒಂದು ಏಣಿಯ ಮೇಳೆ ಕೂರಿಸುತ್ತಾರೆ, ಗಂಡಸರೆ ಹೆಂಗಸರ ಹಳೆಯ ಸೀರೆ, ನೈಟಿ, ಚೂಡಿದಾರು ತೊಟ್ಟು ಸತ್ತವನ ಹೆಂಡತಿ, ಮಗಳ ವೇಷ ಧರಿಸಿ ಗೋಳಾಡೀ ಅಳುತ್ತಾರೆ,ಸಬ್ಯರು ಇವರ ಸಂಭಾಷಣೆ ಕೇಳಿದರೆ ಮುಗೀತು. ತೀರಾ ಅಶ್ಲೀಲ ಭಾಷೆಯಲ್ಲಿ ಹಾಸ್ಯ ಮಾಡುತ್ತ್ತ ನೆರೆದವರಿಗೆ ಭರ್ಜರಿ ಮನೋರಂಜನೆ ನೀಡುತ್ತಾರೆ. ಹೆಂಗಸರೂ ಸಹ ಈ ವೇಷದವರನ್ನು ಮಾತಾಡಿಸಿ ಹೊಟ್ಟ ತುಂಬಾ ನಗುತ್ತಾರೆ.ಇದೆಲ್ಲಾ ಮುಗಿದ ಮೇಲೆ ಮನೆಗೆ ಹೋಗಿ ಬಣ್ಣ ಹೋಗುವಂತೆ ತಲೆ ಸ್ನಾನ ಮಾಡಿ , ಅವತ್ತಿನ ಸ್ಪೇಶಲ್ ಅಡಿಗೆ ಹೋಳಿಗೆಯನ್ನು ತಿಂದರೆ ಸ್ವರ್ಗ ಸುಖ. ಆ ದಿನ ಹೊಯ್ಕೊಂಡ ಬಾಯಿಗೆ ಹೋಳಿಗೆ ಬೀಳಲೇ ಬೇಕಂತೆ.ರಾತ್ರಿ ಮತ್ತೊಮ್ಮೆ ಮಜಲು ಬಾರಿಸಿ ಮಂಗಳ ಮಾಡಿದರೆ ಆ ವರ್ಷದ ಹೋಳಿ ಆಚರಣೆ ಅಲ್ಲಿಗೆ ಮುಗಿದಂತೆ.</content><link rel='replies' type='application/atom+xml' href='http://scpatil.blogspot.com/feeds/6355202530720583341/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/6355202530720583341' title='8 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/6355202530720583341'/><link rel='self' type='application/atom+xml' href='http://www.blogger.com/feeds/7270070547169320163/posts/default/6355202530720583341'/><link rel='alternate' type='text/html' href='http://scpatil.blogspot.com/2008/03/blog-post_26.html' title='ಹೋಳಿಯ ಮೆಲುಕು...'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><thr:total>8</thr:total></entry><entry><id>tag:blogger.com,1999:blog-7270070547169320163.post-871943659936648190</id><published>2008-03-18T20:01:00.000-07:00</published><updated>2008-03-18T22:44:38.311-07:00</updated><title type='text'>ಮತ್ತದೇ ಹಾಡು..</title><content type='html'>ಒಂದು ಹಳೆಯ ವಿಷಯದ ಮೇಲೆ &quot;for a wrong reason&quot; ಬರೆಯುತ್ತಿರುವುದು ಮುಜುಗುರದ ಮತ್ತು ಅಷ್ಟೇ ಬೇಜಾರಿನ ಸಂಗತಿಯೂ ಹೌದು.ಒಂದು ಲಘು ಬರಹದ ದಾಟಿಯ ವೈಯಕ್ತಿಕ ಅಭಿಪ್ರಾಯಕ್ಕೆ ಬಂದ ಪ್ರತಿಕ್ರಿಯೆಗಳು ನಿಜಕ್ಕೂ ಅನಿರಿಕ್ಷೀತ ಮತ್ತು ಅನಪೇಕ್ಷಣಿಯವೂ ಹೌದು.ಈ ಬರಹದ ಮೂಲಕ ನನ್ನ ನಾ ಸಮರ್ಥಿಸಿಕೊಳ್ಳುವುದಾಗಲಿ ಅಥವಾ &quot;ಹೀಗಾಗಬಾರದಿತ್ತು&quot; ಅಂತಾ ಗಲ್ಲ ಗಲ್ಲ ಬಡಿದುಕೊಳ್ಳುವುದಾಗಲಿ ಮಾಡಿವುದಿಲ್ಲ. ಕೆಲ ವಿಷಯಗಳಿಗೆ ನಾನು ಸ್ಪಷ್ಟೀಕರಣ ನೀಡುವುದು  ನನ್ನ ಕರ್ತವ್ಯ ಎಂದು ಬರೆಯುತ್ತಿದ್ದೇನೆ..&lt;br /&gt;&lt;br /&gt;    ಘಟನೆಯೊಂದರ ಅಥವಾ ವಸ್ತುವೊಂದರ ವಸ್ತುಸ್ಥಿತಿಯನ್ನು ಗ್ರಹಿಸುವ ಮನೋಭಾವ ವ್ಯಕ್ತಿಯಿಂದ ವ್ಯಕ್ತಿಗೇ ವಿಭಿನ್ನವಾಗಿರಲೇಬೇಕು.ನನಗೆ ಮೊಸರನ್ನ ಇಷ್ಟವಾಗಿದೆ, ಎಲ್ಲರಿಗೂ ಮೊಸರನ್ನವೇ ಇಷ್ಟವಾಗಬೇಕೂ ಅಂತಲೋ, ಶಾರುಕಖಾನನ್ನು ಎಲ್ಲರೂ ಮೆಚ್ಚಲೇಬೇಕೆಂದು ಗೋಳಾಡುವುದು ದಡ್ದತನ. ತೀರಾ ನಿನ್ನ ಬೆನ್ನು ನಾನು ಚಪ್ಪರಿಸುತ್ತೇನೆ, ನನ್ನ ಬೆನ್ನು ನೀನು ಚಪ್ಪರಿಸು ಅನ್ನುವುದು ನೈಜಸ್ಥಿತಿಯ ವಿಮರ್ಶೆಯಾಗದೇ ಅದು ಬಟ್ಟಂಗಿತನವಾಗುತ್ತದೆ. ನಾನೇನು ಸಂಘಟಕರ ಆಶಯದ ಬಗ್ಗೆ,ಸಮಾವೇಶದ ಓಚಿತ್ಯದ ಬಗ್ಗೆ ಪ್ರಶ್ನಿಸಿಲ್ಲ. ಅಲ್ಲಿ ನಾನು ಗಮನಿಸಿದ ಅಥವಾ ನಾನು ಅಂದುಕೊಂಡದ್ದನ್ನು ದಾಖಲಿಸಿದ್ದೇನೆ ಮತ್ತು ನಾನು ಗಮನಿಸಿದ್ದೇ ಸರಿ ಅನ್ನುವ ಹುಂಬತನವೂ ನನ್ನಲಿಲ್ಲ. ನಿಮಗೆಲ್ಲರಿಗೂ  ಅವತ್ತು ಖುಷಿಯಾಗಿದ್ದರೆ ಅದಕ್ಕಿಂತ ಸಮಾಧಾನದ ವಿಷಯ ಇನ್ನೇನಿದೆ? ಆದರೆ ನಾವು ಖುಷಿಯಾಗಿದೀವಿ ನಿನಗೇನು ಕಷ್ಟ? ಅನ್ನುವ ದಾಟಿ ಯಾಕೋ ಅಂತ ತಿಳಿತಿಲ್ಲ.&lt;br /&gt;&lt;br /&gt;    ಒಂದು ಹೊಸ ಯೋಜನೆಯ ಬೆನ್ನು ಬಿದ್ದವನಿಗೆ ಆಗಬಹುದಾದ ಸಣ್ಣ ಪ್ರಮಾದದ ಬೆಲೆಯ ಬಗ್ಗೆಯೂ ಅರಿವಿರಬೇಕಾಗುತ್ತೆ.ಹೌದು ಮೊದಲ ಸಾರಿಯ ಪ್ರಯತ್ನದಲ್ಲಿ ಕೆಲ ಅಭಾಸಗಳಿರೋದು ಸಹಜ ಮತ್ತು ನಾವದನ್ನೂ ಕಂಡೂ ಕಾಣದಂತೆ ಇದ್ದು ಬಿಡಬೇಕು ಅನ್ನುವುದು ಸಹ ಒಪ್ಪತಕ್ಕ ಮಾತೇ.ಆದರೇ ಒಂದು ಇ -ಮೇಲ್ ಗೋ ಅಥವಾ ಕಮೆಂಟಿಗೋ ಸ್ಪಂದಿಸಿ ಒಂದು ಹೊಸ ಪ್ರಯತ್ನಕ್ಕೆ ಸಾಕ್ಷೀಯಾಗುವ ಭರವಸೆಯಲ್ಲಿ ಬಂದವರಿಗೆ ಕಾರ್ಯಕ್ರಮದ ಬಗ್ಗೆ ತಮ್ಮದೇ ಆದ ನೀರಿಕ್ಷೇಗಳಿರುತ್ತವೆ ಮತ್ತು ಆ ನೀರಿಕ್ಷೆಗಳೆಲ್ಲಾ ಹುಸಿಯಾದಾಗ ನಿರಾಶೆಯಾಗುವುದು ಸಹಜ.ಯಾವುದೋ ಒಂದು ಕಡೆ ಪ್ರಕಟಣೆ ನೀಡಿ ’ಬೇಕಾದವರೂ ಬರಲಿ, ಬ್ಯಾಡದವರು ಬಿಡ್ಲಿ’ ಅನ್ನೋವ ಧೋರಣೆಯಲ್ಲಿದ್ದರೇ ನಾನು ಆ ರೀತಿ ನಿರಿಕ್ಷಿಸಿದ್ದು ತಪ್ಪಾಗುತ್ತೆ.ನೀವೆ ಬೇಕಾದರೆ ಪರಿಚಯಿಸಿಕೊಳ್ಳಿ , ಬ್ಯಾಡಾದರೆ ಸುಮ್ನಿರಿ ಅನ್ನುವದಕ್ಕೋ ಅದೇನು ರಾಮನವಮಿ ಪಾನಕದ ತರ ಅಲ್ಲಾ, ಬೇಕಾದವರು ತಗೋಂಡು ಬ್ಯಾಡಾದವರು ಬಿಡೋದಕ್ಕೆ.ಇನ್ನೋಬ್ಬರು ಯಾರೋ ರಶೀದ್ ಬಟ್ಟೆಯ ಬಗ್ಗೆ ಮಾತಾಡಿದ್ದಾರೆ, ನಾನೇನು ಯಕ್ಶಗಾನದ ವೇಷ ಹಾಕಿ ಅಂತಾ ಎಲ್ಲೂ ಹೇಳಿಲ್ಲವಲ್ಲ. ಅವರ ಸೀದಾ ಸಾದಾ ಉಡುಪು ಕಂಡು ಖುಷಿಯಾಗಿ ಅದನ್ನೂ ಪ್ರಸ್ತಾಪಿಸಿದ್ದೆ ಅಷ್ಟೆ.ಎಲ್ಲರನ್ನು ಅನವಶ್ಯಕವಾಗಿ  ಎಳೆದು ತಂದು ಕೆಸರು ಎರಚುವುದು ಬ್ಯಾಡಿತ್ತೆನೋ.ಇನ್ನು ಚಡ್ಡಿ ಹಾಕಿದವರಿಗೆ ಬ್ಲಾಗು ಬರಿಯಬಾರದು, ಓದಬಾರದು ಅಂತ ಎಲ್ಲೂ ಹೇಳಿಲ್ಲವಲ್ಲ ಮತ್ತು ಕಾರ್ಯಕ್ರಮ ಮುಗಿಯುವವರೆಗೂ ನಾನಿದ್ದೆ ಮತ್ತು ಎಷ್ಟು ಜನ ಮುಗಿಯುವವರೆಗೂ ಇದ್ದರು ಅನ್ನುವುದೂ ಗೊತ್ತು.&lt;br /&gt;&lt;br /&gt;    ಇದೆಲ್ಲ ಸಾಯ್ಲಿ, ಉಳಿದ ಸಂಘಟಕರ ಬಗ್ಗೆ ನನಗೆ ಗೊತ್ತಿರಲಿಕ್ಕಿಲ್ಲ ಆದರೆ ಶ್ರೀನಿಧಿ ವೈಯಕ್ತಿಕವಾಗೆ ಗೊತ್ತು(ಯಥಾಪ್ರಕಾರ ಇ-ಮೇಲ್ ನಲ್ಲಿ). ಶ್ರೀ ಪ್ರಣತಿಯ ಪರವಾಗಿ ಆಹ್ವಾನ ಕಳಿಸಿದಾಗ, ನಾನಿದನ್ನೂ ಪ್ರಣತಿಯ ಪರವಾಗಿ ನನ್ನ ಸ್ನೇಹಿತರೀಗೂ ಕಳಿಸಬಹುದಾ ಅಂತಲೂ ಕೇಳಿದ್ದ ಮತ್ತು ನನಗೆ ವೈಯಕ್ತಿಕವಾಗಿ ಪರಚಯವಿದ್ದ ಕನ್ನಡ ಬ್ಲಾಗಿಗರನ್ನು ಅಹ್ವಾನಿಸಿಯೂ  ಇದ್ದೆ. ಸಮಾವೇಶದ ಉದ್ದೇಶದ ಬಗ್ಗೆ, ಅದರ ಸಫಲತೆ ನಿಮಗಿರುವಷ್ಟೇ ಕಾಳಜಿ ನನಗೂ ಇದೆ ಮತ್ತು ನಾನೇನು ಮಾಡುತ್ತಿದ್ಡೇನೆ ಅನ್ನೋದರ ಅರಿವೂ ಇದೆ. ಅನವಶ್ಯಕವಾಗಿ ಎಲ್ಲವನ್ನೂ ಗುತ್ತಿಗೆ ತಗೋಂಡವರ ತರಹ ಪ್ರತಿಕ್ರಿಯುಸುವದನ್ನು ಬಿಟ್ಟು, ಸರಿ ತಪ್ಪುಗಳನ್ನು ವಿಮರ್ಶಿಸುವ ಮತ್ತು ಆಗಿರಬಹುದಾದ ಅಚಾತುರ್ಯಗಳು ಮುಂದೆ ಆಗದಂತೆ ಜವಾಬ್ದಾರಿ ವಹಿಸಬೇಕು. ಅದು ಬಿಟ್ಟು ನಾನು ಮಾಡಿದ್ದೆ ಸರಿ,ಫಸ್ಟ್ ಟೈಮು ಅಂತಲ್ಲ ಸಮಜಾಯಿಸಿ ನಮಗೆ ನಾವೇ ಕೊಟ್ಟುಕೊಂಡು ಸಮಾಧಾನಿಸಿಕೊಂಡರೆ ಎನೂ ಮಾಡಲೂ ಆಗುವುದಿಲ್ಲ. ಎಲ್ಲವನ್ನೂ ಮತ್ತು ಎಲ್ಲರನ್ನೂ ಸರಿತೂಗಿಸಿಕೊಂಡು ಹೋಗುವುದೆ ನಿಜವಾದ ಸವಾಲು, ಬರಿ ಹೊಗಳು ಭಟ್ಟರು ಹೇಳಿದ್ದೇ ನಂಬಿದರೆ ಯಥಾಸ್ಥಿತಿಯ ಅರಿವಾಗುವಿದಿಲ್ಲ್ಲಾ.ಮುಂದಿನ ಕಾರ್ಯಕ್ರಮಗಳು ಇದಕ್ಕೂ ಯಶಸ್ವಿಯಾದರೆ ಅದಕ್ಕಿಂತ ಸಂತೋಷದ ವಿಷಯ ಇನ್ನೇನಿದೆ?&lt;br /&gt;&lt;br /&gt;     ಇಷ್ಟರ ಹೊರತಾಗಿಯೂ ಸಂಘಟಕರ ಮನಸ್ಸಿಗೆ ನೋವಾಗಿದ್ದರೆ, ನಾನವರನ್ನು ಕ್ಷಮೆ ಕೇಳುತ್ತೇನೆ, ವಿಶೇಷವಾಗಿ ಶ್ರೀನಿಧಿ.. ಪ್ರತಿಕ್ರಿಯಿಸಿದ ಉಳಿದ &quot;ಗುತ್ತಿಗೆದಾರ&quot;ರ ಬಗ್ಗೆ ನಾನು ಏನು ಹೇಳಲಾರೆ.ಇನ್ನೂ ಚರ್ಚಿಸುವ ಇರಾದೆ ಯಾರಿಗಾದರೂ ಇದ್ದರೆ ನನ್ನ ಮೇಲ್ ಮುಖಾಂತರ ಸಂಪರ್ಕಿಸಬಹುದು,ಹೀಗೆ ಕೆಸರು ಎರಚಿಕೊಂಡು ಕಂಡೋರ ಮನರಂಜನೆಗೆ ಆಹಾರವಾಗುವ ಇಷ್ಟ ನನಗಂತೂ ಇಲ್ಲ.ಇನ್ನೂ ತವಡು ಕುಟ್ಟಲು ನನಗಿಷ್ಟವಿಲ್ಲ, ಅದಕ್ಕೆ ಇದನ್ನು ಇಲ್ಲಿಗೆ ಬಿಡುತ್ತಿದ್ದೇನೆ, ಇಲ್ಲಾ ನಂಗೆ ಇದನ್ನು ಇಲ್ಲಿಗೆ ಬಿಟ್ಟರೆ ನಂಗೆ ಅಜೀರ್ಣವಾಗುತ್ತೆ ಅನ್ನೋರ ಮೂಲವ್ಯಾಧಿ ತೊಂದರೆಗೆ ನಾನೇನು ಮಾಡಲಾಗುವುದಿಲ್ಲ..</content><link rel='replies' type='application/atom+xml' href='http://scpatil.blogspot.com/feeds/871943659936648190/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/871943659936648190' title='11 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/871943659936648190'/><link rel='self' type='application/atom+xml' href='http://www.blogger.com/feeds/7270070547169320163/posts/default/871943659936648190'/><link rel='alternate' type='text/html' href='http://scpatil.blogspot.com/2008/03/blog-post_18.html' title='ಮತ್ತದೇ ಹಾಡು..'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><thr:total>11</thr:total></entry><entry><id>tag:blogger.com,1999:blog-7270070547169320163.post-1586466147343880385</id><published>2008-03-16T21:21:00.000-07:00</published><updated>2008-03-16T22:17:00.284-07:00</updated><title type='text'>ನಿರಾಶೆ ಮೂಡಿಸಿದ ಕೂಟ</title><content type='html'>ಯಾಕೆ ಅಂತ ತಿಳಿತಿಲ್ಲಾ, ನಂಗೆ ಮಾತ್ರ ಬಹು ನಿರೀಕ್ಷಿತ ಭಾನುವಾರದ ಆನಲೈನ ಕನ್ನಡಿಗರ ಸಮಾವೇಶ ತುಂಬಾ ತುಂಬಾ ನಿರಾಶೆ ಮೂಡಿಸಿತು.. ವಾರದ ಮೂಂಚೆಯೇ ಎಲ್ಲಾ ಬ್ಲಾಗುಗಳಲ್ಲಿ ಓಡಾಡುತ್ತಿದ್ದ ಆಹ್ವಾನ ಕಂಡು ಎನೋ ಹೊಸ ಕ್ರಾಂತಿಯೇ ಆಗಿ ಬಿಡುತ್ತೆ ಅನ್ಕೋಂಡಿದ್ದೆ.ಆದರೆ ನನಗಂತೂ ಆಲ್ಲಿ ಆದ ಸಾಧನೆ ಮಾತ್ರ  ದೊಡ್ದ ಶೂನ್ಯ.&lt;br /&gt;&lt;br /&gt;     ಭಾನುವಾರದ ಮಧ್ಯಾಹ್ನದ ನಿದ್ದೆ ತ್ಯಾಗ ಮಾಡಿ, ಪುಣ್ಯಾತ್ಮ ಮನೋಜನನ್ನು ಇನ್ನಿಲ್ಲದ ಆಮಿಷ ತೋರಿಸಿ ಕರೆದುಕೊಂಡು ಹೋಗುತ್ತಲೆ ಸುಶ್ರುತನ ಆಶಯ ಭಾಷಣ ಮುಗಿದಿತ್ತಂತೆ. ಇಲ್ಲಿಗೆ ಬಂದರೂ ನಮಗೆ ಕೊನೆಯ ಕುರ್ಚಿಯೇ ಮೀಸಲಾಗಿರುವುದು ಕಂಡು ಭಲೆ ಪ್ರೀತಿ ಉಕ್ಕಿ ಬಂತು. ಆಗ್ಲೆ ’ಪವನಜ’ ವೇದಿಕೆ ಏರಿ ಚಚ್ಚತೋಡಗಿದ್ದರು. ಎಲ್ಲಿ ರಶೀದು ಅಂತಾ ಅತ್ತಿತ್ತ ಹುಡುಕುವಷ್ಟರಲ್ಲಿ ತೀರಾ ಸೀದಾ ಸಾದಾ ಇದ್ದ ಅವರು ಕಣ್ಣಿಗೆ ಬಿದ್ದರು.ಆಗ್ಲೆ ನಾನು ಬ್ಲಾಗಿಗರನ್ನು ಹುಡುಕುವ ಯತ್ನದಲ್ಲಿ ತೊಡಗಿದ್ದೆ, ಎಲ್ಲಾ ತಮ್ಮ ಪಾಡಿಗೆ ತಾವೂ ತಮ್ಮ ಲೋಕದಲ್ಲಿ ಮಗ್ನರಾಗಿದ್ದರು,ಒಬ್ಬ ಚಡ್ಡಿ ಹಾಕ್ಕೋಂಡು ಬಂದಿದ್ದ, ಭಲೇ ಆನಲೈನ ಕನ್ನಡಿಗ ಎಂದುಕೊಂಡೆ.ಮತ್ತೋಬ್ಬ ತನ್ನ ಬೋಡು ತಲೆಗೆ ಚಸ್ಮಾ ಏರಿಸಿ ಕೂತಿದ್ದು ಕಂಡು ನಗು ಬಂತು . ನಾನು ಬೇಜಾರಾಗಿ ಮನೋಜನ ಜೊತೆ ಪಿಸುಮಾತಿನಲ್ಲಿ ಹರಟೆಗಿಳಿಯಬೇಕು ಅನ್ನುವಾಗ, ಮದ್ಯವಯಸ್ಕ ಬ್ಲಾಗಿಗರೋಬ್ಬರು ಗುರಾಯಿಸಿ ರಸಭಂಗ ಮಾಡಿದರು. ಇವರೆಲ್ಲಾ ಹಾಳಾಗ್ಲಿ ಸಂಘಟಕರು ಎಲ್ಲಿ ಹಾಳಾಗಿ ಹೋದರು ಎಂದು ನೋಡಿದ್ರೆ, ಅವರಲ್ಲೊಬ್ಬ ಮೌನವಾಗಿ ಮೊಬೈಲಿನಲ್ಲಿ ಗಾಳ ಹಾಕುತ್ತಿದ್ದ, ಮೀನಾದರೂ ಯಾವುದು ಅಂತಾ ಗಮನಿಸಿ ನೋಡಿದಾಗ ಅಲ್ಲೆ ಪ್ರೇಕ್ಷಕರ ಗುಂಪಿನಲ್ಲಿ ಕುಳಿತು ತಿರುಗಿ ತಿರುಗಿ ನೋಡುತ್ತಿತ್ತು ಒಂದು ಹೆಣ್ಣು ಮೀನು. ನಮ್ಮ ಮನೋಜ್ &quot;ಭಾರೀ ಮೀನಿಗೆ ಗಾಳ ಹಾಕ್ಯಾನಲ್ರೀ&quot; ಅಂತಾ ಭಲೇ ನೋವಿನಿಂದ ಗೋಳಾಡಿದ. ಹರಿಪ್ರಸಾದ ಚೀಟಿಯಲ್ಲಿ ಬರೆದದ್ದನ್ನು ಚೆನ್ನಾಗಿ ಹೇಳಿ ಹೋದರು. ರಶೀದು ಬಂದರು ಹೋದರು.ಅಷ್ಟರಲ್ಲಿ ನಿರೂಪಕ ’ಸಂಜೆ,ಚಾ’ ಅಂತೆಲ್ಲಾ ನಾಟಕೀಯವಾಗಿ ಹೇಳಿ ಹೋದ.ಇಲ್ಲಿವರೆಗೂ ಬಂದಿದ್ದಕ್ಕೆ ಚಹಾಕ್ಕಾದರೂ ದಾರಿಯಾಯ್ತು ಎಂದು ಎರಡೆರಡು ಭಾರಿ ಚಾ ಬಗ್ಗಿಸಿ ಕುಡಿದೆವೆ. ಇಷ್ಟೋತಾದರೂ ಯಾರಾದರೂ ಸಂಘಟಕರೂ ಎನು ಎತ್ತ ವಿಚಾರಿಸಿಯೇ ಇರಲ್ಲಿಲ್ಲ. ನಮಗಂತೂ ನಾವೂ ಸಂಬಂದವೇ ಇಲ್ಲದ ಜಗತ್ತಿಗೆ ಬಂದಿದ್ದೇವೇನೋ ಎಂಬ ಅನಾಥ ಭಾವ ಕಾಡತೊಡಗಿತು. ವಾಪಸು ಹೋದ ಮೇಲಾದರೂ ಎನಾದ್ರು ಭಯಂಕರ ಮಿರಾಕಲ್ ನಡೆಯುತ್ತೆ ಎಂಬ ಹುಸಿ ಆಸೆಯಿಂದ ಅದೇ ಕೊನೆ ಜಾಗಕ್ಕೆ ಬಂದು ಕುಳಿತೆವು. ಶ್ರೀನಿಧಿ ಬಂದು ಇನ್ನು ಮೇಲೆ ಸಂವಾದ ಇದೆಯಂತೂ , ಎನಾದ್ರೂ ಕೇಳುವುದಿದ್ದರೆ ಕೇಳಿ ಎಂದಾಗ, ನಮ್ಮ ಹಿಂದಿದ್ದ ಸಂಘಟಕನೊಬ್ಬ &quot; ಯಾರದೋ ಗೋತ್ರ ಅಂತ್ದಿದ್ಯಲ್ಲ ಕೇಳು&quot; ಅಂತಾ ಯಾರಿಗೋ ಚುಡಾಯಿಸುತ್ತಿದ್ದ. ಎಲಾ ಇವರ! ಕಂಡೋರ ಗೊತ್ರ ಕೇಳಲು ನಮ್ಮನ್ನು ಇಲ್ಲಿ ಕೂಡಿ ಹಾಕಿದ್ದಾರಾ? ಅಂತ ಸಂಶಯ ಬಂತು. &lt;br /&gt;&lt;br /&gt;   ಚೇತನಾ ತೀರ್ಥಹಳ್ಳಿ ನೋಡ್ತಿನಿ, ಜೋಗಿ ನೋಡ್ತಿನಿ, ಟೀನಾರನ್ನು ನೋಡ್ತಿನಿ ಅಂತೆಲ್ಲಾ ಬಂದಿದ್ದ ನನಗೆ ಯಾರು ಬಂದಿದ್ರು, ಯಾರು ಬಂದಿದಿಲ್ಲ ಎಂಬುದೇ ಕೊನೆವರೆಗೂ ತಿಳಿಲಿಲ್ಲಾ. ಕಡೆ ಪಕ್ಷ ಬಂದವರನ್ನು ಉಳಿದವರಿಗೆ ಪರಿಚಯಸುವ ಪ್ರಯತ್ನವೂ ನಡೆಯಲಿಲ್ಲ. ಎನೋ ಜವಾಬ್ದಾರಿ ಹಾಳು, ಮೂಳು ಅಂತೆಲ್ಲಾ ಇದುವರೆಗೂ ಬ್ಲಾಗುಗಳಲ್ಲಿ ಕೊರೆದಿದ್ದನ್ನೆ ಅಲ್ಲೂ ಕೊರೆಯಲು ಎಲ್ಲರನ್ನೂ ಕರೆಸಬೇಕಿತ್ತಾ? ಕೊನೆಕೊನೆಗೆ ಶ್ಯಾಮಾ ಮಾತಾನಾಡುವಾಗಲಂತೂ ಹೊರಗಡೆ ಸಂಘಟಕರ ಗಲಾಟೆಯಿಂದ ಮೊದಲೇ ಹಿಂದಿದ್ದ ನಮಗೆ ಎನೂ ಕೇಳಿಸದಂತಾಗತೊಡಗಿತ್ತು. ರಶೀದ್ ಆಗಾಗ ಹಿಂದೆ ತಿರುಗಿ ಇವರನ್ನು ನೋಡತೊಡಗಿದರು.ಆದರೂ ಛಲ ಬಿಡದ ಸಂಘಟಕರು ಮದ್ಯೆ ಮದ್ಯೆ ಕೆಲವರನ್ನು ಹೊರ ಎಳೆದೊಯ್ಯುವುದು, ಸ್ವಲ್ಪ ಸಮಯವಾದ ಮೇಲೆ ತಿರುಗಿ ಕಳುಸಿವುದು ನಡೆದೇ ಇತ್ತು. &lt;br /&gt;&lt;br /&gt;  ಎನೋ ಮೊದಲ ಬಾರಿ ನಡೆದ ಕಾರ್ಯಕ್ರಮವೆಂದು ನಿರೀಕ್ಷೆ ಜಾಸ್ತಿ ಇದ್ದುದಕ್ಕೆ ಹೀಗನಿಸಿತಾ? ಅಥವಾ ನನಗೋಬ್ಬನಿಗೆ ಮಾತ್ರ ಹೀಗೆ ಅನಿಸಿತಾ? ಅಂತಲೂ ಗೊತ್ತಿಲ್ಲ್ಲಾ. ನನಗಂತೂ ನಂದ ಲವ್ಸ್ ನಂದಿತ ಬಿಟ್ಟು ಇಲ್ಲಿಗೆ ಬಂದಿದ್ದಕ್ಕೆ ತುಂಬಾ ನಿರಾಶೆ ಅಯ್ತು. ಉಳಿದವರ ವಿಚಾರ ಅವರವರ ಭಾವಕ್ಕೆ , ಅವರವರ ಭಕುತಿಗೆ ಬಿಟ್ಟಿದ್ದು..</content><link rel='replies' type='application/atom+xml' href='http://scpatil.blogspot.com/feeds/1586466147343880385/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/1586466147343880385' title='38 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/1586466147343880385'/><link rel='self' type='application/atom+xml' href='http://www.blogger.com/feeds/7270070547169320163/posts/default/1586466147343880385'/><link rel='alternate' type='text/html' href='http://scpatil.blogspot.com/2008/03/blog-post_16.html' title='ನಿರಾಶೆ ಮೂಡಿಸಿದ ಕೂಟ'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><thr:total>38</thr:total></entry><entry><id>tag:blogger.com,1999:blog-7270070547169320163.post-1098586937931058593</id><published>2008-03-09T20:28:00.000-07:00</published><updated>2008-03-09T21:36:20.824-07:00</updated><title type='text'>ಮಹಾಪ್ರಳಯ</title><content type='html'>&quot;ಸರಿಯಾಗಿ 1999ನೇ ಇಸವಿ, ಒಂಬತ್ತನೇ ತಿಂಗ್ಳು,ಒಂಬತ್ತನೇ ತಾರೀಕು,ಒಂಬತ್ತು ಗಂಟೆ ಒಂಬತ್ತು ನಿಮಿಷ ಒಂಬತ್ತು ಸೆಕೆಂಡ್ ಗೆ ಪ್ರಳಯ ಆಗೀಯೇ ಅಗುತ್ತಂತೆ&quot; ಎಂದು ಒಂದೇ ಉಸಿರಿನಲ್ಲಿ ’ಎಲ್ಲಾ ನನಗೇಯೇ ಗೊತ್ತು’ ಎಂಬ ಧಿಮಾಕಿನ ದಾಟಿಯಲ್ಲಿ ಆಕೆ ಎರಡು ಪಿರಿಯಡ್ಡುಗಳ ಮಧ್ಯದ ವಿರಾಮದ ಸಮಯದಲ್ಲಿ ಖಚಿತವಾಗಿ ಸಾರಿ ಬಿಟ್ಟಿಳು. ಚಡ್ಡಿಯ ಗುಂಡಿ ಕಿತ್ತರೂ ಪಿನ್ನು ಹಾಕಿಕೊಂಡು ಓಡಾಡುತ್ತಿದ್ದ  ಪ್ರೈಮರಿ ದಿನಗಳಲ್ಲಿ ನಮಗೆ ಇಂತಹ ಪದವೂ ಮತ್ತದರ ಸಾದ್ಯತೆಯ ಅರಿವೂ ಇರದುದರಿಂದ ಹೆದರಿಕೆಯ ಬದಲು, ವಿಷಯ ಭಲೇ ಮೋಜಿದನೆಸಿತು..&lt;br /&gt;&lt;br /&gt;ಆದರೂ ಬಾಲ್ಯದಿಂದಲೇ ಹುಡುಗಿಯರ ಬಗ್ಗೆ ಸಿಕ್ಕಾಪಟ್ಟೆ ಅಕ್ಕರೆ, ಅಭಿಮಾನ ಇಟ್ಟುಕೊಂಡ ನನಗೇ ಅವಳನ್ನು ನೋಯಿಸಿ ಘನ ಘೋರ ನರಕಕ್ಕೆ ಹೋಗುವ ಮನಸ್ಸಾದರೂ ಬಂದೀತೇ? ಹೀಗಾಗಿ &quot; ಹೌದಾ?&quot; ಎಂದು ರಾಗ ಎಳೆದು &quot; ಪ್ರಳಯ ಅಂದ್ರೆ ಎನಾಗುತ್ತೆ?&quot; ಅಂತ ನನ್ನ ಪೆದ್ದುತನದ ವಿಶ್ವರೂಪ ದರ್ಶನ ಮಾಡಿಸಿದೆ.&lt;br /&gt;&lt;br /&gt;ನಮ್ಮ ಪ್ರತಿಕ್ರಿಯೆ ಕಂಡು ಭಲೇ ಉತ್ಸಾಹಿತಳಾಗಿ ಆಕೆ, ಪ್ರಳಯದ ಬಗ್ಗೆಯೂ, ಆಗಬಹುದಾದ ಬೆಂಕಿ ಮಳೆಯ ಬಗ್ಗೆಯೂ, ಉಕ್ಕಿ ಬರಬಹುದಾದ ಸಮುದ್ರದ ಬಗ್ಗೆಯೂ ಭಲೇ ರಸವತ್ತಾಗಿ ಹೇಳಿ, ಹಂಪೆಯಲ್ಲಿ ಒಂದು ಕಲ್ಲಿನ ಕೋಳಿಯಿದೆಯಂದೂ, ಅದು ಪ್ರಳಯದ ಮುನ್ಸೂಚನೆ ಬಂದಾಗ ಜೀವ ಬಂದು ಕೂಗುತ್ತದೆಯೆಂದೂ ಹೇಳಿ ನಮ್ಮಲ್ಲಿ ಭಾರೀ ಪುಳಕವನ್ನುಂಟು ಮಾಡಿದಳು, ಕೊನೆಗೆ ಪ್ರಳಯದ ಬಗ್ಗೆ ಯಾರೋ ಒಬ್ಬ ಜೋತಿಷಿ ಮೊದಲೇ ಬರೆದಿಟ್ಟಿದಾನೆ ಎಂದೂ ಸಹ ಸೇರಿಸಿದಳು ( ಆ ಪುಣ್ಯಾತ್ಮ ’ನಾಸ್ಟ್ರಡಾಮಸ್’ ಇರಬೇಕೆಂದು ನನ್ನ ಇತ್ತೀಚಿನ ಸಂಶೋದನೆ).&lt;br /&gt;&lt;br /&gt;ಇವಳು ಈ ರೀತಿ ಪುಂಕಾನುಪುಂಕವಾಗಿ ಪುಂಗತೊಡಗಿದರೇ ನಮಗೆ ನಂಬುವುದೋ, ಬಿಡುವುದೋ ಎಂಬ ಸಂದಿಗ್ದ ಪರಿಸ್ಥಿತಿ.ಸ್ವಲ್ಪ ನಾವೇ ಧೈರ್ಯ ತಂದುಕೊಂಡು &quot; ನಿಂಗ್ಯಾರೆ ಇದನ್ನು ಹೇಳಿದ್ದು? &quot; ಅಂತಲೂ ಕೇಳಿ ಬಿಟ್ಟೆ.ಇದನ್ನು ಮೊದಲೇ ಊಹಿಸಿದ್ದಳು ಎಂಬಂತೆ ಪಟ್ಟನೆ &quot; ಪ್ರಳಯದ ಬಗ್ಗೆ ’ತರಂಗ’ದಲ್ಲಿ ಬಂದಿದೆಯೆಂದೂ, ಅವರ ಚಿಕ್ಕಮ್ಮ್ಮ ಅದನ್ನು ಓದಿ ಈ ಮಹತಾಯಿಗೆ ಹೇಳಿದಾರೆಂದು ಹೇಳಿ, ಯಾವುದಕ್ಕೂ ಇರ್ಲಿ ಅಂತ &quot;ನಾನು ಅದನ್ನು ಓದಿದ್ದೀನಿ&quot; ಅಂತಾ ಕೊನೆಗೆ ಸೇರಿಸಿ ಪ್ರಳಯದ ಬಗ್ಗೆ ಅದಿಕೃತ ಸೂಚನೆ ಕೊಟ್ಟುಬಿಟ್ಟಳು. ಪೇಪರು ಓದಲೂ ಸಹಾ ಪಂಚಾಯಿತಿ ಆಶ್ರಯಿಸಿದ್ದ ನಮಗೆ ’ತರಂಗ’ ಪತ್ರಿಕೆ ಅಬ್ಬಿಗೇರಿಯಲ್ಲಿ ಓದಲು ಸಿಗುವುದು ದುರ್ಲಭ ಅನಿಸಿದಾಗ ಅವಳನ್ನೆ  ಆ ಸಂಚಿಕೆಯನ್ನು ಶಾಲೆಗೆ ತರಲು ಮನವಿ ಕೊಟ್ಟು ಬಿಟ್ಟೆವೂ.&lt;br /&gt;&lt;br /&gt; ಅಪರೂಪಕ್ಕೆ ಸಿಕ್ಕ ಇಂತಹ ರುಚಿಕಟ್ಟಾದ ವಿಷಯವನ್ನೂ ನನ್ನ ತಮ್ಮನೊದಿಗೆ ಹಂಚಿಕೊಳ್ಳದಿರಲು ಸಾದ್ಯವೇ?. ಅವತ್ತು ರಾತ್ರಿ ಅಪ್ಪಾಜಿ ಎಲ್ಲಾ ಲೈಟು ಆರಿಸಿ,ಹೊರಗಿನ ಅಗುಳಿ ಹಾಕಿ &quot; ಇನ್ನೂ ಸುಮ್ನ ಮಕ್ಕೋರಿ, ಹೊತ್ತಾತು&quot; ಅಂತ ತಮ್ಮದೇ ಆದ ಶೈಲಿಯಲ್ಲಿ ’ಗುಡ್ ನೈಟ್’ ಹೇಳುವುದನ್ನೆ ಕಾದಿದ್ದ ನಾನು , ಕೂಡಲೇ ತಾಜಾ ’ಪ್ರಳಯ’ದ ರಸಾಯನಕ್ಕೆ ಇನ್ನಷ್ಟು ರುಚಿಗೆ ತಕ್ಕಷ್ಟು ಉಪ್ಪು, ಹುಳಿ, ಖಾರ ಬೆರೆಸಿ ನನ್ನ ತಮ್ಮನ ಮೇಲೆ ಪ್ರಯೋಗಿಸಿದೆ.&lt;br /&gt;ನನ್ನ ತಮ್ಮ ಮೊದಲೇ &quot; ತಾರೆ ಜಮೀನ್ ಪರ್&quot; ಕೇಸಿನ ಹುಡುಗ ಅವ, ಪ್ರಳಯದ ಬಗ್ಗೆ ಗಾಬರಿಯಾಗುವುದು ಬಿಟ್ಟು , ಎನೋ ಒಂತರಾ ನಿರಾಳಗೊಂಡವನಂತೆ ಭಲೇ ಉಮ್ಮೇದಿಯಿಂದ &quot; ಯಣ್ಣಾ! ಇನ್ನು ನಾವೂ ಸಾಲಿಗೆ ಹೋಗುವುದೂ ಮತ್ತು ಮುಂಜೇಲೇ ಎದ್ದು ಓದೋದು ವೇಸ್ಟು, ಎಲ್ಲಾರೂ ಹೆಂಗಿದ್ರು ಸಾಯ್ತಿವೀ&quot; ಅಂತಾ ನಂಗೆ ಅದುವರೆಗೂ ಹೊಳೆಯದ್ದನ್ನ ಹೊಳೆಸಿ,ನನ್ನ ತಲೆಯಲ್ಲೂ ಹೊಸ ಆಸೆ ಬಿತ್ತಿ , ಮುಂಡೆದು ಮಲಗಿಯೇ ಬಿಟ್ಟಿತ್ತು..&lt;br /&gt;&lt;br /&gt;       ಅ ಇಸವಿಯೂ ಬಂತು ,ಆಕೆ ಹೇಳಿದ ಸಮಯವೂ ಬಂದು ಹೋಯ್ತು, ಪ್ರಳಯ ಮಾತ್ರ ಆಗಲೇ ಇಲ್ಲಾ. ಪ್ರಳಯದ ಬಗ್ಗೆ ಎನೇನೋ ಉಹಿಸಿದ್ದ ನಮಗೆ ಭಾರೀ ನಿರಾಸೆ ಆಗಿತ್ತು. ಹಂಪೆಗೆ ಹೋದಾಗ ಅಲ್ಲಿನ ಗೈಡಿಗೆ ಕಲ್ಲಿನ ಕೋಳಿಯ ಬಗ್ಗೆ ಕೇಳಿದ್ದೆ, ಅವಾ ನನ್ನ ಮುಖ ನೋಡಿ ಒಂಥರಾ ನಕ್ಕಿದ್ದ..</content><link rel='replies' type='application/atom+xml' href='http://scpatil.blogspot.com/feeds/1098586937931058593/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/1098586937931058593' title='10 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/1098586937931058593'/><link rel='self' type='application/atom+xml' href='http://www.blogger.com/feeds/7270070547169320163/posts/default/1098586937931058593'/><link rel='alternate' type='text/html' href='http://scpatil.blogspot.com/2008/03/blog-post.html' title='ಮಹಾಪ್ರಳಯ'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><thr:total>10</thr:total></entry><entry><id>tag:blogger.com,1999:blog-7270070547169320163.post-2932117455363000964</id><published>2008-02-25T19:04:00.000-08:00</published><updated>2008-02-26T03:33:15.039-08:00</updated><category scheme="http://www.blogger.com/atom/ns#" term="ಚರ್ಚೆ"/><category scheme="http://www.blogger.com/atom/ns#" term="ಹರಟೆ"/><title type='text'>&quot;ಬಿಗ್&quot; ಎಫ್.ಎಮ್ಮು ಮತ್ತು ಅವರ &quot;ಬಿಗ್(?)&quot; ಐಡಿರಿಯಾಗಳೂ...</title><content type='html'>ಬೆಂಗಳೂರಿನ ನಂ.1 ಚಾನೆಲ್ ಎಂದು ಗಂಟೆಗೊಮ್ಮೆ ಅರಚಿಕೊಂಡು, ತಮ್ಮನ್ನು ತಾವೇ ಸಮಾಧಾನಿಸಿಕೊಳ್ಳುವ ಸ್ವಯಂಘೋಷಿತ ನಂ೧ಗಳಿಗೆ ಕೆಳಗೆ ಹೇಳಿದಂತಹ ಕ್ರಿಯೇಟಿವ್ ವಿಷಯಗಳು &quot;ಎಲ್ಲಿ&quot; ಹೊಳೆಯುತ್ತವೆಯೋ ನಂಗಂತೂ ಗೊತ್ತಿಲ್ಲಾ.&lt;br /&gt;&lt;br /&gt;  ಕಾರಣ ಇಷ್ಟೇ! ಲಾರಿ ಮುಷ್ಕರದ ದಯೆಯಿಂದ ಲೇಟಾಗಿ ಹೋಗುವ ಬಾಗ್ಯಕ್ಕೆ ಖುಷಿ ಪಟ್ಟು ಬೆಳಗ್ಗೆ ಬೆಳಗ್ಗೆ  ಎಫ್.ಎಮ್ಮು  ತಿರುವಿದರೆ ’ಬಿಗ್ ಕಾಫಿ’ಯ ಹರ್ಷ ಚರ್ಚೆಗೆ ಆರಿಸಿಕೊಂಡ ವಿಷಯ &quot; ನೀವು ಯಾರ ಜೊತೆ ’ಮಿಲನ’ ಬಯಸ್ತೀರಾ?&quot; ಅಂತಾ!. ಈ ಹರ್ಷ ಎಂಬ  ಆರ್,ಜೆಗೆ ಬೆಳಗ್ಗೆ ಬೆಳಗ್ಗೆ  ಕಾಫಿ ಹೊತ್ತಿನಲ್ಲಿ ಇಂತಹ ವಿಷಯ ಯಾಕೆ ಹೊಳೆಯಿತೋ ನಾಕಾಣೆ. ಇಂತಹ ಸ್ವಾರಸ್ಯಕರ(?) ವಿಷಯಕ್ಕೆ ನಮ್ಮ ಬಿಗ್ ಕೇಳುಗ ಮಹಾಶಯರಂತೂ ಜೊಲ್ಲೊರಿಸಿಕೊಳ್ಳುತ್ತಾ ಕೊಟ್ಟ ಉತ್ತರಗಳಂತೂ ಇನ್ನೂ &quot;ಕ್ರಿಯೆಟಿವ್&quot; ಆಗಿದ್ದುವು. ಒಬ್ಬ ಪುಣ್ಯಾತ್ಮ ತನ್ನ ತನ್ನ ಮಾಜಿ ಪ್ರೇಯಸಿಯೋಂದಿಗೆ ಮಿಲನ ಬೇಕಾದರೆ, ಇನ್ನೊಬ್ಬ ರಸಿಕ ತನ್ನ ’ಅತ್ತೆ’ಯೊಂದಿಗೆ ಮಿಲನ ಬಯಸ್ತೀನಿ ಅಂತ ಮೇಸೆಜು ಕುಟ್ಟಿದ್ದ, ಅದನ್ನು ಓದಿದ ನಮ್ಮ ಹರ್ಷನಿಗೆ ಭಲೇ ಖುಷಿ. ಒಬ್ಬ &lt;br /&gt;ಆಧುನಿಕ ನಾರಿಮಣಿಗೆ ತನ್ನ &quot;ಲವ್ವರ್&quot; ಜೊತೆ ’ಅದು’ ಬೇಕಂತೆ.. ಇವರ ಭಂಡ ದೈರ್ಯಕ್ಕೆ ಕಂಡು ನಂಗೆ ತುಂಬಾ ಆಶ್ಚರ್ಯ ಆಯ್ತು.. ಇವು ಕೆಲ ಸ್ಯಾಂಪಲ್ಲುಗಳಷ್ಟೆ, ಇನ್ನೂ ಕೇಳಿದರೆ ಕಿವಿ ಹೊಲಸಾದೀತು ಅಂತಾ ’ಹೆಚ್ಚಾಗಿ ಕನ್ನಡ ಹಾಡುಗಳ’ ಚಾನೆಲ್ಲಿಗೆ ವಲಸೆ ಹೋಗಬೇಕಾಯ್ತು..&lt;br /&gt;&lt;br /&gt;  ಮತ್ತೆ ಅದೆ ದಿನ ಸಂಜೆ, ಅದೇ ಬಿಗ್ ನಲ್ಲಿ &quot; ನೋ ಟೆನ್ಸನ್&quot; ನಲ್ಲಿ ದೀಪು ಯವುದೋ ಟೀಚರ್ರಿಗೆ ಕರೆ ಮಾಡಿ, ನಿಮ್ಮ ಸ್ಟೂಡೆಂಟ್ ಒಬ್ಬ ನಿಮ್ಮ ಜೊತೆ ಮಲ್ಪೆ ಟೂರಿಗೆ ಹೋಗಿ ಬಂದಾಗಿನಿಂದ ’ಲವ್’ ಮಾಡುತ್ತಿರುವನೆಂದೂ, ನಾನು ಆ ಹುಡುಗನ ಚಿಕ್ಕಪ್ಪನೆಂದೂ ಕೊಡಬಾರದ &quot;ಟೆನ್ಸನ್&quot; ಕೊಡತೊಡಗಿದ.ಪಾಪ ಆ ಟೀಚರ್ರು ಕಂಗಾಲು.&lt;br /&gt;&lt;br /&gt; ಮಾದ್ಯಮಗಳು ಒಂದು ಸಮುದಾಯದ ಅಭಿಪ್ರಾಯ ರೂಪಿಸುತ್ತವೆ ಅಂತಾರೆ, ಆದ್ರೆ ಇವರು ರೂಪಿಸುತ್ತಿರುವ ಅಭಿಪ್ರಾಯಗಳಾದರೂ ಎಂತವು?. ತೀರಾ ಈ ಮಟ್ಟದ  ಕೀಳು ವಿಚಾರಗಳನ್ನು ಚರ್ಚಿಸುವ ಅಥವಾ ಅಂತಹ ಅಡ್ಡ ಹಾದಿಯಿಂದ &quot;ಟೆನ್ಸನ್&quot; ಕೊಡುವ ದರ್ದಾದರೂ ಏನಿತ್ತು ಅಂತಾ!. ಕನಿಷ್ಟ ಮಟ್ಟದ ಸಾಮಾಜಿಕ ಜಾವಾಬ್ದಾರಿಗಳು ಇವರಿಗೆ ಬೇಡವೆ?. ಎನೇ ಆದರೂ ಸಬ್ಯತೆಯ ಎಲ್ಲೆ ದಾಟುವುದು ನಂಗ್ಯಾಕೋ ಸರಿ ಎನಿಸಲಿಲ್ಲಾ. ಅಷ್ಟಕ್ಕೂ ’ಆ’ ತರದ ವಿಷಯಗಳ ಮೂಲಕ ಇವರು ಸಾಧಿಸ ಹೊರಟಿರುವ ಕ್ರಾಂತಿಯಾದರೂ ಏನು?. ’ಬೇರೆ’ ಎನೋ ಉಪಯೋಗಿಸದೆ ತಲೆ ಉಪಯೋಗಿಸಿ ಯೋಚಿಸಿದರೆ ಚರ್ಚಿಸಲು ಸಾವಿರಾರು ಸಮಸ್ಯೆಗಳಿವೆ, ಸದಭಿರುಚಿಯ ವಿಷಯಗಳಿವೆ.ಎನೋ ಗೊತ್ತಿಲ್ಲಪ್ಪಾ!  ಕ್ರಿಯೇಟಿವಿಟಿ ಸೊಂಟದ ಕೆಳಗೇಯೇ ಹುಟ್ಟಬೇಕಾ? &lt;br /&gt;&lt;br /&gt;ದೀಪು, ದೇವರಾಣೆಗೂ ನಾವು  &quot; ಆ &quot; ಟೈಪಲ್ಲಪ್ಪಾ!!!</content><link rel='replies' type='application/atom+xml' href='http://scpatil.blogspot.com/feeds/2932117455363000964/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/2932117455363000964' title='14 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/2932117455363000964'/><link rel='self' type='application/atom+xml' href='http://www.blogger.com/feeds/7270070547169320163/posts/default/2932117455363000964'/><link rel='alternate' type='text/html' href='http://scpatil.blogspot.com/2008/02/blog-post_25.html' title='&quot;ಬಿಗ್&quot; ಎಫ್.ಎಮ್ಮು ಮತ್ತು ಅವರ &quot;ಬಿಗ್(?)&quot; ಐಡಿರಿಯಾಗಳೂ...'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><thr:total>14</thr:total></entry><entry><id>tag:blogger.com,1999:blog-7270070547169320163.post-94116768053907017</id><published>2008-02-10T20:13:00.000-08:00</published><updated>2008-02-10T21:16:31.023-08:00</updated><category scheme="http://www.blogger.com/atom/ns#" term="ಕನಸು"/><category scheme="http://www.blogger.com/atom/ns#" term="ನನ್ನ ಜಗತ್ತು"/><category scheme="http://www.blogger.com/atom/ns#" term="ಪ್ರೀತಿ"/><title type='text'>ಹೀಗೊಂದು ಹುಚ್ಚು ಬರಹ!</title><content type='html'>ಇನ್ನೂ ಕಾಡುತ್ತಲೇ ಇರುವ ಮುಗಿಯದ ಪ್ರಾತಃ ಕಾಲದ ಸುಂದರ ಸ್ವಪ್ನವೇ,&lt;br /&gt;&lt;br /&gt;     ಸಂಭೋದನೆ ಬಹಳ ಉದ್ದವಾಯಿತು ಎಂಬ ಅರಿವಿದ್ದರೂ, ಅದನ್ನು ಗಿಡ್ದಗೊಳಿಸಿ ’ಬೋನ್ಸಾಯ್’ ಮಾಡಲು ಮನಸ್ಸಿಲ್ಲದೆ ಹಾಗೆ ಕರೆಯುತ್ತಿದ್ದೆನೆ. ಅಸ್ತಿತ್ವವೇ(?) ಇಲ್ಲದ ನಿನ್ನ ಬಗೆಗಿನ ನನ್ನ ಹುಚ್ಚಿಗೂ, ಹೊರಗೆ ಹೊತ್ತಲ್ಲದ ಹೊತ್ತಲ್ಲಿ ಸುರಿಯುವ ಚುಮು ಚುಮು ಮಳೆಗೂ ಎಂಥಹ ದಿವ್ಯ ಸಂಭಂದವೆಂದು ಇನ್ನೂ ಅರ್ಥ ಮಾಡಿಕೊಳ್ಳಲಾಗುತ್ತಿಲ್ಲಾ ಮತ್ತು  ಆ ನೆಪದಿಂದ ಸುಮ್ನೆ ಭಾವುಕನಾಗುವ ನನ್ನ ತೆವಲಾದರೂ ಎಂಥದು ಎಂದು ನಿರ್ಧರಿಸಲಾಗುತ್ತಿಲ್ಲಾ.&lt;br /&gt; &lt;br /&gt;     ಅಷ್ಟಕ್ಕೂ ನಿನ್ನಿಡೆಗಿನ ಒಂದು ನಿರಂತರ ಹುಡುಕಾಟದ ಅಭಿಯಾನದ ಆಯಸ್ಸೇಷ್ಟು?  ಎಂದು ಖಂಡಿತ ನೆನಪಿಲ್ಲಾ, ಅದ್ರೆ ನಿನ್ನ ಬಗೆಗಿನ ತಪನೆ ನಿರ್ಲಜ್ಜಿತವಾಗಿ ಹೆಚ್ಚುತ್ತಲೆ ಹೋಗುತ್ತಿದೆ.ಪ್ರತಿಬಾರಿಯೂ ’ಲವ್ ಲವಿಕೆ’ ’ಈ ಗುಲಾಬಿ ನಿನಗಾಗಿ’ ಓದುವಾಗ ನೀ ಹೀಗಿದ್ದರೆ ಚೆನ್ನ ಅಂದುಕೊಳ್ಳುತ್ತೇನೆ, ಆದರೆ ಇನ್ನೊಂದು ಅಂಕಣ ಓದುತ್ತಲೇ ನೀನು ಹಾಗಿರದೆ, ಹೀಗೆದ್ದರೆ ಇನ್ನೂ ಚೆಂದ ಅಂದುಕೊಳ್ತಿನಿ.ಜಯಂತರ ಕಥೆಗಳಲ್ಲಿನ ಭಾವುಕ ಸ್ತ್ರೀ ಪಾತ್ರಗಳಲ್ಲಿ ನಿನ್ನ ಕಲ್ಪಿಸಿಕೊಳ್ಳಲು ಹೆಣಗಾಡುತ್ತೇನೆ, ರೋಮಾಂಟಿಕ್ ಚಿತ್ರದ ನಾಯಕಿರಲ್ಲಿ ನಿನ್ನ ಹುಡುಕಿ ಪದೆ ಪದೆ ಸೋಲ್ತಿನಿ, ಜಾಹೀರಾತುಗಳಲ್ಲಿ ಬರುವ ಅಂದಗಾರ್ತಿಯರ ಬೆನ್ನು ಬಿದ್ದು, ಅವರಲ್ಲಿ ನಿನ್ನ ಆರೋಪಿಸಿ ಸಮಾಧಾನಗೊಳ್ಳಲೆತ್ನಿಸುತ್ತೆನೆ.&lt;br /&gt;&lt;br /&gt;    ಗಾಂಧಿ ಬಜಾರಿನ ದೇಸಿ ಹುಡುಗಿಯರ ನಗುವಿನಲ್ಲಿ,ಗುಡಿ ಸುತ್ತುವ ದಾವಣಿಗಳ ಚೆಲುವಿನಲ್ಲಿ,BMTC ಬಸ್ಸಿನ ಮುಂದಿನ ಸೀಟುಗಳಲ್ಲಿ, ಕಾಫಿ ಡೆಯ ಮಗ್ಗುಗಳ ಹಿಂದೆ,ಕೈನಿಗಳ ಮೇಲಿನ ಹಲ್ಮೆಟ್ಟುಗಳಲ್ಲಿ ಹುದಿಗಿರುವ ಮುಖಗಳಲ್ಲಿ,ನನ್ನ ಮೋಬೈಲಿನಲ್ಲಿ ಧಾಖಲಾಗುವ ಆಗುಂತುಕ ನಂಬರಿನ ಮೆಸೇಜುಗಳಲ್ಲಿ,ಮಿಸ್ಡ ಕಾಲ್ ಗಳಲ್ಲಿ, ಸಾವಿರಗಟ್ಟಲೇ ಬರುವ ಫಾರ್ವರ್ಡು ಮೇಲುಗಳಲ್ಲಿ, ಪಿ,ವಿ ಆರ್ ನ ಸ್ತಬ್ದ ಥೇಟರುಗಳಲ್ಲಿ ದೃಶ್ಯಗಳಿಗುನವಾಗಿ ಪ್ರತಿಫಲಿಸುವ ಮುಖಗಳ ಮೇಲೆ, ಟ್ರಾಫಿಕ್ಕಿಗೆ ಸಿಕ್ಕಿ ಬಿದ್ದ ಆಟೋವಿನಲ್ಲಿ ಮೀಟರಿನತ್ತ ಕಣ್ಣು ನೆಟ್ಟ ಸ್ಲೀವ್ ಲೆಸ್ ಚೂಡಿಯಲ್ಲಿ ನಿನ್ನ ಹುಡುಕಿ ಹುಡುಕಿ ಸೋಲುತ್ತೇನೆ.ನಿನ್ನ ಚಿತ್ರವನ್ನು ನನ್ನ ಕಲ್ಪನೆಯ ಕ್ಯಾನವಾಸ್ಸಿನಲ್ಲಿ ಹಿಡಿದಿಡಲೂ ಆಗದೇ, ಸುಮ್ಮನಿರಲೂ ಆಗದೆ ಒಂದು ವಿಚಿತ್ರ ಆತಂಕದಲ್ಲಿ ಮತ್ತು ನಿರಾಶೆಯಲ್ಲಿ ದಿನ ನೂಕುತ್ತಿದ್ದೇನೆ.ಸಾವಿರ ಪಾತ್ರಗಳ ಅಚ್ಚಿನಿಂದ ನಿನ್ನ ಅದ್ದಿ ತೆಗೆದರೂ, ನಿನ್ನಲ್ಲಿ ಇನ್ನೂ ಎನೋ ಕೊರತೆ ಅನ್ನಿಸಿ ’ ಪರಿಪೂರ್ಣ’ ಅನ್ನಿವುಸುವುದೇ ಇಲ್ಲಾ, ಎಂಥದೋ ಅತೃಪ್ತಿ ಕಾಡಿ ಮತ್ತೆ ಹೊಸ ಪಾತ್ರ್ದದ ಅನ್ವೇಷಣೆಗೆ ನನ್ನ  ನಾ ದಬ್ಬಿಕೊಳ್ಳುತ್ತೇನೆ.&lt;br /&gt;&lt;br /&gt;     ಪ್ರತಿಬಾರಿ ಕನ್ನಡಿ ಮೂಂದೆ ನಿಂತಾಗಲೂ,ಹೊಸ ಬಟ್ಟೆ ಆರಿಸುವಾಗಲೂ,ಗಡ್ಡ ಕೆರೆದು ಕೆನ್ನೆ ನುಣುಪು ಮಾಡಿಕೊಳ್ಳುವಗಲೂ, ಹೊಸ ಬರಹದ ಖುಷಿಯಲ್ಲೂ,ಎರಡೇ ಎರಡು ದಿನ ಕಸರತ್ತು ಮಾಡಿ ’ಅಬ್ಬ! ಸ್ವಲ್ಪವಾದರೂ ತೆಳ್ಳಗಾದೆ’ ಎಂಬ ಹುಸಿ ಭ್ರಮೆಯಲ್ಲೂ ಸಹ ನಾನು ಇಲ್ಲದ ನಿನ್ನನ್ನು ಮೆಚ್ಚಿಸಲು ಅರಿಯದೆಯೇ ಹೆಣಗಾಡುತ್ತೆನೆ.ನನ್ನ ಭಾವನೆಗಳ ಅಸ್ತಿತ್ವವೇ ನಿನ್ನನ್ನು ಕಲ್ಪಿಸಿಕೊಳ್ಳುವದರಲ್ಲಿ ಇದೆ ಎಂಬಂತೆ ಹುಚ್ಚು ಹುಚ್ಹಾಗಿ ವರ್ತಿಸುತ್ತೆನೆ. ನಿನ್ನ ’ಇರುವು’ ಸುಳ್ಳೂ ನಿಜವೋ ಗೊತ್ತಿಲ್ಲಾ, ನಿನ್ನ ಇರುವಿಕೆಯ ನಂಬಿಕೆಯಲ್ಲಿ ಬದುಕುತ್ತಿರುವ ಮತ್ತು ಸಾದ್ಯಂತ ಸುಳ್ಳೇ ಪುಳಕಗೊಳ್ಳುವ ನನ್ನ ಭಾವುಕ ಜಗತ್ತಿನ ಅಸ್ತಿತ್ವವಂತೂ ನಿತ್ಯ ನಿರಂತರ ಸತ್ಯ. ಅಷ್ಟಕ್ಕೂ ನೀನು ನಿಜವಾಗಿರಬೇಕೆಂಬ ಅನಿವಾರ್ಯತೆಯಾದರೂ ಏನು? ಕಾಣದ ದೇವರನ್ನು &quot;ಸರ್ವವ್ಯಾಪಿ&quot; ಎಂದು ಆರೋಪಿಸಿ ಧನ್ಯರಾಗುವ ಜಗತ್ತಿನಲ್ಲಿ, ನೀನು ಕಲ್ಪನೆಯೋ, ವಾಸ್ತವವೋ ಎಂದು ತಲೇ ಕೆಡಿಸಿಕೊಳ್ಲುವ ಜರೂರತ್ತಾದರೂ ಏನಿದೆ?&lt;br /&gt;&lt;br /&gt;   ಈ ಹುಡುಕಾಟದಲ್ಲೇ ಒಂದು ಸುಖವಿದೆ, ನಿರಂತರ ತಪನೆಯಿದೆ,ಕಾಣದ ಅದ್ರೆ ಅನುಭವಿಸಲುಬಹುದಾದ ಒಂದು ತೀವ್ರ ಉತ್ಕಟತೆಯಿದೆ, ನಿನ್ನ ಬಗೆಗಿನ ತೀರದ ಆರಾಧನಾ ಭಾವವಿದೆ, ತೀರದ ಮೋಹವೆದೆ,ಧುಮ್ಮಿಕ್ಕುವ ಭಾವನಾ ಸೆಳೆತವಿದೆ,ಸಿಹಿಯಾದ ನೋವಿದೆ ಮತ್ತೂ ಕಳೆದುಕ್ಕೊಳ್ಳದ ನಿನ್ನ ಇರುವಿಕೆಗಿನ ತುಂಬು ಭರವಸೆಯಿದೆ. ಈ ಜೀವಕ್ಕೆ ಇಷ್ಟು ಸಾಕಲ್ಲವೇ? ಯಾರಿಗ್ಗೊತ್ತು ಬೆಳಗಿನ ಕನಸುಗಳು ನಿಜವಾಗುತ್ತವೆಯಂತೆ! ಹಾಗೆ ನೀನು ಚಂದಮಾಮದ ಕಥೆಗಳಲ್ಲಿ ಬರುವ  ಏಳು ಮಲ್ಲಿಗೆ ತೂಕದ ರಾಜಕುಮಾರಿಯರಂತೆ ನನ್ನೆಡೆ ನೀನು  ಸಾಗಿ ಬರಬಾರದೇಕೆ? &lt;br /&gt;  &lt;br /&gt;                                                        ಅಂತಹ ಸಿಹಿಸುಳ್ಳಿನ ಚಿಪ್ಪಿನಲ್ಲಿರುವ,&lt;br /&gt;                                                             ಚಿರವಿರಹಿ</content><link rel='replies' type='application/atom+xml' href='http://scpatil.blogspot.com/feeds/94116768053907017/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/94116768053907017' title='8 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/94116768053907017'/><link rel='self' type='application/atom+xml' href='http://www.blogger.com/feeds/7270070547169320163/posts/default/94116768053907017'/><link rel='alternate' type='text/html' href='http://scpatil.blogspot.com/2008/02/blog-post.html' title='ಹೀಗೊಂದು ಹುಚ್ಚು ಬರಹ!'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><thr:total>8</thr:total></entry><entry><id>tag:blogger.com,1999:blog-7270070547169320163.post-5557351972388486696</id><published>2007-12-09T20:12:00.000-08:00</published><updated>2007-12-09T22:17:03.932-08:00</updated><title type='text'>ಚಳಿ ಚಳಿ ತಾಳೆನು ಈ ಚಳಿಯ..</title><content type='html'>ನಮ್ಮೂರಿನಲ್ಲಿ ಆಯಾ ಕಾಲಗಳನ್ನು ಕೆಲ ’ಸ್ಪೆಶಲ್’ ಲಕ್ಷಣಗಳಿಂದ ಗುರುತಿಸಿಬಿಡುತ್ತಾರೆ. ದೀಪಾವಳಿ ಆಸು ಪಾಸಿನಲ್ಲಿ ಉಳ್ಳಾಗಡ್ಡಿ ಜೋರು ಶುರುವಾಗಿಬಿಡುತ್ತೆ,ಜೊತೆಗೆ ಥಂಡಿ ಗಾಳಿಯ ಆಗಮನವೂ ಶುರುವಾಗಿಬಿಡುತ್ತೆ.ಊರ ನಾಯಿಗಳಿಗಿದು ಪ್ರಸ್ಥದ ಕಾಲ.ಅಂತೆಯೇ ಹೆಣ್ಣುನಾಯಿಗಳನ್ನು ಹುಡುಕಿಕೊಂಡು ಗಂಡುನಾಯಿಗಳು ಅಲೆಯುತ್ತಿರುತ್ತವೆ ಮತ್ತು ಅನುಕೂಲವದೆಡೆಯೆಲ್ಲಾ ತಮ್ಮ ರಾಸಲೀಲೆ ಆರಂಭಿಸಿ ನೋಡುಗರಿಗೆ ಮುಜುಗರ ತಂದಿಕುತ್ತವೆ. ಅದೇಕೋ ನಾ ಅರಿಯೆ ಒಮ್ಮಿದೋಮ್ಮೆಲೆ ಹೆಣ್ಣುನಾಯಿಗಳ ಸಂಖ್ಯೆ ಕಡಿಮೆಯಾಗಿ, ಅಳಿದುಳಿದ ’ಪ್ರೇಯಸಿ’ರಿಗಾಗಿ ಗಂಡುನಾಯಿಳ ನಡುವೆ ಪೈಪೋಟಿ ಶುರುವಾಗಿರುತ್ತೆ.ಕೆಲ ಪ್ರಾಣಿವಾದಿಗಳು ಹೆಣ್ಣುನಾಯಿಗಳ ಕಷ್ಟ ನೋಡಲಾಗದೆ ಚಡ್ಡಿ ತೊಡಿಸಿ ಅವುಗಳನ್ನು ಶೋಷಣೆ ಮುಕ್ತರನ್ನಾಗಿಸುವದರ ಜೊತೆಗೆ, ತಮ್ಮ ಈ ಸಾಧನೆಯಿಂದ ಲಭಿಸಬಹುದಾದ ಪುಣ್ಯದ ಲೆಕ್ಕಾಚಾರದಲ್ಲಿ ತೊಡಗಿರುತ್ತಾರೆ.ಮೂಡಗಾಳಿಯ ದೆಸಿಯಿಂದಾಗಿ ಎಲ್ಲರ ಮುಖ ಒಡೆದು, ತುಟಿ ಬಾತು ’ವೆಸ್ಟ ಇಂಡಿಸಿನ’ ಮಾಜಿ ಬೌಲರ್ ’ಕಟ್ನಿ ಆಂಬ್ರೋಸ’ನನ್ನು ನೆನೆಪಿಸತೊಡಗುತ್ತಾರೆ.ನಮ್ಮೂರ ಮನ್ಮಥರು ಹಾಳಾಗುತ್ತಿರುವ ತಮ್ಮ ಡವ್ ಗಳ ತ್ವಚೆಯನ್ನು ಕಂಡು ಮಮ್ಮಲ ಮರುಗುತ್ತಿರುತ್ತಾರೆ.ನಮ್ಮೂರ ವಿಶ್ವಸುಂದರಿಯಾದ ಗೌಡ್ರ ಮಗಳು ಗಂಗಿ ತನ್ನ ಸೌಂದರ್ಯ ಹಾಳಗಿದ್ದಕ್ಕೆ  ಕಾಲೇಜಿಗೆ ರಜೆ ಹಾಕಿ ತಮ್ಮ &quot;ದರ್ಶನ ಸೇವೆ&quot; ವನ್ನು ನಿಲ್ಲಿಸಿ ಬಿಡುತ್ತಾಳೆ. ಊರ ಮದ್ಯದ ಶೆಟ್ಟಿ ಅಂಗಡಿಯಲ್ಲಿ ಆಗಲೇ ಎರಡು ಡಬ್ಬಿ &quot;ವ್ಯಾಸಲಿನ&quot; ಖರ್ಚಾಗಿ, ಈ ಶನಿವಾರ ಗದಗಿಗೆ ಹೋದಾಗ ಇನ್ನೆರಡು ಡಬ್ಬಿ ಆರ್ಡರು ಮಾಡಬೇಕೇಂದು ಶೆಟ್ಟಿ ನೆನೆಪಿಟ್ಟುಕೊಳ್ಳುತ್ತಾನೆ.&lt;br /&gt;&lt;br /&gt;      ಬೇಸಿಗೆಯಲ್ಲಿ ಎಷ್ಟೇ ಬಿಸಿಲಾದರೂ ಡೊಂಟ್ ಕೇರ್ ಮಾಡದೆ ’ಸೂರ್ಯ’ನಿಗೆ ಚಾಲೇಂಜ್ ಮಾಡುವ ನಮ್ಮೂರ ಜನತೆ, ಚಳಿ ಅಂದ್ರೆ ಸಾಕು ಸತ್ತ ಕೀಡಿ ಹುಳುವಂತಾಗುತ್ತಾರೆ. ಅಟ್ಟ ಸೇರಿದ ಸ್ವೇಟರು, ಮಂಕಿ ಕ್ಯಾಪು, ಶಾಲು, ಬೇಸಿಗೆಯಲ್ಲಿ ಹೊಲಿಸಿದ ಕೌದಿ ಎಲ್ಲಾ ಒಮ್ಮೆಲೆ ನೆನಪಾಗತೊಡಗುತ್ತವೆ. ಇಷ್ಟೆಲ್ಲಾ ಇದ್ದರೂ ಚಳಿ ತಡೆಯಲಾಗದ್ದಕ್ಕೆ ಜನ ಬೆಂಗಲೂರಿಗೆ ಉಳ್ಳಾಗಡ್ಡಿ ಮಾರಲು ಹೋದವರ ಹತ್ತಿರ ಮತ್ತು ಗದಗಿಗೆ ನೌಕರಿಗೆ ಹೋಗುವ ’ಗೊರ್ಮೆಂಟು ಮಂದಿ’ಗೆ ಹೊಸ ರಗ್ಗು ತರಲು ಆರ್ಡರು  ಮಾಡತೊಡಗುತ್ತಾರೆ.ಲಿಂಗಭೇಧವಿಲ್ಲದೆ ಸ್ವೇಟರು, ಮಂಕಿ ಕ್ಯಾಪು ಧರಿಸಿದ ನಮ್ಮುರಿನ ಜನತೆ ’ಇಂಗ್ಲೀಷು ಸಿನಿಮಾ’ದಲ್ಲಿನ ಅನ್ಯ ಗ್ರಹ ಜೀವಿಗಳಂತೆ ಭಾಸವಾಗುತ್ತಾರೆ.ಅಸ್ತಮಾ ಇರುವವರ ಪಜೀತಿಯಂತೂ ಯಾರಿಗೂ ಬೇಡ, ಕಂಡಲ್ಲಿ ಕ್ಯಾಕರಿಸಿ ಉಗುಳಿ ಉಳಿದವರ ಕೆಂಗಣ್ಣಿಗೆ ಗುರಿಯಾಗುತ್ತಾರೆ.ಲಕ್ಷ್ಮೆಶ್ವರದಲ್ಲಿ ಮೀನಿನಲ್ಲಿ ಕೊಡುವ ನಾಟಿ ಔಷಧಿಯನ್ನು ನುಂಗಿ ಬಂದು ಮೊದಲಿಗಿಂತ ಈಗ ಕಡಿಮೆ ಎಂದು ತಮ್ಮನ್ನೆ ತಾವು ಸಮಾಧಾನಿಸಿಕೊಳ್ಳುತ್ತಾರೆ.ಇವರ ಲಿಸ್ಟಿಗೆ ಹೊಸ ಸೇರ್ಪಡೆ ಎಂದರೆ &quot;ಚಿಕೂನ ಗುನ್ಯ&quot; ಪೀಡಿತರು. ಇವರ ಕೃಪೆಯಿಂದಾಗಿ ಊರ ಮಧ್ಯದ &quot;ಸಂಜೀವೀನಿ ಕ್ಲಿನಿಕ&quot;ನ ಡಾಕ್ಟ್ರು ಚಳಿಗಾಲದಲ್ಲಿ ಬ್ಯುಸಿಯೋ ಬ್ಯುಸಿ.&lt;br /&gt;&lt;br /&gt;      ಚಳಿಗಾಲ ನಮ್ಮೂರ ದೇವರನ್ನೂ ತಾಗದೆ ಬಿಡುವುದಿಲ್ಲಾ. ದ್ಯಾಮವ್ವನ ಗುಡಿಯ ಪೂಜಾರಪ್ಪನಿಗೆ ಅಸ್ತಮಾ ಇರುವುದರಿಂದ ಗ್ರಾಮದೇವತೆಗೆ ಪೂಜೆಯಾಗುವುದು ಬಿಸಿಲು ಬಿದ್ದ ಮೇಲೆಯೆ.ಅಲ್ಲದೆ ಐದು ಗಂಟೆಗೆ ಎದ್ದು ಗಂಟಲು ಕಿತ್ತು ಹೋಗುವಂತೆ &quot; ಅಲ್ಲ್ಲಾ ಹು ಅಕ್ಬರ&quot; ಅಂತ  ಅರಚುವ ಮುಲ್ಲಾನ ನೆಗಡಿ ಚಳಿಗಾಲ ಮುಗಿಯುವ ತನಕ ಬಿಡುವುದೇ ಇಲ್ಲಾ.ಅಲ್ಲಿಯವರೆಗೂ ಅವನ ಮೈಕಿಗೂ ರಜೆ, ಜೊತೆಗೆ ಅಲ್ಲಾನಿಗೂ ಲೇಟಾಗಿ ಏಳುವ ಭಾಗ್ಯ.ದೇವನು ದೇವತೆಗಳ ಪಾಡೇ ಹೀಗಾದರೆ ನಮ್ಮಂತಹ ನರ ಮನುಷ್ಯರ ಪಾಡೇನು?. ಮೊದಲೇ ಹುಟ್ಟು ಸೊಮಾರಿಗಳಾದ ನಮ್ಮಂತವರಿಗೆ ಚಳಿಗಾಲದ ನೆಪದಲ್ಲಿ ಇನ್ನೂ ಲೇಟಾಗಿ ಎಳುವ ಭಾಗ್ಯ ಮತ್ತು ಯಾವುದೋ ನೆಪ ಒಡ್ಡಿ ಜಳಕ ತಪ್ಪಿಸುವ ಸುವರ್ಣ ಅವಕಾಶಕ್ಕಾಗಿ ನಾವು ಕಾದು ಕುಳಿತ್ತಿರುತ್ತೇವೆ. ಅವರಿವರ ಹೊಲದಲ್ಲಿ ಕದ್ದು ಶೇಂಗಾ ಬಳ್ಳಿ ಕಿತ್ತು, ಬೀಡಿ ಜಗ್ಗುವವರಿಂದ ಬೆಂಕೆ ಪೊಟ್ಟಣ ಬೇಡಿ ತಂದು , ಶೇಂಗಾ ಸುಟ್ಟು ತಿಂದರಂತೂ ಪರಮಸುಖ.ಮನೆಯಲ್ಲಿ ಪದೆ ಪದೆ ಚಹಾ ಕೇಳಿ ಕ್ಯಾಕರಿಸಿ ಉಗುಳಿಸಿಕೊಳ್ಳುದಂತೂ ಮಾಮುಲಿನ ವಿಚಾರ.ಚಹದಂಗಡಿಯ ರಂಗನ ದುಕಾನಿನ ಚಹಾದ ಕಿತ್ತಲಿಯ ಕೆಳಗಿನ ಸ್ಟೋವಿನ ಫ್ಲೆಮು ದಿನವಿಡಿ ಆರುವುದೇ ಇಲ್ಲಾ.&lt;br /&gt;&lt;br /&gt;        ಇನ್ನೂ ಕಾಲೇಜಿಗೆ ಹೋಗುವ ನಮ್ಮ ಕುಲಭಾಂದವರಂತೂ ಮುಂಜಾನೆಯ ಕ್ಲಾಸಿಗೆ ಹೋದರೆ ದ್ಯಾಮವ್ವ ಶಾಪ ಕೊಟ್ಟಾಲೆಂದು ಹೆದರಿ ಆ ಕಡೆ ಹೋಗುವುದೇ ಇಲ್ಲ್ಲಾ. ಅದ್ರೂ ಕಾಲೇಜಿ ಕ್ಯಾಂಟಿನಿಗೆ ಬಂದು ದಮ್ಮು ಎಳೆಯುತ್ತಲೋ ಅಥವಾ ನಮ್ಮ &quot;ಉತ್ತರ ಕರ್ನಾಟಕ&quot;ದ ಹೆಮ್ಮೆಯಾದ ’ಗುಟಖಾ’ ಜಗಿಯುತ್ತಲೋ ತಮ್ಮ ಕಷ್ಟ ಸುಖ ಹಂಚಿಕೊಳ್ಳುವುದರೊಂದಿಗೆ ಕಾಲೇಜಿಗೆ ಬರದೇ ಇರುವ ಹುಡುಗಿಯರ ಗೈರು ಹಾಜರಾತಿಗೆ ಕಾರಣ ಹುಡುಕುವ ಸತ್ಕಾರ್ಯದಲ್ಲಿ ತೊಡಗಿರುತ್ತಾರೆ. ಈ ಕ್ಯಾಂಟಿನಿಗೆ ವಿಧ್ಯಾರ್ಥಿನಿಯರಿಗೆ ಮಾತ್ರ ಅಘೋಷಿತ ನಿರ್ಬಂಧ.ಇದನ್ನು ಮೀರುವ ’ಎದೆಗಾರಿಕೆ’ಯ ಹುಡುಗಿ ಇನ್ನೂ ಕಾಲೇಜಿಗೆ ಬಂದಿಲ್ಲಾ ಎಂದುದೆ ನಮ್ಮ ಹುಡುಗರ ಚಿಂತೆಗೆ ಕಾರಣ.ಸಿನಿಮಾದಲ್ಲಿ ತೋರಿಸುವ ಕಾಲೇಜು ಕ್ಯಾಂಟಿನನ್ನು ನೆನೆದು ತಮ್ಮ ದುರ್ವಿಧಿಯನ್ನು ಶಪಿಸುತ್ತಿರುತ್ತಾರೆ. ಇನ್ನು ಹೈಸ್ಕೂಲು, ಪ್ರೈಮರಿ ಹುಡುಗರಿಗೆ ಚಳಿಗಾಲದ ಶನಿವಾರವೆಂದರೆ ಸಾಕು ಭಯ ಬೀಳುತ್ತಾರೆ.ಪಿಟಿ ಮಾಸ್ತರಿನ ಡ್ರಿಲ್ ನ ಕಿರಿಕಿರಿಯ ಜೊತೆಗೆ, ಚಳಿಯಲ್ಲಿ ಬೀಳುವ ಏಟಿನ ಚುರುಕು ಇನ್ನೂ ಜಾಸ್ತಿ ಎಂಬುದು ಅವರ ಸಂಕಟ.ಇವರಲ್ಲೂ ಕೆಲ ಚಾಲಾಕು ಮುಂಡೆವು ಅಲ್ಲಲ್ಲಿ ಬಿದ್ದಿರುವ ಚಿಂದಿ ಹಾಳೆಗಳನ್ನೂ ಮತ್ತು ಕಚ್ಚ್ಸಾದಲ್ಲಿನ ಶುದ್ಧ ಬರಹದ ಹಾಳೆಗಳನ್ನೂ ಒಟ್ಟುಗೂಡಿಸಿ ಬೆಂಕಿ ಹಚ್ಚಿ ಚಳಿಯನನ್ನು ಒಡಿಸುವದರ ಜೊತೆಗೆ ತಮ್ಮ ಡವ್ ಗಳನ್ನೂ ಇಂಪ್ರೆಸ್ ಮಾಡುತ್ತಾರೆ.&lt;br /&gt;&lt;br /&gt;  ಬೆಂಗಳೂರಿಗೆ ಬಂದು ವರ್ಷಗಳೇ ಅದರೂ ಇಲ್ಲಿಯ ಚಳಿಗೆ ಹೊಂದಿಕೊಳ್ಳಲಾಗುತ್ತಿಲ್ಲ್ಲಾ ಮತ್ತು ಆ ನೆಪದಲ್ಲಿ ನಮ್ಮೂರಿನ ಹ್ಯಾಂಗೋವರಿನಿಂದ ಹೊರಬರಲೂ ಅಗುತ್ತಿಲ್ಲಾ. ಕಳೆದ ವಾರದ ಮೂರುದಿನಗಳ ಚಳಿಯಲ್ಲಿ ತಲೆಬಿಸಿ ಮಾಡಿಕೊಂಡಿದ್ದಕ್ಕೆ ಇದೆಲ್ಲಾ ನೆನಪಾಯ್ತು.</content><link rel='replies' type='application/atom+xml' href='http://scpatil.blogspot.com/feeds/5557351972388486696/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/5557351972388486696' title='21 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/5557351972388486696'/><link rel='self' type='application/atom+xml' href='http://www.blogger.com/feeds/7270070547169320163/posts/default/5557351972388486696'/><link rel='alternate' type='text/html' href='http://scpatil.blogspot.com/2007/12/blog-post_09.html' title='ಚಳಿ ಚಳಿ ತಾಳೆನು ಈ ಚಳಿಯ..'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><thr:total>21</thr:total></entry><entry><id>tag:blogger.com,1999:blog-7270070547169320163.post-2071934725291537154</id><published>2007-12-02T21:23:00.000-08:00</published><updated>2008-12-11T17:26:47.239-08:00</updated><category scheme="http://www.blogger.com/atom/ns#" term="ನನ್ನ ಜನ"/><category scheme="http://www.blogger.com/atom/ns#" term="ನನ್ನೂರು"/><title type='text'>ಅಬ್ಬಿಗೇರಿ ಎಕನಾಮಿಕ್ಸು ಮತ್ತು ಉಳ್ಳಾಗಡ್ಡಿ..</title><content type='html'>&lt;a href=&quot;https://blogger.googleusercontent.com/img/b/R29vZ2xl/AVvXsEjlF6r6-LsEs7wWh-tXwegrWS-V0OuWfkTRJibVy4ynHFM5QtwQiF01i99rUZ7GSWn_w-5CkmsD_6ienlmeG_27UhXn75zh3NOBSCU_o5CHPQe3LkjfhZx-HTfuW_Zk5Z8EEwV80lg-2Mo/s1600-r/2005110501691301.jpg&quot;&gt;&lt;img style=&quot;display:block; margin:0px auto 10px; text-align:center;cursor:pointer; cursor:hand;&quot; src=&quot;https://blogger.googleusercontent.com/img/b/R29vZ2xl/AVvXsEhguhOL6RBFNI9jqA9w9i4JD9QnA2d0IGSnlJWr3HAsmT4MwzflxkKsu3FuZ15FIPIxr6NZiZt4sTKJAqbpAn6g7S5lx0Z5jVVGJZ3hcWNtX4Au8xYqcxBqSEkxQJvS-VQru-ZIqyKx9zM/s320/2005110501691301.jpg&quot; border=&quot;0&quot; alt=&quot;&quot;id=&quot;BLOGGER_PHOTO_ID_5139668762833673810&quot; /&gt;&lt;/a&gt;&lt;br /&gt;&lt;br /&gt;&lt;br /&gt; ನೀವೊಮ್ಮೆ ನವೆಂಬರ್,ಡಿಸೆಂಬರ್ ಗಳಲ್ಲಿ ಅಬ್ಬಿಗೇರಿಗೆ ಬಂದು ನೋಡಬೇಕು, ಎಲ್ಲೆಲ್ಲಿ ಬಯಲು ಜಾಗವಿರೊತ್ತೋ ಮತ್ತು ಎಲ್ಲೆಲ್ಲಿ ಸಾದ್ಯವೋ, ಅಲ್ಲೇಲ್ಲಾ ಉಳ್ಳಾಗಡ್ಡಿ ರಾಶಿ ಸುರುವಿರುತ್ತಾರೆ.ಗೌಡರ ಹತ್ತಿ ಜೀನಿನ ಖಾಲಿ ಜಾಗ, ಊರ ಮುಂದಿನ ಜಿಡ್ಡಿಯ ಬಳಿ, ಅದೂ ಹೋಗ್ಲಿ ದ್ಯಾಮವ್ವನ ಗುಡಿಯ ಮೂಂದಿನ ಕಿರುಜಾಗದಲ್ಲೂ ಬರೀ ಉಳ್ಳಾಗಡ್ಡಿಯ ಆರ್ಭಟವೇ ಅರ್ಭಟ.ಅದೋಂಥರ ವಿಚಿತ್ರ ಲೋಕವೇ ಉಳ್ಳಾಗಡ್ಡಿ ಸೀಜನ್ನಿನಲ್ಲಿ ನಮ್ಮೂರಿನಲ್ಲಿ ತೆರೆದುಕೊಂಡಿರುತ್ತದೆ.ಇಂತಿಪ್ಪ ಉಳ್ಳಾಗಡ್ಡಿಯ ರಾಶಿಯ ಸುತ್ತಲೂ ಗಡ್ದೆಯನ್ನು ಅದರ ತಪ್ಪಲಿನಿಂದ ಪ್ರತ್ಯೇಕಿಸಲು ಈಳಿಗೆಮಣೆ  ಕೈಲಿ ಹಿಡಿದು ಕೂತ ಕೆಲಸದ ಹೆಂಗಸರು ಸೆನ್ಸಾರಿನ ಭಯವಿಲ್ಲದೆ ಧಾರಾಳವಾಗಿ ಸಂಸ್ಕ್ರತ ಪದಗಳನ್ನು ಬಳಸಿ ಹರಟತೊಡಗಿರುತ್ತಾರೆ.ಆದಷ್ಟು ಬೇಗ ಲೋಡ್ ಮಾಡಿ ಮಾರ್ಕೆಟ್ಟಿಗೆ ಕಳಿಸುವ ತರಾತುರಿಯಲ್ಲಿರುವ ಉಳ್ಳಾಗಡ್ಡಿ ಮಾಲೀಕರು ರಾತ್ರಿಯಾದರೂ ಎಲ್ಲಿಂದಲೋ ವೈರೆಳೆದು ತಾತ್ಕಾಲಿಕ ಬೆಳಕಿನ ವ್ಯವಸ್ಥೆ ಮಾಡಿ ಈ ಹೆಂಗಸರ ಕಾರ್ಯ ಮತ್ತು ಹರಟೆಗೆ ಭಂಗ ಬರದಂತೆ ನೋಡಿಕೊಳ್ಳುತ್ತಾರೆ. ಮಧ್ಯೆ ಮಧ್ಯೆ ನಿದ್ದೆ ಓಡಿಸಲು ಬೇಡಿಕೆ ಅನುಸಾರ ಎಲಿ,ಅಡಿಕೆ ,ತಂಬಾಕು ಅಥವಾ ಚಹಾದ ಪೂರೈಕೆಯೂ ಇರುತ್ತದೆ. ಇವರೊಂದಿಗೆ ಉಳ್ಳಾಗಡ್ಡಿಗಳನ್ನು ಗಾತ್ರಾನುಸಾರ ಪ್ರತ್ಯೇಕಿಸಿ ಚೀಲಕ್ಕೆ ತುಂಬಲು ಚಿಣ್ಣರ ಪಡೆ ಸನ್ನದ್ಧವಾಗಿರುತ್ತದೆ ಮತ್ತು ಬಿಸಾಕಿದ ಉಳ್ಳಾಗಡ್ಡಿ ಸಿಪ್ಪೆಗಳಿಗಾಗೆ ಮತ್ತು ಅದರ ತಪ್ಪಲಿಗಾಗಿ ದನಗಳು ಅಲ್ಲೇ ಸುಳಿದಾಡುತ್ತಿರುತ್ತವೆ. ಅದರಿಂದಾಗಿ ಆ ಸೀಜನ್ನಿನಲ್ಲಿ ಎಲ್ಲರ ಮನೆಯ ಹಾಲು ಮತ್ತು ಅದರಿಂದ ಮಾಡಿದ ಚಹಾವು &quot;ಉಳ್ಳಾಗಡ್ಡಿ ಫ್ಲೇವರ್&quot; ಸೂಸುತ್ತಿರುತ್ತವೆ. ಹಗಲಿಗೂ ರಾತ್ರಿಗೂ ವ್ಯತ್ಯಾಸವೇ ತಿಳಿಯದಂತೆ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ, ಹೀಗಾಗಿ ಕೆಲ &quot; ಪತಿ, ಪತ್ನಿ ಔರ್ ವೋ&quot; ಕಥೆಗಳಿಗೂ ಉಳ್ಳಾಗಡ್ಡಿ ಸೀಜನ್ನು ತಿಳಿಯದೆ ಕಾರಣವಾಗಿಬಿಟ್ಟಿರುತ್ತೆ.&lt;br /&gt;&lt;br /&gt;    ನಮ್ಮೂರಿನ ಜನರ ಬಾಯಲ್ಲಂತೂ ಬರೀ &quot; ಗೌಡ್ರ, ನಿಮ್ಮವು ಎಷ್ಟು ಪಿ,ಸಿ ಆದ್ವು?&quot; &quot;ನಿಂಗಪ್ಪ ಈ ವರ್ಷ ಚಾನ್ಸು ಹೊಡೆದ ನೊಡಪಾ&quot; &quot;ಇವತ್ತು ಎಷ್ಟು ಲಾರಿ ಲೋಡಾಗಿವೆ?&quot; &quot; ರೇಟು ಇನ್ನೂ ಏರುತ್ತೆ ನೊಡ್ತಾ ಇರೀ&quot; &quot; ಥೂ ಈ ಆಳು ಸುಳೆಮಕ್ಳುದು ಹಡಿಬಿಟ್ಟಿ ವ್ಯವಹಾರ ಜಾಸ್ತಿ ಆಯ್ತು&quot; ಇತ್ಯಾದಿ ಮಾತುಗಳು ಸರ್ವೇಸಾಮಾನ್ಯವಾಗಿರುತ್ತೆ.&lt;br /&gt;&lt;br /&gt;    ಆದ್ರೇ ಒಂದಂತೂ ನಿಜ, ಈ ಸೂಳೆಮಗನ ಉಳ್ಳಾಗಡ್ಡಿ ರೇಟು ಮಟಕಾ ನಂಬರಿದ್ದ ಹಾಗೇ, ಒಂದು ದಿನ ಇದ್ದುದು ಇನ್ನೊಂದು ದಿನ ಇರುವುದೇ ಇಲ್ಲಾ. ಭಲೇ ರಿಸ್ಕಿನ ಜೂಜನ್ನು ನಮ್ಮೂರಿನ ರೈತರು ಪ್ರತಿ ವರುಶವೂ ಆಡುತ್ತಲೇ ಇರುತ್ತಾರೆ.ಏನೇ  ಆದರೂ ನಮ್ಮೂರಿನ ರೈತರಿಗೆ ಉಳ್ಳಾಗಡ್ಡಿ  ಮೇಲಿನ ನಂಬಿಕೆ, ನಿಷ್ಠೆ, ಪ್ರೀತಿ ಕಡಿಮೆಯಾಗಿಲ್ಲಾ ಅನ್ನುವುದೇ ಸೋಜಿಗ.ನಿಮಗೆ ನೆನಪಿರಬೇಕು ಹಿಂದೊಮ್ಮೆ ವಾಜಪೇಯಿ ಪ್ರಧಾನಿಯಾಗಿದ್ದಾಗ ಉಳ್ಳಾಗಡ್ಡಿ ಬೆಲೆ ಗಗನಕ್ಕೇರಿ ಸರಕಾರವೇ ಉರುಳುವ ಮಟ್ಟಕ್ಕೆ ಬಂದಾಗ,ನಮ್ಮೂರಿನ ಜನತೆ ತಾವು ಬೆಳೆಯುವ ಉಳ್ಳಾಗಡ್ಡಿಗಿರುವ ಪವರ್ ಕಂಡು ಹಿರಿಹಿರಿ ಹಿಗ್ಗಿದ್ದರು. ಉಳ್ಳಾಗಡ್ಡಿಗೆ ಸರಕಾರ ಉರುಳಿಸುವ ಶಕ್ತಿ ಇದೆ ಎಂಬ ಭಾವವೇ ನಮ್ಮೂರಿನ ರೈತ ಸಮುದಾಯಕ್ಕೆ ಇನ್ನಷ್ಟು ಉಳ್ಳಾಗಡ್ಡಿ ಬೆಳೆಯುಲು ಪ್ರೇರಣೆ ನೀಡಿತ್ತು. ನಿಮಗೆ ಹೇಳ್ತಿನಿ ಆ ವರ್ಷ ನಮ್ಮುರಿನ ರೈತರು ಉಳ್ಳಾಗಡ್ಡಿ  ರೇಟಿನೊಂದಿಗೆ ತಾವೂ ಆಕಾಶಕ್ಕೇರಿಬಿಟ್ಟಿದ್ದರು. ಪ್ರತಿಯೊಬ್ಬನ ಮನೆಯ ಮುಂದೆಯೂ &quot;ಹಮಾರ ಬಜಾಜ&quot;, ಆ ವರುಶ ಮದುವೆ ಮಾಡಿಕೊಟ್ಟ ಹೆಣ್ಣುಮಕ್ಕಳ ಮೈತುಂಬ ಬಂಗಾರ, ಗಣೇಶ ಬೀಡಿ ಸೇದಲೂ ಉದ್ರಿ ಕೇಳುತ್ತಿದ್ದ ಚಪರಾಸಿಗಳ ತುಟಿಯ ಮೇಲೆ ಕಿಂಗು ಸೀಗರೇಟು, ಕಂಟ್ರಿ ಕುಡಿಯುತ್ತಿದ್ದವರೂ ಗದಗಿಗೆ ಹೋಗಿ &quot;DSP&quot; ಏರಿಸಿ ಬರತೊಡಗಿದರು, ಆಶ್ರಯ ಯೋಜನೆಗಳ ಮನೆಯಲ್ಲೂ ಕಲರ್ ಟಿವ್ಹಿ ಮತ್ತು ಟೇಪ್ ರೇಕಾರ್ಡರ್ರು ಮತ್ತು &quot; ತಪ್ಪಾ? ಪ್ರೀತ್ಸೊದ್ ತಪ್ಪಾ?&quot; ಅಂತ ಅರಚುವ ರವಿಚಂದ್ರನ್ ಹಾಡುಗಳು ಕೇಳಿಬರತೊಡ್ಗಿದ್ದವು. ಇನ್ನೊಂದೆಡೆ ದಲ್ಲಾಳಿಗಳು ನಮ್ಮೂರಿನ ರೈತರನ್ನು ಹುಡುಕಿಕೊಂಡು ಮನೆಬಾಗಿಲಿಗೆ ಬಂದು ವ್ಯವಹಾರ ಕುದುರಿಸತೊಡಗಿದರು. ಇನ್ನೂ ಬೇಂಗಳೂರಿಗೆ ಲಾರಿ ಒಯ್ದ ರೈತರಿಗಂತೂ ದಲ್ಲಾಳಿಗಳಿಂದ ರಾಜೋಪಚಾರ;ರೈತ ಭವನದ ಸೆಕ್ಯುರಿಟಿಯೂ ಭರ್ಜರಿ ಸೆಲ್ಯುಟು ಕುಟ್ಟತೊಡಗಿದ್ದ. ಇದೆಲ್ಲಾ ಕಂಡು,ಅನುಭವಿಸಿದ ನಮ್ಮೂರಿನ ರೈತ ಧಣಿಗಳ ಲೆವೆಲ್ಲ್ಲೆಬದಲಾಗತೊಡಗಿತ್ತು.ಉಳ್ಳಾಗಡ್ಡಿ ಬೆಳೆದವರೆಲ್ಲರೂ ತಮ್ಮ ನಸೀಬಿಗೆ ಬೀಗಿದ್ದೇ ಬೀಗಿದ್ದು.ಉಳ್ಳಾಗಡ್ಡಿ ಮಾರಲು ಬೆಂಗಳೂರಿಗೆ ಹೋಗೆ ಬಂದ ಜನ ತಮ್ಮ ಯಾತ್ರೆಯ ಜೊತೆಗೆ ಉಳ್ಳಾಗಡ್ಡಿ ಮಾರಿ ಬಂದ ಹಣವನ್ನು ತಮ್ಮ ಅಂಡರವೇರಿನಲ್ಲೋ, ಹಳೆಯ ಚಾದರದಲ್ಲೋ ಮುಚ್ಚಿಟ್ಟು ಜೋಪಾನವಾಗಿ ಕಳ್ಳರಿಂದ ಪಾರಾದ ರೋಚಕ ಕಥೆಯನ್ನು ಉಪ್ಪು ಖಾರ ಹಾಕಿ  ಹೇಳುತ್ತಿದ್ದರೆ ಉಳಿದವರ ಮುಂದೆ ಹೇಳುತ್ತಿದ್ದವ ಸಲ್ಮಾನಖಾನ್ ಆಗಿಬಿಡುತ್ತಿದ್ದ. &lt;br /&gt;&lt;br /&gt;   ಮುಂದೆ ನಡೆದಿದ್ದೆ ನಮ್ಮೂರ ರೈತರ ಅರ್ಧ ರಾತ್ರೀಲಿ ಕೊಡೆ ಹಿಡಿಯುವ ಕಾಯಕ.ಯಾವುದೋ ಮಹಾಶಯ &quot;ಬನಶಂಕರಿ&quot;ಗೆ ಬಂಗಾರದ ಉಳ್ಳಾಗಡ್ಡಿ ದೇಣೆಗೆ ನೀಡಿದ ಪ್ರಹಸನವೂ ನಡೆದು ಹೋಯಿತು. ಅದು ಹಾಳಾಗ್ಲಿ ನಮ್ಮೂರಲ್ಲೆ ಉಳ್ಳಾಗಡ್ಡಿ ದೇವಸ್ಥಾನ ನಿರ್ಮಿಸುತ್ತ್ತಾರೆ ಎಂಬ ತಲೆಬುಡವಿಲ್ಲದ ಗಾಳಿಸುದ್ದಿಯೂ ಸೇರಿಕೊಂಡು ಉಳ್ಳಾಗಡ್ಡಿಗೆ ದೈವತ್ವವನ್ನು ಆರೋಪಿಸುವ ಸತ್ಕಾರ್ಯವೂ ನಡೆಯಿತು, ಹೀಗಾಗಿ ’ಉಳ್ಳಾಗಡ್ಡಿ’ ಅಂದ್ರೆ ನಮ್ಮೂರ ಜನಕ್ಕೆ ಭಯ ಭಕ್ತಿ ಉಕ್ಕತೊಡಗಿತ್ತು.ಆ ವರ್ಷ ನಡೆದ ಪಂಚಾಯಿತಿ ಚುಣಾವಣೆಯಲ್ಲಿ ಉಳ್ಳಾಗಡ್ಡಿ ಯನ್ನು ಚುನಾವಣಾ ಚಿಹ್ನೆಯಾಗಿ ಪಡೆಯಲು ನಮ್ಮೂರಿನ ರೈತರ ಧುರೀಣರ ನಡುವೆ ಪೈಪೋಟಿ ಶುರುವಾಗಿತ್ತು.ಕೊನೆಗೆ  ನಮ್ಮೂರಿನ ರೈತರ ಶ್ರೀಮಂತಿಕೆ &quot;ಮಲಪ್ರಭಾ ಗ್ರಾಮೀಣ ಬ್ಯಾಂಕಿ&quot;ನವರ ಕಣ್ಣು ಕುಕ್ಕಿ ಒಂದು ಶಾಖೆಯನ್ನು ಅಗಸೆ ಬಾಗಿಲಿನಲ್ಲಿ ತೆರೆದೆ ಬಿಟ್ಟರು ಮತ್ತು ಕಳ್ಳರ ಭಯದಿಂದ ನಮ್ಮೂರಿಗೆ ರಾತ್ರಿ ಡ್ಯೂಟಿಗೆ ಇಬ್ಬರು ಪೋಲಿಸರೂ ಬರತೊಡಗಿದ ಮೇಲೆ ನಮ್ಮ ಊರಿನ ಖದರ್ರೆ ಬದಲಾಗತೊಡಗಿತ್ತು.&lt;br /&gt;&lt;br /&gt;    ಮುಂದೆ ಶುರುವಾಗಿದ್ದೆ ಕಹಾನಿ ಮೇ ಟ್ವಿಸ್ಟ. ಮುಂದಿನ ಹಂಗಾಮಿನಲ್ಲಿ ಎಲ್ಲಾ ಹಿರಿ ಕಿರಿ ರೈತರು ಉಳಿದ ಎಲ್ಲಾ ಬೆಳೆಗಳನ್ನು ಬಿಟ್ಟು ಉಳ್ಳಾಗಡ್ಡಿಯನ್ನು ಮಾತ್ರ ಬಿತ್ತತೊಡಗಿದ್ದರು.ತುಟ್ಟಿಯ ಯೂರಿಯಾ ತಂದು ಸುರಿದದ್ದೆ ಸುರಿದದ್ದು,ಮೇಲಿಂದ ಮೇಲೆ ಕಳೆ ಕಿತ್ತು ಮಕ್ಕಳಂತೆ  ಉಳ್ಳಾಗಡ್ಡಿ ಸಸಿಗಳನ್ನು ಪೋಷಿಸಿದ್ದಕ್ಕೆ ಉಳ್ಳಾಗಡ್ಡಿ ಕೈ ಬಿಡಲಿಲ್ಲಾ. ಎಲ್ಲರ ಹೊಲದಲ್ಲೂ ಬಂಪರ್ ಬೆಳೆ. ಯಡವಟ್ಟು ಆಗಿದ್ದೆ ಇಲ್ಲಿ, ಅತಿ ಆದರೆ ಅಮೃತವೂ ವಿಷ ಅಂತೆ, ಹಾಗೇಯೇ ಆ ವರ್ಷ ಉಳ್ಳಾಗಡ್ಡಿ ರೇಟು ಪಾತಾಳ ಕಂಡಿತ್ತು. ಅದರೂ ದೀಪಾವಳಿ ಕಳೆದ ಮೇಲೆ ರೇಟು ಬಂದೇ ಬರುತ್ತೆ ಎಂಬ ನಂಬಿಕೆಯಲ್ಲಿ ಉಳ್ಳಾಗಡ್ಡಿ ಕಿತ್ತು ಗುಡ್ಡೆ ಹಾಕತೊಡಗಿದರು.ಮೊದಲೆಲ್ಲಾ ಮನೆ ಬಾಗಿಲಿಗೆ ಬಂದು ಚೌಕಾಸಿ ಆರಂಭಿಸುತ್ತಿದ್ದ ದಲ್ಲಾಳಿಗಳು ನಮ್ಮೂರಿನ ಕಡೆ ತಲೆ ಹಾಕಿ ಮಲಗುವದನ್ನೆ ಬಿಟ್ಟಿದ್ದರು. ಆಗಲೇ ನಮ್ಮೂರಿನ ರೈತರ ಪಸೆ ಆರತೊಡಗಿತ್ತು. ಎಕರೆಗೆ ಸಾವಿರಾರು ಖರ್ಚು ಮಾಡಿದ ಹೊಟ್ಟೆಯೊಳಗಿನ ಸಂಕಟ ಪ್ರತಿಭಟನೆ ರೂಪು ಪಡೆದು, ಉಳ್ಳಾಗಡ್ಡಿಯನ್ನು ರಸ್ತೆಯಲ್ಲೆ ಸುರುವಿ, ಸರಕಾರಿ ಬಸ್ಸು ನಿಲ್ಲಿಸಿ &quot; ಅಬ್ಬಿಗೇರಿ ರೈತರಿಂದ ಉಳ್ಳಾಗಡ್ಡಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಉಗ್ರ ಹೋರಾಟ. ದಿ||......... &quot; ಅಂತ ಬಸ್ಸಿನ ಏರಡೂ ಕಡೆ ಬರೆಸಿ &quot;ಉಗ್ರ ಓರಾಟ&quot; ಶುರು ಮಾಡಿದರೂ ಉಳ್ಳಾಗಡ್ಡಿ ಚಿಹ್ನೆಯಿಂದಲೇ ಅರಿಸಿ ಹೋದ ರೈತ ಧುರೀಣರು ಇತ್ತ ಕಡೆ ಹಾಯಲೇ ಇಲ್ಲಾ.ಕೆಲವರು ಧೈರ್ಯ ಮಾಡಿ ಲೋಡು ಮಾಡಿಸಿ ಬೆಂಗಳೂರಿಗೆ ಲಾರಿ ತಂದು ರೇಟು ವಿಚಾರಿಸಿದಾಗ ಲಾರಿಯ ಬಾಡಿಗೆಯೂ ಗಿಟ್ಟುವುದಿಲ್ಲಾ ಎಂಬ ಖಾತ್ರಿಯಾದಾಗ ತಂದ ಉಳ್ಳಾಗಡ್ಡಿಯನ್ನು ಲಾರಿಯಲ್ಲೇ ಬಿಟ್ಟು ರಾತ್ರೋ ರಾತ್ರಿ ಊರಿಗೆ ಮರಳಿ ಬಿಟ್ಟಿದ್ದರು, ಕೆಲ ಹತಾಶ ರೈತರು ಮಾರ್ಕೆಟ್ಟಿನಲ್ಲೇ ಉಳ್ಳಾಗಡ್ಡಿ ಸುರುವಿ ತಮ್ಮ ಆಕ್ರೋಶ ತೋರ್ಪಡಿಸತೋಡಗಿದ್ದರು.ಇಡಿ ಊರಲ್ಲಿ ಸೂತಕದ ಛಾಯೆ. ಎಲ್ಲರೂ ಸರಕಾರವನ್ನು, ತಮ್ಮ ಹಣೆಬರಹವನ್ನು ಜರೀಯುವವರೆ ಆದರು. ಕೆಲ ಅರ್ಧ ಕೊಡಗಳು ಎಕ್ಸಪೋರ್ಟ್ ಪರ್ಮಿಶನ್ನು, ಪಾಕಿಸ್ತಾನ ಮಾರ್ಕೇಟ್ಟು, ಆಂಧ್ರದ ಉಳ್ಳಾಗಡ್ಡಿ ಲಾಬಿ ಅಂತೆಲ್ಲಾ &quot;ಅರ್ಥಶಾಸ್ತ್ರ&quot;ದ ಕೊಲೆ ಮಾಡತೊಡಗಿದರು.ಎನೇ ಆದರೂ ನಮ್ಮೂರ ರೈತನ ಸ್ಥಿತಿ ಇಂಗು ತಿಂದ ಮಂಗನದಾಗಿತ್ತು..&lt;br /&gt;&lt;br /&gt;   ಮೊನ್ನೆ ರಿಲಾಯನ್ಸ್ ಪ್ರೆಶ್ ಗೆ ಹೋದಾಗ  ಉಳ್ಳಾಗಡ್ಡಿ  ಬೆಲೆ ಕೆಜಿಗೆ ಹದಿನೆಂಟು ಅಂತ ನೋಡಿ ಹೊಟ್ಟೆ ಉರಿಯಿತು. ಯಾಕೆಂದರೆ ಕಳೆದ ದಿನವಷ್ಟೆ ಉಳ್ಳಾಗಡ್ಡಿ  ಮಾರಲು ಬಂದ್ ನಮ್ಮೂರ ರೈತನೊಬ್ಬ ಮೆಜೆಸ್ಟಿಕನಲ್ಲಿ ಸಿಕ್ಕಾಗ &quot; ಎಷ್ಟಕ್ಕೆ ಮಾರಿದೆ?&quot; ಅಂತ ಕೇಳಿದ್ರೆ &quot; ಆರು ನೂರಕ್ಕಿಂತ ನಯಾ ಪೈಸೆನೂ ಮುಂದೆ ಜಗ್ಗಲಿಲ್ಲಾ ಗೌಡ್ರೆ &quot; ಅಂತ ಬೇಸರದಿಂದ ಹೇಳಿ, ಕೊನೆಗೆ &quot; ಈ ವರ್ಸಾನು ನಮ್ಮನ ಹಟ್ರು  ನೊಡ್ರಿ ಗೌಡ್ರ&quot; ಅಂದ.ಎಷ್ಟು ಯೋಚಿಸಿದರೂ ಅವರನ್ನೂ ಹಟ್ಟಿದ್ದೂ ಸರಕಾರವಾ? ದಲ್ಲಾಳಿಗಳಾ? ಅಥವಾ ಎಲ್ಲವನ್ನೂ ನುಂಗುತ್ತಿರುವ ಭಂಡವಾಳಶಾಯಿಗಳಾ? ಅಂತ ತಿಳಿಲೇ ಇಲ್ಲಾ.ಅದ್ಯಾಕೋ ಗೊತ್ತಿಲ್ಲಾ! ನಮ್ಮೂರಿನ ರೈತರ ದಡ್ದತನ, ಅವರ ದರಿದ್ರತನ, ಮುಂದಾಲೋಚನೆಯೇ ಇಲ್ಲದ ಪೆದ್ದುತನ,ಹುಸಿ ನಂಬಿಕೆಯಲ್ಲಿ ದೇವರ ಮೇಲೆ ಭಾರ ಹಾಕಿ ಪ್ರತಿವರ್ಷವೂ ಅವರು ಉಳ್ಳಾಗಡ್ಡಿ ರೇಟಿನೋಂದಿಗೆ ಆಡುವ ಜೂಜು ನೆನಪಿಗೆ ಬಂತು. ಯುಗಾದಿಯ ಹೊಸ ಬಟ್ಟೆ, ಹೆರಿಗೆಗೆ ಬಂದ ಅಕ್ಕನ ಬಾಣಂತನದ ಖರ್ಚು,ಅಜ್ಜನ ಕಣ್ಣಿನ ಪೊರೆಯ ಆಪರೇಶನ್ನು, ಅವ್ವನ ಧಡಿ ಸೀರೆಯ ಕನಸು, ಮಳೆಗಾಲಕ್ಕೆ ಬಿದದೆ ಸೋರುವ ಮಾಳಿಗೆಯ ರೀಪೆರಿಯ ಖರ್ಚು, ಅಣ್ಣನ ಓದಿನ ಖರ್ಚು ಇತ್ಯಾದಿ ಕನಸುಗಳು &quot;ಉಳ್ಳಾಗಡ್ಡಿ ಧಾರಣಿ&quot; ಎಂಬ ನಮ್ಮ ಎಣಿಕೆಗೆ ನಿಲುಕದ ಮಾಯೆಯೆ ಜೊತೆಗೆ ತಳಕು ಹಾಕಿಕೊಂಡಿರುವುದು ನಮ್ಮೂರಿನ ದುರ್ದೈವ.ಬೇಡ ಬೇಡವೆಂದರೂ ಬಿಸಿಲಿಗೆ ಬಾಡಿದ ಕಪ್ಪುಮೊಗದ,ಪ್ಯಾಲಿ ನಗೆಯ,ಹರಿದ ಬನೀನಿನ,ಹಳೆಯ ಎಕ್ಕಡದ, ಅದೆ ತುಂಬು ಭರವಸೆಗಣ್ಣಿನ ನಮ್ಮೂರಿನ ರೈತನ ಚಿತ್ರ ಕಣ್ಣಿಂದ ಕದಲುತ್ತಲೇ ಇಲ್ಲ್ಲ........</content><link rel='replies' type='application/atom+xml' href='http://scpatil.blogspot.com/feeds/2071934725291537154/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/2071934725291537154' title='3 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/2071934725291537154'/><link rel='self' type='application/atom+xml' href='http://www.blogger.com/feeds/7270070547169320163/posts/default/2071934725291537154'/><link rel='alternate' type='text/html' href='http://scpatil.blogspot.com/2007/12/blog-post.html' title='ಅಬ್ಬಿಗೇರಿ ಎಕನಾಮಿಕ್ಸು ಮತ್ತು ಉಳ್ಳಾಗಡ್ಡಿ..'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><media:thumbnail xmlns:media="http://search.yahoo.com/mrss/" url="https://blogger.googleusercontent.com/img/b/R29vZ2xl/AVvXsEhguhOL6RBFNI9jqA9w9i4JD9QnA2d0IGSnlJWr3HAsmT4MwzflxkKsu3FuZ15FIPIxr6NZiZt4sTKJAqbpAn6g7S5lx0Z5jVVGJZ3hcWNtX4Au8xYqcxBqSEkxQJvS-VQru-ZIqyKx9zM/s72-c/2005110501691301.jpg" height="72" width="72"/><thr:total>3</thr:total></entry><entry><id>tag:blogger.com,1999:blog-7270070547169320163.post-1377496189404668661</id><published>2007-11-18T21:07:00.001-08:00</published><updated>2008-12-11T17:26:47.440-08:00</updated><category scheme="http://www.blogger.com/atom/ns#" term="ನನ್ನ ಜನ"/><category scheme="http://www.blogger.com/atom/ns#" term="ನಮ್ಮ ಬವಣೆ"/><category scheme="http://www.blogger.com/atom/ns#" term="ನಮ್ಮೂರು"/><title type='text'>ನಾವು ಶಾಪಗ್ರಸ್ತರೇ?</title><content type='html'>&lt;a href=&quot;https://blogger.googleusercontent.com/img/b/R29vZ2xl/AVvXsEgdj293xRd605LF_6MRHdZTGQGSogIX4mBbCd4meO61ANDiQ_KrMzy5SSWztrobmlFPcxkjmbzOmT_WhHMWCBKuVNaIeVuHTOa8bKah3AVlwyeh7yGll-4y4ESWyU_pLWSJQq7p7pvOgPk/s1600-h/hubli.jpg&quot;&gt;&lt;img style=&quot;display:block; margin:0px auto 10px; text-align:center;cursor:pointer; cursor:hand;&quot; src=&quot;https://blogger.googleusercontent.com/img/b/R29vZ2xl/AVvXsEgdj293xRd605LF_6MRHdZTGQGSogIX4mBbCd4meO61ANDiQ_KrMzy5SSWztrobmlFPcxkjmbzOmT_WhHMWCBKuVNaIeVuHTOa8bKah3AVlwyeh7yGll-4y4ESWyU_pLWSJQq7p7pvOgPk/s320/hubli.jpg&quot; border=&quot;0&quot; alt=&quot;&quot;id=&quot;BLOGGER_PHOTO_ID_5134413891992184338&quot; /&gt;&lt;/a&gt;&lt;br /&gt;  ಗದಗ-ಹುಬ್ಬಳ್ಳಿ ರಸ್ತೆ ಮತ್ತಷ್ಟು ಕೆಟ್ಟು ಕೆರ ಹಿಡಿದಿದೆ.ರಾಮುಲು ಏನು ಕಿಸಿದರೂ ಗದಗೆಂಬ ಗದಗನ್ನು ಇನ್ನೂ ಸುಧಾರಿಸಲು ಅಗ್ತಿಲ್ಲಾ. ಮ್ಯಾಂಗನೀಸ ಲಾರಿಗಳ ಅಬ್ಬರ ಇನ್ನೂ ಕಡಿಮೆ ಆಗಿಲ್ಲಾ.ಯಾವ ಸಾರ್ವಜನಿಕ ಸ್ಥಳಕ್ಕೆ ಹೋದರೂ ಗುಟಖಾದ ವಾಸನೆ ತಪ್ಪುವದಿಲ್ಲಾ.ಸಾರ್ವಜನಿಕ  ಶೌಚಾಲಯಗಳಿಗೆ ಹೋದರಂತೂ &quot;ಇಶ್ಶಿ&quot; ಎಂದು ಮೂಗು ಮುಚ್ಚಿಕೊಳ್ಳದೆ ಹೊರಬರಲಾಗುವದಿಲ್ಲಾ.ಮಣ್ಣಿವಣ್ಣನ್ ಎಷ್ಟು ಲಗಾ ಒಗದ್ರು ಹಳೇ ಹುಬ್ಬಳ್ಳಿಯ ರಸ್ತೆಗಳನ್ನು ಮತ್ತು ಅವುಗಳ ಪಕ್ಕವೇ ಒಂದು, ಎರಡು ಮಾಡಿ ಧನ್ಯರಾಗುವ ಪ್ರಜಾಪ್ರಭುಗಳನ್ನು ಸುಧಾರಿಸಲಾಗುವದಿಲ್ಲ.ಹೊರಟ್ಟಿ ಶಿಕ್ಷಣ ಮಂತ್ರಿಯಾಗಿ ಕಂಡಲ್ಲಿ ರಿಬ್ಬನ್ನು ಕತ್ತರಿಸಿದ್ದೆ ಬಂತು ನಯಾ ಪೈಸೆಯಷ್ಟೂ ಶಿಕ್ಷಣದ ಗುಣಮಟ್ಟ ಅಥವಾ ಶಾಲೆಗಳ ಗುಣಮಟ್ಟ ಸುಧಾರಿಸಲಾಗಲಿಲ್ಲ್ಲ. ಅಲ್ಲಿಗೆ ರೈಲು ಬರುತ್ತೆ, ಇಲ್ಲಿಗೆ ವಿಮಾನ ನಿಲ್ದಾಣ ಬರುತ್ತೆ ಅಂತ ಹಳಿ ಇಲ್ಲದೆ ರೈಲು ಬಿಟ್ಟಿದ್ದೆ ಬಂತು ದೇವರಾಣೆಗೂ ಬರುವ ನೀರಿಕ್ಷೆಯಂತೂ ಇಲ್ಲಾ. ಪಂಚನದಿಗಳ ಜಿಲ್ಲೆ ಅಂತ ಹಾಡಿ ಹೊಗಳಿ ಅಟ್ಟಕ್ಕೆರಿಸಿದ ಬಿಜಾಪುರ ಜಿಲ್ಲೆಯಲ್ಲಿನ ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಇಂದಿಗೂ ತಪ್ಪಿಲ್ಲಾ. ಬೇಸಿಗೆಯಲ್ಲಿ ಇಡಿ  ಗದಗಕ್ಕೆ &quot;ನೀರು&quot; ಎನ್ನುವುದು ಮರೀಚಿಕೆ ಆಗಿ ಬಿಡುತ್ತೆ. ( ಕಳೆದ ಕೆಲ ವರ್ಷಗಳಿಂದ ರೈಲಿನಲ್ಲಿ ಕುಡಿಯುವ ನೀರು ಪೂರೈಸಿದ್ದಾರೆ ನಮ್ಮ ಜನಪ್ರತಿನಿಧಿಗಳು ) . ಹುಬ್ಬಳ್ಳಿ- ಧಾರವಾಡದ ಹೈಕೋರ್ಟಿಗೆ ಇನ್ನೂ ಜಾಗ ಹುಡುಕುತ್ತಿದ್ದಾರೆ ಮತ್ತು ಹುಡುಕುತ್ತಲೇ ಇರುತ್ತಾರೆ. ಇನ್ನು ದೂರದ ಗುಲ್ಬರ್ಗ, ಬೀದರ,ಬಳ್ಳಾರಿಗಳ ಬಗ್ಗೆ ಹೇಳಿದರೆ ನಮ್ಮ ಕೆರ ತಗೊಂಡು ನಾವೇ ಹೊಡ್ಕೊಬೇಕು ಹಾಗಿದೆ ಅಲ್ಲಿಯ ಸ್ಥಿತಿ..&lt;br /&gt;&lt;br /&gt;    ಎಷ್ಟು ತಲೆ ಕೆರೆದುಕೋಂಡರೂ ಅರ್ಥವಾಗದಿರುವುದೇ ಇದು; &quot;ಕಾವೇರಿ&quot; ಅಂದ ಕೂಡಲೇ ಚಪ್ಪಲಿ ಹಾಕ್ಕೊಂಡು, ಮೈಕು ಹಿಡ್ಕೊಂಡು &quot;ಪಾದಯಾತ್ರೆ&quot; ಅಂತ ತಮ್ಮ &quot;ಜನಪರ ಕಾಳಜಿ(?)&quot; ಪ್ರದರ್ಶಿಸಿಲು ಸನ್ನಧ್ಧರಾಗುವ ನಮ್ಮ ರಾಜಕಾರಣಿಗಳಿಗೆ&lt;br /&gt;ಅದೇ ಕಳಕಳಿಯನ್ನು ಕೃಷ್ಣೆಯ ಅಥವಾ ಸಮಸ್ತ ಉ.ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆಗೆ ಇತಿ ಹಾಡಬಲ್ಲ ಮಹದಾಯಿ ನದಿ ಯೋಜನೆಯ ವಿಷಯದಲ್ಲಿ ಯಾಕೆ ತೋರಿಸಲಾಗುವಿದಿಲ್ಲಾ? ನಮ್ಮ ವಿಷಯದಲ್ಲಿ ಯಾಕೆ ಉದಾಸೀನ ಭಾವ? ಕೇವಲ ಒಂದು ಹಂಗಾಮಿನ ಕಬ್ಬು, ಅಥವಾ ಭತ್ತ ಬರದೇ ಹೋದ್ರೆ ಸತ್ತೇ ಹೋಗುತ್ತೀವಿ ಅನ್ನೊ ತರ ಮಾತಾಡುವ ಹಳೆ ಮೈಸುರು ರೈತರ ಮದ್ಯೆ ಬರೀ ಬರದಲ್ಲೇ ಬದುಕು ದೂಡುತ್ತಿರುವ ನನ್ನ ಜನಗಳ ನೋವು ಯಾಕೇ ಅರ್ಥವಾಗುವುದಿಲ್ಲಾ?. ಪ್ರತಿ ವರ್ಷವೂ ಅದೇ ಬೆಲೆ ಕುಸಿತ, ಅದೇ ಭಿಕ್ಷೆ ಎಂಬಂತೆ ಘೋಷಿಸುವ ಬೆಂಬಲ ಬೆಲೆಯ ನಾಲಾಯಕ್ ನಾಟಕಗಳು. ಪ್ರತಿ ವರ್ಷವೂ ಅದೆ ಕಥೆ. &quot;ಹಾಡಿದ್ದು ಹಾಡೊ ಕಿಸುಬಾಯಿ ದಾಸ&quot; ಎಂಬಂತೆ ಅವೇ ಹಳೆ ಭರವಸೆಗಳು, ಕಣ್ಣೊರಿಸುವ ಹಲ್ಕಟ್ ರಾಜಕೀಯ.ಎಲ್ಲಾ ಸಮಸ್ಯೆಗಳಿಗೂ ಒಂದು ಸಮರ್ಥ ಕೃಷಿನೀತಿ ರೂಪಿಸೋಕೆ ಇನ್ನೂ ಎಷ್ಟು ಹೆಣ ಬೀಳಬೇಕು?.ಬೇಕಾದ್ರೆ ಗಮನಿಸಿ ನೋಡಿ ಬೆಂಗಳೂರಿನ ಬಹುತೇಕ ಕಾಮಗಾರಿಗಳಲ್ಲಿ ದುಡಿಯುತ್ತಿರುವ ಕೂಲಿ ಕಾರ್ಮಿಕರು ಬರೀ ಉ.ಕರ್ನಾಟಕದವರು. ಅಲ್ಲಿಯೇ ಅವರಿಗೆ ಅನ್ನ ಸಿಕ್ಕಿದ್ದರೆ ಇಲ್ಯಾಕೆ ಬಂದು ಕೈಯೊಡ್ದಿ ನಿಲ್ಲುತ್ತಿದ್ದರು? ಸರಕಾರದ ಯೋಜನೆಗಳು ತಲುಪುದಾದರೂ ಯಾರನ್ನು?.ಇತ್ತೀಚಿಗಂತೂ ಮೈನಿಂಗ ಲಾರಿಗಳು ಅಳುದುಳಿದ ಉ.ಕರ್ನಾಟಕದ  ರಸ್ತೆಗಳನ್ನೂ ಹಾಳು ಮಾಡಿ ಹತ್ತಿ ಬಿತ್ತುತ್ತಿವೆ, ಕೇಳುವುವರು ಯಾರೂ ಇಲ್ಲದದಂತಾಗಿದೆ. ಯಾಕಂದ್ರೆ ಬಹುತೇಕ ಮೈನಿಂಗ ಕಂಪನಿಗಳು ನಮ್ಮ ನನಪ್ರತಿನಿಧಿಗಳವೇ ಆಗಿವೆ, ಬೇಲಿಯೇ ಎದ್ದು ಹೊಲ ಮೆಯ್ದರೆ ಮಾಡುವುದಾದ್ರು ಏನು? . ಇದನ್ನು ಬಿಟ್ಟ ಹಾಕಿ ಇನ್ನು ಹಲವಾರು ಅವಧಿಗೆ ಅರಿಸಿ ಬರುತ್ತಿರುವ ಮತ್ತು ರಾಜ್ಯದ ಅತ್ಯುನ್ನತ ಪದವಿ ಅಲಂಕರಿಸಿದ ಧರ್ಮಸಿಂಗ, ಖರ್ಗೆ ಮೊದಲಾದವರು ಕಿಸಿದಿದ್ದಾದರೂ ಎನು? ಪಧವೀದರ ಕ್ಷೇತ್ರದಿಂದ ಆರಿಸಿ ಬರುತ್ತಾ ಇರುವ ಎಚ್ಕೆ, ನಮ್ಮ  ಪಧವೀದರರಿಗೆ ಮಾಡಿದ ಅನುಕುಲತೆಯಾದ್ರು ಏನು?. ನೀರಾವರಿ ಖಾತೆ ಇಟ್ಕೊಂಡೂ ಸಹ ಇನ್ನೂ ಉ.ಕರ್ನಾಟಕದ ಹಲವು ಯೋಜನೆಗಳು ಅಮೆಗತಿಯಲ್ಲಿ ನಡೆಯುತ್ತಿದ್ದರೂ ಇವರು ಹರಿದಿದ್ದಾದರೂ ಏನು?&lt;br /&gt;&lt;br /&gt; ಮುಕಳಿ ತಿರುವಿದಲ್ಲಿ ಒಂದು ಪಾರ್ಕು,ಹೆಜ್ಜೆಗೊಂದು ಬೀದಿದೀಪ, ಹಂಗೆ ತಿಂಗಳುಗಳಿಗೊಮ್ಮೆ ಡಾಂಬರು ಕಾಣುವ ರಸ್ತೆಗಳು ಇವೆಲ್ಲ ಬೆಂಗಳೂರಿಗೆ ಮಾತ್ರವಾ?. ಇಡೀ ಹುಬ್ಬಳ್ಳಿಯಲ್ಲಿ ಇರುವ ಎಕೈಕ ಪಾರ್ಕನ್ನೂ ಸಹ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಂಡಿಲ್ಲ, ಅಲ್ಲಿ ಹಂದಿಗಳು ಮಾತ್ರ ಅರಾಮವಾಗಿ ಅಧಿಕಾರಿಗಳ ಹೆಸರಿನಲ್ಲಿ ಸಂಸಾರ ಮಾಡಿಕೊಂಡಿವೆ. ಜನಪ್ರತಿನಿಧಿಗಳು ಹಾಳಾಗ್ಲಿ ಬೆಂಗಳೂರಿನ ಕೊಳೆಗೇರಿ ಮಕ್ಕಳಿಗೆ Lux ಸೋಪು ಉಜ್ಜಿ, ಸ್ನಾನ ಮಾಡಿಸಿ,  ಕೊಳೆಗೇರಿ ಸುಧಾರಣೆ ಮಾಡಿದೆ ಅಂತ ಪೇಪರುಗಳಿಗೆ ಹಲ್ಲು ಕಿಸಿದ ಫೋಟೊ ಕಳಿಸಿ ಧನ್ಯರಾಗುವ NGOಗಳಿಗೆ ಉ.ಕರ್ನಾಟಕದ ಅವ್ಯವಸ್ಠೆ, ಬಡತನ ಕಾಣುವುದೇ ಇಲ್ಲಾ. ಇನ್ನು ನಾರಾಯನ ಮೂರ್ತಿ, ಪ್ರೇಮಜೀ ಯವರ ಸಾಮಾಜಿಕ ಕಳಕಳಿ ಬೆಂಗಳೂರು ಬಿಟ್ಟು ಆಚೆ ಬರುವುದೇ ಬೇಡ ಅನ್ನುತ್ತೆ.ಇನ್ನು ಅಲ್ಲೆ ಹುಟ್ಟಿ ಬೆಳೆದ ನಮ್ಮಂತಹವರು ಮಾಡುತ್ತಿರುವುದಂತೂ ಯಾವುದಕ್ಕೂ ಬೇಡ; ಚೆನ್ನಮ್ಮ ರೈಲಿಗೆ ರಿಜರ್ವೆಶನ್ನು ಮಾಡಿಸಿ ಹಬ್ಬಕ್ಕೆ ಮಾತ್ರ ಹೋಗಿ &quot; ನಮ್ಮೂರು ಈ ಜನ್ಮದಲ್ಲಿ ಮಾತ್ರ ಉದ್ದಾರ ಅಗುವದಿಲ್ಲ&quot; ಅಂತ ಜಗ್ಗೇಶ್ ಡೈಲಾಗು ಬಿಟ್ಟು ಬಂದ್ರೆ ನಮ್ಮ ಕರ್ತವ್ಯ ಮುಗಿಯಿತು. &lt;br /&gt;&lt;br /&gt;ಮೊನ್ನೆ ದೀಪಾವಳಿಗೆ ಹೋದಾಗ ಅನಿಸಿದ್ದಿಷ್ಟು . ಇಲ್ಯಾಕೆ ಹೀಗೆ? ಅಂತಾ. ಸಮಸ್ಯೆ ವ್ಯವಸ್ಥೆಯದಾ? ಅಥವಾ ನಮ್ಮ ಜನಗಳದಾ? ಅಥವಾ ವ್ಯವಸ್ಠೆ ರೂಪಿಸುತ್ತಿರುವ ರಾಜಕಾರಣಿಗಳದಾ?. ಎಲ್ಲೋ ಓದಿದ ನೆನಪು &quot; &lt;strong&gt;If we are not part of the &lt;/strong&gt;&lt;strong&gt;solution, then we are part of the problem&lt;/strong&gt;&quot; ಅಂತಾ, ಹಂಗಾದ್ರೆ ಬಹುಶಃ ನಾವೂ ಸಹ &quot; &lt;strong&gt;part of problem&lt;/strong&gt;&quot;  ಆಗಿರಬಹುದಲ್ವಾ? ಕಣ್ಣ ಮುಂದಿರುವ ಸಾವಿರ ಪ್ರಶ್ನೆಗಳಲ್ಲಿ ಕೆಲವಾಕ್ಕಾದರೂ ಉತ್ತರ ಹುಡುಕುವ ಪ್ರಯತ್ನ ಮಾಡಬೇಕಲ್ವಾ?</content><link rel='replies' type='application/atom+xml' href='http://scpatil.blogspot.com/feeds/1377496189404668661/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/1377496189404668661' title='10 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/1377496189404668661'/><link rel='self' type='application/atom+xml' href='http://www.blogger.com/feeds/7270070547169320163/posts/default/1377496189404668661'/><link rel='alternate' type='text/html' href='http://scpatil.blogspot.com/2007/11/blog-post.html' title='ನಾವು ಶಾಪಗ್ರಸ್ತರೇ?'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><media:thumbnail xmlns:media="http://search.yahoo.com/mrss/" url="https://blogger.googleusercontent.com/img/b/R29vZ2xl/AVvXsEgdj293xRd605LF_6MRHdZTGQGSogIX4mBbCd4meO61ANDiQ_KrMzy5SSWztrobmlFPcxkjmbzOmT_WhHMWCBKuVNaIeVuHTOa8bKah3AVlwyeh7yGll-4y4ESWyU_pLWSJQq7p7pvOgPk/s72-c/hubli.jpg" height="72" width="72"/><thr:total>10</thr:total></entry><entry><id>tag:blogger.com,1999:blog-7270070547169320163.post-598191285402887338</id><published>2007-09-30T21:54:00.000-07:00</published><updated>2008-12-11T17:26:47.709-08:00</updated><category scheme="http://www.blogger.com/atom/ns#" term="ತಲೆಹರಟೆ"/><category scheme="http://www.blogger.com/atom/ns#" term="ದಿನಚರಿ"/><category scheme="http://www.blogger.com/atom/ns#" term="ನನ್ನ ಜಗತ್ತು"/><title type='text'>ಬೆಂಗಳೂರು ಗಣೇಶನೂ, ನಗೆಹಬ್ಬವೂ ಮತ್ತು ಆರ್ಕೆಸ್ಟ್ರಾ.....</title><content type='html'>&lt;a href=&quot;https://blogger.googleusercontent.com/img/b/R29vZ2xl/AVvXsEiwvkMqbSrNGp8HE3ozrEspBLZ3dgqOR5UGqckj5xxX3jykWvS1hpWDQhUlPamBFJPbUvvsmEQl889uchWxLYAGML6phdXVObAYBrHuNrENFKtlQHo0IE7ACvIX-hz9UalJcibKt7Z9Hds/s1600-h/Ganesh_Festival.jpg&quot;&gt;&lt;img style=&quot;display:block; margin:0px auto 10px; text-align:center;cursor:pointer; cursor:hand;&quot; src=&quot;https://blogger.googleusercontent.com/img/b/R29vZ2xl/AVvXsEiwvkMqbSrNGp8HE3ozrEspBLZ3dgqOR5UGqckj5xxX3jykWvS1hpWDQhUlPamBFJPbUvvsmEQl889uchWxLYAGML6phdXVObAYBrHuNrENFKtlQHo0IE7ACvIX-hz9UalJcibKt7Z9Hds/s320/Ganesh_Festival.jpg&quot; border=&quot;0&quot; alt=&quot;&quot;id=&quot;BLOGGER_PHOTO_ID_5116280967712896994&quot; /&gt;&lt;/a&gt;&lt;br /&gt;&lt;br /&gt;   ಈ Week end ಯಾವ ಥೇಟರಿಗೆ ಲಗ್ಗೆ ಹಾಕಬೇಕೆಂದು ತಲೆ ಕೆರೆದುಕೊಳ್ಳುತ್ತಿರುವಾಗಲೇ ನಮ್ಮ ಮನೋಜ ಈ ವಾರ ನಮ್ಮ ಏರಿಯಾದಲ್ಲಿ ಗಣೇಶನನ್ನು ಕೂರಿಸ್ತಾರೆ ಎಂಬ ರೋಚಕ ವಿಚಾರವನ್ನು ಹೇಳಿದ.ನಿಮಗೆ ಇನ್ನೊಂದು ಮಾತು,ನಾನು ಹೊಸದಾಗಿ ಬಂದಾಗ ಈ ಬೆಂಗಳೂರಿಗರು ಹಿಂತಾ ಪ್ಯಾಲಿ ನನ್ ಮಕ್ಳು ಅಂತ ಖಂಡಿತ ಗೊತ್ತಿರಲಿಲ್ಲಾ, ನಮ್ ಕಡೆ ಗಣೇಶ ಚೌತಿ ಅಂದ್ರೆ ಎನು ಭಯ-ಭಕ್ತಿ, ಸಡಗರ, ಎಷ್ಟೊಂದು ಆಚರಣೆಗಳು ಅಂತೀರಾ? ಅದನ್ನು ಮಾಡಬಾರದು,ಇದನ್ನೂ ಮಾಡಬಾರದು, ಚಂದ್ರನ್ನ ನೋಡಬಾರದು ಅಂತೆಲ್ಲಾ ನೂರಾರು ಕಟ್ಟುಪಾಡುಗಳು, ಈ ಮುಂಡೆವಕ್ಕೆ ಒಂದಾದ್ರೂ ಬೇಡ್ವೆ? ಅದೂ ಹಾಳಾಗ್ಲಿ ಗುರುವೇ?, ಚೌತಿ ಮುಗಿದ್ರು ಈ ನನ್ ಮಕ್ಳ ಹಬ್ಬ ಮುಗಿದಿರುವದಿಲ್ಲಾ, ತಿಂಗಳು ಪೂರ್ತಿ ಡಂಕ ನಕ ಡಂಕ.. ತಮ್ಮ ಟೈಮ್ ನೋಡ್ಕೊಂಡು , ಆರ್ಕೆಸ್ಟ್ರಾ ಟೈಂ ನೊಡ್ಕೊಂಡು ಗಣೇಶನ್ನ ಕೂರಿಸೋ ನನ್ನ್ ಮಕ್ಳು ಇವರು. ಇದನ್ನು ಕುರಿತು ಸಿಕ್ಕಿದ್ದೆ ಚಾನ್ಸು ಅಂತ ಗಂಟಲು ಸರಿ ಮಾಡಿಕೊಂಡು ಭಾಷಣ ಬಿಗಿಯುತ್ತಿರುವಾಗ&lt;br /&gt;ನಮ್ಮ ಮನೋಜನ ಸಹನೆ ಮೀರಿ &quot;ಅಯ್ಯೊ ಹಾಳಾಗ್ಲಿ! ಯಾವಾಗ ಮಾಡಿದ್ರೆ ನಮಗೇನು? ನೀವು ಮಾತ್ರ ಫ್ರೈಡೆ ಸಂಜೆ ಬೇಗ ಬಂದು ಬಿಡಿ, ಇಬ್ರೂ ಪ್ರೊಗ್ರಾಮ್ ನೊಡೊಣಾ&quot; ಅಂತ ಅಪ್ಪಣೆ ಮಾಡಿದ ನಮ್ಮ ಸುರ್ಯವಂಶಿ. ಆ ಮಹಾತ್ಮನ ಹುನ್ನಾರ ಬಲ್ಲವರಾರು?&lt;br /&gt;&lt;br /&gt;&quot;ಫ್ರೈಡೆ ಮದ್ಯಾಹ್ನ ಗಣೇಶನ್ನ ತರ್ತಾರೆ, ಸಾಯಂಕಾಲ ನಗೆಹಬ್ಬ, ಶನಿವಾರ ಮಧಾಹ್ನ ಮಕ್ಕಳಿಂದ ಮನರಂಜನೆ, ಸಂಜೆ ಆರ್ಕೆಸ್ಟ್ರಾ, ಭಾನುವಾರ ಗೇಮ್ಸ್ ಇರ್ತಾವೇ&quot; ಅಂತ ಟೈಂ ಟೇಬಲ್ಲು ಸಹಾ ಹೇಳಿ  ’ಇನ್ನೆನು ನಿಂದು ಮುಚ್ಕೊಂಡು ಬಾ’ ಎಂಬಂತೆ ಗುರಾಯಿಸಿ ಪೆಂಡಾಲು ಹಾಕುತ್ತಿದ್ದವರ ಜೊತೆ ಹರಟೆಗಿಳಿದ ನಮ್ಮ ಮನೋಜ್.&lt;br /&gt;&lt;br /&gt;ಅವನಾಜ್ಞೆ ಉಲ್ಲಂಘಿಸಿದರೆ ರಾತ್ರಿ ನಿದ್ದೆ ಮಾಡಲು ಬಿಟ್ಟಾನೆಯೇ ಅಂತ ಹೆದರಿ ಶುಕ್ರವಾರ ಬೇಗ ಆಫೀಸ್ ಬಿಟ್ಟೆ. ಆಗ್ಲೆ ನಗೆಹಬ್ಬ(?) ಶುರುವಾಗಿಯೇಬಿಟ್ಟಿತ್ತು. ಯಾವ ಕೋನದಿಂದ ನೋಡಿದರೂ ಹುಡುಗಿಯರೇ ಕಾಣುವಂತಾ ಜಾಗದಲ್ಲಿ ನಮ್ಮ ಮನೋಜ ಖುರ್ಚಿ ಕಾಯ್ದಿರಿಸಿದ್ದ. ಅವನೆಡೆಗೆ ಕೃತಜ್ಞತೆಯಿಂದ ನೋಡಿ ಖುರ್ಚಿಯಲ್ಲಿ ಆಸೀನನಾದೆ. ವೇದಿಕೆ ಮೇಲೆ ನೊಡ್ತಿನೀ ಅದೇ ರಿಚರ್ಡೂ, ಅದೆ ಮೈಸುರು ಆನಂದು, ಪ್ರಾಣೇಶು.. ನಂಗಂತೂ ಸಿಕ್ಕಾಪಟ್ಟೆ ನಿರಾಶೆಯಾಯಿತು.&lt;br /&gt;&lt;br /&gt;&quot; ಅಲ್ವೋ ಮನೋಜ್, ಅಣ್ಣಮ್ಮನ ಉತ್ಸವಕ್ಕೂ ಇವರದೆ ಪ್ರೊಗ್ರಾಮ್ ಇತ್ತಲ್ಲವೋ? ಮತ್ತೆ ಎನೂ ಕೇಳ್ತಿಯಾ? ಹಾಡಿದ್ದಾಡೊ ಕಿಸಭಾಯಿ ದಾಸ ಎಂಬಂತೆ&quot; ಎಂದು ಅಲವತ್ತು ಕೊಂಡೆ.&lt;br /&gt;&lt;br /&gt;&quot;ಅವರ ಮಾತು ಯಾವ ಬೋ.. ಮಗ ನಿಂಗೆ ಕೇಳು ಅಂದ&quot; ಅಂತ ನಂಗೆ ಕೇಳುವಂತೆ ಗೊಣಗಿ ಆದ್ರೂ ಮಳ್ಳನಂತೆ ಮುಖದ ಮೇಲೆ ನಗು ತಂದುಕೊಂಡು &quot; ಹ್ಹಿ ಹ್ಹಿ ಹ್ಹಿ ಅದರ ಜೊತೆ ಬೇರೆ  Entertainment ಇರುತ್ತಪ್ಪಾ, ಸರಿಯಾಗಿ ಗಮನಿಸಿ&quot; ಎಂದವನೆ  Entertainment  ಹುಡುಕತೊಡಗಿದ.&lt;br /&gt;&lt;br /&gt;ಕಸದಲ್ಲಿ ರಸ ತೆಗೆಯುವ ಅವನ ಯುಕ್ತಿಗೆ ಮನದಲ್ಲೆ &quot;ಎಲಾ ಬಡ್ಡಿಮಗನೆ&quot; ಅನ್ಕೊಂಡು ಗಣೇಶನ ಮೂರ್ತಿ ಕಡೆ ನೊಡ್ತೀನಿ ಕೃಷ್ಣಾವತಾರಿ ಗಣೇಶ ರಾಧೆಯ ಮೇಲೆ ಕೈ ಹಾಕಿ ಕುಳಿತ್ತಿದಾನೆ. ನಂಗ್ಯಾಕೋ ಕಸಿವಿಸಿ ಅನ್ನಿಸಿ ದುಃಖ ತೋಡಿಕೊಳ್ಳಲು &quot; ಮನು ಗಣೇಶನ ಮೂರ್ತಿ ನೊಡಿದ್ಯಾ?&quot; ಅಂದೆ.&lt;br /&gt;&lt;br /&gt;ಅವನಿಗೆ ಸಿಟ್ಟು ಬಂದಿರಬೇಕು  ಈ ಮಗನಿಗೆ ನಾ ನೋಡು ಅಂತಿರೋದೆ ಬೇರೆ ಈ ಮಗ ನೋಡ್ತಿರೋದೆ ಬೇರೆ ಅಂತಾ, ಆದ್ರು ಭಯ ಬಕ್ತಿಯಿಂದ &lt;br /&gt;&quot; ಸಂತೋಷರ, ನಿಮ್ಮ R&amp;D ಇಲ್ಲಿ ಬೇಡ. ಹೊರಗೆ ಹೋದಲ್ಲಾದರೂ ನಿಮ್ಮ ಹುಳುಕು ಹುಡುಕುವ ಬುದ್ಧಿ ಬಿಟ್ಟು Enjoy ಮಾಡೊದನ್ನು ಕಲಿಯಿರಿ&quot;  ಅಂತ ಉಪದೇಶ ಕಮ್ ವಾರ್ನಿಂಗ್ ಕೊಟ್ಟ.&lt;br /&gt;&lt;br /&gt;&quot; ಅಲ್ವೋ ಹೇಳಿ ಕೇಳಿ ಗಣೇಶ ಶುದ್ಧ ಬ್ರಹ್ಮಾಚಾರಿ, ರಾಧೆ ಪಕ್ಕ ಕುರಿಸೋದು ಅಭಾಸ ಅಗಲ್ವೇನೋ&quot; ಅಂತ ಅವನ ಸಮರ್ಥನೆ ಬಯಸಿದೆ.&lt;br /&gt;&lt;br /&gt;&quot;ಹ್ಹಿ ಹ್ಹಿ ಹ್ಹಿ ಹೀಗೆ ಎಷ್ಟು ದಿನ ಅಂತ ಇದ್ದಾನು, ಅವನೂ Enjoy  ಮಾಡ್ಲಿ ಬಿಡ್ರಿ. ನಿಮ್ಮ ಪಕ್ಕ ಯಾರಿಲ್ಲಾ ಅಂತ ಉರಿನಾ? ನೀವು ಸುಮ್ನ ಪ್ರೊಗ್ರಾಂ ನೊಡ್ರಿ&quot; ಅಂತ ಉಡಾಫೆಯಿಂದ ಮಾತಾಡಿ ತನ್ನ ಚಟುವಟಿಕೆ ಮುಂದುವರೆಸಿದ.&lt;br /&gt;&lt;br /&gt;ಸರಿ ಪ್ರೋಗ್ರಾಂ ಆದ್ರು ನೋಡಿದ್ರಾಯ್ತು ಅಂತ ನೋಡಿದ್ರೆ ರಿಚರ್ಡರ ಅವೇ ಹಳೆ ಪ್ರಸಂಗಗಳು, ಕೆಟ್ಟ ಜೋಕುಗಳು, ಮೈಸುರು ಆನಂದರ ಕಾಮೆಂಟರಿ,ಮೈಕುಣಿತ, ಪ್ರಾಣೇಶರ ಸೂಳೆಮಗ ಜೋಕುಗಳು. &quot; ಥೂ ಸೂಳೆಮಕ್ಳಾ&quot; ಅಂಥ ಮನಸ್ಸಲ್ಲೆ ಉಗಿದುಕೊಂಡೆ.ನಗಿಸಲು ಅವರು ಪಡುತ್ತಿದ್ದ ಕಷ್ಟ ಕಂಡು ಪಾಪ ಅನಿಸಿತು. ರೀಚರ್ಡ್ ಬೇರೆ ಹೊದ ಕಡೆಯವರನ್ನೆಲ್ಲಾ ಹೊಗಳುವ ಹೊಗಳುಭಟ್ಟತನ ಆರಂಭಿಸಿದ್ದ. ಪದೆ ಪದೆ ಸಂಕೋಚ ಪಡದೆ  &quot;ಬಾಯ್ತುಂಬ ನಗಿ ಬಾಯ್ತುಂಬ ನಗಿ&quot; ಅಂತ ದೀನನಾಗಿ ಗೋಗರೆಯುತ್ತಿದ್ದ ಕಂಡು , ಬಾಯಿ ಬಿಟ್ಟೂ ಬೇರೆ ಅಂಗದಿಂದಲೂ ನಗಬಹುದಾ ಅನಿಸಿತು.ವೇದಿಕೆ ತುಂಬ ಅವರ ಲಘು ವರ್ತನೆ  ಮತ್ತು ಹೇಳುವ ಪಿಜೇಗಳನ್ನು ಕೇಳಿ ಇನ್ನೂ ಸಹಿಸಲಾಗದು ಅಂದುಕೊಂಡು ಮನೋಜನ ಅವತ್ತಿನ ಖೋಟಾ ಮುಗಿಸಿ &quot; ನಾಳೆ ಪೂರ್ತಿ ಕುರೋಣ&quot; ಅಂತ ಪ್ರಮಾಣ ಮಾಡಿ  ಮರಳಿ ರೂಮಿಗೆ ಕರೆದುಕೊಂಡು ಬಂದೆ.&lt;br /&gt;&lt;br /&gt;ಶನಿವಾರವೂ ಅದೇ ಕಥೆ ಮಕ್ಕಳಿಂದ ಮನರಂಜನೆ ಅಂತಾ ಹೋದ್ರೆ ಕತ್ತೆ ವಯಸ್ಸಿನ ಇಂಗ್ಲೀಷ ಮೀಡಿಯಂ &quot;ಮಕ್ಕಳು&quot; ಪ್ರಾರ್ಥನೆ ಅಂತ ಅರಚಲು  ಆರಂಭಿಸಿದ್ದವು. ಎಲ್ಲಾ ಸಮಿತಿ ಸದಸ್ಯರ ಮಕ್ಕಳು ಹಾಡಿ, ಕುಣಿದು, ಹಿಗ್ಗಾ ಮುಗ್ಗಾ ಪ್ರತಿಭೆ ಪ್ರದರ್ಶಿಸಿದ ಮೇಲೆ ಸಾಕಪ್ಪೋ! ಅನಿಸಿತು. ಅದು ಮುಗಿಯುತ್ತಲೇ &quot; ಝೇಂಕಾರ ಮೇಲೊಡೀಸ್ ಮೇಲೊಡೀಸ್ ಮೇಲೊಡೀಸ್&quot; ಅಂತಾ ಮೂರ್ನಾಲ್ಕು ಸಾರಿ ಅರಚಿ, ಜೂನಿಯರ್ ಎಸ್.ಪಿ.ಬಿ , ಜೂನಿಯರ್ ಜಾನಕಿ ಅಂತ ಎಲ್ಲ ಜೂನಿಯರಗಳಿಂದ ಅವೇ ಮಾಮೂಲು ಅರ್ಕೆಸ್ಟ್ರಾ ಗೀತೆಗಳಾದ &quot;ಜೊತೆಯಲಿ, ಜೊತೆ ಜೊತೆಯಲಿ&quot; , &quot; ಹೃದಯ ಸಮುದ್ರ ಕಡೆದು&quot;,&quot; ತಂಗಾಳಿಯಲ್ಲಿ ನಾ ತೇಲಿ ಬಂದೆ&quot;, &quot;ಕುಚಿಕು ಕುಚಿಕು &quot; ಮತ್ತು &quot; ಅನುಸುತಿದೆ&quot; &quot;ಕರಿಯ ಐ ಲವ್ ಯೂ &quot;  ಹಾಡಿ ಕೊನೆಗೆ &quot;ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ!&quot; ಅಂತ ಮಂಗಳಾರತಿಯನ್ನೂ ಹಾಡಿ ಅಣ್ಣಾವ್ರಿಗೆ ಜೈ! ಎಂದು ಕಾರ್ಯಕ್ರಮ ಮುಗಿಸುವಷ್ಟರಲ್ಲಿ ತಲೆ ಕೆಟ್ಟೂ ಕೆರ ಹಿಡಿದು ಹೋಗಿತ್ತು &quot;ಪಕ್ಷಿ ವೀಕ್ಷಣೆ&quot; ಯಲ್ಲಿ ತೊಡಗಿದ್ದ ನಮ್ಮ ಅಭಿನವ ಸಲೀಂ ಅಲಿಯ &quot; ಕಾಳು ಹಾಕುವ&quot; ಕಾರ್ಯಕ್ರಮ ಮುಗಿಸಿ ಕರೆತರುವಷ್ಟರಲ್ಲಿ ಗಣೇಶ ಎನು ನಿನ್ನ ಲೀಲೆ ಎಂದೆನಿಸತೊಡಗಿತ್ತು..</content><link rel='replies' type='application/atom+xml' href='http://scpatil.blogspot.com/feeds/598191285402887338/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/598191285402887338' title='8 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/598191285402887338'/><link rel='self' type='application/atom+xml' href='http://www.blogger.com/feeds/7270070547169320163/posts/default/598191285402887338'/><link rel='alternate' type='text/html' href='http://scpatil.blogspot.com/2007/09/blog-post.html' title='ಬೆಂಗಳೂರು ಗಣೇಶನೂ, ನಗೆಹಬ್ಬವೂ ಮತ್ತು ಆರ್ಕೆಸ್ಟ್ರಾ.....'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><media:thumbnail xmlns:media="http://search.yahoo.com/mrss/" url="https://blogger.googleusercontent.com/img/b/R29vZ2xl/AVvXsEiwvkMqbSrNGp8HE3ozrEspBLZ3dgqOR5UGqckj5xxX3jykWvS1hpWDQhUlPamBFJPbUvvsmEQl889uchWxLYAGML6phdXVObAYBrHuNrENFKtlQHo0IE7ACvIX-hz9UalJcibKt7Z9Hds/s72-c/Ganesh_Festival.jpg" height="72" width="72"/><thr:total>8</thr:total></entry><entry><id>tag:blogger.com,1999:blog-7270070547169320163.post-3491853740831124093</id><published>2007-08-27T02:29:00.000-07:00</published><updated>2007-08-27T02:34:19.415-07:00</updated><category scheme="http://www.blogger.com/atom/ns#" term="ನನ್ನ ಜಗತ್ತು"/><category scheme="http://www.blogger.com/atom/ns#" term="ಮನೋಜ್"/><category scheme="http://www.blogger.com/atom/ns#" term="ಹರಟೆ"/><title type='text'>ನೀವೇನಂತೀರಾ????????</title><content type='html'>ನಿನ್ನೆ ರಾತ್ರಿ ಮಲಗುತ್ತಿದ್ದಾಗ ಯಾಕೋ ಅಪರೂಪಕ್ಕೆ ಎಂಬಂತೆ &quot; ರೀ ಸಂತೋಷರ, ನಾಳೆ ನಾನ್ನೂ ಲಗೂ ಎಬ್ಬಿಸ್ರಿ&quot; ಅಂತ ಭಿನ್ನಹ ಮಾಡಿಕೊಂಡ. ಆಶ್ಚರ್ಯಚಕಿತನಾಗೆ ನಾನು &quot; ಯಾಕೋ ಮತ್ತೆ ಕ್ರಿಕೆಟ್ ತಾಲೀಮು ಶುರುನಾ?&quot; ಎಂದೆ ಮಾಮುಲಿನಂತೆ.&lt;br /&gt;&lt;br /&gt;ನಖಶಿಖಾಂತ ಉರಿದು ಹೋಯ್ತು ಸೂರ್ಯವಂಶಿ &quot; ಕಾಲೇಜು ಮತ್ತೆ ಶುರು ಆಗಿದೆ ಅಂತ ಸಾವಿರ ಸಲ ಬಡ್ಕೊಂಡಿದೀನಿ ಬೆಳಗ್ಗೆಯಿಂದ, ಮತ್ತೆ ಅದನ್ನೆ ಕೇಳ್ತಿರಲ್ಲಾ?&quot; ಅಂದ ಸಿಟ್ತಿನಲ್ಲಿ.&lt;br /&gt;&lt;br /&gt;&quot;ಅಲ್ವೋ ಕಾಲೇಜನ್ನ ಅದರ ಪಾಡಿಗೆ ಬಿಟ್ಟು ತುಂಬ ದಿನ ಅಯ್ತಲ್ಲೋ? ಈಗೇನು ಒಮ್ಮೆಲೆ ಕಾಲೇಜು ನೆನಪಾಗಿದೆ ಸಾಹೇಬರಿಗೆ, ಎನ್ ವಿಷಯ, ಹೊಸ ಲವ್ವಾ?&quot; ಎಂದು ಕಾಲೆಳೆದೆ.( ಈ ಪ್ರಾಣಿ ನಾವೆಲ್ಲಾ  ಇಂಜಿನಿಯರಿಂಗ್ ನ ಕೊನೆಯ ವರ್ಷಕ್ಕೆ ಬಂದಾಗ ಹೆದರಿ ಹೆದರಿ ಕಾಲೇಜು ತಪ್ಪಿಸುತ್ತಿದ್ದರೆ, ಈ ಸೂರ್ಯವಂಶಿ ಕಾಲೇಜು ಸೇರಿದ ಹೊಸದರಲ್ಲೇ ಎಲ್ಲಾ ಕ್ಲಾಸುಗಳಿಗೆ ಅಪರೂಪವಾಗಿಬಿಟ್ಟಿದ್ದ, ಚಳಿಗಾಲದಲ್ಲಂತೂ ಮುಂಜಾನೆಯ ಕ್ಲಾಸುಗಳಿಗೆ ಈ ವಯ್ಯಾ ಹೋಗುವದೇ ಇಲ್ಲಾ! ಎಷ್ಟೊ ಸಾರಿ ಇಂತಹ ಶೀಷ್ಯೊತ್ತಮನನ್ನೂ ಕರೆಸಿ ಇವರ ದರ್ಶನಭಾಗ್ಯವನ್ನು ಅನೇಕ ಅದ್ಯಾಪಕರು ಪಡೆಯಬೇಕಾಗಿತ್ತು.. ಅಷ್ಟು ದುರ್ಲಭವಾಗಿದ್ದ ಇವನು.)&lt;br /&gt;&lt;br /&gt;ಸ್ವಲ್ಪ ದನಿ ತಗ್ಗಿಸಿ ಹೇಳಿದ&quot; ಎಲ್ರೂ ಕೊನೆಯ ವರ್ಷಕ್ಕೆ ಕಾಲೇಜಿಗೆ ಹೋಗಲ್ವಂತೆ, ಆದ್ರೆ ನಾ ಮಾತ್ರ ಈ ವರ್ಷನಾದ್ರೂ ರೆಗ್ಯುಲರ್ ಆಗಿ ಹೋಗಬೇಕು ಅಂತ ಅನ್ಕೊಂಡಿನಿ&quot; ಅಂದ..&lt;br /&gt;ಓಹೋ ಸಾಹೇಬರು ಇನ್ನೂ ಅನ್ಕೊಂಡಿದಾರೆ ಅಂದುಕೊಂಡು ನಗುತ್ತಾ &quot; ನಿಮ್ಮ ಪ್ರಿನ್ಸಿಗೆ ಹೇಳಿದ್ದರೆ ಇಡಿ ಕಾಲೀಜೆಗೆ ಸ್ವೀಟ್ ಹಂಚಿರೋರು, ನಿಮ್ಮಂತಹ ಪ್ರಕಾಂಡ ಪಂಡಿತರ ಪುನರಾಗಮನದ ಖುಷಿಗೆ&quot; ಎಂದೆ.&lt;br /&gt;&lt;br /&gt;&quot;ನಿಮ್ದೂ ಮಸ್ಕೀರಿ ಭಾಳ ಆತು, ನಾ ನಿಮ್ಮನ್ನ ಒಂದ ಮಾತು ಕೇಳಲಾ?&quot; ಅಂದ ಮನೋಜ್..&lt;br /&gt;&lt;br /&gt; ನಮ್ ಸಿಕ್ಸ್ತ್ ಸೆನ್ಸು ಆಗ್ಲೆ  ನಮ್ಮನ್ನು ಎಚ್ಚರಿಸತೊಡಗಿತು, ಆದ್ರೂ ಎನು ಈ ನನ ಮಗ ಯಾವಗ್ಲೂ ಕೇಳಿಯೇ ಹೇಳೊದು ಅಂತಾ ಗೊಣಕ್ಕೊಂಡು &quot; ಹೊತ್ತಾಗೈತಿ ಬೇಗ ಹೇಳಿ ಮುಗಿಸು, ಬೆಳಗ್ಗೆ ಬೇಗ ಬೇರೆ ಏಳಬೇಕು ನೀನು&quot; ಅಂದು ಸೂಕ್ಷ್ಮವಾಗಿ ಹೇಳುವ ಯತ್ನ ಮಾಡಿದೆ.&lt;br /&gt;&lt;br /&gt;ಮಾತೂ ಮುಗಿಸುವದೇ ತಡ ಚಕ್ಕನೇ ಎದ್ದವನೇ ಒಳಗೆ ಹೋಗಿ ವಿಜಯ ಕರ್ನಾಟಕ ಪತ್ರಿಕೆಯ &quot; ಮಹಿಳಾ ವಿಜಯ&quot;ದ ಸಂಚಿಕೆಗಳನ್ನು ನನ್ನ ಮುಂದೆ ಗುಡ್ದೆ ಹಾಕಿ &quot; ನೋಡ್ರಿ ಸಂತೋಷರಾ, ಎನೀದರ ಅರ್ಥ? ಎಂದು ಸ್ವಲ್ಪ ಸೀರಿಯಸ್ಸಾಗೇ ಕೇಳಿದ.&lt;br /&gt;&lt;br /&gt;ಏನು ನೋಡುವದು ಮಣ್ಣು, ಅರ್ಥ ಆದ್ರೆ ತಾನೆ? ಆದ್ರೆ ಮನಸ್ಸಿನ ಮೂಲೆಯಲ್ಲಿ ಏ ಮನುಷ್ಯನ ಹೊಸ ಸಂಶೋಧನೆಯ ಬಗೆಗೆ ಕೂತುಹಲ ಮೂಡತೊಡಗಿತು, ಕೊನೆಗೆ ಸೋತವನಂತೆ &quot; ರಾತ್ರೀಲಿ ಯಾಕೋ ಪೇಪರ್ ತೋರಿಸಿ ಪ್ರಾಣ ತಿಂತೀಯಾ? ಎನೂ ಅಂತ ಬಿಡಿಸಿ ಹೇಳ್ಬಾರದಾ?&quot; ಅಂತ ಅಲವತ್ತುಕೊಂಡೆ.&lt;br /&gt;&lt;br /&gt;ಛಲ ಬಿಡದ ತ್ರಿವಿಕ್ರಮನಂತೆ &quot;ಸ್ವಲ್ಪ ಗಮನಿಸಿ ನೋಡಿ, ಪ್ಲೀಸ್ ಪ್ಲೀಸ್ &quot; ಅಂದ.&lt;br /&gt;&lt;br /&gt;ಇದೋಳ್ಳೆ ಗೋಳಾಯ್ತಲ್ಲಾ ಅಂದುಕೊಂಡು ಗಮನಿಸಿದರೆ ಎಲ್ಲಾ ಸಹಜಾರ &quot;ಬಾಲ್ಕನಿಯಿಂದ&quot; ಅಂಕಣದ ಪೇಪರುಗಳು, ಯಾಕೋ ಕೇಸು ಸೀರಿಯಸ್ಸೆ ಅನಿಸಿ &quot; ನಾ ಎಲ್ಲ್ಲಾ ಓದೀದಿನಿ, ನಿನ್ನ ಪ್ರಾಬ್ಲಮ್ ಏನು ಶಿವಾ?&quot; ಅಂದು ಬೇಸರಿಸಿಕೊಂಡು ಹೇಳಿದೆ. &lt;br /&gt;&lt;br /&gt;&quot; ಅದಲ್ರೀ ಫೋಟೊ ನೋಡ್ರಿ ಫೋಟೊ &quot; ಅಂದು ಹಲ್ಕಿರಿದ.&lt;br /&gt;&lt;br /&gt;&quot; ನೋಡ್ದೆ, ಎನಾಯ್ತಿಗ?&quot; ಎಂದು ಖಾರವಾಗಿ ಕೇಳಿದ್ದಕ್ಕೆ&lt;br /&gt;&lt;br /&gt;&quot; ಅಲ್ಲೇ ಇರೋದು ಪಾಯಿಂಟು, ಅಲ್ಲಾ ಆಕಿಗೆ ತನ್ನ ಐಡೆಂಟಿಟಿ ತೋರಿಸೋದು ಇಷ್ಟ ಇಲ್ಲಾ ಅಂದ್ರೆ ಈ ಫೋಟೊನೂ ಹಾಕಬಾರದಿತ್ತು,ಆದ್ರು ನಮ್ ಕಡೆ ಬೆನ್ನು ತಿರುಗಿಸಿದ ಫೋಟೋ ಇದೆ, ಏನಿದರ ಅರ್ಥ?&quot; ಎಂದು ಕೊನೇಗೂ ಬಾಯಿಬಿಟ್ಟ..&lt;br /&gt;&lt;br /&gt;ಹೌದಲ್ಲವೇ ಅನ್ನಿಸಿತು ಒಂದು ಕ್ಷಣ ಆದ್ರೂ ಮಾತು ಮೂಂದುವರೆಸಲು ಇಷ್ಟವಿಲ್ಲದೆ &quot; ಅವರವರ ಇಷ್ತ ಬಿಡೊ, ಬೇಕಾದ ಮಾಡ್ಕೊಳ್ಲಿ ಮತ್ತು ಬೇಕಾದ್ದು ಫೋಟೊ ಹಾಕ್ಕೊಳ್ಲಿ ನೀ ಯಾಕೆ ಚಿಂತಿ ಮಾಡ್ತಿ, ಈಗ ಮಲಗು&quot; ಅಂದೆ..&lt;br /&gt;&lt;br /&gt;&quot; ನಿಮಗೆ ಎಲ್ಲಾ ಸಿಲ್ಲಿಯಾಗೇ ಕಾಣೊದು, ಅದು ಉದ್ದೇಶಪೂರ್ವಕವಾಗಿ ಹಾಕಿರೋ ಫೋಟೊ,&quot; ಎಂದು ಜಗ್ಗ್ಗನ್ನೆತ್ತಿ ಗಟಗಟ ನೀರು ಕುಡಿದವನೆ ಮತ್ತೆ ಶುರು ಮಾಡಿದ ಅವನ ಬಾಯಿಂದನೆ ಕೇಳಿ&lt;br /&gt;&quot; ನೋಡ್ರಿ ಸಂತೋಷರ, ಇದೂ ಎಲ್ಲಾ ಹುಡುಗ್ಯಾರ ಲಕ್ಷಣ, ಕೆಲ ಹುಡುಗಿಯರಿಗೆ ನಾವು ಚಂದ ಅದೀವಿ ಅನ್ನೊದು ಗೊತ್ತಿರ್ತದ, ಮತ್ತು ಫೋಟೊ ಹಾಕಿ ತಮ್ಮ ಐಡೆಂಟಿಟಿ ಬಿಟ್ಟುಕೊಡಲೂಬಾರದು ಅಂತ ಚೆನ್ನಾಗಿ ಗೊತ್ತಿರುತ್ತೆ. ಹಾಗಂತ ಸುಮ್ನಿರೋದು ಇಲ್ಲಾ, ಅರ್ಧ ಮರ್ಧ ಮುಖಾ ತೋರಿಸಿ ನಮ್ ಹುಡುಗ್ರ್ ಕೂತುಹಲ ಹೆಚ್ಚಿಸ್ತಾರ. ಅದು ಬೇಡಾ ಅಂದ್ರ ಪೂರಾ ಫೋಟೊ ಹಾಕಬೇಕು, ಇಲ್ಲಾಂದ್ರೆ ಹಾಕಲೇಬಾರದಿತ್ತು, ಬಿಟ್ಟಿದ್ರೆ ಏನು ಗಂಟು ಖರ್ಚಾಕ್ತಿರಲಿಲ್ಲ್ಲ. ಈ ತರ ನಮ್ ತಲಿಯಾಗ ಹುಳ ಬಿಡ್ದಕ ಹೀಂಗ್ ಮಾಡ್ತಾರ, ಬನ್ನಿ ಬೇಕಾದ್ರ  ಆರ್ಕುಟನ್ಯಾಗ್ ನಮ್ಮ್ ಕಾಲೇಜಿನ ಮಸ್ತ ಮಸ್ತ ಹುಡುಗ್ಯಾರು ಸಹ ಅರ್ಧ ಮರ್ಧ ಫೊಟೊ ಹಾಕೀರೊದನ್ನ ತೋರೊಸ್ತಿನಿ, ಹಿಂತಾ ಸಾಕಷ್ಟು ಹುಡುಗ್ಯಾರ್ನ್ ತೋರಿಸ್ತಿನಿ. ಅವರ ಉದ್ದೀಶವೇ ಅರ್ಥ ಆಗೊಲ್ಲಾ? ಅವರು ಏನು ಅನ್ಕೊಂಡು ಹೀಗೆ ಮಾಡ್ತಾರೆ? ಅವರ ಸೈಕಾಲಜಿ ಏನು?&quot; ಅಂತೆಲ್ಲಾ ಪ್ರಶ್ನಾವಳಿಗಳನ್ನು ಎಸೆದು ನನ್ನ ಕಡೆಗೆ ನೋಡಿದ..&lt;br /&gt;&lt;br /&gt;ನಂಗೂ ಈ ಪುಣ್ಯಾತ್ಮನ ಮಾತುಗಳು ತುಸುವಾದರು ಹೌದೆನಿಸಿತು, ಅದರೆ ಅವನ ಪ್ರಶ್ನೆಗಳಿಗೆ ಉತ್ತರ ಮಾತ್ರ ದೇವರಾಣೆಗೆ ಹೋಳೆಯಲಿಲ್ಲ.ಅದಕ್ಕೆ ನೀವೆನಂತೀರಾ ಅಂತ ಪೊಸ್ಟಿಸಿದ್ದೇನೆ, ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ..&lt;br /&gt;&lt;br /&gt;( ಇದನ್ನು ಇಬ್ಬರ ಕುತೂಹಲಿ ಬ್ರಹ್ಮಾಚಾರಿಗಳ ಸಂಭಾಷಣೆ ಎಂದೊ ನೋಡಿರಿ ಹೊರತು ಇದರ ಹೀಂದೆ ಯಾವುದೋ ಘನ ಉದ್ದೇಶಗಳಿಲ್ಲ್ಲಾ! ಕೇವಲ ತಮಾಷೆಭರಿತ ಕೂತುಹಲದಿಂದ ಇದನ್ನು ಪ್ರಕಟಿಸಿದ್ದೇನೆ, ಯಾರಿಗಾದರೂ ನೋವಾದರೆ ಕ್ಶಮಿಸುವ ದೊಡ್ಡತನವಿರಲಿ)</content><link rel='replies' type='application/atom+xml' href='http://scpatil.blogspot.com/feeds/3491853740831124093/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/3491853740831124093' title='11 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/3491853740831124093'/><link rel='self' type='application/atom+xml' href='http://www.blogger.com/feeds/7270070547169320163/posts/default/3491853740831124093'/><link rel='alternate' type='text/html' href='http://scpatil.blogspot.com/2007/08/blog-post.html' title='ನೀವೇನಂತೀರಾ????????'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><thr:total>11</thr:total></entry><entry><id>tag:blogger.com,1999:blog-7270070547169320163.post-1955199015370386024</id><published>2007-07-31T21:20:00.000-07:00</published><updated>2007-08-01T03:48:38.233-07:00</updated><category scheme="http://www.blogger.com/atom/ns#" term="ನನ್ನ ಜನ"/><category scheme="http://www.blogger.com/atom/ns#" term="ನನ್ನ ಬಾಲ್ಯ."/><category scheme="http://www.blogger.com/atom/ns#" term="ನಮ್ಮೂರು"/><title type='text'>&quot; ಜಿಂದಗಿ ಕಟಿಂಗ್ ಸಲೂನ್ &quot;</title><content type='html'>ನಮ್ಮೂರಿನಲ್ಲೇ ಜಗತ್ಪ್ರಸಿದ್ದವಾದ ಕಷ್ಟದಂಗಡಿಯ ನಿಂಗನಿಗೆ, ಯಾವ ದೇವತೆ ಕನಸಿನಲ್ಲಿ ಬಂದು ಅವನ ಅಂಗಡಿಗೆ &quot; ಜಿಂದಗಿ ಕಟಿಂಗ್ ಸಲೂನ್&quot; ಎಂಬ ಹೆಸರು ಸೂಚಿಸಿದ್ದಳೋ ಅರಿಯೆ,ರಾತ್ರೋ ರಾತ್ರಿ ಊರಿನ ಎಕೈಕ ಪಾರ್ಟ ಟೈಂ ಪೆಂಟರ ಆದ ಕೊಟ್ರನನ್ನು ಕರೆಸಿ, ಅವನ ಎಂದಿನ ಕಾಗಕ್ಕ ಗುಬ್ಬಕ್ಕ ಶೈಲಿಯಲ್ಲಿ &quot;ಜಿಂದಗಿ ಕಟಿಂಗ್ ಸಲೂನ್&quot; ಎಂದು ಬರೆಸಿ ಧನ್ಯನಾದ.&lt;br /&gt;&lt;br /&gt;     ನಿಂಗನಿಗೆ  ಈ ಕಸುಬು ಅವನ ಹಿರಿಯರು ಬಿಟ್ಟು ಹೋದ ಎಕೈಕ ಬಳುವಳಿ.ನಮ್ಮೂರಿನ ಸಮಸ್ತ ತಲೆಗಳ ಉಸ್ತುವಾರಿಯೂ ಇವನದೇ ಆಗಿತ್ತು.ಅಷ್ಟಕ್ಕು ಇವನ ಕಷ್ಟದಂಗಡಿ ಎಂದರೆ ಊರಿನ ಮಧ್ಯದ ಪಂಚಾಯತಿ ಕಟ್ಟಡಕ್ಕೆ ಅಂಟಿದ, ಹಳೆ ಕಟ್ಟಿಗೆ ಹಲಗೆಗಳ ಗೂಡಂಗಡಿ.ಅದರ ಒಳಭಾಗವನ್ನೆಲಾ ಶುಕ್ರವಾರದ ಚಿತ್ರಮಂಜರಿಯ ಪೇಪರುಗಳನ್ನು ಅಂಟಿಸಿ, ಆ ಗೂಡಂಗಡಿಗೂ ಗ್ಲಾಮರ್ ನೀಡಿದ್ದ. ಆ ಚಿತ್ರಮಂಜರಿಯ ಪುಟ ಆರಿಸುವಾಗಲೂ ವೀಶೆಷ ಕಾಳಜಿ ವಹಿಸಿ, ಆಗಿನ ಕಾಲದ ಯುವಕರ ಅರಾದ್ಯ ದೈವವಾಗಿದ್ದ ಡಿಸ್ಕೊ ಶಾಂತಿ ಮತ್ತು ಸಿಲ್ಕ ಸ್ಮಿತಾರ ಪೋಸುಗಳು ಇರುವಂತೆ ನೋಡಿಕೊಂಡು ತನ್ನ &quot; Marketing strategy &quot; ತೋರಿದ್ದ.ಗೋಡೆಗೆ ತಗುಲಿದಂತೆ ಇರುವ ಒಂದು ಶೆಲ್ಫು, ಅದರ ಮೇಲೆ ತರಹೇವಾರಿ ಕತ್ತರಿಗಳು,ಹೊಲಸು ತುಂಬಿದ ಬಾಚಣಿಕೆಗಳು ಮತ್ತು ಹೆಸರೇ ಕೇಳಿರದ ಲೋಕಲ ಬ್ರಾಂಡಿನ ಬ್ಲೇಡು,ಶೇವಿಂಗ್ ಕ್ರೀಮು, ಸ್ನೋ,ಪೌಡರಗಳು ಮತ್ತು ಇಡೀ ಅಂಗಡಿಗೆ ಕಳಶಪ್ರಾಯವಾದ ಎರಡು ಅಭಿಮುಖವಾದ ಕನ್ನಡಿಗಳು, ಅದರ ಮೇಲೆ ವಿವಿಧ ಹೇರ ಸ್ಟೈಲಿನ ಫೋಟೊ ಮತ್ತದರ ಪಕ್ಕದಲ್ಲಿ ನಮ್ಮೂರ ಪಡ್ಡೆಗಳ ೨೪/೭ ಆರಾದ್ಯ ದೈವವಾದ ರವಿಚಂದ್ರನ್, ಖೂಷ್ಬುಳನ್ನು ತಬ್ಬಿ ನಿಂತ ದೊಡ್ಡ ಪೊಸ್ಟರು.ಇವೆಲ್ಲದರ ಜೊತೆಗೆ ಅಂಗಡಿಯ ತುಂಬೆಲ್ಲಾ ಬಿದ್ದಿರುವ ಕರಿ ಬಿಳಿ ಬಣ್ಣದ ವಿವಿಧ ಸೈಜಿನ ಕೂದಲುಗಳು..&lt;br /&gt;&lt;br /&gt;            ಈ ನಿಂಗ,ಹೊಸ ಹೆಸರಿನೊಂದಿಗೆ ತಿರುಗುವ ಖುರ್ಚಿಯನ್ನು ಇಡಿ ಅಬ್ಬಿಗೇರಿಗೆ ಪ್ರಥಮವಾಗಿ ಪರಿಚಯಿಸಿ, ಊರಿನ ಮೊದಲಿಗರ ಪಟ್ಟಿಯಲ್ಲಿ ತಾನು ಸೇರಿಕೊಂಡ.ಅಂಗಡಿಗೆ ಬರುವ ಪಡ್ಡೆಗಳಿಗೆ ಮಿಲ್ಟ್ರಿ ಕಟ್ಟಿಂಗು, ಪಂಕು,ಸ್ಲೋಪು,ಸೈಡ್ ಲಾಕು ಅಂತೆಲ್ಲಾ ಅವರ ತಲೆಗಳನ್ನೆಲ್ಲಾ ತನ್ನ ಪ್ರಯೋಗಳಿಗೆ ಒಡ್ಡುತ್ತಿದ್ದ.ತನ್ನಂಗಡಿಗೆ ಹೊಸ ಟೇಪ ರೇಕಾರ್ಡರ್ ತಂದಾಗಲಂತೂ, ಇಡಿ ದಿನ ರವಿಚಂದ್ರನನ &quot; ಕಮಾನು ಡಾರ್ಲಿಂಗ್&quot; ಅಂತ ಹಾಡು ಹಾಕಿ, ದಾರಿಯಲ್ಲಿ ಓಡಾಡುವ ಹೆಂಗಸರಿಗೆ ಮುಜುಗರ ತಂದಿಕ್ಕುತ್ತಿದ್ದ.&lt;br /&gt;&lt;br /&gt;        ಈ ನಿಂಗ ಮಾತ್ರ ಹೀಗಿದ್ದನೋ ಅಥವಾ ಎಲ್ಲಾ ಊರ ಕ್ಷೌರಿಕರು ಹೀಗೋ ಗೊತ್ತಿಲಾ! ತಲೆಕೂದಲು ಕೆತ್ತುವದರೊಂದಿಗೆ, ಎಲ್ಲ ಮನೆಗಳ&lt;br /&gt;ಗಾಸಿಪ್ಪುಗಳನ್ನು ಉಪ್ಪು ಖಾರ ಹಚ್ಚಿ ಮಸಾಲೆ ಅರೆದು ಹೇಳುತ್ತಿದ್ದ, ಮಲ್ಯನ ಬಗ್ಗೆ ರಂಜನಿಯ ಕಥೆಗಳನ್ನು ಹೇಳುತ್ತಿದ್ದ,&quot;ಬೆಂಗ್ಳೂರಲ್ಲಿ ರಾಜ್ ಕುಮಾರನ್ನ ಬೈದರೆ ಅಲ್ಲೇ ಒದೆ ಬಿಳುತ್ತವೆ&quot; ಅನ್ನುವ ಅತಿರಂಜಿತ ಸುದ್ದಿಗಳನ್ನು ಹೇಳುತ್ತಿದ್ದ ಮತ್ತು ರಾಜ್ಕುಮಾರನ್ನ &quot;ಅಣ್ಣಾವ್ರು&quot; ಅಂತಲೇ ಕರೀಬೇಕು ಅಂತ ಬೆಂಗಳೂರು ಶಿಷ್ಟಾಚಾರ ಕಲಿಸುತ್ತಿದ್ದ, ಸಿನಿಮಾ ನಟಿಯರ ಬಗ್ಗೆ ರೋಚಕ ಕಥೆಗಳನ್ನು ಹೇಳಿ ನಮ್ಮಂತಹ ಪಡ್ಡೆಗಳಿಗೆ ಮಾರ್ಗದರ್ಶನ ಮಾಡುತ್ತಿದ್ದ ಮತ್ತು ಕೆಲ &quot; ಆ ಥರಾ&quot; ನಟಿಯರ ರೇಟುಗಳನ್ನು ಹೇಳಿ ನಮಗೇನೋ ಒಂತರ ಕೂತುಹಲವನ್ನೂ ಮೂಡಿಸಿದ್ದ.ಅವನ ಅಂಗಡಿ ಎಂದರೆ ಮುಕ್ತವಾಗಿ ಶುಕ್ರವಾರದ ಪೇಪರ್ ಓದುವ ಮತ್ತು ಹೀರೋಯಿನ್ನುಗಳನ್ನು ಮುಕ್ತವಾಗಿ ನೋಡುವ ಅಡ್ಡಾ ಆಗಿತ್ತು, ಹಳೆ ರೂಪತಾರಾ ತಂದಿಟ್ಟು ನಮ್ಮ ಕೂತುಹಲವನ್ನು ಇನ್ನು ಹೆಚ್ಚಿಸುತ್ತಿದ್ದ.ಕಾಲೇಜಿಗೆ ಹೋಗುವಾಗ ಯಾವುದಕ್ಕೂ ಇರ್ಲಿ ಅಂತ ಕ್ರಾಪು ತಿದ್ದಿಕೊಳ್ಳುವವರಿಗೆ ಅವನ ಅಂಗಡಿ ಆಧಾರವಾಗಿತ್ತು.ಹುಡುಗರ ಗುಪ್ತ ಸಮಸ್ಯೆಗಳಿಗೆ ಎಲ್ಲಾ ಬಲ್ಲವನಂತೆ ತನಗೆ ತಿಳಿದದ್ದನ್ನು ಹೇಳಿ ಅವರನ್ನೂ ಇನ್ನೂ ಗೊಂದಲಕ್ಕೆ ಕೆಡವುತ್ತಿದ್ದ. &lt;br /&gt;&lt;br /&gt;         ಮಧ್ಯವಯಸ್ಸು ದಾಟಿದ್ದರೂ ಒಂದು ಬಿಳಿ ಕೂದಲು ಕಾಣಿಸದ ದೊಡ್ಡ ಗೌಡರ ಕರಿಕೂದಲಿನ ರಹಸ್ಯ ಇವನಿಗೆ ಮಾತ್ರ ಗೊತ್ತಿತ್ತು. ಯಾರೇ ಬಂದು &quot; ಗದ್ಲ ಐತೇನೋ ನಿಂಗಪ್ಪಾ? &quot; ಅಂತ ಕೇಳಿದ್ರೆ &quot; ನೆಕ್ಸ್ಟ ನಿಮ್ದ ಪಾಳೆ&quot; ಅಂತೆಲ್ಲಾ ಒಳು ಬಿಟ್ಟು ಅನೇಕ &quot; ನೆಕ್ಸ್ಟು&quot; ಮಾಡಿ ಅವರನ್ನು ಕಾಯಿಸಿ ಕಾಯಿಸಿ ಸತಾಯಿಸುತ್ತಿದ್ದ.ಬಾಯಿ ಸುಮ್ನಿರದ ನಿಂಗ &quot; ಈ ಭಾರಿ ಕಾಂಗ್ರೆಸ್ಸೇ ಬರೋದು &quot; ಅಂತ ಭವಿಷ್ಯ ನುಡಿದು ನಮ್ಮೂರ ಭಜರಂಗಿಗಳ ಕೆಂಗಣ್ಣಿಗೆ ಗುರಿಯಾಗಿದ್ದ. ಒಟ್ನಲ್ಲಿ ನಿಂಗ ನಮ್ಮುರ ಜೀವನದ ಅವಿಭಾಜ್ಯ ಅಂಗವಾಗಿದ್ದ..&lt;br /&gt;&lt;br /&gt;               ಮೊನ್ನೆ &quot;..... ಮೆನ್ಸ್ ಹೇರ ಸ್ಟೈಲ್&quot; ಹೆಸರಿನ ಕಷ್ಟದಂಗಡಿಗೆ ಹೋಗಿದ್ದೆ &quot; ಸಾರ್ , ಆಯಿಲ್ ಹಾಕ್ಲಾ &quot; ಎಂದು ಕೇಳಿದಾಗ ಆಯಿಲ್ಲಿನ ಮರ್ಮ ತಿಳಿಯದೆ ಹೂಂ ಅಂದೆ. ಸ್ವಲ್ಪ ಎಣ್ಣೆ ಹಚ್ಚಿ ತಲೆ ಉಜ್ಜಿದವನೆ,&quot; ಎಷ್ಟು ಗುರು&quot; ಅಂದ್ದಿದ್ದಕ್ಕೆ &quot; ನೈಂಟಿ ರುಪೀಸ್ ಸರ್&quot; ಎಂದು ತಲೆಯ ಜೊತೆಗೆ ಜೇಬನ್ನು ಬೋಳಿಸಿ ಕಳಿಸಿದಾಗ ನಿಂಗ ನೆನಪಾದ.&quot; ಉದ್ರಿ ಮಾನಭಂಗ&quot; ಎಂದು ಬರೆದಿದ್ದರೂ ಚೆನ್ನಾಗಿ ಕೆರೆಸಿಕೊಂಡು &quot;ಹತ್ತಿ ಬಂದಾಗ ಇಸಗೊಂಡು ಹೋಗು&quot; ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದದು  ಮತ್ತು ಅವನು ಉಚಿತವಾಗಿ ಮಸಾಜ್ ಮಾಡುತ್ತಿದ್ದುದು, ಚಿಕ್ಕವನಾಗಿದ್ದಗ &quot; ಕಷ್ಟಕ ಒಲ್ಲೆ &quot; ಅಂತಾ ಅಳುತ್ತಿದ್ದವನನ್ನು ಕಥೆ ಹೇಳಿ ಕ್ಷೌರ ಮಾಡುತ್ತಿದ್ದದು, ಎಲ್ಲಾ ಕಣ್ಮುಂದೆ ಹಾದು ಹೋಯಿತು..</content><link rel='replies' type='application/atom+xml' href='http://scpatil.blogspot.com/feeds/1955199015370386024/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/1955199015370386024' title='13 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/1955199015370386024'/><link rel='self' type='application/atom+xml' href='http://www.blogger.com/feeds/7270070547169320163/posts/default/1955199015370386024'/><link rel='alternate' type='text/html' href='http://scpatil.blogspot.com/2007/07/blog-post_31.html' title='&quot; ಜಿಂದಗಿ ಕಟಿಂಗ್ ಸಲೂನ್ &quot;'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><thr:total>13</thr:total></entry><entry><id>tag:blogger.com,1999:blog-7270070547169320163.post-3939799113645685057</id><published>2007-07-15T20:29:00.000-07:00</published><updated>2007-08-16T20:11:33.051-07:00</updated><category scheme="http://www.blogger.com/atom/ns#" term="ನನ್ನ ಜನ"/><category scheme="http://www.blogger.com/atom/ns#" term="ನನ್ನ ಬಾಲ್ಯ."/><category scheme="http://www.blogger.com/atom/ns#" term="ನಮ್ಮೂರು"/><title type='text'>ಅಬ್ಬಿಗೇರಿಯ ಬಸ್ ಸ್ಟಾಂಡು</title><content type='html'>ಮೊದಲು ಅಬ್ಬಿಗೇರಿಗೆ ಬಸಸ್ಟಾಂಡು ಎಂದರೆ ಗಾಂಧಿಚೌಕವಾಗಿತ್ತು.ಕೂಡ್ರಲು ಹೋಗ್ಲಿ ನಿಲ್ಲಲೂ ಸಹ ಜಾಗವಿಲ್ಲದ ಜನ ಅಲ್ಲೆ ಹತ್ತಿರದ ಪರಿಚಯಸ್ತರ ಮನೆ ಹೊಕ್ಕು ಬಸ್ಸು ಬರುವರೆಗೂ ಅ ಮನೆಯವರ ಇತಿಹಾಸವನ್ನೆಲ್ಲಾ ಬಗೆದು, ಹೊಸದೊಂದನ್ನು ಸಂಶೋದಿಸಿದ ಖುಷಿಯಲ್ಲಿ ಬೀಗುತ್ತಿದ್ದರು.ತೀರ ಇತ್ತಿಚೆಗೆಷ್ಟೆ ನಮ್ಮೂರಿಗೆ ಹೊಸ ಬಸ್ ಸ್ಟಾಂಡು ಸ್ಯಾಂಕ್ಸನ್ ಆಗಿ ಈ ರೀತಿಯ ಇತಿಹಾಸಕಾರರು ನಿರುದ್ಯೊಗಿಗಳಾದರು.ನಮ್ಮೂರ ಬಸ್ ಸ್ಟಾಂಡು ಬರೀ ಬಸ್ ಹಿಡಿಯಲು ಮಾತ್ರ ಉಪಯೋಗವಾಗಿದ್ದರೆ ಇದನ್ನು ಬರೆಯುವ ಮಾತೆ ಬರುತ್ತಿರಲಿಲ್ಲಾ! ಅದು ನರೇಗಲ್ಲಿಗೆ &quot;ಕಾಲ್ಮೆಂಟ್ ಸಾಲಿ&quot; ಕಲಿಯಲು ಹೋಗುವವರು, ಗದಗಿಗೆ ಕದ್ದು ಚೈನಿ ಹೊಡೆಯಲು  ಹೋಗುವವರು, ಅಷ್ಟೆ ಯಾಕೆ ರೋಣಕ್ಕೆ ಹೋಗಿ &quot; ಒಂದು ಕ್ವಾರ್ಟರ&quot; ಹಾಕ್ಕೊಂಡೆ ವಸತಿ ಬಸ್ಸಿಗೆ ಬರುವವರ ಅವಿಭಾಜ್ಯ ತಾಣವಾಗಿತ್ತು.ಮೊದಲೆಲ್ಲಾ ಬಯಲಾಗಿದ್ದ ಬಸ್ ಸ್ಟಾಂಡು ಕಾಲ ಕಳೆದಂತೆಲ್ಲಾ &quot;ದಿಲ್ ರೂಬಾ ಪಾನ್ ಶಾಪ್&quot; ನಿಂದ ಹಿಡಿದು, ಮೂಂದೆ ಗೋಣೆಚೀಲ ಮರೆ ಮಾಚಿ ಒಳಗೆ ಚಿಕ್ಕ ಬಾಕಿರಿಸಿ, ಐದಾರು ಗ್ಲಾಸುಗಳೊಂದಿಗೆ ಬರ್ಜರಿ ಕಂಟ್ರಿ ಸಾರಾಯಿ ಮಾರುವ ಹುಸೇನಿಗೂ ಮತ್ತು ಹೊಸದಾಗಿ ಆರಂಬಿಸಿದ &quot; ಬಸವೇಶ್ವರ ಮಿಲಿಟ್ರಿ ಖಾನಾವಳಿ&quot;ಗೂ ವ್ಯಾಪಾರಸ್ಥಾನವಾಯಿತು.&lt;br /&gt;&lt;br /&gt;           ಹೊಸ ಬಸ್ಟ್ಯಾಂದು ಎಲ್ಲರ ಖುಶಿಗೆ ಕಾರಣವಾದರೂ ನಮ್ಮುರ ಪ್ರಗತಿಪರ ಯುವಕರು ಉರ್ಫ ಪಡ್ಡೆ :-)ಗಳಿಗೆ ಮಾತ್ರ ಭಯಂಕರ ಸಿಟ್ಟು ಬಂದಿತ್ತು.ಯಾಕೆಂದರೆ ಸಂವಿಧಾನದಲ್ಲೆ ಸಮಾನತೆಯ ಬಗ್ಗೆ ಪ್ರಸ್ತಾಪವಿದ್ದರೂ, ಲೀಂಗಭೇಧ ಮಾಡಬಾರದು ಎಂದು ದಿನವೂ ಜಾಹೀರಾತು ಬರುತ್ತಿದ್ದರೂ ಅದನ್ನು ಅರ್ಥ ಮಾಡಿಕೊಳ್ಳದ ಪಂಚಾಯತಿ ಸೂ... ಮಕ್ಕಳು &quot; ಗಂಡಸರಿಗೆ&quot; ಮತ್ತು &quot; ಹೆಂಗಸರಿಗೆ&quot; ಎಂದು ಬರೆಸಿದ ಎರಡೆರಡು ಖೋಲಿ ಮಾಡಿಸಿ ನಮ್ಮೂರಿನ  ಸಮಾನತೆಯ ಹರಿಕಾರರಿಗೆ ಈ ಜನ್ಮದಲ್ಲೆ ಮರೆಯಲಾಗದ ಅನ್ಯಾಯ ಮಾಡಿದ್ದರು.ಇಷ್ಟಕ್ಕೆ ಸೋಲೋಪ್ಪಿಕೊಳ್ಳದ ವಾನರಸೇನೆ ಹೆಂಗಸರ ಕೋಣೆಗೆ ರಾತ್ರಿ ನುಗ್ಗಿ &quot; ಸುಮಾ ಐ ಲವ್ ಯೂ&quot; &quot; ಭಾಗ್ಯ ಪ್ರೀತ್ಸೆ&quot; &quot;ಬಸು ಜೊತೆ ವಾಣಿ&quot; ಎಂದು  ಬರೆದು ಬಸ್ ಸ್ಟಾಂಡಿನ ಗೋಡೆಗಳಲ್ಲೇ ಪ್ರೇಮ ನೀವೆದನೆ ಮಾಡಿಕೊಂಡು, ಮೇಘಧೂತ ರಚಿಸಿದ ಕಾಳಿದಾಸನಿಗೂ ಹೊಳೆಯದ ಸಾದ್ಯತೆಗಳನ್ನು ಅನ್ವೇಷಿಸಿದ್ದರು. ಇನ್ನೂ ಕೆಲ ಚಿತ್ರ ರಸಿಕರು ರವಿಚಂದ್ರ, ಪ್ರೇಮಲೋಕ,ರಸಿಕ, ಮಲ್ಲ ಇತ್ಯಾದಿ ಚಿತ್ರಗಳ ಹೆಸರನ್ನು ಬರೆದು ತಮ್ಮ ಅಭಿಮಾನವನ್ನು ತೋರುತ್ತಿದ್ದರು.ಆದರೆ ಉಪೇಂದ್ರನ ಅಭಿಮಾನಿಗಳು ಮಾತ್ರ ಸ್ವಲ್ಪ ಡಿಫರೆಂಟು. ಅವರು  ಉಪೇಂದ್ರನ ರೇಖಾಚಿತ್ರವನ್ನು ಗೋಡೆಯ ಮೇಲೆ ಬಿಡಿಸಿ ಅದರ ಮೇಲೆ &quot;ಮಾಂತೇಶ&quot; ಅಂತ ಕಲಾವಿದನ ಹೆಸರನು ಸಹ ಬರೆದು ತಾಯಿ ಕಲಾ ಸರಸ್ವತಿಗೂ ಮುಜುಗರವನ್ನುಂಟು ಮಾಡುತ್ತಿದ್ದರು. &lt;br /&gt;&lt;br /&gt;           ಪ್ರತಿ ಹೊಸವರ್ಷಕ್ಕೂ &quot;Wish you happy new year 200... &quot; ಅಂತ ವಿಶ್ ಮಾಡದೆ ಇದ್ದರೆ ನಮ್ಮೂರ ಕ್ರಿಯಾಶೀಲ ಸಂಘಗಳಾದ &quot;ವೀವೆಕಾನಂದ ಯುವಕ ಸಂಘ&quot; &quot;ಫ್ರೆಂಡ್ಸ ಸ್ಪೋರ್ಟ್ಸ ಕ್ಲಬ್&quot; &quot; ಫೈವ ಸ್ಟಾರ ಕ್ರಿಕೆಟ್ ಕ್ಲಬ್&quot; ಗಳಿಗೆ ಹೊಸವರ್ಷ ಬಂದಂಗೆ ಅನಿಸುತ್ತಿರಲಿಲ್ಲಾ. ಇನ್ನೂ ಗಂಡಸರ ವಿಭಾಗದ ಬಗ್ಗೆ ಹೇಳದಿರುವದೇ ವಾಸಿ . ಅಲ್ಲಿ ಇಡೀ ಜಾಗತಿಕ ವಿದ್ಯಮಾನಗಳನ್ನು ವಿಶ್ಲೇಷಿಸುವ ಪ್ರಕಾಂಡ ಪಂಡಿತರು, ಗಣೇಶ ಬೀಡಿ ಜಗ್ಗುತ್ತಾ ಹಗಲಿರುಳು ಹರಟೆ ಹೋಡೆಯುತ್ತಿದ್ದರು,ಮದ್ಯ ಮದ್ಯ ಊರಿನ ಆ ಮನೆಯ ಹುಡುಗಿ ಓಡಿ ಹೋದಳು, ಇವರ ಮನೆಯ ಹುಡುಗ ಫೇಲಾದ, ಗೌಡರ ಹಿರಿಸೊಸೆ ಹಿಂತವನೋಂದಿಗೆ ಹೀಗೀಗೆ! ಅಂತೆಲ್ಲಾ  ಎಲ್ಲಾ ಮನೆಗಳ ವರದಿಯನ್ನು ಸಲ್ಲಿಸುತ್ತಾ ತಮ್ಮದೆ ಆದ ಒಂದು ವಿಕ್ಷಿಪ್ತ ಜಗತ್ತನ್ನು ಸೃಷ್ಟಿಸಿಕೊಂಡಿದ್ದರು..&lt;br /&gt;&lt;br /&gt;           ಬಸ್ ಸ್ಟಾಂಡಿನ ಎದುರಿನ ಕಂಪೌಂಡಿನ ಮೇಲೆ ಮಾತ್ರ ನರೇಗಲ್ಲಿನಲ್ಲಿನ ಎಕೈಕ ಟಾಕೀಸಿನಲ್ಲಿ ಪ್ರದರ್ಶನವಾಗುತ್ತಿರುವ ಚಿತ್ರಗಳ ಪೋಸ್ಟರನ್ನು ಅಂಟಿಸಿರುತ್ತಿದ್ದರು.ಕೆಲ ಹುಟ್ಟಾ ಕಲಾವಿದರು ನಕ್ಕ ನಾಯಕನ ಹಲ್ಲಿಗೆ ಕಪ್ಪು ಬಳಿಯುವದು, ನಾಯಕಿಯ ಕಣ್ಣಿಗೆ,ಮತ್ತಿತರ ಅಂಗಾಗಳಿಗೆ ತೂತು ಕೊರೆಯುವದೋ, ಇಲ್ಲವೋ ಅವಳಿಗೆ ಮೀಸೆ ಬರೆಯುವದನ್ನು ಮಾಡಿ ತಮ್ಮ ಕ್ರಿಯಾಶೀಲತೆಗೆ ಮಾದ್ಯಮದ ಹಂಗಿಲ್ಲಾ ಎಂದು ನಿರೂಪಿಸಿ ಧನ್ಯರಾಗುತ್ತಿದ್ದರು.ಹೊಸ ಚಿತ್ರದ ಬಗ್ಗೆ ಮಾಹಿತಿ ನೀಡಲು ಈ ಪೋಸ್ಟರ್ರೆ ಕಾರಣವಾಗಿತ್ತು, ಅಪರೂಪಕ್ಕೆ ಪ್ರದರ್ಶನವಾಗುವ &quot;ದೇವರ&quot; ಚಿತ್ರಗಳ ಪೋಸ್ಟರನ್ನು ಕದ್ದು ಕದ್ದು ನೋಡಿಯೂ &quot;ಡಿಸೆಂಟ್&quot; ಆಗಿ ಉಳಿಯುವ ಕೆಲ ಮನಸ್ಸಿನಲ್ಲೆ ಮಂಡಿಗೆ ತಿನ್ನುವ ಗುಂಪಿನವರೂ ಇರುತ್ತಿದ್ದರು..&lt;br /&gt;&lt;br /&gt;          ಇದಲ್ಲದೆ ನಮ್ಮೂರಿನ ಅನೇಕ ಪ್ರೇಮ ಕಹಾನಿಗಳಿಗೆ ಮುಕ್ತ ವೇದಿಕೆಯಾಗಿತ್ತು.ಪದೇ ಪದೇ ಹುಡುಗನೊಬ್ಬ ಹೆಂಗಸರ ಕೋಣೆಯ ಮುಂದೆ ಓಡಾಡತೊಡಗಿದರೆ ಸಾಕು ನಮಗೆಲ್ಲಾ ಹೊಸ ಪ್ರೇಮಕಥೆಯ ವಾಸನೆ ಬಡಿಯತೊಡಗುತ್ತಿತ್ತು.ಹೆಂಗಸರ ವಿಭಾಗಕ್ಕೆ ಮುಕ್ತ ಪರವಾನಿಗೆ ಇದ್ದ ಬಸವೇಶ್ವರ ಸ್ಕೂಲಿನ ಚಿಲ್ಟಾರಿ ಹುಡುಗರಿಗೆ ಆಗ ಭಾರಿ ಬೇಡಿಕೆ ಇತ್ತು, ಆ ಚಿಂಟುಗಳಿಗೆ ಚಾಕಲೇಟು, ಐಸ್ ಕ್ಯಾಂಡಿ ಕೊಡಿಸಿ &quot; ಅಲ್ಲಿ ಕೊನೆಗೆ ಗುಲಾಬಿ ಚೂಡಿಯ ಅಕ್ಕ ಕೂತಿದ್ದಾಳಲ್ಲಾ, ಆ ಅಕ್ಕನ ಕೈಗೆ ಇದನ್ನು ಕೊಡು, ನಾ ಕೊಟ್ಟೆ ಅಂತ ಮಾತ್ರ ಹೇಳಬಾರದು. ನೀ ಜಾಣಮರಿ ಅಲ್ವಾ? &quot; ಅಂತೆಲ್ಲಾ ಆ ಹುಡುಗರನ್ನು ಪುಸಲಾಯಿಸಿ ಅವರ ಕೈಯಲ್ಲಿ ಪ್ರೇಮಪತ್ರಗಳ ಬಟವಾಡೆಯಾಗುತ್ತಿತ್ತು. ಕೆಲವೊಮ್ಮೆ ಹುಡುಗಿಯರು ಪತ್ರಗಳನ್ನು ಇಸಿದುಕೊಳ್ಳಲು ನಿರಾಕರಿಸಿದಾಗ, ಪತ್ರ ಕೊಟ್ಟವನನ್ನು ಈ ಚಿಲ್ಟಾರಿಗಳು ಹುಡುಕುವದು ಮತ್ತು ಅದು ಇನ್ಯಾರ ಕೈಗೋ ಸಿಕ್ಕಿ ಯಡವಟ್ಟಾಗುವದು ಮಾಮೂಲಿನ ಸಂಗತಿಗಳಾಗಿದ್ದವು.&lt;br /&gt;&lt;br /&gt;         ಬೆಳಗ್ಗೆ ಮತ್ತು ಸಾಯಂಕಾಲ ನರೇಗಲ್ಲಿನ ಕಾಲೇಜು ಬಿಡುವ ಹೊತ್ತಿಗೆ ಇಡಿ ಊರಿನ ಗಂಡು ಸಂತಾನವೇ ಕಾಲೇಜು ಕನ್ಯೆಯರ ದರುಶನ ಭಾಗ್ಯಕಾಗಿ ಹಾತೊರೆದು ಬಸ್ ಸ್ಟ್ಯಾಂಡಿನಲ್ಲಿ ಠಳಾಯಿಸುತ್ತಿದ್ದರು ಮತ್ತು ವಿವಿಧ ಅಂಗ ಚೇಷ್ಟೆಗಳನ್ನು ಮಾಡಿ ಹುಡುಗಿಯರ ಗಮನ ಸೆಳೆಯಲು ಮತ್ತು ಅವರ ಕೈಯಲ್ಲಿ &quot;ಹೀರೊ&quot; ಅನ್ನಿಸಿಕೊಳ್ಳುವ ಎಲ್ಲ ಬಗೆಯ ಸರ್ಕಸ್ಸುಗಳನ್ನು ಮಾಡುತ್ತಿದ್ದರು. ಕೆಲ ಕಿಲಾಡಿ ಹುಡುಗಿಯರು ಇವರ ಕಡೆ ನೋಡಿ ಕಿಸಕ್ಕೆಂದು ನಕ್ಕು ಇವರ ಕಾರ್ಯಕ್ಕೆ ಕೈಲಾದ ಪ್ರೋತ್ಸಾಹ ನೀಡುತ್ತಿದ್ದರು ಮತ್ತು &quot; ನಮ್ಮಂಗ ಹುಡುಗ್ಯಾರು ಸಹ ಬರಿ ಹುಡುಗ್ರ ಬಗ್ಗೆನೆ ಮಾತಾಡ್ತಾ ಇರ್ತಾರೆ&quot; ಎಂಬ ನಂಬಿಕೆಯಲ್ಲಿ ಇಡಿ ಅಬ್ಬಿಗೇರಿಯ ಯುವ ಸಂತತಿ ಕಾಲಹರಣ ಮಾಡುತ್ತಿತ್ತು.ತಾವು ಕಾಲೇಜಿಗೆ ಹೋಗದಿದ್ದರೂ ಬಸ್ ಸ್ಟಾಂಡಿಗೆ ಬಂದು ತಮ್ಮ &quot;ಲವ್ವರು&quot;ಗಳನ್ನು ಕಣ್ತುಂಬಿಕೊಂಡು ಮನೆಗೆ ಹೋಗುತ್ತಿದ್ದರು.&lt;br /&gt;&lt;br /&gt;&lt;br /&gt;          ಊರಿಗೆ ಹೊಸದಾಗಿ ಬರುವವರು, ಜಾತ್ರೆ ಹಬ್ಬ ಹರಿದಿನಗಳಿಗೆ ಮಾತ್ರ ಬರುವ ಪಾರ್ಟ ಟೈಮ್ ಫಿಗರುಗಳು,ವರ್ಗವಾಗಿ ಬರುವ ಕನ್ನಡ ಸಾಲಿ ಮಾಸ್ತರು, ಮತ್ತು ಯಾವ ಹುಡುಗಿಗೆ ಯಾವ ಹುಡುಗ ಲೈನ್ ಹೊಡೆಯುತ್ತಾನೆ, ಯಾವ ಹುಡುಗಿ ಯಾರಿಗೆ ಹಾರಿದ್ದಾಳೆ ಇತ್ಯಾದಿ ಮಾಹಿತಿಗಳು ಬಸ್ ಸ್ಟ್ಯಾಂಡಿನ ಪಕ್ಕದ &quot;ದಿಲ್ ರೂಬಾ ಪಾನ್ ಶಾಪ್&quot; ನ ಬಸುನ ಬಳಿ ಸದಾ ಲಬ್ಯ.ಕೆಲ ಪ್ರೇಮ ಪತ್ರಗಳ ಮಾದರಿಯನ್ನು ಇಟ್ಟುಕೊಂಡು ತನ್ನ ಅಂಗಡಿಯ ಘನತೆಯನ್ನು ಹೆಚ್ಚಿಸಿಕೊಂಡಿದ್ದ ಮತ್ತು ಅನನುಭವಿಗಳಿಗೆ ದಾರಿ ತೋರುವವನಾಗಿದ್ದ.&quot;ಕುಚ್ ಕುಚ್ ಹೋತಾ ಹೈ&quot; ಚಿತ್ರದಲ್ಲಿನ &quot;ಫ್ರೆಂಡ್ ಶಿಪ್&quot; ಬೆಲ್ಟನ್ನು ಅಬ್ಬಿಗೇರಿಗೆ ಪರಿಚಯಿಸಿದ ಕೀರ್ತಿ ಇವನಿಗೆ ಸಲ್ಲಬೇಕು ಮತ್ತು ಕಂಡ ಕಂಡ ಹುಡುಗಿಗೆ ಹುಡುಗರು  ಆ ಬೆಲ್ಟನ್ನು ಕೊಟ್ಟು ಇಡೀ ಅಬ್ಬಿಗೇರಿಯ ಹುಡುಗಿಯರನ್ನು ಗೊಂದಲಕ್ಕೆ ತಳ್ಳುವದರಲ್ಲಿ ಪ್ರಮುಖ ಪಾತ್ರ ವಹಿಸಿದ ಕೀರ್ತಿಯೂ ಈ ಮಹಾಶಯನಿಗೆ ಸಲ್ಲಬೇಕು. ಕದ್ದು ಸ್ಮಾಲ್,ಕಿಂಗು ಹೊಡೆಯುವ ಲೋಕಲ್ ಸುದೀಪರಿಗೆ ಇವನ ಅಂಗಡಿಯೇ ಅಡ್ಡಾ ಆಗಿತ್ತು.&lt;br /&gt;&lt;br /&gt;         ಇದರ ಜೊತೆಗೆ ಬಸ್ ಸ್ಟ್ಯಾಂಡು ಎಂಬುದು ನಮ್ಮೂರ ಹಿರಿ ಕಿರಿ ಪುಂಡರ ಕದನ ಅಖಾಡವಾಗಿತ್ತು.ವಿಶೇಷವಾಗಿ ಈ &quot;ಸ್ವಯಂಸೇವಕರು&quot;  ನಮ್ಮೂರ ವಿಧ್ಯಾರ್ಥಿನಿಯರ ಹಿತ ಕಾಯುವ ಸ್ವಯಂ ಘೋಷಿತ ಸಮಾಜ ಕಾರ್ಯ ಮಾಡುತ್ತಿದ್ದರು. ನಮ್ಮುರಿನ ಹುಡುಗಿಯರನ್ನು ಹಾರಿಸುವ ವಿಶೇಷ ಅಧಿಕಾರ ನಮ್ಮೂರ ಪಡ್ಡೆಗಳಿಗೆ ಮಾತ್ರ ಇತ್ತು.ಬೇರೆ ಊರವರೇನಾದರು ನಮ್ಮೂರ ಹುಡುಗಿಯರ ವಿಷಯಕ್ಕೆ ಬಂದರೆ ಇವರು ಹೋರಾಡಿ ನಮ್ಮೂರ ಹುಡುಗರ ಹಕ್ಕುಗಳನ್ನು ಕಾಯುತ್ತಿದ್ದರು.ಆದರೆ ನಾವು ಮಾತ್ರ ಈ ವಿಷಯದಲ್ಲಿ &quot; ವಿಶ್ವ ಮಾನವ &quot; ತತ್ವಕ್ಕೆ ಬದ್ದರಾಗಿದ್ದೆವು.. &lt;br /&gt;&lt;br /&gt;&lt;br /&gt;        ಅಖಂಡ ಹತ್ತು ವರ್ಷಗಳ ಕಾಲ ಈ ಬಸ್ ಸ್ಟ್ಯಾಂಡಿನಲ್ಲಿ ನರೇಗಲ್ಲಿನ ಬಸ್ಸುಗಳನ್ನ(?) ಕಾದ ನನಗೆ ಇದು ನನ್ನ ಜೀವನದ ಒಂದು ಭಾಗವೇ ಆಗಿ ಹೋಗಿತ್ತು. ಈಗಲೂ ಅಬ್ಬಿಗೇರಿಗೆ ಹೋದರೆ &quot; ದಿಲ್ ರೂಬಾ ಪಾನ್ ಶಾಪ್&quot; ಗೆ ಭೇಟಿಯಾಗಿ, ಹರಟೆಯ ನೆಪದಲ್ಲಿ ನಾವೂ ಸಹಾ ಯಾವುದಕ್ಕು ಇರಲಿ ಎಂದು &quot;ನಾಲ್ಕು ಕಾಳು&quot; ಹಾಕಿಯೇ ಬರುತ್ತೇವೆ, ಅಂದಾಗಲೆ ನಮ್ಮ ಹತ್ತು ವರ್ಷಗಳ ಅನುಭವಕ್ಕೆ ಒಂದು ದಿವ್ಯ ಸಾರ್ಥಕ್ಯ.</content><link rel='replies' type='application/atom+xml' href='http://scpatil.blogspot.com/feeds/3939799113645685057/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/3939799113645685057' title='9 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/3939799113645685057'/><link rel='self' type='application/atom+xml' href='http://www.blogger.com/feeds/7270070547169320163/posts/default/3939799113645685057'/><link rel='alternate' type='text/html' href='http://scpatil.blogspot.com/2007/07/blog-post.html' title='ಅಬ್ಬಿಗೇರಿಯ ಬಸ್ ಸ್ಟಾಂಡು'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><thr:total>9</thr:total></entry><entry><id>tag:blogger.com,1999:blog-7270070547169320163.post-4546990825375639885</id><published>2007-06-18T22:42:00.000-07:00</published><updated>2008-12-11T17:26:48.038-08:00</updated><category scheme="http://www.blogger.com/atom/ns#" term="ನನ್ನ ಜಗತ್ತು"/><title type='text'>ಮುಂಗಾರು ಮಳೆ ಮತ್ತು ನಿರರ್ಥಕ ಭಾನುವಾರ..</title><content type='html'>&lt;a href=&quot;https://blogger.googleusercontent.com/img/b/R29vZ2xl/AVvXsEj7YDFIjehs1C1ETdJ4xDl5kPxwDrrfFaaD5OYH-2A775a_zBgMUmoLRJNEaO5kyYt8tG0VvBr7M7J_6JF_NKv1Pogh8dHsyk31bM7MJnTUXRUSMbwrWUghJCUQtFZSUOYXiXagBiGDHqc/s1600-h/untitled.bmp&quot;&gt;&lt;img style=&quot;display:block; margin:0px auto 10px; text-align:center;cursor:pointer; cursor:hand;&quot; src=&quot;https://blogger.googleusercontent.com/img/b/R29vZ2xl/AVvXsEj7YDFIjehs1C1ETdJ4xDl5kPxwDrrfFaaD5OYH-2A775a_zBgMUmoLRJNEaO5kyYt8tG0VvBr7M7J_6JF_NKv1Pogh8dHsyk31bM7MJnTUXRUSMbwrWUghJCUQtFZSUOYXiXagBiGDHqc/s320/untitled.bmp&quot; border=&quot;0&quot; alt=&quot;&quot;id=&quot;BLOGGER_PHOTO_ID_5077694438194081010&quot; /&gt;&lt;/a&gt;&lt;br /&gt;&lt;br /&gt;        ಪ್ರತಿ ಭಾನುವಾರದಂತೆ ಈ ಭಾನುವಾರವು ಹೊತ್ತೆರುವವರೆಗೂ ಹಾಸಿಗೆಯಲ್ಲಿ ಹೊರಳಾಡಿ ಪ್ರತಿಬಾರಿಯೂ ನಮ್ಮ ಹಿಂದಿನ &quot; ಲೇಟಾಗಿ ಎದ್ದ&quot; ಧಾಖಲೆಗಳನ್ನುಉತ್ತಮಪಡಿಸುತ್ತಾ ಸಾಗಿರುವ ನಂಗೆ, ರೂಮಿಗೆ ಹೊಸದಾಗಿ ಬಂದು ವಕ್ಕರಿಸಿರುವ ಅನಿವಾರ್ಯ ಮಿತ್ರ ರಾಜು ಗೊಳಸಂಗಿ ಅಲಿಯಾಸ್ ಫಿನಿಕ್ಸನ್ನು  ಎಬ್ಬಿಸಿ, ಮಾಮೂಲಿನಂತೆ ಮೋಬೈಲಿನಲ್ಲಿ ಕಣ್ಣಾಡಿಸಿದಾಗ,   ತನ್ನ   ಕ್ರಿಕೆಟ್ಟ್ ತಾಲಿಮಿಗಾಗಿ ಬೇಗ ಎದ್ದು(ದೇವರಾಣೆಗೂ ಪರೀಕ್ಷೆಗೂ ಬೇಗ ಏಳದ ಸೂರ್ಯವಂಶಿ)ಕ್ರಿಕೆಟ್ಟು  ಆಡಲು ಹೋಗಿದ್ದ ನಮ್ಮ ಮನೋಜನ ಮೇಸೆಜು ನೊಡಿದ ತಕ್ಷಣ ನಂಗೆ ಎನೋ ಘಾತ ಕಾದಿದೆ ಅನಿಸ್ತು. ಹೀಗಿತ್ತು ಅವನ ಮೇಸೆಜು  &quot;Lets go to mungaaru male, get tickets for me too, I ll come n join &quot; ಎಂಬ ಹೊಸ ಠರಾವನ್ನು ಪಾಸು ಮಾಡಿ, ಮೊದಲೇ ಲೇಟಾಗಿ ಎದ್ದ ನಮಗೆ ಇನ್ನಷ್ಟು ಗೊಂದಲ ಮೂಡಿಸಿ ಧನ್ಯನಾದ. ಹಾಂ!  ನಮ್ಮ ಮನೋಜ ಬಿ ಎಮ್ ಎಸ್ ನಲ್ಲಿ ನಡೆದ ’ಉತ್ಸವ’ ನ ಕನ್ನಡ ಚಿತ್ರವಿಮರ್ಶೆ ಸ್ಪರ್ದೆಯಲ್ಲಿ &quot; ಮುಂಗಾರು ಮಳೆಯನ್ನು&quot; ಹಿಗ್ಗಾ ಮುಗ್ಗಾ ವಿಮರ್ಶಿಸಿ ಪ್ರಥಮ ಸ್ಥಾನ ಪಡೆದ ಮೇಲೆಯಂತೂ ಆ ಚಿತ್ರದ ಮೇಲಿನ ಗೌರವ,ಭಕ್ತಿ ಇನ್ನೂ ಹೆಚ್ಚಾಗಿದೆ, ಆ  ಪಾಪಿ ಮುಂಡೆದಕ್ಕೆ..&lt;br /&gt;&lt;br /&gt;       ವಾಚು ನೋಡಿದವನೇ ನಾನು ಫಿನಿಕ್ಸನ್ನು ಉದ್ದೆಶಿಸಿ &quot; ಲೇ ನಂಗಂತೂ ರೆಡಿಯಾಗಲೂ ಹತ್ತು ನಿಮಿಷ ಸಾಕು,ಸೂ... ಮಗನ ಹುಡುಗ್ಯಾರ ತರಾ ತಾಸುಗಟ್ಲೆ ತೊಗೋಬ್ಯಾಡ, ಲಗೂ ನಡಿ ಮಗನ ಪಿಚ್ಚರಿಗೆ ಹೋಗುನು&quot; ಅಂದೆ. ಮುಂಗಾರು ಮಳೆಯನ್ನು ನನ್ನೊಂದಿಗೆ ನೋಡಿ ತನ್ನೆಲ್ಲಾ ಸುಖ ದುಃಖಗಳನ್ನು ಆ ಚಿತ್ರದೊಂದಿಗೆ ಸಮೀಕರಿಸಿ, ಒಂದು ವಾರ ಕಾಲ ರಾತ್ರಿಯೆಲ್ಲಾ &quot;ಬ್ಲೇಡಾಯಣ&quot;ಕ್ಕೆ ಸಾಕಾಗುವಷ್ಟು ಸರಕು ಹೊಂದಿಸಲು ನಮ್ಮ ಫಿನಿಕ್ಸಿಗೆ ಸುವರ್ಣಾವಕಾಶವಾಯಿತು. ತಟಕ್ಕನೆ &quot; ನೋಡ ಮಗನ ೧೦ ನ್ನುವಳಗ ರೆಡಿ ಆಕ್ಕೇನಿ&quot; ಎಂದವನೆ ನಮ್ಮ ರಾಜೀವ ದಿಕ್ಷಿತರ ಭಾಷಣದ ಪ್ರೇರಣೆಯಿಂದ ಜಾಗೃತವಾದ ನಮ್ಮ ಸ್ವದೇಶ ಪ್ರೇಮಕ್ಕೆ ಕುರುಹಾಗಿರುವ &quot;ಮಿಸ್ವಾಕ್&quot; ಟೂತ್ ಪೇಸ್ಟನಿಂದ ಹಲ್ಲುಜ್ಜತೊಡಗಿದ.ಹಾಗೂ ಹೀಗೂ ಮಾಡಿ ರೆಡಿಯಾಗುವಷ್ಟರಲ್ಲಿ ನಾನು ಬಾತ್ ರೂಮಿನಿಂದ &quot;ರೋಕ್ಕ ತಗೋಳ್ಲೆ ಫಿನಿಕ್ಸು&quot; ಅಂದೆ, ಎಲ್ಲರ ಪ್ಯಾಂಟು ತಡಕಾಡಿ ಮೂರು ಜನಕಾಗುವಷ್ಟು ದುಡ್ದು ಹೋಂದಿಸುಷ್ಟರಲ್ಲಿ ಫಿನಿಕ್ಸು ಗುರ್ರೆನತೊಡಗಿತ್ತು  &quot; ಈ ಮಗಗ ಸಾವಿರ ಸರ್ತಿ ಹೇಳೆನಿ, ಜಾಸ್ತಿ ರೊಕ್ಕ ಇಟ್ಕೊಲೆ ಮಗನ ಅಂತ,ಮ್ಯಾಲಿಂದ ಮ್ಯಾಲೆ ಎ ಟಿ ಎಮ್ ಗೆ ಹೋಗಿ ಅವರಮ್ಮ ತರ್ತಾಳೇನು?&quot; ಎಂದು ತನ್ನ ಶುಧ್ದ ಗಾವಟಿ ಭಾಷೆಯಲ್ಲಿ ಗೊಣಗತೊಡಗಿ ನನ್ನ ಮತ್ತು ನಾನು ಕೆಲಸ(?) ಮಾಡುವ ಕಂಪನಿಯ ಮರ್ಯಾದೆಯನ್ನು ಸಿನಿಮಾ ಟಿಕೇಟ್ಟಿಗಾಗಿ ಹರಾಜು ಹಾಕತೊಡಗಿದ . ಸೂಟ್ ಕೇಸಿನಿಂದ  ಇಸ್ತ್ರಿ ಮಾಡಿದ ಬಟ್ಟೆ ತೆಗೆಯಲು ಹೋದ ನಂಗೆ &quot; ಲೇ ಪ್ಯಾಲಿ, ನಿಂಗೆನರ ಹೆಣ್ಣ ನೊಡಾಕ ಹೋಂಟೆವಿ ಅನ್ಕೊಂಡಿಯನ? ಸುಮ್ನ ಇದ್ದಿದ್ದ ಹಾಕ್ಕೊಂಡ್ ಬಾರಲೇ&quot; ಎಂದು ಎಚ್ಚರಿಸಿ ನನ್ನಲ್ಲಿನ ಸಾಫ್ಟವೇರ್ ಇಂಜಿನಿಯರ್ ಪ್ರಜ್ಞೆಗೆ ಅವಮಾನ ಮಾಡಿ ಅಂತು ಇಂತೂ ’ಸೂರಿ ದುನಿಯಾ’ದ ಸ್ಟೈಲಿನಲ್ಲಿ ತಯಾರಾಗಿ ಹೋರಟೆವು .( ಸ್ನಾನ, ಪೂಜೆಗಳೆಲ್ಲವನ್ನು ಬೆಳಗ್ಗೆ ಮಾಡಿದರೆ ಬ್ಯಾಚುಲರ ಜೀವನಕ್ಕೆ ಅವಮಾನ ಎಂದು ಭಾವಿಸಿರುವ ನಾವು ಅದರ ಯೋಚನೆಯನ್ನೂ ಸಹ ಮಾಡುವದಿಲ್ಲಾ, ನಮ್ಮದೆನಿದ್ದರೂ &quot; ನೀರು ಬಚಾವೋ ಆಂದೋಲನ&quot;)  &lt;br /&gt;&lt;br /&gt;         ನಮ್ಮ ಮೆಚ್ಚಿನ ಪೂರಿ ತಿನ್ನುವಾಗಲೆ ನಮ್ಮ ಮನೋಜನ ಕಾಲ್ ಬಂತು &quot; ರೀ ನಾನು ಗಣೇಶ ಭವನದಲ್ಲೆದಿನಿ, ಬೇಗ ಬರ್ರಿ&quot; ಎಂದ.  &quot; ಅಲ್ಲೆ ನಿಂತಿರೋ, ನಾವು ಬರ್ತೆವಿ &quot; ಅಂತ ಭಿನ್ನವಿಸಿಕೊಂಡು ಬಸ್ಸೇರಿ ಅವನನ್ನು ಸೇರಿಕೋಂಡು, ಮೂರು ಜನರ ಸವಾರಿ ಉಮಾ ಥೆಟರಿನತ್ತ ಸಾಗತೊಡಗಿತು. ಬಸ್ಸಲ್ಲಿ ಟಿಕೇಟ್ಟು ಕೊಡದೆ ಚಿಲ್ಲರೆ ಹಿಂದಿರುಗಿಸಿದ ಕಂಡಕ್ಟರ್ ಮೇಲೆ ಗುರಾಯಿಸಿ ಫಿನಿಕ್ಸು ತನ್ನ ದೇಶಭಕ್ತಿಯನ್ನು ಖಾತ್ರಿ ಮಾಡಿಕೊಳ್ಳುವದರೊಂದಿಗೆ ಉಳಿದವರಿಗೂ ಅದರ ಸ್ಯಾಂಪಲ್ಲು ತೋರಿಸಿ ಸಮಾಧಾನದ ನಿಟ್ಟುಸಿರು ಬಿಟ್ಟ.ಟಾಕೀಸಿನ ಮುಂದೆ ಚಲಿಸುತ್ತಿರುವ ಬಸ್ಸಿನಿಂದ ಹಾರಿಕೊಂಡು ನಮ್ಮ ಪೂರ್ವಜರಿಗೆ, ನಮ್ಮ ಶಕ್ತಾನುಸಾರ ಮರ್ಯಾದೆ ಸಲ್ಲಿಸಿದೆವು (ತಮ್ಮ ಅವಗಾಹನೆಗಾಗಿ ’ಮಂಗನಿಂದ ಮಾನವ”).ಉತ್ತರ ಕರ್ನಾಟಕದ ನಮಗೆ ಇಂತಹ ಸರ್ಕಸ್ಸುಗಳೆಲ್ಲಾ ಮಾಮೂಲಿಯಾಗಿಬಿಟ್ಟಿರುತ್ತವೆ. ನಮ್ಮ ವಿದ್ಯೆಗೆ ನಾವೇ ಬೆನ್ನು ಚಪ್ಪರಿಸಿಕೊಂಡು ’ಉಮಾ’ಥೇಟರ್ ಹೋಕ್ಕೆವು.&lt;br /&gt;&lt;br /&gt;        ಕಡೆಗೂ ಮಾರ್ನಿಂಗ್ ಶೋ ದ ಸರಿಯಾದ ವೇಳೆಗೆ ಬಂದ ನಮ್ಮ ಸಮಯಪ್ರಜ್ಞೆಯನ್ನು ನಾವೇ ಕೊಂಡಾಡಿಕೋಂಡೆವು.ಮತ್ತೆ ಶುರುವಾಯ್ತು ಇನ್ನೊಂದು ಜಟಾಪಟಿ &quot; ಸಂತೋಷರ, ಮೂರು ಬಾಲ್ಕನಿ ತಗೋರಿ&quot; ಅಂದ ನಮ್ಮ ಮನೋಜ, ಅವನಿಗೋ ಪಾಪ, ಹುಡುಗಿಯರು ಬಾಲ್ಕನಿಯಲ್ಲಿ ಮಾತ್ರ ಇರುತ್ತಾರೆ ಎಂಬುದು ಅವನ ಹಳೆಯ ಅನುಭವಗಳಿಂದ ಖಾತ್ರಿಯಾಗಿತ್ತು.ತಕ್ಷಣ ಜಾಗ್ರತನಾದ ಫಿನಿಕ್ಸು &quot; ಬಾಲ್ಕನ್ಯಾಗ ಕುಂತ ನೊಡಿದ್ರ  ಐಶ್ವರ್ಯ ಬಂದು ಕುಣಿತಾಳೆನ? ಎಲ್ಲಿ ನೊಡಿದ್ರು ಅದ ಸ್ಕ್ರೀನು, ಕೆಳಗ ತಗೊಳೊನು, ರೊಕ್ಕಕ ಕಿಮ್ಮತ ಇಲ್ಲೇನು?&quot; ಎಂದು ನಮ್ಮ ಮನೋಜನಿಗೆ ಸವಾಲೆಸೆದ. ಅಷ್ಟರಲ್ಲಿ ನನ್ನಲ್ಲಿನ ಸಾಫ್ಟವೇರ್ ಇಂಜಿನಿಯರ್ ಜಾಗ್ರತನಾಗಿ &quot; ಇಲ್ಲಾ ಇಲ್ಲ! ಬಾಲ್ಕನಿಗೇ ಹೋಗೊದು ಯಾರಾದ್ರು ಫ್ರೆಂಡ್ಸು ನನ್ನ ಕೆಳಗ ಕೂಂತಿದ್ದು ನೋಡಿದ್ರ ನನ್ನ ’ಜಿಪುಣ ನನ ಮಗ’ ಅಂತ ಜೋಕ್ ಮಾಡ್ತಾರೆ&quot; ಎಂದು ಅಲವತ್ತುಕೊಂಡೆ. ತನ್ನ ಬಣಕ್ಕೆ ಮತ್ತೊಂದು ಸೇರ್ಪಡೆಯಾಗಿದ್ದನ್ನು ಕಂಡು ಮನೋಜ್ ಹಿರಿ ಹಿರಿ ಹಿಗ್ಗಿದ. ಅಷ್ಟಕ್ಕೆ ಬಿಟ್ಟಾನೆಯೆ ಫಿನಿಕ್ಸು, ದುಡ್ಡಿನ ಬಗ್ಗೆ, ಮದ್ಯಮ ವರ್ಗದ ಬವಣೆ ಬಗ್ಗೆ ಮನಮುಟ್ಟುವಂತೆ ರಜನಿ ಸ್ಟೈಲಲ್ಲಿ ಡೈಲಾಗ್ ಬಿಟ್ಟು ನಮ್ಮಲ್ಲಿ ಅಪರಾಧಿ ಪ್ರಜ್ಞೆ ಮೂಡುವಂತೆ ಮಾಡಿ, ಕೊನೆಗೂ ಡ್ರೆಸ್ ಸರ್ಕಲ್ಲಿನಲ್ಲಿಯೇ ಕುಳಿತುಕೊಳ್ಳುವಂತೆ ಮಾಡಿ ವಿಜಯದ ನಗೆ ಬೀರಿದ. ಮನೋಜನ ಮುಖದಲ್ಲಿ ಮಾತ್ರ ನಿರಾಶೆಭರಿತ ಆಕ್ರೋಶ ಎದ್ದು ಕಾಣುತ್ತಿತ್ತು.&lt;br /&gt;&lt;br /&gt;             ಈ ಮೊದಲು ಹಲವಾರು ಭಾರಿ ನೊಡಿದ್ದರಿಂದಲೊ ಎನೋ ಮೊದಲಾರ್ದ ಬೋರ್ ಆಗತೊಡಗಿತು. ಮನೋಜನ ಭಾಷೆಯಲ್ಲಿ ಸ್ವಲ್ಪವು ಫೀಲ್ ಆಗಲಿಲ್ಲಾ.ಇಂಟರವೆಲ್ಲಿನಲ್ಲಿ ಕಂಪೌಂಡ ಹಾರಿ &quot;2 by 3 &quot; ಚಹಾ ಕುಡಿದು ಬಂದು, ಉಳಿದ ಭಾಗವನ್ನು ನೋಡತೋಡಗಿದೆವು.ಮೂವರೂ ನಮ್ಮ ನಮ್ಮ ಮಾಜಿ ಲವ್ವರುಗಳನ್ನು ಮನದಲ್ಲಿ ನೆನೆಸಿಕೊಂಡು ಫೀಲ್ ಆದದ್ದೆ ಆದದ್ದು. ಗಣೇಶನ ಪ್ರತಿ ಡೈಲಾಗು ನಮ್ಮ ಜೀವನದಲ್ಲಿ ನಡೆದದ್ದೆನೋ ಎಂಬಂತೆ ಭಾಸವಾಗತೊಡಗಿ, ಅವನ ಕಷ್ಟದಲ್ಲಿ ನಾವೂ ಭಾಗಿಯಾಗತೊಡಗಿದೆವು. ಅಂತು ಇಂತೂ ಯದ್ವಾ ತದ್ವಾ ಫೀಲ್ ಆಗಿ &quot; ಕೊಟ್ಟ ರೊಕ್ಕಕಂತೂ ಮೋಸ ಇಲ್ಲಾ&quot; ಅಂತ ನಮ್ಮನ್ನು ನಾವೇ ಸಮಾಧಾನಿಸಿಕೊಂಡು ಚಿತ್ರ ಕ್ಲೈಮಾಕ್ಸ್ ತಲುಪಿದಾಗ ನಾವು ನಮ್ ಫೀಲಿಂಗಿನ  ತಾರಕಕ್ಕೆರಿದೆವು.ಗಣೇಶ &quot; ಅವಳ ಹೆಸರು ಆ ಪುಣ್ಯಾತ್ಮನ ಹಣೇಲಿ ಬರೆದಿದೆ&quot; ಅಂತ ವಿಲನ್ ಜಾಲಿಯನ್ನುದ್ದೇಶಿಸಿ ಹೇಳಿದ ಮಾತಿಗೆ ಮನೋಜ &quot; ತೂ ಅವನವ್ವನ ನಮ್ ಡವ್ ಹೆಸರು ಯಾವ ನನ್ ಮಗನ್ನ್ ಹಣೆಲಿ ಬರೆದಿದೆಯೋ &quot; ಅಂತ ಆವೇಶಭರಿತನಾಗಿ ಹೇಳಿದ ಮಾತಿಗೆ &quot; ಇನ್ನೂ ಚಾನ್ಸಿದೆ ಮನೋಜಾ, ಟ್ರೈ ಮಾಡುವಿಯಂತೆ&quot; ಅಂತ ನಾವಿಬ್ಬರು ಅವನನ್ನು ಸಂತೈಸಬೇಕಾಯ್ತು. ಅಂತು ಇಂತೂ ಒಬ್ಬರನ್ನೋಬ್ಬರು ಸಮಾಧಾನಿಸಿಕೊಂಡು ’ದೇವದಾಸ್’ ಸತ್ತಾಗ ನಾವು ಕಣ್ತುಂಬಿಕೊಂಡೆವು.ಚಿತ್ರ ಮುಗಿದಾಗ ’ಮುಂಗಾರು ಮಳೆ’ಯನ್ನು ನಾಲ್ಕನೇ ಬಾರಿಗೆ ನೋಡಿದ ಸಾಧಕರ ಲಿಸ್ಟಿಗೆ ಸೇರ್ಪಡೆಯಾದೆವು( ಎಲ್ಲಾ ಮನೋಜನ ಕೃಪೆ)&quot; ಅನಿಸುತಿದೆ ಯಾಕೋ ಇಂದು&quot; ಎಂದು ತಾರಕ ಸ್ವರದಲ್ಲಿ ಹಾಡುತ್ತಾ(?) ಎಲ್ಲರೂ ಹೊರಬಿದ್ದೆವು..&lt;br /&gt;&lt;br /&gt;          ಸುದೀಪ್ ನ &quot;ಹುಚ್ಚ&quot; ಚಿತ್ರ ನೋಡಿ ಭಗ್ನಪ್ರೇಮಿಯ ಕಲ್ಪನೆಯನ್ನು ಮನದಲ್ಲೇ ಮಾಡಿಕೊಂಡಿದ್ದ ನಾವು ಮತ್ತೋಮ್ಮೆ ಕುರುಚಲು ಗಡ್ಡ ಬಿಡುವ ಪ್ರತಿಜ್ಞೆ ಮಾಡಿ, &quot; ಉಸಿರೆ ಉಸಿರೆ&quot; ಎನ್ನುತ್ತಾ ಧಮ್ ಹೊಡೆಯುವ ಧೈರ್ಯವಿಲ್ಲದ ನಾವು ಚಹಾವನ್ನಾದರೂ ವಿಸ್ಕಿ ಎಂದುಕೊಂಡು ಗುಟುಕರಿಸದಿದ್ದರೆ ಇಡೀ &quot;ಭಗ್ನಪ್ರೇಮಿ&quot;ಗಳಿಗೆ ಅವಮಾನ ಮಾಡಿದಂತೆ ಎಂದು ’ಹಳ್ಳಿತಿಂಡಿ’ಗೆ ಚಹಾ ಕುಡಿಯಲು ಹೆಜ್ಜೆ ಹಾಕಿದೆವು..</content><link rel='replies' type='application/atom+xml' href='http://scpatil.blogspot.com/feeds/4546990825375639885/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/4546990825375639885' title='6 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/4546990825375639885'/><link rel='self' type='application/atom+xml' href='http://www.blogger.com/feeds/7270070547169320163/posts/default/4546990825375639885'/><link rel='alternate' type='text/html' href='http://scpatil.blogspot.com/2007/06/blog-post_18.html' title='ಮುಂಗಾರು ಮಳೆ ಮತ್ತು ನಿರರ್ಥಕ ಭಾನುವಾರ..'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><media:thumbnail xmlns:media="http://search.yahoo.com/mrss/" url="https://blogger.googleusercontent.com/img/b/R29vZ2xl/AVvXsEj7YDFIjehs1C1ETdJ4xDl5kPxwDrrfFaaD5OYH-2A775a_zBgMUmoLRJNEaO5kyYt8tG0VvBr7M7J_6JF_NKv1Pogh8dHsyk31bM7MJnTUXRUSMbwrWUghJCUQtFZSUOYXiXagBiGDHqc/s72-c/untitled.bmp" height="72" width="72"/><thr:total>6</thr:total></entry><entry><id>tag:blogger.com,1999:blog-7270070547169320163.post-4971027322529044207</id><published>2007-06-05T02:13:00.000-07:00</published><updated>2008-12-11T17:26:48.210-08:00</updated><category scheme="http://www.blogger.com/atom/ns#" term="ನನ್ನ ಜಗತ್ತು"/><category scheme="http://www.blogger.com/atom/ns#" term="ಸುಮ್ ಸುಮ್ನೆ"/><title type='text'>ರಾಯರ ಮಠದ ಹುಡುಗಿಗೆ....</title><content type='html'>&lt;a href=&quot;https://blogger.googleusercontent.com/img/b/R29vZ2xl/AVvXsEh4lvH2lJCV7vEegyIirnkYlsOESMTYOyKs-ZzQm8BD47t_80wpG9vSOyri2zWC5n3vmE9i7u4kJFGzUpsQnnJzoT4sUn1JsLbydZsB_-Gj5qXW4pSXylX0-QAwGEJa1hBdU0fZMNfq9Bk/s1600-h/bench-Madrid_187x200_q50.jpg&quot;&gt;&lt;img style=&quot;display:block; margin:0px auto 10px; text-align:center;cursor:pointer; cursor:hand;&quot; src=&quot;https://blogger.googleusercontent.com/img/b/R29vZ2xl/AVvXsEh4lvH2lJCV7vEegyIirnkYlsOESMTYOyKs-ZzQm8BD47t_80wpG9vSOyri2zWC5n3vmE9i7u4kJFGzUpsQnnJzoT4sUn1JsLbydZsB_-Gj5qXW4pSXylX0-QAwGEJa1hBdU0fZMNfq9Bk/s320/bench-Madrid_187x200_q50.jpg&quot; border=&quot;0&quot; alt=&quot;&quot;id=&quot;BLOGGER_PHOTO_ID_5076224386852777138&quot; /&gt;&lt;/a&gt;&lt;br /&gt;ಅವತ್ತು ರಾಯರ ಮಠದಲ್ಲಿ ಅಷ್ಟೊಂದು ತನ್ಮಯತೆಯಿಂದ  ಕಣ್ಣು ಮುಚ್ಚಿ ನಮಿಸುತ್ತಿದ್ದ ನಿನ್ನ ಆರಾಧನಾ ಭಾವ ಬೇಡವೆಂದರೂ ನನ್ನ ಕಂಗಳಿಂದ, ನನ್ನ ಮನದಂಗಳದಿಂದ ದೂರವಾಗುತ್ತಿಲ್ಲಾ. ಅಷ್ಟು ತಾದ್ಯಾತ್ಮದಿಂದ ಪಾದದ ಮುಂದೊಂದು ಪಾದ ಇಟ್ಟು ಅದೆಷ್ಟು  ಪ್ರದಕ್ಷಿಣೆ ಹಾಕಿದ್ಯೋ ನಂಗಂತು ಆ ರಾಯರಾಣೆಗೂ ನೆನಪಿಲ್ಲಾ.ಆದ್ರೆ ನೆನಪಿರೋದು ನಿನ್ನ ನೀಲಿ ಜೀನ್ಸಿನ ಮೇಲೆ ತೊಟ್ಟ ತಿಳಿಗುಲಾಬಿ ಬಣ್ಣದ ಕುರ್ತಾ ಮತ್ತು ಹಣೆಯ ಮದ್ಯದ ಕಂಡು ಕಾಣದಂತಿರುವ ನಿನ್ನ ಪುಟ್ಟ ಬಿಂದಿ.ನಿಂಗ್ಯಾರೆ ಹೇಳಿದ್ದು ನಂಗೆ ತಿಳಿಗುಲಾಬಿ ಅಂದ್ರೆ ಇಷ್ಟ ಎಂದು?. ನಿನ್ನ ನೋಡಿದ ತಕ್ಷಣ &quot; ತಥ್ ಇವತ್ತೆ  ಈ ಮಾಸಲು ಟೀ ಶರ್ಟು ಹಾಕ್ಕೋಂಡು ಮಠಕ್ಕೆ ಬರಬೆಕಿತ್ತಾ ನಾನು &quot; ಎಂದು ಸಾವಿರ ಸರ್ತಿ ಹಳಿದುಕೊಂಡಿದ್ದಿನಿ.&lt;br /&gt;&lt;br /&gt;           ಸತ್ಯವಾಗ್ಲೂ ಹೆಳ್ತಿನಿ, ನಂಗೆ ಬುದ್ಧಿ ಬಂದಾಗಿನಿಂದ ದೇವಸ್ಥಾನಕ್ಕೆ, ಮಠಕ್ಕೆ ಅಂತ ಹೋದವನೇ ಅಲ್ಲಾ!.ಆಕಸ್ಮಾತ್ ಹೊದ್ರು ದೇವರಿಗೆ ಕೈ ಮುಗಿದದ್ದು ನೆನಪಿಲ್ಲಾ. ನಮ್ಮ ಮನೋಜ್ ಹೇಳಿಯೇ ಹೇಳ್ತಿದ್ದ &quot; ರೀ ಗುರುವಾರ ರಾಘವೇಂದ್ರನ ಮಠಕ್ಕೆ ಹೋಗಬೇಕ್ರಿ, ಏನ್ ಹೇಳ್ಲಿ ನಿಮ್ಗ, ಕಂಡಾಪಟಿ ಮಸ್ತ್ ಹುಡುಗ್ಯಾರು ಬಂದಿರ್ತಾರ&quot; ಅಂತ ಅತ್ಯಂತ ಉಮ್ಮೆದಿಯಿಂದ ಹೇಳಿದ್ದ.I swear ಇವತ್ತಿನವರೆಗೂ ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಹೋಗಿರಲಿಲ್ಲಾ. ಇವತ್ತೂ ಸಹ ಅವನು ಒತ್ತಾಯ ಮಾಡಿದ ಅಂತ ಬಂದೆನೆ ಹೊರ್ತು, ಬರಲೇಬೇಕು ಅಂತಲ್ಲಾ.ಆದ್ರೆ ಈಗಲೆ ಹೇಳಿಬಿಡ್ತಿನಿ ಇನ್ನೂ ಮುಂದಿನ ಪ್ರತಿ ಗುರುವಾರಗಳಲ್ಲಿ ಮಠಕ್ಕೆ ನನ್ನ ಕಡ್ಡಾಯ ಹಾಜರಾತಿ ಇರುತ್ತೆ, ಅದು ಕೇವಲ ನಿನಗಾಗಿ, ನಿನ್ನ ಬರುವಿಕೆಗಾಗಿ..&lt;br /&gt;&lt;br /&gt;           ನೀನು ನನ್ನ ಕಿರುಗಣ್ಣಿನಲ್ಲೆ ನೋಡಿದ್ಯಾ?, ಗೊತ್ತಿಲ್ಲಾ! ಆದ್ರೆ ನೋಡಿದೆ ಅಂತ ಸುಳ್ಳೆ ಅಂದ್ಕೊಂಡು ಖುಶಿ ಪಡೊದ್ರಲ್ಲೂ ಇಷ್ಟು ಸುಖವಿರುತ್ತಾ?. ಏನು ಮಜಾ ಅಂತೀನಿ ಒಂದು ಮೂಲೆಯಲ್ಲಿ ನಿರ್ಭಾವುಕನಾಗಿ ಕೂತಿದ್ದ ನಾನು ಪ್ಯಾಲಿಯಂತೆ ನಿನ್ನ ಹಿಂದೆ ಸುತ್ತಿದ್ದೆ ಸುತ್ತಿದ್ದು.ನಿಂಗೆ ಮುಜುಗುರವಾಯ್ತಾ ಚಿನ್ನು?. ನೀನಿಟ್ಟ ಹೆಜ್ಜೆಯ ಮೇಲೆ ನಾನು ಸಹ ಜಾಗರೂಕತೆಯಿಂದ ಪಾದವೂರಿ ಪ್ರದಕ್ಷಿಣೆ ಹಾಕದೆ ಹೋದರೆ ಈ ಜನ್ಮದಲ್ಲೇನೊ ಕಳೆದುಕೊಂಡುಬಿಡ್ತಿನಿ ಅಂತ ಅನಿಸತೊಡಗಿತ್ತು ಕಣೆ. ಆ ಶಾಸ್ತ್ರಿಗಳು ಕೊಟ್ಟ ಮಂತ್ರದ ಅಕ್ಷತೆಕಾಳನ್ನು ತಲೆ ಮೇಲೆ ಹಾಕ್ಕೊಬೇಕು ಅನ್ನೊದು ತಿಳಿಯದ ಶುದ್ದಾತಿಶುಧ್ದ ಬೆಪ್ಪು ಕಣೆ ನಾನು. ನಿನ್ನ ತಲೆಯಿಂದ ಜಾರಿಬಿದ್ದ ಅ ಅಕ್ಷತೆ ಕಾಳುಗಳನ್ನು ಎಷ್ಟು ಕಷ್ಟ ಪಟ್ಟು ಹೆಕ್ಕಿಕೊಂಡೆನೋ ಗೊತ್ತಿಲ್ಲಾ!&lt;br /&gt;&lt;br /&gt;           ನೀನಿದ್ದಷ್ಟು ಹೊತ್ತು ನಂಗೆನೋ ಒಂಥರಾ ಸಮಾಧಾನ, ಮನತೃಪ್ತಿ. ಈ ಹಿಂದೆ ಎಷ್ಟು ಭಾರಿ ಬಂದರೂ ಸಿಗದ ಮನಶಾಂತಿ ಆ ಕ್ಷಣಕ್ಕೆ ಆಗತೊಡಗಿತು ಚಿನ್ನು. ನೀ ಮಠದಿಂದ ಹೊರಬಂದು ಹೊರಗಿದ್ದ ತುಳಸಿಗೆ ಹಣೆಯೊತ್ತಿ ನಮಿಸಿದಾಗ ನಾನೂ ತುಳಸಿ ವಿವಾಹದ ದಿನದಂದೆ ಹುಟ್ಟಿದ್ದು ಅಂತ ಕೂಗಿ ಕೂಗಿ ಹೇಳಬೇಕಿನಿಸ್ತು.ಇನ್ನೊಮ್ಮೆ ತಿರುಗಿದವಳೆ ಕಣ್ಮುಚ್ಚಿ ನಮಿಸಿ, ನಿನ್ನ ಪಿಂಕ್ ಪಿಂಕು ಕೈನಿಯ ಕಡೆಗೆ ಬರಿಪಾದದಲ್ಲಿ ಹೆಜ್ಜೆಯನ್ನುಡುತ್ತಿದ್ದರೆ ನನಗಿಲ್ಲಿ&lt;br /&gt;ಯವುದೋ ಶಕ್ತಿ ನನ್ನಿಂದ ದೂರವಾದ ಭಾವ, ಎನೋ ಕಳೆದುಹೋಗುತ್ತಿರುವ ಅನುಭವ..&lt;br /&gt;&lt;br /&gt;           ರಾಯರ ಮಠದ ಹುಡುಗಿಯೇ ನಿನಗಾಗಿ,ಇನ್ನು ಮುಂದೆ ಬರುವ ಪ್ರತಿ ಗುರುವಾರ ಕಾಯುತ್ತೇನೆ, ಭಾರವಾದ ಎದೆಯಲ್ಲಿ,ಖಾಲಿ ಮನದಲ್ಲಿ. ನೀ ಮತ್ತೆ ಬಂದೆ ಬರುತ್ತಿಯಾ ಎಂಬ ತುಂಬು ನೀರಿಕ್ಷೆಯಲ್ಲಿ! ನೀ ಬರ್ತಿಯಾ ಅಲ್ವಾ?</content><link rel='replies' type='application/atom+xml' href='http://scpatil.blogspot.com/feeds/4971027322529044207/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/4971027322529044207' title='18 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/4971027322529044207'/><link rel='self' type='application/atom+xml' href='http://www.blogger.com/feeds/7270070547169320163/posts/default/4971027322529044207'/><link rel='alternate' type='text/html' href='http://scpatil.blogspot.com/2007/06/blog-post.html' title='ರಾಯರ ಮಠದ ಹುಡುಗಿಗೆ....'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><media:thumbnail xmlns:media="http://search.yahoo.com/mrss/" url="https://blogger.googleusercontent.com/img/b/R29vZ2xl/AVvXsEh4lvH2lJCV7vEegyIirnkYlsOESMTYOyKs-ZzQm8BD47t_80wpG9vSOyri2zWC5n3vmE9i7u4kJFGzUpsQnnJzoT4sUn1JsLbydZsB_-Gj5qXW4pSXylX0-QAwGEJa1hBdU0fZMNfq9Bk/s72-c/bench-Madrid_187x200_q50.jpg" height="72" width="72"/><thr:total>18</thr:total></entry><entry><id>tag:blogger.com,1999:blog-7270070547169320163.post-4451127162943404645</id><published>2007-05-23T02:05:00.000-07:00</published><updated>2008-12-11T17:26:48.492-08:00</updated><category scheme="http://www.blogger.com/atom/ns#" term="ನನ್ನ ಜಗತ್ತು"/><title type='text'>ಲವ್ ಪ್ರವರ</title><content type='html'>&lt;a href=&quot;https://blogger.googleusercontent.com/img/b/R29vZ2xl/AVvXsEggmb9Ih_OqWx0TYA2QFiEC5QnbaiO2-a08Zu0CydY8dnbEKwZZs44XBoe1Jv0zbiP4TbLl10-NH3HF_sWhky9c5EYTsIdglpVxK30CxeJCRvxVKrzI-0yUpMNed5AdYAVRbK2DDuY_EPI/s1600-h/image001.jpg&quot;&gt;&lt;img style=&quot;display:block; margin:0px auto 10px; text-align:center;cursor:pointer; cursor:hand;&quot; src=&quot;https://blogger.googleusercontent.com/img/b/R29vZ2xl/AVvXsEggmb9Ih_OqWx0TYA2QFiEC5QnbaiO2-a08Zu0CydY8dnbEKwZZs44XBoe1Jv0zbiP4TbLl10-NH3HF_sWhky9c5EYTsIdglpVxK30CxeJCRvxVKrzI-0yUpMNed5AdYAVRbK2DDuY_EPI/s320/image001.jpg&quot; border=&quot;0&quot; alt=&quot;&quot;id=&quot;BLOGGER_PHOTO_ID_5077268124035247314&quot; /&gt;&lt;/a&gt;&lt;br /&gt;&lt;script src=&quot;http://www.google-analytics.com/urchin.js&quot; type=&quot;text/javascript&quot;&gt;&lt;br /&gt;&lt;/script&gt;&lt;br /&gt;&lt;script type=&quot;text/javascript&quot;&gt;&lt;br /&gt;_uacct = &quot;UA-1855832-1&quot;;&lt;br /&gt;urchinTracker();&lt;br /&gt;&lt;/script&gt;ನನ್ನ ರೂಮ ಮೇಟ ಮನೋಜ ರಾತ್ರಿ ಲೈಟ ಆರಿಸಿ ಹಾಸಿಗೆಗೆ ಒರಗಿ &quot;ಸಂತೋಷರ ನಿದ್ದೆ ಬಂದಿಲ್ವಾ? ಎಂದು ಮಾತಿಗೆಳೆದರೆ ಮುಂದೇನೊ ಅನಾಹುತ ಕಾದಿದೆ ಅಂತಾನೇ ಅರ್ಥ,ಮೊನ್ನೆನೂ ಹಿಂಗೇ ಅಯ್ತು ಅವತ್ತೂ ಸಹ ಯಥಾಪ್ರಕಾರ ತನ್ನೆಲ್ಲಾ ಪ್ರಯೋಗಗಳಿಗೆ ಮೊದಲ ಬಲಿಪಶುವಾದ ನನ್ನನ್ನು ಹಾಸಿಗೆಯಲ್ಲಿ ಕೆಡವಿ, ನನ್ನ ಮೆದುಳು ಬಗೆಯುವ ಸತ್ಕಾರ್ಯವನ್ನು ಸಾಂಗೋಪಾಂಗವಾಗಿ ಶುರು ಮಾಡೇ ಬಿಟ್ಟ.&lt;br /&gt;      ಪೀಠಿಕೇಯಾಗಿ&quot; ನಿಮ್ಮ &#39;True love&#39; ಎಲ್ಲಿಗೆ ಬಂತು ಎಂದು ಪ್ರಶ್ನೆ ಎಸೆದು ಕುಂತ. ಅವನು ಯಾವಾಗ ರಾತ್ರಿಯ ಹೊತ್ತಿನಲ್ಲಿ &#39;Love&#39; ವಿಷಯ ಆರಂಭಿಸಿದನೋ ನನ್ನ ಹಿಂದಿನ ಭೀಕರ ಅನುಭವಗಳಿಂದ ಇವತ್ತು ರಾತ್ರಿ ಜಾಗರಣೆ ಅಂತ ಖಾತ್ರಿಯಾಯ್ತು.ಪ್ರತ್ಯುತ್ತರವಾಗಿ ನಾನು &quot;Work out ಆಗ್ಲಿಲ್ಲಾ &quot;ಎಂದು ಚುಟುಕಾಗಿ ಹೇಳಿ ಇನ್ನು ನನ್ನ ಮಲಗಲು ಬಿಡು ಅಂತ ಸೂಕ್ಷ್ಮವಾಗಿ ಅರುಹಿದೆ.ಊಹುಂ! ಕೈಗೆ ಸಿಕ್ಕಿದ ಬಲಿಯನ್ನು ಹಂಗೆ ಬಿಟ್ಟಾನಯೇ ಧೀರ&lt;br /&gt;,ಅದುವರೆಗೂ Love ಬಗ್ಗೆ ಮಾಡಿದ ತನ್ನೆಲ್ಲಾ ಕರಾಳ ಸಂಶೋಧನೆಗಳನ್ನು ಒಂದೋದಾಗಿ ಹೋರಗೆಡವತೋಡಗಿದ.ಆ ಬ್ರಹ್ಮಾಂಡ ಸಿದ್ದಾಂತಗಳನ್ನು ಸೋದಾಹರಣವಾಗಿ ವಿವರಿಸಿ, ಮದ್ಯೆ ತಿವಿದು ನನ್ನ ಎಚ್ಹರಿಸಿ ಇದುವರೆಗಿನ ತನ್ನೆಲ್ಲಾ ಹಳೆಯ ಸೇಡುಗಳನ್ನು ತೀರೀಸಿಕೊಂಡಾ.ಮಹಾಭಾರತದ  ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದಂತೆ, ನನಗೆ &quot;ಲವ್ವೋಪದೇಶ&quot; ಮಾಡಿದ.&lt;br /&gt;&quot; ನೋಡ್ರಿ ಸಂತೋಷರಾ. ನಿಮ್ದು ಸಾಮಾನ್ಯ ಲವ್ ಅಲ್ಲಾ , ಅದು ’ಟ್ರೂ ಲವ್’,ಹಂಗೆಲ್ಲಾ ಮದ್ಯಕ್ಕೆ ನಿಲ್ಲಿಸಬಾರದು, ಪ್ರಯತ್ನ ಪಡೂತ್ತಾ ಇರಬೇಕು&quot; ಅಂದ ಲವ್ ಗುರು.ಅದ್ಕೆ ನಾನು &quot;ಅಲ್ವೋ! ಲವ್ ನಲ್ಲೂ ಆರ್ಡಿನರಿ ಲವ್ ಮತ್ತು ಟ್ರೂ ಲವ ಇರ್ತಾವೇನೋ? ಹ್ಹ ಹ್ಹ ಹ..&quot; ಎಂದು ನನ್ನ ಪಾಂಡಿತ್ಯ ತೋರಲೆತ್ನಿಸಿದೆ.&lt;br /&gt;      ’ಹುಲುಮಾನವ’ ಎಂಬಂತೆ ನನ್ನೆಡೆಗೆ ನೋಡಿ ಟ್ರೂ ಲವ್ , ಆರ್ಡಿನರಿ ಲವ್ ,ಮತ್ತು ಪ್ಯೂರ ಲವ್ ಬಗ್ಗೆ ತನ್ನ ಪುರಾಣವನ್ನು ಆರಂಭಿಸಿ, ಹುಡುಗಿಯರಲ್ಲೂ ಸಹ ಪ್ರಕಾರಗಳುಂಟು ಅಂತಾ ಸಾರಿ ನನ್ನ ತಬ್ಬಿಬ್ಬು ಮಾಡಿದ.ಅವನ ಬಾಯಿಂದ ಹೊರಬಂದ ಅನುಭವದ ಮಾಣಿಕ್ಯಗಳಿವು ನೋಡಿ.&lt;br /&gt;&quot;ಅಲ್ರಿ ಟ್ರೂ ಲವ್ ಅಂದ್ರೆ ಡೀಪ್ ಆಗಿ ,ಸಿನ್ಸಿಯರ್ ಆಗಿ ಲವ್ ಮಾಡೊದು, ಆರ್ಡಿನರಿ ಲವ್ ಅಂದ್ರ ಸುಮ್ನ ಲೈನ್ ಹೊಡೆಯೋದು,ಪ್ಯೂರ್ ಲವ್ ಅಂದ್ರೆ &lt;br /&gt;ಪೂರ್ತಿ ಪ್ಯೂರ್, ಇವನಿಲ್ಲಿ,ಅವಳಲ್ಲಿ. ಆದರೂ ಫುಲ್ ಲವ್.ಬೆಳದಿಂಗಳ ಬಾಲೆ, ಯಾರೇ ನೀನು ಚೆಲುವೆ ಸ್ಟೈಲು.ನೋಡ್ರಿ ಹುಡುಗಿಯರಲ್ಲೂ ವೆರೈಟಿ ಇರ್ತಾವು, ಮೊದಲನೆಯದಾಗಿ ನಿಜವಾಗ್ಲೂ ಚಂದ ಇರ್ತಾರ ಮತ್ತು ಫುಲ್ ಡೀಸೇಂಟ್ ಇರ್ತಾರ, ಹಿಂತವರು ಟ್ರೂ ಲವ್ ಮಾಡೊಕೆ ಯೋಗ್ಯ. ಇವರು ಲೈನು ಕೊಡೋದಿರಲಿ, ತಿರುಗಿ ಸಹ ನೋಡಲ್ಲ.ಆದ್ರೂ ಪ್ರಯತ್ನ ಬಿಡಬಾರದು.ಮೊದಲನೆ ಸಲ ಪ್ರಪೋಸ್ ಮಾಡಿದ್ರೆ ಖಂಡಿತ ’ನೋ’ ಅಂತಾರೆ,ಕೆಲವು ಸಲ ನಸೀಬು ಗಾಂಡು ಇದ್ರ ಮಂಗಳಾರುತಿನೂ ತೆಗಿತಾರ, ಅದಕ್ಕೆಲ್ಲಾ ನೀವು ತಲಿ ಕೆಡಿಸ್ಕೊಬಾರದು, ಅಲ್ಲದೆ &quot; ನನ್ನ ಎನಂತ ಅನ್ಕೊಂಡೀರಿ? ನಾನು ಅಂತಾ ಹುಡುಗಿ ಅಲ್ಲಾ&quot; ಅಂತೆಲ್ಲಾ ಡೈಲಾಗ್ ಹೊಡಿತಾರೆ, ಅದಕ್ಕೆಲ್ಲಾ ನಾವು ಕ್ಯಾರೆ ಅನ್ನಬಾರದು ಮತ್ತು ಪ್ರಯತ್ನ ನಿಲ್ಲಿಸಬಾರದು.ಯಾರೇನೆ ಅಂದ್ರು ಕೇರ್ ಮಾಡದೆ ಇರೊದು ಭಾಳ ಮುಖ್ಯ.’ಹುಚ್ಚ’ ಪಿಚ್ಚರ್ ನೋಡಿರಲ್ರಿ ಅ ಟೈಪು ಅಂದ ನಮ್ ಲವ್ ಗುರು.ಮತ್ತೆ ಮುಂದುವರೆಸಿ ಹೇಳಿದ &quot; ಎರಡನೆ ವೆರೈಟಿ ಹುಡುಗಿಯರು ದೇವರಾಣೆಗೂ ಚಂದ ಇರೋದಿಲ್ಲಾ,ಅದ್ರೆ ನಾವು ಅವರನ್ನು ಚಂದ ಅದೀರಿ ಅಂತ ನಂಬಿಸಬೇಕು. ಇಂತವರು ಲೈನ್ ಹೊಡಿಯೋಕೆ ಪರಫೆಕ್ಟ ನೋಡ್ರಿ.ಇವರನ್ನು ಬೀಳಿಸೊಕೆ ಸ್ವಲ್ಪ ಟೈಮು ಮತ್ತು ಇನವೆಸ್ಟಮೆಂಟ್ ಬೇಕು. ಭಾಳ ಏನು ಬ್ಯಾಡ್ರಿ, ಸುಮ್ನ ಅವರ ಹಿಂದ ಬೀಳಬೆಕು, ನೋಡಿ ಸ್ಮೈಲ್ ಕೊಡಬೇಕು, ಸುಮ್ ಸುಮ್ನ ಮತಾಡಿಸಬೇಕು,ನಿಮ್ಮ ಡ್ರೆಸ್ಸು ಸುಪರ್ ಅಂತ ಪುಸಲಾಯಿಸಬೇಕು ಇತ್ಯಾದಿ ಇತ್ಯಾದಿ.ಹಾಂ! ಆಮೇಲೆ ಸ್ವಲ್ಪ ಹುಡುಗಿ ದಾರಿಗೆ ಬಂದಿದಾಳೆ ಅಂದಮೇಲೆ ಮೊದಲು ಕಾಫಿಗೆ, ನಂತರ ಪಿಚ್ಚರಿಗೆ,ಲಾಲಭಾಗಿಗೆ ಕರಿಬೇಕು .ಒಂದು ವೇಳೆ ನೀವು ಲವ್ವು ಗಿವ್ವು ಅಂತೇನಾದ್ರು ಪ್ರಪೋಸ್ ಮಾಡಿದ್ರೆ ನಿಮ್ಮ್ ಖೇಲ್ ಖತಂ.ಅದೊಂತರ ಮುಚ್ಯುವಲ್ ಅಂಡರ್ ಸ್ಟಾಂಡಿಂಗ್.ಈ ವೆರೈಟಿ ಹುಡುಗಿಯರು ಭಾರಿ ಚಾಲೂ ಇರ್ತಾರ, ನೀವು ನೋಡಿ ಖರ್ಚು ಮಾಡಬೇಕು ಮತ್ತು ಎಷ್ಟು ಸಾದ್ಯನೊ ಅಷ್ಟು &quot;ದುಡುಕೊಂಡು&quot;ಬಿಡಬೇಕು.ಇದಕ್ಕ ಹಂಗ ಸುಮ್ನ ಲವ್  (?) ಅಂತರ ಕರೀರಿ ಅಥವಾ ಡವ್ ಅಂತರ ಕರೀರಿ. ಕೊನೆಯ ವೆರೈಟಿ ಬಗ್ಗೆ ಹೇಳುದಾ ಬ್ಯಾಡ, ಯಾಕಂದ್ರ &quot; ನೋ ಯುಸ್&quot;, ಬರೀ ಸ್ಚ್ರಾಪ್ ಫಿಗರ್ ಗಳು, ನಿಮಗ ಅಷ್ಟ ’ಬರಗಾಲ’ ಅಂದ್ರ ಇವನ್ನೂ ಟ್ರೈ ಮಾಡಿ ನಿಮ್ಮ ಕರ್ಮ&quot; ಅಂತೆಲ್ಲಾ ರಾತ್ರಿ ಮೂರರವರೆಗೂ ಸಾದ್ಯಂತ ಶೊಷಿಸಿ &quot; ಇನ್ನು ಹೊತ್ತಾತು ಮಲಗ್ರಿ, ನಾಳೆ ಮುಂದ ಹೇಳ್ತಿನಿ&quot;, ಅಂತೆಳಿ ’ನಿನಗಿದೆ ಗ್ರಹಚಾರ ನಾಳೆ” ಎಂಬಂತೆ ನೋಡಿ, ಎದ್ದು ಉಚ್ಚೆ ಹೋಯ್ದು ಮಲಗೇ ಬಿಟ್ಟ.&lt;br /&gt;   ನಾಳೆ ಎನು ಕಾದಿದೆಯೊ ಅಂತ ಹಾಸಿಗೆಯಲ್ಲಿ ಉರುಳಾಡಿದ್ದೆ ಬಂತು ನಿದ್ದೆಯಂತೂ ದೇವರಾಣೆಗೂ ಬರಲಿಲ್ಲಾ..</content><link rel='replies' type='application/atom+xml' href='http://scpatil.blogspot.com/feeds/4451127162943404645/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/4451127162943404645' title='14 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/4451127162943404645'/><link rel='self' type='application/atom+xml' href='http://www.blogger.com/feeds/7270070547169320163/posts/default/4451127162943404645'/><link rel='alternate' type='text/html' href='http://scpatil.blogspot.com/2007/05/blog-post_23.html' title='ಲವ್ ಪ್ರವರ'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><media:thumbnail xmlns:media="http://search.yahoo.com/mrss/" url="https://blogger.googleusercontent.com/img/b/R29vZ2xl/AVvXsEggmb9Ih_OqWx0TYA2QFiEC5QnbaiO2-a08Zu0CydY8dnbEKwZZs44XBoe1Jv0zbiP4TbLl10-NH3HF_sWhky9c5EYTsIdglpVxK30CxeJCRvxVKrzI-0yUpMNed5AdYAVRbK2DDuY_EPI/s72-c/image001.jpg" height="72" width="72"/><thr:total>14</thr:total></entry><entry><id>tag:blogger.com,1999:blog-7270070547169320163.post-4237416841471094559</id><published>2007-05-08T04:27:00.000-07:00</published><updated>2008-12-11T17:26:48.690-08:00</updated><category scheme="http://www.blogger.com/atom/ns#" term="ನನ್ನ ಜಗತ್ತು"/><title type='text'>ಪ್ರತಿದಿನದ ನರಕ</title><content type='html'>&lt;a href=&quot;https://blogger.googleusercontent.com/img/b/R29vZ2xl/AVvXsEiRCXsSD58mkTCXFrJCFHFtZWE4PJx-XBljgku8O208tv7O9ETXISYFMv8ZghzQ0JTbAluMQrk1iYnNFhY9hD8SGXTynTtn_h0ZA2y64ZeRclcEqYcXfN-vY0_TZmUrJj-MhWKXGXh77Fg/s1600-h/j0426542%5B1%5D.jpg&quot;&gt;&lt;img style=&quot;display:block; margin:0px auto 10px; text-align:center;cursor:pointer; cursor:hand;&quot; src=&quot;https://blogger.googleusercontent.com/img/b/R29vZ2xl/AVvXsEiRCXsSD58mkTCXFrJCFHFtZWE4PJx-XBljgku8O208tv7O9ETXISYFMv8ZghzQ0JTbAluMQrk1iYnNFhY9hD8SGXTynTtn_h0ZA2y64ZeRclcEqYcXfN-vY0_TZmUrJj-MhWKXGXh77Fg/s320/j0426542%5B1%5D.jpg&quot; border=&quot;0&quot; alt=&quot;&quot;id=&quot;BLOGGER_PHOTO_ID_5077279136331394274&quot; /&gt;&lt;/a&gt;&lt;br /&gt;&lt;script src=&quot;http://www.google-analytics.com/urchin.js&quot; type=&quot;text/javascript&quot;&gt;&lt;br /&gt;&lt;/script&gt;&lt;br /&gt;&lt;script type=&quot;text/javascript&quot;&gt;&lt;br /&gt;_uacct = &quot;UA-1855832-1&quot;;&lt;br /&gt;urchinTracker();&lt;br /&gt;&lt;/script&gt;&lt;br /&gt;ಸರಿಯಾಗಿ ಒಂದು ವಾರದ ಮೇಲಾಯ್ತು ಆಫೀಸಿಗೆ ಬಂದು ಮತ್ತು ಮಾನಿಟರಿನ ಮುಖ ನೋಡಿ, ಮೌಸ್ ಮೈದಡವಿ, ಕೀ ಬೋರ್ಡಿನ ಕೀಲಿ ಕುಟ್ಟಿ.ಇಲ್ಲಿನ ಬದುಕೆ ವಿಚಿತ್ರ, ಗೋಡೆಯ ಮೇಲಿನ  ಕ್ಯಾಲೆಂಡರಿನ  ದಿನಗಳು ಬದಲಾಗುತ್ತವೆಯೆ ವಿನಾಃ ಬದುಕಲ್ಲಾ! ಪ್ರತಿದಿನವು ಅದೇ ರಾಗ, ಅದೇ ಎಕತಾನತೆ, ಮತ್ತದೆ ಚಕ್ರ..&lt;br /&gt; ನನ್ನ ಬೆಳಗು ಆರಂಭವಾಗುವದೇ ನನ್ನ ಆಜನ್ಮ ಶತ್ರು ಅಲಾರ್ಮ್ ಬಡಿದುಕೊಳ್ಳುವದರೊಂದಿಗೆ, ಆಗ್ಲೆ FM ನಲ್ಲಿ &quot; ಸುಪ್ರಭಾತ ವಿಥ್ ರಚನಾ&quot; ಅಂತ ಆಯಮ್ಮ ಬಡಿದುಕೊಳ್ಳುವದಕ್ಕೆ ಶುರು ಮಾಡಿರುತ್ತೆ.ಅವಳಿಗೆ ನನ್ನ ಸಂತಾಪಸೂಚಕ ನಿಟ್ಟುಸಿರುಗಳು.ಸ್ನಾನ,ಪೂಜೆ(?),ಮತ್ತೊಂದು ಅಂತ ಅನಿವಾರ್ಯ ಕರ್ಮಗಳನ್ನು ಮುಗಿಸುವಷ್ಟರಲ್ಲೆ ಗಂಟೆ ೭ ರ ಆಸುಪಾಸಿನಲ್ಲಿರುತ್ತೆ.ಕೈಗೆ ಸಿಕ್ಕಿದ( ಅಂದ್ರೆ ಅಪರೂಪಕ್ಕೆ ತೊಳೆದ ಎಂದರ್ಥ)ಪ್ಯಾಂಟು ಸಿಕ್ಕಿಸಿಕೊಂಡೂ ,ಅದ್ಕ್ಕೆ ಸರಿಯಾಗುವ ಅಂಗಿ ಸಿಕ್ಕಿಸಿಕೊಂಡು &quot; ನೀ ಇನ್ ಶರ್ಟ ಮಾಡಿದ್ರೆ ಚಂದ ಕಾಣೀಸ್ತಿಯ&quot; ಅಂತ ಯಾರೊ ನನ್ನ ಕಷ್ಟ ನೋಡಲಾಗದೆ ಹೇಳಿದ್ದನ್ನ ಮನಸ್ಸಿಗೆ ತಂದುಕೊಂಡು, ಅಂಗಿಯನ್ನು ಒಳ ತುರುಕುತ್ತೆನೆ( ಚಂದ ಕಾಣಿಸ್ತಿಯಾ ಮತ್ತು ಚಂದ ಇದ್ದಿಯಾ ಎರಡು ಒಂದೇ ಅಂತ ಊಹಿಸತಕ್ಕದ್ದು :-) ).ಆಗ ಸುರ್ಯೋದಯವನ್ನು ನೋಡಿದರೆ ಪಾಪ ಅಂತ ನಂಬಿರುವ ಸುರ್ಯವಂಶದ ಕುಡಿಯಾದ ನನ್ನ ರೂಮ್ ಮೇಟ್ ಮನೋಜ &quot; ಪಾಪಿ ಇನ್ನೂ ಹೋಗಿಲ್ವಾ?&quot; ಎಂಬಂತೆ  ನೋಡಿ ಮುಸುಕೆಳೆದುಕೊಳ್ಳುತ್ತೆ ಪ್ರಾಣಿ. ನಾ ಹೇಳುವ ’ಬೈ’ಗೆ ಮುಸುಕಿನಿಂದಲೆ ’ಕಳಚಿಕೋ ಮಾರಾಯ’ ಎಂಬಂತೆ ’ಬೈ’ ಎಂದು &quot;ಪೇಪರು ಒಳಗೆ ಎಸೀರೀ&quot; ಅಂತ ಮನವಿ ಮಾಡ್ಕೊಳ್ಳುತ್ತೆ ಸೂರ್ಯವಂಶಿ.&lt;br /&gt;      ಏಳುತ್ತಾ, ಬಿಳುತ್ತಾ ಸೋಮಾರಿ ಬೆಂಗಳೂರು ಹೆಂಗಸರು ರಾತ್ರಿಯೇ ಹಾಕಿದ ರಂಗೋಲಿಗಳನ್ನು ದಾಟುತ್ತ,ಇನ್ನು ಹಾಳು ಮುಖದಲ್ಲೇ ಕಸ ಹೊಡೆಯುತ್ತಿರುವ ಆಂಟಿಯರನ್ನು ನೊಡುತ್ತ,ದಾರಿಯಲ್ಲಿ ಸಿಗುವ &quot;ಸೊಪ್ಪು ಸೊಪ್ಪು&quot; ಅನ್ನುವವನನ್ನು ಇದಿರುಗೊಳ್ಳುತ್ತ,ಪೇಪರಿನ ಹುಡುಗನೆಡೆಗೆ ಪರಿಚಯದ ನಗೆ ಬೀರುತ್ತಾ  ಕಂಪನಿ ಬಸ್ ಸ್ಟಾಪಿನತ್ತ ದೌಡಾಯಿಸುತ್ತೆನೆ.ಅಲ್ಲಿ ಮತ್ತದೇ ಬಸ್ ಸ್ಟಾಪು, ಇನ್ನೂ ತೂಕಡಿಸುತ್ತಾ ನನಗಾಗಿ ಕಾದಿದೆಯೇನೋ ಎಂಬಂತೆ ಭಾಸವಾಗುತ್ತೆ. ಯಾವಾಗಲೂ ನನಗಿಂತ ಮುಂಚೆ ಬಂದಿರುವ ಇಬ್ಬರು ಅಂಟಿಯರನ್ನು ಸೇರಿಕೊಳ್ಳುತ್ತೆನೆ.ಆಗ ಅವಸರದಿಂದ ಬರುತ್ತಾರೆ ತಮ್ಮೆಡೆಗಿನ ನಿಗೂಡತೆಯನ್ನು,ಕೌತುಕವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಾ ಸಾಗಿರುವ ಹುಡುಗಿಯರು( ಅವಳಲ್ಲಿ ಒಬ್ಬಳನ್ನು ನಾನು ಕೆಲದಿನಗಳು True love ಮಾಡಿದ್ದೆ ಮತ್ತು ಇನ್ನು ಗಿಟ್ಟುವದಿಲ್ಲಾ :-)ಅಂತ ಖಚಿತವಾದ ಮೇಲೆಯೇ ಆ ಯತ್ನವನ್ನು ನಿಲ್ಲಿಸಿದ್ದೇನೆ(?)), ನಮ್ಮೊಂದಿಗೆ ಘನಗಂಭೀರ ಇನ್ನೊಬ್ಬ ಇರುತ್ತಾನೆ.ನಮ್ಮೆದುರು ಹಾದು ಹೋಗುವ ಬಸ್ಸುಗಳಲ್ಲಿ ನಮ್ಮಂತೆಯೆ ಬೇರೆ ನಾಮಧೇಯದ   ಕಂಪನಿಗೆ ಮಣ್ಣು ಹೊರುತ್ತಿರುವ ಇನ್ನೊಂದಿಷ್ಟು &quot;ಬಿಳಿಕಾಲರ್ ಕಾರ್ಮಿಕರು&quot; ಹುಸಿ ಜಂಭದಿಂದ ಸಾಗುತ್ತಾರೆ. ನನ್ನ ವಾಚಿನ ಮುಳ್ಳು ಸರಿಯಾಗಿ ೭-೧೦ ನ್ನು ದಾಟುತ್ತಿದ್ದಂತೆ ಹಣೆಗೆ &#39;National&#39; ಅಂತ ಬರೆಸಿಕೊಂಡ, ಇಕ್ಕೆಲಗಳಲ್ಲೂ ಮಾಸಿದ ಸಂತೂರ್ ಸೋಪಿನ ಜಾಹಿರಾತುಗಳನ್ನು ಅಂಟಿಸಿಕೊಂಡ ಸಂಪೂರ್ಣ ನೆರೆತ ಗಡ್ಡದ ಸಾಬಿಯ ಕಪ್ಪುಸುಂದರಿ ಬಸ್ಸು ಬಂದು ನಿಲ್ಲುತ್ತೆ, ಹುಡುಗಿಯರಿಬ್ಬರು ಹೋಗಿ ಯಾರಿಗೂ ಅವರ ದರ್ಶನಬಾಗ್ಯ ಲಭಿಸದಂತೆ ಮೊದಲ ಸೀಟ್ನಲ್ಲೆ ಹೋಗಿ ಕುಳಿತುಕೊಳ್ಳುತ್ತಾರೆ,ಆಂಟಿಯರ ಜಾಗ ಮಾತ್ರ  ಬಸ್ಸಿನ ದ್ವಾರದ ಹತ್ತಿರದ ಸೀಟು,ದ್ವಾರಕ್ಕೆ ಅಭಿಮುಖವಾಗಿ ನಮ್ಮದೆ ಕಾಲೇಜಿನ ಪುಟ್ಟದೇಹದ ,ನೀಲಿ ಜೀನ್ಸಿನ ಬಿಹಾರಿ ಕುಳಿತಿರುತ್ತಾನೆ, ನಾನು ಮಾತ್ರ ಗಾಳಿ ತಾಗದ, ಒಬ್ಬನೆ ಕೂಡಬಹುದಾದ ಸೀಟಿಗಾಗಿ ಹುಡುಕಿ ಕುಳಿತುಕೊಳ್ಳುತ್ತೇನೆ. ಬಸ್ಸು ಆಶ್ರಮ ಸರ್ಕಲ್ಲಿನಲ್ಲಿ ತಿರುವಿ ಗಾಂಧಿಬಜಾರಿನ ಎದೆಯ ಮದ್ಯೆ ಹಾದು ಹೋಗುತ್ತಿದ್ದರೆ ಆಗಷ್ಟೆ ಕುಯ್ದ  ಹೂಗಳ ದಂಡೆಗಳ ಘಮ ಮೂಗಿಗೆ ಅಡರುತ್ತೆ,Fab Mallನ ಮುಂದೆ ಕುಳಿತ ಕೆಂಪು ಟೀ ಶರ್ಟಿನ  ಸೇಲ್ಸ ಹುಡುಗಿಯರ ಮೂಖದಲ್ಲಿ ಎಂದಿನ ಭವಿಷ್ಯದ ಚಿಂತೆಯ ಗೆರೆಗಳು,  ಹಗಲೆಲ್ಲ ಕಂಡವರಿಂದ ಮೈತಡವಿಸಿಕೊಂಡ ಅಂಕಿತ ಪುಸ್ತಕ ಮಳಿಗೆಯಲ್ಲಿನ ಪುಸ್ತಕಗಳು ಬೆಚ್ಚಗೆ ಕುಳಿತಿರುತ್ತವೆ.ಮುಂದಿನ ಸ್ಟಾಪಿನಲ್ಲಿ ನಮ್ಮಂತವೆ ಹೊಸ ಮಿಕಗಳು ಬಸ್ಸೆರುತ್ತವೆ, ಆದ್ರೆ ಈ ಮಿಕಗಳದ್ದು ಸ್ವಲ್ಪ ಸದ್ದು ಜಾಸ್ತಿ.ಕೊನೆಗೆ ಹತ್ತುವ ಚೂಡಿದಾರದ ಆಂಟಿಗೆ ಮಾತ್ರ ಹಿಂದಿನ ಸೀಟೆ ಆಗಬೇಕು. &lt;br /&gt;        ಎಲ್ಲಾ ಮಿಕಗಳು ಹತ್ತಿದ ಮೇಲೆ ಬಸ್ಸು ತುಂಬಿದ ಬಸುರಿಯಂತೆ ಚಲಿಸಲಾರಂಭಿಸುತ್ತೆ,ಜಯನಗರದ ಉದ್ಯಾನ ಹಾಯುವಾಗ ಕಾಣುವದೆ ಒಂದು ಪ್ರತಿದಿನದ ವಿಚಿತ್ರ ಜಾತ್ರೆ.ವಿವಿಧ ಸೈಜಿನ ಹೊಟ್ಟೆಯ ಅಂಕಲ್ಲುಗಳು ಮತ್ತು ಡ್ರಮ್ಮಿನಾಕಾರದ ಆಂಟಿಗಳನ್ನು ನೋಡುವದೇ ಒಂದು ವಿಸ್ಮಯ.ಮಹಾತ್ಕಾರ್ಯವನ್ನು ಮಡುತ್ತಿರುವೆವೇನೊ ಎಂಬ ಗತ್ತಿನಲ್ಲಿ ಕೈಕಾಲುಗಳನ್ನು ವಿಚಿತ್ರವಾಗಿ ಆಡಿಸುತ್ತಾ , ಎದೆಯುಬ್ಬಿಸಿ ಸಾಗುತ್ತಿರುವದನ್ನು ನೋಡುವುದೇ ಒಂದು ಪರಮಾನಂದ.ಸೊಂಟದ ಮೇಲೆ ಬಿದ್ದ ನೆರಿಗೆ ನೋಡಿ ಹೌಹಾರಿ ಫಿಗರ್ ಮೆಂಟೈನ್ ಮಾಡಲು ತನ್ನ ಪೆಟ್ ನೊಂದಿಗೆ ಬಂದ ಹಾಟ್ ಹಾಟ್ ಹುಡುಗಿ, ಆಯುಷ್ಯದ ಪೂರ್ವಾರ್ಧವನ್ನು ತಿನ್ನುವದರಲ್ಲೆ ಕಳೆದು, ಉಳಿದಿದ್ದನ್ನು ತಿಂದಿದನ್ನು ಜೀರ್ಣಿಸಲು ಪರದಾಡುವ ರಿಟೈರ್ಡ ಆಫೀಸರ್,ನಿನ್ನೆ ಕೊಂಡ ರೀಬಾಕ್  ಶೂಗಳ ಗತ್ತಿನಲ್ಲಿ ಮೈಯಲ್ಲಿ ನೀರಿಳಿಯುತ್ತಿದ್ದರೂ ಗಮನಿಸದೆ ಹುರುಪಿನಲ್ಲಿ ಓಡುತ್ತಿರುವ ಹೊಸಬ,೪೫ರ ಕಿರಿಕಿಗಳನ್ನು ತಾಳಿಕೊಳ್ಳಲೋ ಎಂಬಂತೆ ಬಿರಬಿರನೆ ನಡೆಯುತ್ತಿರುವ ಮದ್ಯವಯಸ್ಕ ಆಂಟಿ,ಕೊನೆಗೆ ಮೈತುಂಬ ಸ್ವೆಟರ್ ಹೊದ್ದು, ತಲೆಗೆ ಸ್ಕಾರ್ಪ್ ಸುತ್ತಿದ ಹಣ್ಣು ಹಣ್ಣು ದಂಪತಿಗಳು ಜೀವನದ ಉಳಿದ ಹೆಜ್ಜೆಗಳನ್ನೆಣಿಸುತ್ತಿದ್ದಾರೆನೋ ಎಂಬಂತೆ ನಿಧಾನಕ್ಕೆ ಸಾಗುತ್ತಿದ್ದಾರೆ,ಅಜ್ಜಿಗೆ ಬೆನ್ನು ನೋವಂತೆ, ಅಜ್ಜಗೆ ಹಿಡಿದೊಕೊಂಡ ಮೊಣಕಾಲುಗಳ ಚಿಂತೆ.ಪಾರ್ಕಿನ ಇನ್ನೊಂದು ಮೂಲೆಯಲ್ಲಿ ಕ್ರಿಕೆಟ್ಟು, ಬ್ಯಾಟ್ಮಿಟನ ಆಡುವ ಪಡ್ಡೆಗಳ ಇನ್ನೊಂದು ಗುಂಪು, ಆಟವೂ ಆಯ್ತು, ಮತ್ತೊಂದು ಅಯ್ತು :-) ಅನ್ನೊದು ಇವರ ಲೆಕ್ಕ.ಮುಂದೆ ಹಾದು ಹೊಗುವವರ ಮೇಲೆ ಇವರ ಆಟದ ಮೇಲಿನ ಗಮನ ನಿರ್ಧರಿತವಾಗುತ್ತೆ.ಇನ್ನೊಂದು ಮೂಲೆಯಲ್ಲಿ &quot;ಹೀ ಹೀ ಹೀ&quot; ಎನ್ನುತ್ತ ಬಾರದ ನಗುವಿನಲ್ಲೂ ಹಲ್ಲು ಕಿರಿಯುತ್ತಾ, ಕೈ ಕಾಲು ಬಡಿಯುವ ಲಾಫಿಂಗ್ ಕ್ಲಬ್ ನ ಸದಸ್ಯರು.ಗೇಟಿನ ಹೊರಗೆ ಇವರ ಬರುವಿಕೆಗೆ ಕಾದು ಕುಳಿತ ಇವರ ಟೂ ವೀಲ್ಹರ್ ಗಳು ಮತ್ತು ವಿವಿಧ ಕಾರುಗಳು, ಜೊತೆಗೆ ಗೇಣು ಹೊಟ್ಟೆಗಾಗಿ ಬೆಳ್ಳಂಬೆಳಗ್ಗೆ ಗಾಡಿಯಲ್ಲಿ ತರಕಾರಿ,ಹಣ್ಣು, ಮಾರುವವರ ನೀರೀಕ್ಷೆಭರಿತ ಕಂಗಳು.ಪಾರ್ಕಿನೊಳಗಡೆ &quot;ಹೊಟ್ಟೆ ಕರಗಿಸುವದರ&quot; ಚಿಂತೆಯಾದರೆ, ಹೊರಗಿನವರದು &quot;ಹೊಟ್ಟೆ ತುಂಬಿಸುವ&quot; ಚಿಂತೆ.ಇದೇ ಅಲ್ಲವೇ ಬದುಕಿನ &quot;Irony&quot;.&lt;br /&gt;        ಹಾಂ ಉದ್ಯಾನದ ತುದಿಯಲ್ಲೇ ನಿಂತಿರುತ್ತಾನೆ ಒಬ್ಬ ಸಾಬಿ, ಅವನ ಕೈಯಲ್ಲಿ ಮಾತ್ರ ಯಾತ್ರೀ ಹೊರಟು ನಿಂತವರ ಕೈಯಲ್ಲಿರುವಶ್ಟು ಚೀಲಗಳು ಮತ್ತು ಒಂದು ದೊಡ್ಡ ಊಟದ ಡಬ್ಬ, ಅಲ್ಲಿ ಸ್ಟಾಪ್ ಇದೆಯೋ ಅಥವಾ ನಮ್ಮ ಡ್ರೈವರನ ಸ್ವಜಾತಿಪ್ರೆಮವೋ ಅಂತ ಗೊತ್ತಿಲ್ಲ, ಬಸ್ಸಂತು ನಿಲ್ಲುತ್ತೆ. ನನ್ನ ಕಣ್ಣುಗಳು ಆಗ್ಲೆ ಎಳೆಯತೊಡಗುತ್ತವೆ, ಅದರೆ ಸಾಬಿ ಡ್ರೈವರು ಮಾತ್ರ ಹಾರ್ನ ಹೊಡೆಯುವದು ನಿಲ್ಲಿಸುವದಿಲ್ಲಾ, ಅಂತೂ ಇಂತೂ ಜೋಂಪು ಹತ್ತುವ ವೇಳೆಗೆ ಬಸ್ಸು ಇಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ನಮ್ಮಂತವೆ ನೂರಾರು ಬಸ್ಸುಗಳಲ್ಲಿ ಒಂದಾಗಿಬಿಟ್ಟಿರುತ್ತೆ.&lt;br /&gt;        ಈಗ ಮತ್ತೆ ಬಸ್ಸಿನಲ್ಲಿ ಗಡಿಬಿಡಿ ಶುರು, ಮಲಗಿದ ಒಬ್ಬೊಬ್ಬರೇ ಎಚ್ಚರವಾಗತೊಡಗುತ್ತಾರೆ, ಕೆಲವರು ಕಣ್ಣು ತಿಕ್ಕಿದರೆ, ಇನ್ನೂ ಕೆಲವರು &quot;ಆಗ್ಲೆ ಬಂತಾ ಆಫೀಸು?&quot; ಎಂಬಂತೆ ಕಿಟಕಿಯೆಡೆಗೆ ಕಣ್ಣು ಹಾಯಿಸುತ್ತಾರ್.ಹುಡುಗಿಯರಿಗೆ ತಮ್ಮ ಪಾಡಿಗೆ ತಾವಿದ್ದ ಕೂದಲುಗಳನ್ನು ಎಡಗೈಯಿಂದ ಹಿಡಿದು ಬಲಗೈಯಿಂದ ಕ್ಲಿಪ್ಪೋ,ರಬ್ಬರ್ ಬ್ಯಾಂಡೋ ಸಿಕ್ಕಿಸುವ ಆತುರ.ಮತ್ತೆ ಐಡಿ ಕಾರ್ಡ ಹುಡುಕಿ ಕೊರಳಿಗೆ ನೇತು ಹಾಕಿಕೊಳ್ಳುವ ಕಿರಿಕಿರಿ ಬೇರೆ.ಆಫೀಸು ಬಂತು ಎನ್ನುವದಕ್ಕೆ ಪುರಾವೆ ಎಂಬಂತೆ ಹಾರ್ನುಗಳ ಸದ್ದು ತಾರಕಕ್ಕೆರುತ್ತದೆ, ಸೆಕ್ಯುರಿಟಿಗಳ &quot; ಪೀ ಪೀ ಪೀ&quot; ಸದ್ದು ಅದರಲ್ಲಿ ಲೀನವಾಗುತ್ತೆ.&lt;br /&gt;      ಕೆಟ್ಟಮನಸ್ಸಿನಿಂದ ಬಸ್ಸಿಳಿದ ನಾನು ಭಾರವಾದ ಒಂದೊಂದು ಹೆಜ್ಜೆಯನ್ನಿಕ್ಕಿ ನನ್ನೊಂತೆಯೇ ಇರುವ ನೂರಾರು,ಸಾವಿರಾರು Resourceಗಳ ಮದ್ಯೆ  ಒಬ್ಬನಾಗುತ್ತೇನೆ. ನನ್ನ   Identity ಹೆಸರಿನಿಂದ Extn No ಮತ್ತು  Emp IDಗೆ ಬದಲಾಗುತ್ತೆ.ಯಂತ್ರದ ಮುಂದಿನ ಇನ್ನೊಂದು ಜೀವಂತ ಯಂತ್ರವಾಗಲು ನಾನು ಅಣಿಗೊಳ್ಳುತ್ತೇನೆ.ಎದೆಯ ಮೂಲೆಯಲ್ಲೋ ಏನೋ ಕಳೆದುಕೊಂಡಂತಹ ಭಾವ, ಮನದ ಮೂಲೆಯಲ್ಲಿ ಎಂತದೋ ನೋವಿನ ಸೆಳವು ಮಿಂಚಿ ಮರೆಯಾಗುತ್ತೆ... ಆಗ ನಾನು ನಾನಾಗಿರುವದಿಲ್ಲಾ!!!!!</content><link rel='replies' type='application/atom+xml' href='http://scpatil.blogspot.com/feeds/4237416841471094559/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/4237416841471094559' title='8 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/4237416841471094559'/><link rel='self' type='application/atom+xml' href='http://www.blogger.com/feeds/7270070547169320163/posts/default/4237416841471094559'/><link rel='alternate' type='text/html' href='http://scpatil.blogspot.com/2007/05/blog-post.html' title='ಪ್ರತಿದಿನದ ನರಕ'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><media:thumbnail xmlns:media="http://search.yahoo.com/mrss/" url="https://blogger.googleusercontent.com/img/b/R29vZ2xl/AVvXsEiRCXsSD58mkTCXFrJCFHFtZWE4PJx-XBljgku8O208tv7O9ETXISYFMv8ZghzQ0JTbAluMQrk1iYnNFhY9hD8SGXTynTtn_h0ZA2y64ZeRclcEqYcXfN-vY0_TZmUrJj-MhWKXGXh77Fg/s72-c/j0426542%5B1%5D.jpg" height="72" width="72"/><thr:total>8</thr:total></entry><entry><id>tag:blogger.com,1999:blog-7270070547169320163.post-1256119098883253634</id><published>2007-04-25T05:01:00.000-07:00</published><updated>2008-12-11T17:26:49.061-08:00</updated><category scheme="http://www.blogger.com/atom/ns#" term="ಸವಿ ಸವಿ ನೆನಪು..."/><title type='text'>ನೆನಪುಗಳ ಮಾತು ಮಧುರ!</title><content type='html'>&lt;a href=&quot;https://blogger.googleusercontent.com/img/b/R29vZ2xl/AVvXsEgKOS6UAX16RxL99TPEU5z_ZZ13I_OMTgqQcxsTmyd1epKr48IEDaZAmdXbVF5FodpidT-YGu7NZUZcV3cmq2XsTOd9ALHoO2M3s2bys3FEZkAArorYUfy4KEY6YWW685XoWsv06SXBKlE/s1600-h/Date.jpg&quot;&gt;&lt;img style=&quot;display:block; margin:0px auto 10px; text-align:center;cursor:pointer; cursor:hand;&quot; src=&quot;https://blogger.googleusercontent.com/img/b/R29vZ2xl/AVvXsEgKOS6UAX16RxL99TPEU5z_ZZ13I_OMTgqQcxsTmyd1epKr48IEDaZAmdXbVF5FodpidT-YGu7NZUZcV3cmq2XsTOd9ALHoO2M3s2bys3FEZkAArorYUfy4KEY6YWW685XoWsv06SXBKlE/s320/Date.jpg&quot; border=&quot;0&quot; alt=&quot;&quot;id=&quot;BLOGGER_PHOTO_ID_5076210024482139298&quot; /&gt;&lt;/a&gt;&lt;br /&gt;&lt;script src=&quot;http://www.google-analytics.com/urchin.js&quot; type=&quot;text/javascript&quot;&gt;&lt;br /&gt;&lt;/script&gt;&lt;br /&gt;&lt;script type=&quot;text/javascript&quot;&gt;&lt;br /&gt;_uacct = &quot;UA-1855832-1&quot;;&lt;br /&gt;urchinTracker();&lt;br /&gt;&lt;/script&gt;&lt;br /&gt;ಈ ಮೊದಲು ಇದು ನೆನಪೆ ಆಗ್ತಿರಲಿಲ್ಲಾ, ಆದರೀಗ ಯಾಕೋ ಗೊತ್ತಿಲ್ಲಾ,ಇತ್ತೀಚೆಗೆ ಬರೀ ಅವಳದೇ ಧ್ಯಾನ..&lt;br /&gt; ನಂಗೆ ಇನ್ನೂ ನಿನ್ನೆ ಮೊನ್ನೆ ನಡೆದ ಹಾಗೆ ಸ್ಪಷ್ಟವಾಗಿ ನೆನೆಪಿದೆ,ಬಹುಶಃ ನಾವಾಗ ೫ ನೇ ವರ್ಗದಲ್ಲಿರಬೇಕು. ಒಂದು ದಿನದ ಪ್ರವಾಸಕ್ಕೆ ಅಂತ ಹೊಗಿದ್ದ ನೆನಪು.ಬದಾಮಿ ಹತ್ತಿರದ ’ಮಹಾಕೂಟ’ ಕ್ಷೇತ್ರದ ಚಿಕ್ಕಹೊಂಡದಲ್ಲಿ ಕಾಲುಗಳನ್ನು ಚಾಚಿ ಮೇಲೆದ್ದು ಬಂದವಳ ಕಾಲುಗಳೆಲ್ಲಾ ಹಳದಿ ಹಳದಿ,ಬರೀ ಶ್ವೇತವಸ್ತ್ರಧಾರಿಣಿಯಾಗಿದ್ದ ( ಬಿಳಿ Uniform )ಅವಳ ಕಾಲಗೆಜ್ಜೆಯಿಂದ ಹಿಡಿದು ಅವಳ ಕಣ್ಣ ಬೆರಗು ಇನ್ನೂ ಹಸಿರಾಗಿ ನಿಂತಿದೆ. ಅವಳ ಸಂಭ್ರಮ ಮುಗಿಯಲೆ ಇಲ್ಲಾ! ಕಡಿಮೆ ಅಂದ್ರೂ ಐದಾರೂ ಬಾರಿಯಾದರು ಹೊಂಡಕ್ಕಿಳಿದು ಅರಿಶಿಣ ಬಣ್ಣದ ತನ್ನ ಪಾದಗಳನ್ನು ತೊರಿಸಿ ತೊರಿಸಿ ಸಂಭ್ರಮಿಸಿದ್ದಳಾಕೆ.ಯಾಕೊ ಗೊತ್ತಿಲ್ಲಾ!ಇದನ್ನು ಹೇಳದಿರಲಾಗಲಿಲ್ಲ.&lt;br /&gt;  ಈಗ ನನ್ನೊಂದಿಗಿರಿರುವದು ಅವಳ ಕಂಗಳ ಬೆರಗು, ಬೆಳ್ಳಿ ಕಾಲಗೆಜ್ಜೆ,ಅರಿಶಿಣ ಬಣ್ಣದ ಅವಳ ಮುದ್ದು ಪಾದಗಳ ಸ್ಪುಟವಾದ, ಅಳಿಸಲಾಗದ ಮಧುರ ನೆನಪುಗಳು ಮಾತ್ರ.ಬದುಕೇ ನಿನಗೆ ಎನೆಲ್ಲಾ ಲಂಚ ಕೊಟ್ಟರೆ ಮರಳಿ ಅವಳನ್ನು ಮತ್ತು ಅವಳೊಂದಿಗೆ ಕಳೆದ ದಿನಗಳನ್ನು ಮತ್ತು ಚಿಕ್ಕದಕ್ಕು ಆಶ್ಚರ್ಯ ಪಡಿತ್ತಿದ್ದ ಅವಳ ಮಗು ಮನಸ್ಸನ್ನು, ಅವಳ ಕಂಗಳ ಬೆರಗನ್ನು ಮರಳಿಸುವೆ?</content><link rel='replies' type='application/atom+xml' href='http://scpatil.blogspot.com/feeds/1256119098883253634/comments/default' title='Post Comments'/><link rel='replies' type='text/html' href='http://www.blogger.com/comment/fullpage/post/7270070547169320163/1256119098883253634' title='3 Comments'/><link rel='edit' type='application/atom+xml' href='http://www.blogger.com/feeds/7270070547169320163/posts/default/1256119098883253634'/><link rel='self' type='application/atom+xml' href='http://www.blogger.com/feeds/7270070547169320163/posts/default/1256119098883253634'/><link rel='alternate' type='text/html' href='http://scpatil.blogspot.com/2007/04/blog-post_25.html' title='ನೆನಪುಗಳ ಮಾತು ಮಧುರ!'/><author><name>Unknown</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='https://img1.blogblog.com/img/b16-rounded.gif'/></author><media:thumbnail xmlns:media="http://search.yahoo.com/mrss/" url="https://blogger.googleusercontent.com/img/b/R29vZ2xl/AVvXsEgKOS6UAX16RxL99TPEU5z_ZZ13I_OMTgqQcxsTmyd1epKr48IEDaZAmdXbVF5FodpidT-YGu7NZUZcV3cmq2XsTOd9ALHoO2M3s2bys3FEZkAArorYUfy4KEY6YWW685XoWsv06SXBKlE/s72-c/Date.jpg" height="72" width="72"/><thr:total>3</thr:total></entry></feed>